Sunday 18 December 2016

ಕವಿತೆ- ಕರಾಳತೆ

ಕವಿತೆ : ಕರಾಳತೆ

ನೇಹದಲ್ಲಿ ಕಳಪೆಯಿಲ್ಲ
ಮಾತಿನಲ್ಲಿ ಮೋಸವಿಲ್ಲ..
ಮರಿಯು ಗೂಡಿನಲ್ಲಿಲ್ಲ,
ತಾಯಿಹಕ್ಕಿ ಕಾಣುತ್ತಿಲ್ಲ..

ಹದ್ದು ಬಂದ ನೆರಳಿದೆ
ಏನು ಮಾಡಿತೋ ? ಅರಿಯದೆ..
ರೆಕ್ಕೆಪುಕ್ಕ ಚದುರಿದೆ
ಕಿರುಚಿದ ದನಿ ಆವರಿಸಿದೆ..

ತಾಯಿಹಕ್ಕಿ ಬಗೆಯ ಅರಿತು
ಮುಗಿಲ ಕಡೆಗೆ ಹಾರಿತು..
ಬುವಿಯ ಆಳಕಿಳಿದು ಹುಡುಕಿ
ಮುದುಡಿ ನೊಂದು ಕುಳಿತಿತು..

ಕೊನೆಗೂ ಸಿಕ್ಕ ರಕ್ತಸಿಕ್ತ
ಕರುಳಬಳ್ಳಿಯ ದೇಹವು..
ನೆರೆದವರ ಕಂಪಿಸಿತು
ಮುಗಿಲು ಮುಟ್ಟಿದ ರೋಧನವು..

- ಸಿಂಧುಭಾರ್ಗವ್. 🌷‌ 

No comments:

Post a Comment