Wednesday 21 December 2016

ಮದುವೆ ಬಗ್ಗೆ ಚಿಂತನೆ

ಹಿಂದಿನ ಕಾಲದಲ್ಲಿ:
ಹುಡುಗನಿಗೆ ಹಿಡಿದ ಕೆಲಸ ಮಾಡದೇ ಬಿಡುವವನಲ್ಲ, ಸಾಧಿಸುವ ಛಲವಿದೆ, ಒಳ್ಳೇ ಗುಣವಿದೆ. ಈಗ ಕಷ್ಟ ಇರಬಹುದು, ಮುಂದೆ ಅವನೂ ಶ್ರೀಮಂತ ಆಗ್ತಾನೆ ನೋಡು. ನಿಷ್ಟಾವಂತ, ನಂಬಿಕಸ್ಥ, ನೀನು ಇವನನ್ನ ಮದುವೆ ಆಗಿ ಒಳ್ಳೆಯ ಜೀವನ ನಡೆಸಬಹುದಮ್ಮ.. ಒಪ್ಕೋ ವರನನ್ನ. ಎನ್ನುತ್ತಿದ್ದರು.. ಹಿರಿಯರ ಮಾತಿಗೆ ಒಪ್ಪಿ ಹುಡುಗಿಯೂ ತಲೆಯಾಡಿಸಿ ಮದುವೆ ಆಗುತ್ತಿದ್ದಳು. ಕಷ್ಟದಲ್ಲೂ ಸುಖದಲ್ಲೂ ಜೊತೆಗಿದ್ದು ಅವನ ಏಳಿಗೆಯನ್ನು ಆನಂದಿಸುತ್ತಿದ್ದಳು. ಅತ್ತೆಮಾವನ ಸೇವೆ ಮಾಡುವುದರ ಜೊತೆಗೆ ಮನೆಯಲ್ಲಿದ್ದ ಗಂಡನ ಒಡಹುಟ್ಟಿದವರನ್ನೂ ಪ್ರೀತಿಯಿಂದಲೇ ನೋಡಿಕೊಳ್ಳುತ್ತಿದ್ದಳು.
.
.
ಆದರೆ ಈಗ,
ಪರವೂರಿನಲ್ಲಿ ಕೆಲಸ , ಕಾರು , ಬಂಗಲೆ, ಲಕ್ಷ ಸಂಬಳ, ಒಬ್ಬನೇ ಮಗ, ಅತ್ತೆಮಾವರಿಂದ ದೂರವಿರಬೇಕು, ತಂಗಿಯಿದ್ದರೂ ಅವಳು ಸೆಟಲ್ ಆಗಿರಬೇಕು.. ಹೀಗೆ ಎಲ್ಲವೂ ವ್ಯವಸ್ಥಿತವಾಗಿದ್ದರೆ ಆ ಹುಡುಗನ ಒಪ್ಪುವರು. ಅವನ ಗುಣವನ್ನಾಗಲೀ ,‌ಮನೆಯವರನ್ನಾಗಲಿ ನೋಡಲು ಹೋಗುವುದಿಲ್ಲ..
ಈಗಿನ ವಿದೇಶಿ ಕಂಪೆನಿಯಲ್ಲಿ ಯಾವಾಗ ತೆಗೆದು ಬಿಸಾಕುವರೋ ಗ್ಯಾರೆಂಟಿ ಇಲ್ಲ. ಮನೆಯಲ್ಲಿರುವ ವಸ್ತು ಒಡವೆ ಎಲ್ಲದರಲ್ಲಿಯೂ ಇ.ಎಮ್.ಐ ಹಣೆಪಟ್ಟಿ ಅಂಟಿಸಿಬಿಟ್ಟಿರುತ್ತಾರೆ. ಯಾವಾಗ ಏನಾಗುತ್ತದೆಯೋ ಹರಿಯೇ ಬಲ್ಲ. ಆದರೂ ಅಂತಹ ಹುಡುಗನನ್ನೇ ಹುಡುಕುವರು.. ಟೀಚರ್, ಬ್ಯಾಂಕ್ ಕೆಲಸದವರು, ಲೆಚ್ಚರ್, ಇನ್ಯಾವುದೇ  ಕೆಲಸದವರೋ ಅಥವಾ ಊರಿನಲ್ಲೇ ಉದ್ಯೋಗ ಹುಡುಕಿಕೊಂಡು ನೆಮ್ಮದಿ ಜೀವನ ನಡೆಸುತ್ತಿರುವವರೋ ಕಣ್ಣಿಗೆ ಕಾಣರು.

#ಬಣ್ಣದಚಿಟ್ಟೆ.

No comments:

Post a Comment