ಹಾಡು.. :
ಹಾದಿ ಬದಿಯಲಿ ಸಾಗುವಾಗ ಮುದುಕಿಯ ಕಂಡೆನು..
ಹಸಿವಿನಿಂದ ಸೊರಗಿ ಹೋದ ಮುದುಕಿಯ ಕಂಡೆನು..
ಹತ್ತಿರ ಹೋಗಿ ನೀರು ಕೇಳಿ ಕುಡಿಯಲು ಕೊಟ್ಟೆನು.
ಜನಸೇವೆ ಮಾಡಿದ್ದು ಸಾಕು
ಎಂದು ಹೇಳಿಸಿಕೊಂಡೆನು..
ಬೀದಿಬದಿಯಲಿ ಕುನ್ನಿಯೊಂದು ನಡುಗುತ ಮಲಗಿತ್ತು..
ಗೋಣಿಚೀಲವ ಮೈಗೆ ಹೊದೆಸಲು ಹೆಜ್ಜೆ ಹಾಕಿದೆನು..
ಬೀದಿಬದಿಯಲಿ ನಿನ್ನದೇನೆ? ಕೆಲಸವೆಂದರು..
ಪ್ರಾಣಿದಯಾ ಸಂಘದವರು ಇರುವರೆಂದರು.
ಅದನ್ನ ಬಿಟ್ಟುನಡಿ ಎಂದರು..
ನೊಂದುಕೊಂಡ ಜೀವ ನಮ್ಮದೆಂಬ
ಭಾವ ಬೇಡವೇ.?
ಸ್ನೇಹ , ಪ್ರೀತಿ ಎಂದು ಬೆರೆತರೆ ಆಡಿಕೊಳ್ಳುವುದೇ..?!
ಸತ್ಯ ,ನ್ಯಾಯ, ನೀತಿಯೆಂಬ ಮಾತನು,
ಬದಲಿಸಬೇಕು ಇಂದಿನಿಂದ ಎಂದು ಅರಿತೆನು..
ಮಾನವೀಯತೆಗೆ ಇಲ್ಲಿ ಚೂರು ಬೆಲೆಯಿಲ್ಲ.
ಮನುಜರಂತೆ ನಡೆದುಕೊಳ್ಳಲು ಯಾರಿಗೂ ಮನಸಿಲ್ಲ..
- ಸಿಂಧುಭಾರ್ಗವ್. 🌸
ಹಾದಿ ಬದಿಯಲಿ ಸಾಗುವಾಗ ಮುದುಕಿಯ ಕಂಡೆನು..
ಹಸಿವಿನಿಂದ ಸೊರಗಿ ಹೋದ ಮುದುಕಿಯ ಕಂಡೆನು..
ಹತ್ತಿರ ಹೋಗಿ ನೀರು ಕೇಳಿ ಕುಡಿಯಲು ಕೊಟ್ಟೆನು.
ಜನಸೇವೆ ಮಾಡಿದ್ದು ಸಾಕು
ಎಂದು ಹೇಳಿಸಿಕೊಂಡೆನು..
ಬೀದಿಬದಿಯಲಿ ಕುನ್ನಿಯೊಂದು ನಡುಗುತ ಮಲಗಿತ್ತು..
ಗೋಣಿಚೀಲವ ಮೈಗೆ ಹೊದೆಸಲು ಹೆಜ್ಜೆ ಹಾಕಿದೆನು..
ಬೀದಿಬದಿಯಲಿ ನಿನ್ನದೇನೆ? ಕೆಲಸವೆಂದರು..
ಪ್ರಾಣಿದಯಾ ಸಂಘದವರು ಇರುವರೆಂದರು.
ಅದನ್ನ ಬಿಟ್ಟುನಡಿ ಎಂದರು..
ನೊಂದುಕೊಂಡ ಜೀವ ನಮ್ಮದೆಂಬ
ಭಾವ ಬೇಡವೇ.?
ಸ್ನೇಹ , ಪ್ರೀತಿ ಎಂದು ಬೆರೆತರೆ ಆಡಿಕೊಳ್ಳುವುದೇ..?!
ಸತ್ಯ ,ನ್ಯಾಯ, ನೀತಿಯೆಂಬ ಮಾತನು,
ಬದಲಿಸಬೇಕು ಇಂದಿನಿಂದ ಎಂದು ಅರಿತೆನು..
ಮಾನವೀಯತೆಗೆ ಇಲ್ಲಿ ಚೂರು ಬೆಲೆಯಿಲ್ಲ.
ಮನುಜರಂತೆ ನಡೆದುಕೊಳ್ಳಲು ಯಾರಿಗೂ ಮನಸಿಲ್ಲ..
- ಸಿಂಧುಭಾರ್ಗವ್. 🌸
No comments:
Post a Comment