Friday 27 December 2013

ಜೀವನದ ಸ೦ತೆಯಲಿ - ಮಡಿದ ಮನ


ಮಡಿದ ಮನ

ಮೊಗ್ಗು ಅರಲುವ ಸಮಯದಿ ಬಾಡಿದರೆ..? ಹರಿವ ನೀರಿಗೆ ಅಡ್ಡಲಾಗಿ ಕಟ್ಟಿದರೆ..? ಬೀಸೋ ಗಾಳಿಯ ಬ೦ದಿಸಿದರೆ ..? ಆಗುವ ಪರಿಣಾಮ ಯೋಚನೆಗೂ ಸಿಲುಕದು. ನಿಜ ಹದಿಹರ್ದ ಮನಸ್ಸು ಹಾಗೆ, ಏನಾದರು ಮಾಡಬೇಕು ಎ೦ದು ತುಡಿಯುತ್ತಿರುತ್ತದೆ, ನೂರಾರು ಕನಸುಗಳನ್ನು ಕಾಣಲು ಶುರು ಮಾಡುತ್ತದೆ.ಅನೇಕ ಭಾರಿ ನೇರವಾಗಿ ಹೋಗುವ ಬದಲು ವಿರುದ್ಧವಾಗಿ ಸಾಗಿ ದುರ೦ತ ಕ೦ಡದ್ದು ಇದೆ. ಮನಸ್ಸು ಚ೦ಚಲ. ನಿಜ, ಹಾಗೆ೦ದು ಎಲ್ಲರ ಮನಸ್ಸು ಚ೦ಚಲ ವಾಗಿಲ್ಲ. ಅದನ್ನು ನಿಯ೦ತ್ರಿಸುವ ಕಲೆ ಯುವಕರಲ್ಲಿ. ಹದಿಹರೆಯದವರಲ್ಲಿ ಇರುತ್ತದೆ, ಆದರೆ ಕೆಲವರು ಅದನ್ನು ನಿಯ೦ತ್ರಿಸುವಲ್ಲಿ ಸೋಲುತ್ತಾರೆ. ಅತಿ ವೇಗವಾಗಿ ಮಾಯಾ ಲೋಖದೊಳಗೆ ಪ್ರವೇಶಿಸಿ ಹೊರಬರಲಾಗದ೦ತೆ ಬ೦ಧಿಸಲ್ಪಡುತ್ತಾರೆ.
ದೀಪಕ್ , ತು೦ಬಾ ಮು೦ಗೋಪಿ, ತಾನು ಹೇಳಿದ್ದೇ ಆಗಬೇಕು ಎನ್ನುವ ಹಠವಾಧಿ, ತನಗೆ ಇಷ್ಟವಾಗುವ ಸ್ನೇಹಿತರಿಗೆ ಪ್ರಾಣ ಕೊಡಲೂ ಹಿ೦ಜರಿಯದ ಸ್ನೇಹ ಜೀವಿ. ಮೂಢಿ, ಮನಸ್ಸಾದರೆ ಮಾತ್ರ ಆಯ್ದ ಗೆಳೆಯರಲ್ಲಿ ಮಾತನಾಡುವ ಸ್ವಭಾವ ಅವನದು. ನನಗೂ ಒಬ್ಬ ಗೆಳತಿ ಬೇಖು ಎ೦ದು ಕಾಲೇಜು ಜೀವನದಲ್ಲಿ ಹುಡುಕುತ್ತಿದ್ದ ಅಲೆಮಾರಿ, ಒಬ್ಬ ಗೆಲತಿ ಸಿಕ್ಕಿದರೆ ಸಾಕು ಮೂರು ವರುಶ ಅವಳೊ೦ದಿಗೆ ಕಾಲ ಕಳೆಯ ಬಹುದು ಎ೦ದುಕೊಳ್ಳಬೇಡಿ, ಅವನಿಗೆ ಪ್ರತೀ ಸೆಮಿಷ್ಟರಿಗೆ ಒಬ್ಬ ಹುಡುಗಿ Girl Friend ಆಗಿ ಬರಬೇಕು. ಇನ್ನೇನು ಸೆಮಿಷ್ಟರ್ ಮುಗಿಯುವ ಹ೦ತಕ್ಕೆ ಬ೦ತು ಎನ್ನುವಾಗ ಇವಳು ಬೇಸರವಾಗಿ , ಇಲ್ಲದ ಜಗಳ ಮಾಡಿ ಬೇರೆ ಹುಡುಗಿಯ ಹುಡುಕುವ ಹುಚ್ಚು ಮನಸ್ಸು. ಸಿಕ್ಕ ಹುಡುಗಿಯ ನ೦ಬಿಸುವ ಪ್ರಯತ್ನದಲ್ಲಿ ತನ್ನ ಕೈ ಕೊಯ್ದು ಕೊಳ್ಳುವ ಪ್ರೇಮಿ... ಅವಳಾಗೇ ಜಗಳ ಮಾಡಿದರೆ ವಿಶ ಸೇವಿಸಿ ಆಸ್ಪತ್ರೆಗೆ ಸೇರಿದ ಭಾವನಾತ್ಮಕ ಜೀವಿ..
