Simple Thoughts :
@
@
೧) "ವಧು-ವರ"
ಅವನದೋ ಆನೆಯನ್ನು ಬದಿಗೆ ಸರಿಸಿ ನಡುಬೀದಿಯಲ್ಲಿ ಹೋಗುತ್ತಿರುವನೇನೋ ಎಂಬಂತಹ ಶರೀರ..!!
ಇವಳೋ ಗಾಳಿ ಬಂತೆಂದರೆ ತೂರಿಕೊಂಡು ಮರದ ಕೊಂಬೆಯೇರುವಷ್ಟು ಸಪೂರ..!!
೨) "ಕೇಳದಿರಿ ಯಾರೆಂದು"
ಹೇಳದಿದ್ದರೂ ಅವನೇ ಕನಸಿನಲ್ಲಿ ದಿನವೂ ಬರುವುದು..
ಬೇಡವೆಂದರೂ ಕಾಡಿಸಿ ಪೀಡಿಸಿ ಕೆನ್ನೆ ಕಚ್ಚುವುದು..!!
ಬೆಳಿಗ್ಗೆ ಎದ್ದು ಕೆನ್ನೆ ನೋಡಿದರೆ ಕೆಂಪಗಾಗಿರುವುದು..
ಅಯ್ಯೋ ಈ ಸೊಳ್ಳೆಕಾಟದಿಂದ ಹೇಗೆ ಮುಕ್ತಿಪಡೆಯುವುದು..!!
೩) "ನಾನೇಕೆ ಬಿಟ್ಟುಕೊಡಲಿ"
ಅವನೊಬ್ಬ ಪೂರ್ಣ ಚಂದಿರ..
ಸೂಸಿರುವ ನನ್ನ ಮನದಲ್ಲಿ ಬೆಳಂದಿಗಳ..
ಆಗಾಗ ಕೋಪ ತಾಪ ಉರಿದು ಬೀಳುವ..
ಹಾಗೆ ನೋಡಿದರೆ ಚಂದಿರನಲ್ಲಿಯೂ ಕಲೆಗಳಿಲ್ಲವಾ..?!
೪) "ಇದು ಅಂದರ್ ಕಿ ಬಾತ್"
ಅವನ ಮೂಗು ಸಂಪಿಗೆಯಂತೆ..
ಅವನ ಮಾತು ಇಂಪಾಗಿದೆ..
ನಗುವು ಬೆಳದಿಂಗಳಿನಂತೆ..
ಹಲ್ಲುಗಳೇಕೋ ಕಪ್ಪಾಗಿದೆ..
೫) "ಧೈರ್ಯದಿಂದಿರೋಣ"
ಹಾವು ಕಚ್ಚುವುದೆಂದು ದೂರವಿರುವರು..
ಹಸುವು ಹಾಲು ನೀಡುವುದೆಂದು ಸಾಕುವರು..
ಹುಲಿಯ ಕಂಡರೆ ಭಯಪಡುವರು..
ಕುರಿಯ ಕೊಂದು ತಿನ್ನುವರು..
ಮೆತ್ತಗಿದ್ದರೆ ಶಿಕ್ಷೆ ಜಾಸ್ತಿ..
ಹೆದರಿಸುವುದೇ ನಮ್ಮಲ್ಲಿನ ಆಸ್ತಿ..!!
~~~
-ಸಿಂಧುಭಾರ್ಗವ್
@
@
೧) "ವಧು-ವರ"
ಅವನದೋ ಆನೆಯನ್ನು ಬದಿಗೆ ಸರಿಸಿ ನಡುಬೀದಿಯಲ್ಲಿ ಹೋಗುತ್ತಿರುವನೇನೋ ಎಂಬಂತಹ ಶರೀರ..!!
ಇವಳೋ ಗಾಳಿ ಬಂತೆಂದರೆ ತೂರಿಕೊಂಡು ಮರದ ಕೊಂಬೆಯೇರುವಷ್ಟು ಸಪೂರ..!!
೨) "ಕೇಳದಿರಿ ಯಾರೆಂದು"
ಹೇಳದಿದ್ದರೂ ಅವನೇ ಕನಸಿನಲ್ಲಿ ದಿನವೂ ಬರುವುದು..
ಬೇಡವೆಂದರೂ ಕಾಡಿಸಿ ಪೀಡಿಸಿ ಕೆನ್ನೆ ಕಚ್ಚುವುದು..!!
ಬೆಳಿಗ್ಗೆ ಎದ್ದು ಕೆನ್ನೆ ನೋಡಿದರೆ ಕೆಂಪಗಾಗಿರುವುದು..
ಅಯ್ಯೋ ಈ ಸೊಳ್ಳೆಕಾಟದಿಂದ ಹೇಗೆ ಮುಕ್ತಿಪಡೆಯುವುದು..!!
೩) "ನಾನೇಕೆ ಬಿಟ್ಟುಕೊಡಲಿ"
ಅವನೊಬ್ಬ ಪೂರ್ಣ ಚಂದಿರ..
ಸೂಸಿರುವ ನನ್ನ ಮನದಲ್ಲಿ ಬೆಳಂದಿಗಳ..
ಆಗಾಗ ಕೋಪ ತಾಪ ಉರಿದು ಬೀಳುವ..
ಹಾಗೆ ನೋಡಿದರೆ ಚಂದಿರನಲ್ಲಿಯೂ ಕಲೆಗಳಿಲ್ಲವಾ..?!
೪) "ಇದು ಅಂದರ್ ಕಿ ಬಾತ್"
ಅವನ ಮೂಗು ಸಂಪಿಗೆಯಂತೆ..
ಅವನ ಮಾತು ಇಂಪಾಗಿದೆ..
ನಗುವು ಬೆಳದಿಂಗಳಿನಂತೆ..
ಹಲ್ಲುಗಳೇಕೋ ಕಪ್ಪಾಗಿದೆ..
೫) "ಧೈರ್ಯದಿಂದಿರೋಣ"
ಹಾವು ಕಚ್ಚುವುದೆಂದು ದೂರವಿರುವರು..
ಹಸುವು ಹಾಲು ನೀಡುವುದೆಂದು ಸಾಕುವರು..
ಹುಲಿಯ ಕಂಡರೆ ಭಯಪಡುವರು..
ಕುರಿಯ ಕೊಂದು ತಿನ್ನುವರು..
ಮೆತ್ತಗಿದ್ದರೆ ಶಿಕ್ಷೆ ಜಾಸ್ತಿ..
ಹೆದರಿಸುವುದೇ ನಮ್ಮಲ್ಲಿನ ಆಸ್ತಿ..!!
~~~
-ಸಿಂಧುಭಾರ್ಗವ್
No comments:
Post a Comment