Sunday 18 December 2016

ಜನುಮದ ಜೋಡಿ ಕನ್ನಡ ಸಿನೇಮಾ

(@)(@)

(@)()@)

ಸಿನೇಮಾ: ಜನುಮದ ಜೋಡಿ (೧೯೯೬)

ಟಿ.ಎಸ್ ನಾಗಾಭರಣ ರ ನಿರ್ದೇಶನದ, ವಿ.ಮನೋಹರ್ ಅವರ ಸಂಗೀತದ " #ಜನುಮದ_ಜೋಡಿ " ಸಿನೇಮಾ (ಗುಜರಾತಿ ಮಲೇಲಾ ಜೀವ ನೋವೆಲ್ ನಿಂದ ಆಧಾರಿತ-೧೯೯೬) ನಾನು ಆರೇಳು ವರುಷದವಳಾಗಿದ್ದಾಗ ನೋಡಿದ್ದೆ. ನಮ್ಮ ತಂದೆಯವರು ಸಂಸಾರ ಸಮೇತ ಕರೆದುಕೊಂಡು ಹೋಗಿ ತೋರಿಸಿದ ಸಿನೇಮಾ.. ಇಪ್ಪತ್ತು ವರುಷಗಳೇ ಕಳೆದರೂ ಅದರ ಒಂದೊಂದು ಹಾಡು ಇನ್ನೂ ಬಾಯಿಪಾಠವಾಗಿ ಹಾಡುತ್ತಿದ್ದೇನೆ.. ನಾವು ಹೋಟೆಲ್ ನಲ್ಲಿದ್ದಾಗ ದಿನವೂ ಆಕಾಶ್ ಆಡಿಯೋ ಕಂಪೆನಿಯ ಕ್ಯಾಸೆಟ್ ನಿಂದ ಆ ಹಾಡುಗಳೆಲ್ಲವನ್ನೂ ಕೇಳಿ ಆನಂದಿಸುತ್ತಿದ್ದೆವು. ಅಷ್ಟು ಪ್ರಭಾವ ಬೀರಿದ ಹಾಡುಗಳು. ಕಥಾನಾಯಕಿ ಕನಕ(ಶಿಲ್ಪಾ) ಎರಡು ಜಡೆ, ಕನಕಾಂಬರ ಹೂ ಮುಡಿದು ಬುಗ್ಗೆ ಕೈ ಬ್ಲೌಸ್ ಉದ್ದಲಂಗ ಧರಿಸಿ ಸಿಂಗಾರಿ ತರಹ ಕಾಣಿಸುತ್ತಿದ್ದಳು.
ಕಥಾನಾಯಕ ಕೃಷ್ಣ(ಶಿವರಾಜ್ ಕುಮಾರ್) ಊರಿಗೆ ಪ್ರೀತಿಯ ಮಗನಾಗಿದ್ದ. 
ಹಳ್ಳಿಯ ಸೊಗಡನ್ನು ಸುಂದರವಾಗಿ ಚಿತ್ರಿಸಿದ್ದಾರೆ. ಮೇಲುಜಾತಿ-ಕೀಳುಜಾತಿ ನಡುವಿನಲಿ ಅರಳಿದ ಪ್ರೀತಿ ಹೂವನ್ನು ಸುಟ್ಟುಹಾಕುವ ಎಲ್ಲಾ ಪ್ರಯತ್ನ ನಡೆಸುವರು. ಮಲತಾಯಿ ಕುಡುಕ ತಂದೆವಯಸ್ಸಿನ ಹೆಂಡತಿ ಬಿಟ್ಟ ಅಣ್ಣನಿಗೇ ಮದುವೆ ಮಾಡಿಸಲು ಮುಂದಾದಾಗ ಈ ಜೋಡಿ ಓಡಿಹೋಗಿ ಮದುವೆ ಯಾಗಲು ನಿರ್ಧರಿಸುತ್ತಾರೆ. ಅದಕ್ಕೆ ಅವನ ಸ್ನೇಹಿತರೂ ಸಹಾಯಮಾಡುತ್ತಾರೆ.. ಆದರೆ ಮೋಸಹೋಗಿ ಬಲವಂತವಾಗಿ ಎಡಬಿಡಂಗಿ ಅಂದಾಣಿಗೆ (ಕರಿಬಸವಯ್ಯ ) ಕನಕಳನ್ನು ತಂಗಪ್ಪ & ಸಿಂಗಾರಪ್ಪ  ಮದುವೆ ಮಾಡಿಸಿ ಬಿಡುವ.. ಇದರಿಂದ ಮನನೊಂದು ಕೃಷ್ಣ ಊರು ಬಿಟ್ಟು ತೋಟದಲ್ಲೇ ಇರುವನು. ಏನೋ ಸಾಧಿಸಿದ್ದೇವೆ ಎಂದು ಬೀಗಿ ತಂಗಪ್ಪ ನ ಕೊಲೆಮಾಡಿ ಅದರ ತಪ್ಪನ್ನು ಕೃಷ್ಣನ ಮೇಲೆ ಹಾಕುವ ಪ್ರಯತ್ನ ಮಾಡಿವರು. ಆದರೆ ನಿಜ ವಿಷಯ ಗೊತ್ತಾಗಿ ಜೈಲು ಸೇರುವನು  ಕುತಂತ್ರಿ ಸಿಂಗಾರಿ ಗೌಡ ಮತ್ತು ಅವನ ತಂದೆ.. ಹಾಗೂ ಹೀಗೂ ಅನುದಿನ ಅಪವಾದ ಕೇಳಿಕೇಳಿ ಕೊನೆಗೆ ನಾಯಕಿ ಸಾಯಲು ವಿಷ ಬೆರೆಸಿದ ರೊಟ್ಟಿ ತಯಾರಿಸುತ್ತಾಳೆ. ಆದರೆ ಅದನ್ನು ಎಡಬಿಡಂಗಿ ಗಂಡ ತಿಂದು ಸಾವನ್ನಪ್ಪುತ್ತಾನೆ.. ಗಂಡನನ್ನು ಕೊಂದಳೆಂಬ ಅಪವಾದಕ್ಕೆ ಮತ್ತೆ ಗುರಿಯಾದ ಕಾರಣ ಊರಿನಲ್ಲಿ ಬಹಿಷ್ಕಾರ ಹಾಕಿದ್ದಕ್ಕೆ ಹುಚ್ಚುಹಿಡಿಯುತ್ತದೆ. ಕೃಷ್ಣ ಊರು ಬಿಟ್ಟು ಹೋಗುತ್ತಾನೆ. ಕೊನೆಗೆ ಜಾತ್ರೆ ದಿನ ಅವರಿಬ್ಬರೂ ಒಂದಾಗುತ್ತಾರೆ.. ಒಂದೇ ವರುಷದೊಳಗೆ ಎರಡು ಪ್ರೀತಿಸಿದ ಜೀವಗಳಿಗೂ ಮತ್ತು ಆ ಊರಿನಲ್ಲಿಯೂ ಏನೇನೆಲ್ಲಾ ನಡೆದುಹೋಗುತ್ತದೆ ಎಂಬುದೇ ಕಥೆ..
ಅಚ್ಚಳಿಯದೇ ಉಳಿಯುವ ಸಿನೇಮಾ.. ನಾನು ಇನ್ನೊಮ್ಮೆ ನೋಡಿದೆ..
- ಸಿಂಧುಭಾರ್ಗವ್ ..

(@)(@)


No comments:

Post a Comment