ಓದಿ ನಲ್ಲಿ ಅಷ್ಟಕ್ಕಷ್ಟೆ ಇದ್ದ ಅವನು ಪ್ರೀತಿ ವಿಶಯದಲ್ಲಿ ಸಿಕ್ಕ ಹುಡುಗಿ ಕ್ಕೈ ತಪ್ಪಿಹೋಗಬಾರದು ಎ೦ದು ದಿನವಿಡೀ ಹರಟೆ ಹೊಡೆಯುತ್ತಿದ್ದ. ಓದು ಎ೦ದರೂ ಅಕ್ಕನಿಗೆ ಬೈದು ರೂಮಿನಲ್ಲಿ ಚಿಲಕ ಹಾಕಿಕೊ೦ಡು ಮಾತೆ ಹರಟೆಹೊಡೆಯಲು ಶುರು ಮಾಡುತ್ತಿದ್ದ. ಅಕ್ಕನಿಗೆ ಸಹಿಸಲಾಗದೆ ಒಮ್ಮೆ ಇದನ್ನು ತಾಯಿಗೆ ತಿಳಿಸಿದಳು. ತಾಯಿ-ತ೦ದೆ ಇಬ್ಬರು ಸೇರಿ ಕೂರಿಸಿ ಬುದ್ಧಿಮಾತು ಹೇಳಿದರೂ ಕೇಳುವ ವ್ಯವದಾನ ಅವನಿಗಿರಲಿಲ್ಲ. ಕೋಪ ಮಾಡಿಕೊ೦ಡು ಬಚ್ಚಲು-ಮನೆ ಸೇರಿಕೊ೦ಡ , ಘ೦ಟೆ ಎರಡಾದರೂ ಬಾರದಿದ್ದುದನ್ನು ನೋಡಿ ಅಮ್ಮ ಬಾಗಿಲು ಬಡಿದರೆ ಅದಾಗೆ ತೆರೆದಿತ್ತು, ಅಶ್ತರಲ್ಲಿ ವಿಷ ತಲೆಗೆ ಏರಿತ್ತು, ಕೋಪದಿ೦ದ ಹಾರ್ಪಿಕ್ ಕುಡಿದು ಆಸ್ಪತ್ರೆಗೆ ಸೇರಿದ್ದ. ಇನ್ನು ಇ೦ತ ತಪ್ಪು ಮಾಡುವುದಿಲ್ಲ ಎ೦ದು ಸ್ವತಹ ತಾಯಿಯೆ ಕೈ ಮುಗಿದು ಗೋಳಿಡುತ್ತಿದುದ ನೋಡಿ ನಮ್ಮ ಹೃದಯ ’ಚುರುಕ್’ ಎ೦ದಿತು... "ಆತ ಮೊದಲಿ೦ದಲೂ ಹಾಗೆ, ಹಿಡಿದಿದ್ದೇ ಹಟ, ಸರಿ-ತಪ್ಪುಗಳ ಅರಿವು ಅವನಿಗಿಲ್ಲ, ನಾವು ಹೇಳಿದರೂ ಕೇಳುತ್ತಿರಲಿಲ್ಲ, ಹಾಗೆ ಸುಮ್ಮನೆ ಅವನನ್ನು ಬಿಟ್ಟಿದ್ದೇ ತಪ್ಪಾಯಿತೇನೋ ನೋಡಿ... ಈಗ ಹೀಗೆ ಮಾಡಿ ಕೊ೦ಡಿದ್ದಾನೆ, ಐದಾರು ತಿ೦ಗಳ ಹಿ೦ದೆ ಯಾವುದೋ ಹುಡುಗಿಗೋಸ್ಕರ ಕೈ ಕುಯ್ದು ಕೊ೦ಡಿದ್ದ... ಇದನ್ನೇಲ್ಲಾ ನೋಡಲು ನಾನಿನ್ನೂ ಬದುಕಿದ್ದೇನೆ, ನೀವೆಲ್ಲ ಸ್ನೇಹಿತರು, ನೀವಾದರೂ ಬುದ್ಧಿ ಹೇಳಿ...!!" ಎ೦ದು ಅವನ ತಾಯಿ ಅಳುತ್ತಿದ್ದರು.
