ಕವಿತೆ : ಕರಾಳತೆ
ನೇಹದಲ್ಲಿ ಕಳಪೆಯಿಲ್ಲ
ಮಾತಿನಲ್ಲಿ ಮೋಸವಿಲ್ಲ..
ಮರಿಯು ಗೂಡಿನಲ್ಲಿಲ್ಲ,
ತಾಯಿಹಕ್ಕಿ ಕಾಣುತ್ತಿಲ್ಲ..
ಹದ್ದು ಬಂದ ನೆರಳಿದೆ
ಏನು ಮಾಡಿತೋ ? ಅರಿಯದೆ..
ರೆಕ್ಕೆಪುಕ್ಕ ಚದುರಿದೆ
ಕಿರುಚಿದ ದನಿ ಆವರಿಸಿದೆ..
ತಾಯಿಹಕ್ಕಿ ಬಗೆಯ ಅರಿತು
ಮುಗಿಲ ಕಡೆಗೆ ಹಾರಿತು..
ಬುವಿಯ ಆಳಕಿಳಿದು ಹುಡುಕಿ
ಮುದುಡಿ ನೊಂದು ಕುಳಿತಿತು..
ಕೊನೆಗೂ ಸಿಕ್ಕ ರಕ್ತಸಿಕ್ತ
ಕರುಳಬಳ್ಳಿಯ ದೇಹವು..
ನೆರೆದವರ ಕಂಪಿಸಿತು
ಮುಗಿಲು ಮುಟ್ಟಿದ ರೋಧನವು..
- ಸಿಂಧುಭಾರ್ಗವ್. 🌷
ನೇಹದಲ್ಲಿ ಕಳಪೆಯಿಲ್ಲ
ಮಾತಿನಲ್ಲಿ ಮೋಸವಿಲ್ಲ..
ಮರಿಯು ಗೂಡಿನಲ್ಲಿಲ್ಲ,
ತಾಯಿಹಕ್ಕಿ ಕಾಣುತ್ತಿಲ್ಲ..
ಹದ್ದು ಬಂದ ನೆರಳಿದೆ
ಏನು ಮಾಡಿತೋ ? ಅರಿಯದೆ..
ರೆಕ್ಕೆಪುಕ್ಕ ಚದುರಿದೆ
ಕಿರುಚಿದ ದನಿ ಆವರಿಸಿದೆ..
ತಾಯಿಹಕ್ಕಿ ಬಗೆಯ ಅರಿತು
ಮುಗಿಲ ಕಡೆಗೆ ಹಾರಿತು..
ಬುವಿಯ ಆಳಕಿಳಿದು ಹುಡುಕಿ
ಮುದುಡಿ ನೊಂದು ಕುಳಿತಿತು..
ಕೊನೆಗೂ ಸಿಕ್ಕ ರಕ್ತಸಿಕ್ತ
ಕರುಳಬಳ್ಳಿಯ ದೇಹವು..
ನೆರೆದವರ ಕಂಪಿಸಿತು
ಮುಗಿಲು ಮುಟ್ಟಿದ ರೋಧನವು..
- ಸಿಂಧುಭಾರ್ಗವ್. 🌷
No comments:
Post a Comment