Thursday 15 June 2017

Song about Our Beautiful Life

ಹಾಡು : ಜೀವನಕೆ ಮೂರರ ನಂಟು

ಮೂರೇ ಮೂರು ಅಕ್ಷರದಲ್ಲಿ
ಮೂರು ದಿನದ ಬಾಳು ಇದೆ...
ನಗುತ ಅಳುತ ಜೀವನವನ್ನು
ಸಾಗಿಸುವ ಛಲವು ಇದೆ....
*
ಜನನ ಎಂಬ ಮೂರಕ್ಷರದಿಂದ
ಪುಟ್ಟ ಪ್ರಪಂಚವ ನೋಡುವೆವು..
ಹೆತ್ತವರ ಆರೈಕೆಯಲ್ಲಿ ಆರು
ವರುಷವ ಕಳೆಯುವೆವು..
*
ಕಲಿಕೆ ಎಂಬ ಮೂರಕ್ಷಕ್ಕಾಗಿ
ಶಾಲೆಯ ಮೆಟ್ಟಿಲ ಏರುವೆವು..
ಶಿಕ್ಷಕರ ಭೋದನೆಯಿಂದ
ವಿನಯವನ್ನು ಕಲಿಯುವೆವು..
*
ವ್ಯಾಸಂಗವನ್ನು ಮುಂದುವರೆಸಿ
 ಸಾಧನೆಯನ್ನು ಮಾಡುವೆವು..
ಸಹನೆಯ ಜೊತೆಗೆ ಶೋಧನೆಯು
 ಸೇರಿ ಉನ್ನತ ಹುದ್ದೆಗೆ ಏರುವೆವು..
*
ಯವ್ವನ ಎಂಬ ಪಾಶಕೆ ಸೋತು
 ಮದುವೆ ಗೆ ಬಲಿಯಾಗುವೆವು‌..
ಸಂಗಾತಿಯ ಜೊತೆಗೆ ಒಲುವೆಯ
 ಬೆಳೆಸಿ ಮಕ್ಕಳನ್ನು ಪಡೆಯುವೆವು..
*
ಸಂಸಾರದ ನೊಗವ ಸಾಗಿಸಲೆಂದು
 ದುಡಿಮೆಗೆ ಕಟಿಬೀಳುವೆವು..
ಜೀವನ ಹೀಗೆ ಸಾಗುತಲಿ
ವೃದ್ಧಾಪ್ಯವು ಬಂದು ಆವರಿಸುವುದು...
*
ಖಾಯಿಲೆ ಎಂಬ ವೈರಿಗಳಿಂದ
 ನೆಮ್ಮದಿಯು ದೂರಾಗುವುದು..
ಹಾಗೋ ಹೇಗೋ ದಿನಗಳ ದೂಡುತ
ಮರಣವು ಸಮೀಪಿಸುವುದು..
*
ಮೂರೇ ಮೂರು ಅಕ್ಷರದಲ್ಲಿ
ಮೂರುದಿನದ ಬಾಳು ಇದೆ...
ನಗುತ ಅಳುತ ಜೀವನವನ್ನು
ಸಾಗಿಸುವ ಛಲವು ಇದೆ....

📝 - ಸಿಂಧು ಭಾರ್ಗವ್ 🍁

Sunday 11 June 2017

Poem : kattale kavidide

ಹಾಡು : ಕತ್ತಲೆ ಕವಿದಿದೆ ನಲ್ಲ

ಕತ್ತಲೆ ಕವಿದಿದೆ ನಲ್ಲ...ಹತ್ತಿರ ಬಾ ನೀ ಮೆಲ್ಲ..
ಮಳೆಯನೇ ನೋಡು‌ ನಲ್ಲ
ಹೊಸ ಭಾವವು ಮೂಡಿದೆಯಲ್ಲ..
*
ಮಿಂಚು ಬಂದರೆ ನಲ್ಲ
ಭಯವು ಕಾಡುವುದಲ್ಲ
ಗುಡುಗಿನ ಸದ್ದಿಗೆ ನಲ್ಲ
ನಡುಗಿ ಹೋಗುವೆನಲ್ಲ..
**
ಕಪ್ಪೆಯ ನೋಡು ನಲ್ಲ
ಒಟ ಒಟಗುಟ್ಟುತ್ತಿದೆಯಲ್ಲ..
ಜೀರುಂಡೆಯ ಹಾಡಿದೆಯಲ್ಲ
ಏಕಾಂತಕೆ ತಡೆ ಮಾಡುವುದಲ್ಲ..
***
ಚಟಪಟ ಮಳೆಗೆ ನಲ್ಲ
ಮನ ಮಗುವಂತಾಗಿದೆಯಲ್ಲ..
ಕೈಕೈ ಹಿಡಿಯುತ ನಲ್ಲ..
ನಲಿದಾಡುವ ಮಳೆಯಲಿ ಬಾ ನಲ್ಲ..
ಕತ್ತಲೆ ಕವಿದಿದೆ ನಲ್ಲ...ಹತ್ತಿರ ಬಾ ನೀ ಮೆಲ್ಲ..
****

- ಸಿಂಧು ಭಾರ್ಗವ್.

ಕವನ : ಬಿಸಿಯುಸಿರು

ಬಿಸಿಯುಸಿರು


ನೆಮ್ಮದಿ ಇಲ್ಲದ ಬಾಳಿನಲಿ
ನೆಮ್ಮದಿಯ ಹುಡುಕುತ್ತಾ ಹೊರಟೆ..
ನನ್ನ ನೆರಳೇ ಹಿಂದುಮುಂದು
 ಹೋಗುತ್ತಿತ್ತು...
ಬಿಸಿಲಿಗೆ ಬಾಯಾರಿಕೆ ಹೆಚ್ಚಾಗಿ
ಬಾಯಿ ಒಣಗುತ್ತಿತ್ತು...
ನೆರಳು ಕೊಡುವ ಮರವೇ
ಮೂತಿ ತಿರುಗಿಸುತ್ತಿತ್ತು‌...
ಸಿಹಿ ಇಲ್ಲದ ಹಣ್ಣುಗಳು,
ಘಮವಿಲ್ಲದ ಹೂವುಗಳು.‌‌..
ಬರಡು ಬರಡು ಎನಿಸುವ
ಪ್ರಕೃತಿಗೇನೆ ನೆಮ್ಮದಿಯಿಲ್ಲ...
ಮಳೆರಾಯನ ಆಗಮನದ
ಸುಳಿವೇ ಇಲ್ಲ..
ತಂಪಿಲ್ಲ, ಮನಕೆ ಹಿತವಿಲ್ಲ..
ಸುತ್ತಮುತ್ತಲೂ ಎತ್ತಲೂ ಹಿತವೆಂಬುದಿಲ್ಲ...

- ಸಿಂಧು ಭಾರ್ಗವ್.