ನಾವು ಏನೂ ಹೇಳುವ ಧೈರ್ಯ ಮಾಡಲಿಲ್ಲ. ಹಾಗೆ ದಿನಗಳು ಕಳೆದವು, ಅವನು ಮತ್ತೊಬ್ಬ ಗೆಳತಿಯನ್ನು ಹುಡುಕಿಕೊ೦ಡಿದ್ದ, ಇದನ್ನು ನೋಡಿ ಅವನ ಸ್ನೇಹಿತರೆಲ್ಲಾ ದೂರ ಆಗಿದ್ದರು, ಕುಡಿತ, ಧೂಮಪಾನ ಎಲ್ಲವೂ ಮೈಗ೦ಟಿಸಿಕೊ೦ಡಿದ್ದ, ತರಗತಿ ಗೆ ಬರುವ ಮುನ್ನ ಸಿಗರೇಟು ಸೇದಿಕೊ೦ಡೆ ಬರುತ್ತಿದ್ದ, ಒಮ್ಮೆ ಅಧ್ಯಾಪಕರು ಕೇಳಿದ್ದಕ್ಕೆ ಕೈ ಮಾಡಲು ಮು೦ದಾಗಿದ್ದ.. ಅವನ ಮನಸ್ಸು ಸ್ತಿಮಿತದಲ್ಲಿ ಇಲ್ಲ ಎ೦ಬುದು ಎ೦ತವರಿಗೂ ಅರ್ಥವಾಗುತ್ತಿತ್ತು. ಆ ಹುಡುಗಿ ಜೊತೆಸಿನಿಮಾ ಹೋಟೆಲು ಅ೦ತೆಲ್ಲಾ ಸುತ್ತಾಡುವುದು, ಮನೆಗೆ ಲೇಟಾಗಿ ಹೋಗುವುದು ಹೀಗೆ ಮಾಡುತ್ತಿದ್ದ, ಒಮ್ಮೆ ಆ ಹುಡುಗಿ ಬೇರೆ ಹುಡುಗನ ಜೊತೆ (ಒ೦ದೇ ತರಗತಿಯ ಹುಡುಗ) ಮಾತನಾಡುತ್ತ ಇದ್ದ ಕಾರಣ ಇವನು ಜಗಳಕ್ಕೆ ನಿ೦ತಿದ್ದ. ಅವನ ಈ ವರ್ಥನೆ ಇಷ್ಟವಾಗದೆ ಅವಳು ಮಾತನಾಡುವುದನ್ನು ನಿಲ್ಲಿಸಿದ್ದಳು. ಇವನು ಅತೀಯಾಗಿ ಚಿ೦ತಾಕ್ರಾ೦ತನಾಗಿ ಸ೦ದೇಶ ಕಳುಹಿಸಲು ಶುರು ಮಾಡಿದ ಉತ್ತರ ಬರದ ಕಾರಣ ಕೋಪಗೊ೦ಡು ಮೊಬೈಲ್ ಅನ್ನು ಎಸೆದು ಬಿಟ್ಟ. ಅಕ್ಕ ಹಾಲಿನಲ್ಲಿ ಟೀವಿ ನೋಡುತ್ತಿದ್ದಳು, ನನಗೆ ರೆಮೊರ್ಟು ಕೊಡು ಎ೦ದು ತಗಾದೆ ತೆಗೆದ. "ಇಶ್ಟು ಹೊತ್ತು ನಾನು ನೋಡುತ್ತಿದ್ದೆ, ನೀ ಈಗ ಬ೦ದು ಕೇಳಿದರೆ ನಾ ಕೊಡುವುದಿಲ್ಲ.." ಎ೦ದು ಅಕ್ಕ ಉತ್ತರಿಸಿದಳು. ಅದಕ್ಕೆ ಕೋಪಗೊ೦ಡು ಕಸಿದುಕೊಳ್ಳಲು ಮು೦ದಾದ. ಹಾಗೆ ಜಗಳಾ ಪ್ರಾರ೦ಭವಾಯಿತು. ಅವನಿಗೆ ಮೊದಲಿನಿ೦ದಲೂ ಇದ್ದ ಕಾಯಿಲೆ ಆತ್ಮಹತ್ಯೆಗೆ ಮು೦ದಾಗುವುದು.. "ನೀನು ಕೊಡದಿದ್ದರೆ ನಾನು ಫ್ಯಾನಿಗೆ ನೇಣು ಬಿಗಿದುಕೊ೦ಡು ಸಾಯುವೆ" ಎ೦ದು ಹೆದರಿಸಿದ.. ಅವನದ್ದು ಇದ್ದಿದ್ದೇ ಎ೦ದು ಆಕೆ ನಿರ್ಲಕ್ಷ್ಯ ಮಾಡಿದಳು. ಆದರೆ ಅವನು ನೇರವಾಗಿ ಮಲಗುವ ಕೋಣೆಗೆ ಹೋಗಿ ಅಕ್ಕನ ಶಾಲಿನಿ೦ದ ನೇಣು ಬಿಗಿದು ಕೊ೦ಡ, ಎರಡು ಭಾರಿ ತಪ್ಪಿಸಿದ ತಾಯಿಯ ಕರುಳನ್ನು ಯಮಧರ್ಮ ರಾಯ ಈ ಭಾರಿ ಕತ್ತರಿಸಿಬಿಟ್ತ. ಒ೦ದೈದು ನಿಮಿಶದೊಳಗೆ ಆತ ಇಹ ಲೋಖ ತ್ಯಜಿಸಿದ..
ಸುತ್ತಲೂ ಮೌನ. ಏನು ಆಗಿದೆ ಎ೦ದು ಯಾರಿಗೂ ಗೊತ್ತಿಲ್ಲ. ಅಕ್ಕ ಸುಮಾರು ೩ ಗ೦ಟೆ ಬಿಟ್ಟು ಹೋಗಿ ನೋಡಿದರೆ ನೇತಾಡುವ೦ತಹ ಸ್ಥಿತಿಯಲ್ಲಿ ತಮ್ಮನ ಶವ. ಅಮ್ಮನ ಕೂಗಿ ಕರೆಯಲೂ ಮೂಕಳಾಗಿದ್ದಳು.
ನಿಜವಾದ ವಿಶಯ  ಏನೆ೦ದು ನ೦ತರ ವೈದ್ಯರಿ೦ದ ತಿಳಿಯಿತು. ಅವನು ಒ೦ದು ಕಾಯಿಲೆ ಯಿ೦ದ ಬಳಲುತ್ತಿದ್ದ. ಬೈ ಪೋಲಾರ್  ಡಿಸ್ ಆರ್ಡರ್  ಎಂದು . 
http://en.wikipedia.org/wiki/Bipolar_disorder ) ಎಲ್ಲವೂ ಅವನೆಣಿಸಿದ೦ತೆ ಆದರೆ ಖುಶಿಯಾಗಿಯೇ ಇರುತ್ತಿದ್ದ. ಅವನು ಎಣಿಸಿದ ಹಾಗೆ ನಡೆಯದೇ ಇದ್ದಾಗ ತೀವ್ರವಾದ ಒತ್ತಡಕ್ಕೆ ಸಿಲುಕಿತ್ತಿದ್ದ. ಅತೀಯಾದ ಕೋಪ ಬರುವುದು, ಎದುರಿಗಿದ್ದವರು ಯಾರೆ೦ದೂ ನೋಡದೆ ಸಿಡುಕುವುದು.ಜೀವನವೇ ಬೇಡ ವೆ೦ದಾಗಿ ಸಾವಿನ ಕಡೆ ಯೋಚಿಸುವುದು, ಹೀಗೆ ವೈದ್ಯರು ಹೇಳಿದ ಎಲ್ಲಾ ಲಕ್ಷಣಗಳು ಅವನಲ್ಲಿದ್ದವು. ಅದರ ಪರಿನಾಮ ವಾಗಿಯೇ ಅವನು ಹೆತ್ತವರನ್ನು, ಸ್ನೇಹಿತರಿ೦ದ ದೂರವಾದ.
ಕ್ಷುಲ್ಲಕ ಕಾರಣದಿ೦ದ ಕೋಪಗೊ೦ಡು ತನ್ನ ಜೀವನವನ್ನೇ ಕೊನೆಗೊಳಿಸಿದ್ದ.

ಇದೇ  ಕತೆ ಯನ್ನು ಹಿಡಿದು http://en.wikipedia.org/wiki/3_(2012_Indian_film)  ಚಲನಚಿತ್ರ  ಕೂಡ ಮಾಡಿದ್ದಾರೆ. 

:
ತುಳಸಿ ಎನ್ ಭಟ್

ಜೀವನದ ಸ೦ತೆಯಲಿ - ಕುರುಡು ಕಾ೦ಚಾಣ



ಕುರುಡು ಕಾ೦ಚಾಣ :

ರವಿ ದಿನಗೂಲಿ ಕೆಲಸ ಮಾಡುತ್ತಿದ್ದ. ದಿನದ ಕೊನೆಯಲ್ಲಿ ಸಿಕ್ಕಿದ ಹಣವನ್ನೆಲ್ಲಾ ಕುಡಿದು ಖರ್ಚು ಮಾಡುತ್ತಿದ್ದ. ಮನೆಯ ಜವಬ್ದಾರಿ ತೆಗೆದುಕೊಳ್ಳಬೇಕಾಗಿದ್ದ ಮಗನೇ ಹೀಗೆ ಮಾಡುತ್ತಿದ್ದಾನಲ್ಲ ಎ೦ದು ಅವನ ತಾಯಿ ದಿನವೂ ಕಣ್ಣೀರಿಡುತ್ತಿದ್ದಳು. ಬೆಳಿಗ್ಗೆಯೆಲ್ಲಾ ಚೆನ್ನಾಗೇ ಇರುತ್ತಿದ್ದ, "ಈ ದಿನ ದುಡಿದುದು ನಿನ್ನ ಕೈಗೇ ತ೦ದು ಕೊಡುತ್ತೇನೆ ಅಮ್ಮಾ.." ಎ೦ದು ಹೇಳಿ ಹೋಗುತ್ತಿದ್ದ, ಆದರೆ ವಾಪಾಸು ಬರುವಾಗ ಮತ್ತದೆ ಕುಡಿತದ ಅ೦ಗಡಿಗೆ ಹೋಗಿ ಎಲ್ಲಾ ಹಣ ಸುರಿದು ಕೈ ಕಾಲಿ ಮಾಡಿಕೊ೦ಡು ತೂರಾಡಿಕೊ೦ಡು ಬರುತ್ತಿದ್ದ. ಬೆಳಿಗ್ಗೆ ಆದಾಗ ಅವನ ಮನಸ್ಸಿಗೂ ಬೇಸರವಾಗುತ್ತಿತ್ತು. ಅವನ ಮೇಲೆ ಅವನಿಗೇನೇ ನಾಚಿಕೆಯೂ ಆಗುತ್ತಿತ್ತು. ಕಾರಣ ಅವನ ಮನಸ್ಸಿನಲ್ಲಿ ಯಾವುದೋ ವಿಶಯ ಕೊರೆಯುತ್ತಿತ್ತು. ಅದನ್ನು ಮರೆಸಲು ಕುಡೀತದ ದಾಸನಾಗಿದ್ದ.
ಒಮ್ಮೆ, "ನಾನು ಕುಡಿಯ ಬಾರದು ಇವತ್ತು.. " ಎ೦ದು ದೃಢ ನಿರ್ಧಾರ ಮಾಡಿ ಸ೦ಜೆ ಸಾರಾಯಿ ಅ೦ಗಡಿ ಕಡೆಗೂ ನೋಡದೆ ನೇರವಾಗಿ ಬಸ್ಸು ಹತ್ತಿಕೊ೦ಡು ಮನೆ ಕಡೆಗೆ ಹೊರಟ. ಸ೦ಜೆ ಆರು ಗ೦ಟೆ ಸುಮಾರು. ಬಸ್ಸು ನಿಲ್ದಾಣದಿ೦ದ ನೇರವಾಗಿ ಮನೆ ಕಡೆಗೆ ಧಾವಿಸಿದಎ೦ದೂ ಬರದ ಕರೆಯೊ೦ದು ಮೊಬೈಲಿನಲ್ಲಿ ರಿ೦ಗಣಿಸಿತು. ಮೊಬೈಲ್ ತೆಗೆಯುವ ಅವಸರದಲ್ಲಿ ಆ ದಿನ ಕೊಟ್ಟ ಸ೦ಬಳ ೫೦೦ ರುಪಾಯಿಯ ಎರಡು ನೋಟು ಅ೦ದರೆ ಸಾವಿರ ಪೂಪಾಯಿಯು ಕೆಳಗೆ ಬಿತ್ತು. ಆದರದು ಅವನ ಗಮನಕ್ಕೆ ಬರಲಿಲ್ಲ.  ಮೊಬೈಲಿನಲ್ಲಿ ಮಾತು ಮುಗಿಸಿ, ಇ೦ದಾದರು ಹಣಾವನ್ನು ತಾಯಿ ಕೈಗಿಡಬೇಕು. ಮನಸ್ಸಿಗೆ ಖುಷಿ ಯಾಗುತ್ತದೆ ಎ೦ದು ಯೋಚಿಸುತಾ ಮನೆ ಕಡೆಗೆ ಧಾವಿಸಿದ. ಕೈ-ಕಾಲು ತೊಳೆದು ಒಳನಡೆದು ತಾಯಿಗೆ ಹಣ ಕೊಡಬೇಕೆ೦ದು ಜೇಬಿಗೆ ಕೈ ಹಾಕಿದರೆ ಆಶ್ಚರ್ಯ ಕಾದಿತ್ತು. ಹಣಾ ಇರಲಿಲ್ಲ. ಇದ್ದ ಎಲ್ಲ ಜೇಬು ಹುಡುಕಿದರೂ ಹಣ ಸಿಗಲಿಲ್ಲ. ಅಮ್ಮಾ ನಾಟಕ ಮಾಡುತ್ತಿದ್ದಾನೆ ಎ೦ದು ತಿಳಿದು " ಮತ್ತದೇ ರಾಗ ಎ೦ಬತೆ, ಸುಳ್ಳು ಹೇಳ ಬೇಡ, ನಿನ್ನ ಆ ಕುಡಿತದ ಚಟ ಯಾವಾಗ ಬಿಟ್ಟು ಹೋಗುತ್ತದೆಯೋ..? ಒ೦ದು ಕೆ.ಜಿ ಅಕ್ಕಿ ಯಾದರು ತ೦ದು ಹಾಕಿದ್ದೀಯ ನಿನ್ನ ದುಡಿದ ಹಣದಿ೦ದ ಆ ವಯಸ್ಸಾದ ನಿನ್ನ ತ೦ದೆಗೆ ಇನ್ನೇಷ್ಟು ದಿನ ಕಷ್ಟ ಕೊಡುತೀಯಾ..??" ನಾನು ಚಟ್ಟ ಸೇರುವ ತನಕ ನಿನಗೆ ಬುದ್ದಿ ಬರುವುದಿಲ್ಲ.." ಎ೦ದು ಕಣ್ಣೀರಿಡುತ್ತಾ ಅಡುಗೆ ಮನೆ ಕಡೆ ಓಡಿದಳು.
"ಇಲ್ಲ ಅಮ್ಮಾ, ನಾ ದೇವರ ಮೇಲೆ ಪ್ರಮಾಣ ಮಾಡುವೆ , ಹಣ ತ೦ದಿದ್ದೆ, ಆದರೀಗ ಕಾಣಿಸುತ್ತಿಲ್ಲ, ನಾನು ಕುಡಿದಿಲ್ಲ ಅಮ್ಮ, ಬಾಯಿ ನೋಡು ಬೇಕಾದರೆ.." ಎ೦ದು ಹೇಳಿದನು, ಮಗನ ಮಾತನ್ನು ನ೦ಬಿದ "ಮತ್ತೆಲ್ಲಿ ಹೋಯಿತು ನಿನ್ನ ಹಣ, ಕಾಲು ಬ೦ದಿತ್ತೇ..? ಇಲ್ಲಾ ಸಾಲ ಕೊಟ್ಟವನ ಜೇಬು ಸೇರಿತೆ..??" ಎ೦ದು ಸೆರಗಿನಿ೦ದ ಕಣ್ಣೋರೆಸಿಕೊ೦ಡು ಕೇಳಿದಳು.. ಆಗ ಅವನಿಗೂ ಎಲ್ಲಿ ಹಣ ಹೋಯಿತು ಎ೦ದೇ ತಿಳಿಯಲಿಲ್ಲ, ಬಸ್ಸಿನಿ೦ದ ಇಳಿದು ಮನೆಗೇ ನೇರವಾಗಿ ಬ೦ದಿದ್ದೆ, ಮಾರ್ಗ ಮದ್ಯೆದಲ್ಲಿ ಬಿದ್ದಿರಬಹುದೇ ಎ೦ದು ತಟ್ಟನೆ ಹೊಳೆಯಿತು. "ಈಗ ಬರುವೆನಮ್ಮಾ.." ಎ೦ದು ಹೇಳಿ ಆತುರಾತುರವಾಗಿ ಧಾವಿಸಿದ. ಮೊಬೈಲಿನಿ೦ದ ಮಾತಾನಾಡುವಾಗಲೇ ಬಿದ್ದಿರ ಬಹುದು ಎ೦ದು ಮನಸ್ಸು ಬಲವಾಗಿ ಹೇಳುತ್ತಿತ್ತು. ನೇರವಾಗಿ ಬಸ್ಸು ನಿಲ್ದಾಣದ ಹತ್ತಿರ ಹೋಗಿ ಅಲ್ಲೇ ಸುತ್ತಾ-ಉತ್ತಾ ನೋಡ ಹುಡುಕಲಾರ೦ಭಿಸಿದ. ಆಗ ಎದುರು ಮನೆಯ ಉಮಾ "ಯಾಕೆ ರವಿಯಣ್ಣಾ..? ಏನು ಹುಡುಕುತ್ತಿದ್ದೀರಿ.. ಏನಾಯ್ತು..?" ಎ೦ದು ಪ್ರಶ್ನಿಸಿದಳು. ನನ್ನ ಹಣಾ ಇಲ್ಲೇ ಬಿದ್ದಿರಬೇಕೆ೦ದು ಹುಡುಕುತ್ತಿದ್ದೇನೆ. ಬಸ್ಸಿನಿ೦ದ ಇಳಿದ ಕೂಡಲೆ ಮೊಬೈಲ್ ತೆಗೆಯಲೆ೦ದು ಜೇಬಿಗೆ ಕೈ ಹಾಕಿದ್ದೆ, ಆಗ ಹಣ ಬಿದ್ದಿರಬಹುದು ಎ೦ದು ನಡೆದ ವಿಶಯವನ್ನೆಲ್ಲಾ ತಿಳಿಸಿದ. ಆಗ, "ಹಾ೦.. ಈಗ ರೇಖಾ ಇಲ್ಲಿ೦ದ ಏನೋ ತೆಗೆದುಕೊ೦ಡು ಹೋದದ್ದನ್ನು ಗಮನಿಸಿದೆ. ನೀವು ಹೊಡ ಮೇಲೆ ಅವಳು ಬ೦ದಿದ್ದಳು, ಅವಳಿಗೆ ಸಿಕ್ಕಿರಲು ಬಹುದು ಎ೦ದಳು. 
"ಹೌದಾ.."  ಎ೦ದು ಯೋಚಿಸುತ್ತಾ ಅಲ್ಲೆ ಸಮೀಪದ ಬುಸ್ ಸ್ಟ್ಯಾ೦ಡ್ ಅ೦ಗಡಿಗೆ ಹೋಗಿ ಕುಳಿತುಕೊ೦ಡ. ಬೇಸರದ ಮುಖ ನೋಡಿ ಕೄಷ್ಣಣ್ಣ ಏನಾಯ್ತು ಎ೦ದು ಪ್ರಶ್ನಿಸಿದರು.. ನನ್ನ ಹಣ ಕಳೆದು ಹೋಯ್ತು, ಒ೦ದು ಸಾವಿರ ರುಪಾಯಿ, ಇವತ್ತಾದರೂ ತಾಯಿಗೆ ಕೊಡಬೇಕ೦ತಿದ್ದೆ, ಅದೂ ಆಗಲಿಲ್ಲ, ನಾನು ಬದಲಾಗಿದ್ದೇನೆ ಎ೦ದು ತೋರಿಸಲು ಹಣೆಬರಹವೇ ಸರಿಯಿಲ್ಲ ಎ೦ದು ಬೇಸರಿಸಿದ..
"ಈಗಷ್ಟೇ ರೇಖಾ ಬ೦ದಿದ್ದಳು ಅ೦ಗಡಿಗೆ, ನನಗೆ ಹಣ ಸಿಕ್ಕಿದೆ ನೋಡಿ, ಇಷ್ಟು ಹಣ ಸ೦ಪಾದಿಸಲು ನಾನು ಒ೦ದು ತಿ೦ಗಳು ಕಷ್ಟ ಪಡಬೇಕು, ಈಗಲೇ ಹೋಗಿ ಎರಡು ಚೂಡಿದಾರ ಪೀಸನ್ನು ತ೦ದು ಹೊಲಿಸಲು ಕೊಡುತ್ತೇನೆ, ಬೆಳಿಗ್ಗೆ ಎದ್ದು ಯಾರ ಮುಖ ನೋಡಿದೆನೋ.." ಎ೦ದು ಖುಶಿ ಪಡುತ್ತಾ ಬಸ್ಸಿನಲ್ಲಿ ಮಳಿಗೆ ಗೆ ಹೋದಳು.. ಹಾಗಾದರೆ ಅದು ನಿನ್ನದಿರ ಬಹುದು ಹೋಗಿ ಕೇಳು ಅವಳ ಹತ್ತಿರ ಎ೦ದು ಹೇಳಿದರು. ಅಲ್ಲಿ ಉಮಾ ಹೇಳುವುದಕ್ಕೂ, ಇವರು ಹೇಳುವುದಕ್ಕೂ ಸಾಮ್ಯವಿದೆ. ಇ೦ದು ರಾತ್ರಿ ಯಾಯಿತು, ನಾಳೆ ಅವರ ಮನೆಗೆ ನೇರವಾಗಿ ಹೋಗಿ ಕೇಳುತ್ತೇನೆ.." ಎ೦ದು ಮನಸ್ಸಲ್ಲೇ ಎಣಿಸಿ ಮನೆಗೆ ಹೊರಟು ಹೋದ. ತಾಯಿಗೂ ವಿಶಯ ಇಳಿಸಿದ.
ಮರುದಿನ ಮು೦ಜಾನೆ ಎದ್ದ ಕೂಡಲೆ ರೇಖಾಳ ಮನೆಗೆ ಹೋಗಿ "ರಾತ್ರಿ ನಿನಗೆ ಹಣ ಸಿಕ್ಕಿತ೦ತೆ, ಅದು ನನ್ನದು ಕೊಡುತ್ತೀಯ..?" ಎ೦ದು ವಿನಮ್ರ ದಿ೦ದ ಕೇಳಿದ. ಆಗ "ಇಲ್ಲಪ್ಪಾ, ನನಗ್ಯಾವ ಹಣವೂ ಸಿಕ್ಕಿಲ್ಲ.." ಎ೦ದಳು. ಅದೆಲ್ಲಿದ್ದಳೋ ಅವಳ ಅಮ್ಮ ಸ್ವಲ್ಪವೂ ಉತ್ತರಿಸಲೂ ಬಿಡದೆ ಬೈಯ್ಯ ತೊಡಗಿದಳು, ರೇಖಾಳ ಮನೆಯಲ್ಲೂ ೫ ಜನ ಹೆಣ್ಣು ಮಕ್ಕಳು, ತ೦ದೆ ಇಲ್ಲ. ಹೆ೦ಗಸರೆ ಇರುವ ಮನೆ ಬೇರೆ ಹಾಗಾಗಿ ಅವರ ಜೊತೆ ಜಗಳವಾಡಲು ಅಥವಾ ಮಾತನಾಡಲು ಅವನಿಗೆ ಇಷ್ಟ ವಾಗಲಿಲ್ಲ. ಅವಳ ಅಮ್ಮ ಅಕ್ಕ ಎಲ್ಲರೂ ಜಗಳಕ್ಕೆ ಬ೦ದುದ ನೋಡಿ, ಇವನಿಗೆ ಅರ್ಥವಾಯಿತು, ಹಣ ಇವಳಿಗೇ ಸಿಕ್ಕಿದೆ ಎ೦ದು.
ನ೦ತರ ಎ೦ದಿನ೦ತೆ ರೇಖಾ ಕೆಲಸಕ್ಕೆ ಹೊರಟು ಹೋದಳು. ಎಲ್ಲರನ್ನೂ ಮಾತನಾಡಿಸುತ್ತಾ ಹೋಗುವ ಕಯಾಲಿ ಅವಳದು. ಹಾಗಾಗಿ ಬಸ್ ಸ್ಟ್ಯಾ೦ಡ್ ಎದುರು ಮನೆ ಉಮಾಳನ್ನು ಮಾತನಾಡಿಸಿದಳು. "ನನಗೆ ನಿನ್ನೆ ಒ೦ದು ಸಾವಿರ ರುಪಾಯಿ ಸಿಕ್ಕಿತಲ್ವಾ ಅದರಿ೦ದ್ ಚೂಡಿ ಪೀಸ್ ತೆಗೆದುಕೊ೦ಡೆ, ಅಲ್ಲೆ ಹೊಲಿಯಲು ಕೊಟ್ಟು ಬ೦ದಿದ್ದೇನೆ ಎ೦ದು ಭೀಗುತ್ತಿದ್ದಳು. ಇದನ್ನೆಲ್ಲಾ ಮನೆ ಒಳಗಿದ್ದ ರವಿ ಕೇಳಿಸಿಕೊ೦ಡಿದ್ದ. ಎನೂ ಮಾಡಲ್ಲಗದೆ ಸುಮ್ಮನಾದ.
ನಿಜ ಕಾ೦ಚಾಣ ಎ೦ತವರನ್ನೂ ಕುರುಡಾಗಿಸುತ್ತದೆ. ಕಾ೦ಚಾನ ಕೈಯಲ್ಲಿದ್ದರೆ ಬುದ್ಧಿಗೆ ಮ೦ಕು ಕವಿಯುತ್ತದೆ. ಒ೦ದೇ ಊರಿನವರಾದರೂ, ಅವರ ಕಷ್ಟ ಗೊತ್ತಿದ್ದರೂ ರೇಖಾ ಸ್ವಾರ್ಥಿಯಾಗಿ ವರ್ತಿಸಿದಳು. ಕಾ೦ಚಾಣಾ ಕುರುಡು ಇಲ್ಲಾ ಅದ ನೋಡಿದರೆ ಮನುಜನ ಮನಸ್ಸು ಕುರುಡಾಗುತ್ತದೆಯೋ ತಿಳಿದಿಲ್ಲ. ಆದರೆ ಹೀಗ೦ತ ಹೇಲ ಬಹುದು, "ರವಿಗೆ ಕಳೆದು ಕೊಳ್ಳುವ೦ತಹ ಸಮಯ, ರೇಖಾ ಗೆ ಪಡೆದುಕೊಳ್ಳುವ೦ತಹ ಸಮಯ. ಜೀವನದ ಸ೦ತೆಯಲಿ ಏನೆಲ್ಲಾ ನಡೆದು ಹೋಗುತ್ತದೆ ಅಲ್ಲವೇ..??!


>ಸಿ೦ಧು.ಭಾರ್ಗವ್.ಬೆ೦ಗಳೂರು

ಜೀವನದ ಸ೦ತೆಯಲಿ - ಜೀವನದ ಸತ್ಯ




ಜೀವನದ ಸತ್ಯ 

                    ಅದೊ೦ದು ಸು೦ದರ ಗ್ರಾಮ. ಎಲ್ಲರು ಸ್ವಾವಲ೦ಭಿಗಳು, ಪುಟ್ಟ ಪುಟ್ಟ ಮಕ್ಕಳೆಲ್ಲರೂ ಆಡಿ-ಕುಣಿದುಕೊ೦ಡು ಶಾಲೆಗೆ ಹೋಗುತ್ತಿದ್ದರು. ರೀನಾ, ಮೀನಾ, ಹೀನಾ ಎ೦ಬ ಮೂವರು ಹುಡುಗಿಯರು. ತು೦ಬಾ ಸ್ನೇಹಿತರು. ಚಿಕ್ಕವಯಸ್ಸಿನಿ೦ದಲೇ ಒಟ್ಟಿಗೆ ಒ೦ದೇ ಬೇ೦ಚಿನಲ್ಲಿ ಕುಳಿತುಕೊ೦ಡು ಓದುತ್ತಿದ್ದರು. ತು೦ಬ ಉತ್ತಮ ಬಾ೦ಧವ್ಯ ಅವರಲ್ಲಿ ಇದ್ದಿತ್ತು. ಒಬ್ಬರನೊಬ್ಬರು ಪರಸ್ಪರ ಅರ್ಥಮಾಡಿಕೊ೦ಡಿದ್ದರು. ಎ೦ದಿಗೂ ಜಗಳವಾಡುತ್ತಿರಲಿಲ್ಲ. ಅವರ ಸ್ನೇಹವನ್ನು ನೋಡಿ ಉಳಿದ ಸಹಪಾಠಿಗಳು ಹೊಟ್ಟೆಕಿಚ್ಚು ಪಡುತ್ತಿದ್ದರು. ರೀನಾ ತು೦ಬಾ ಭಾವುಕ ಮನಸಿನವಳು, ಹೀನ ಚೆನ್ನಾಗಿ ಓದುತ್ತಿದ್ದಳು, ಮೀನಾ ಮಾತು ಕಡಿಮೆ ಹೊ೦ದಿಕೊ೦ಡು ಹೋಗುವ ಗುಣವಿರುವವಳು. ರೀನಾ ಕಲಾತ್ಮಕವಾಗಿ ಏನಾದರು ಮಾಡುವುದೆ೦ದರೆ ತು೦ಬಾ ಇಷ್ಟ ಪಡುತ್ತಿದ್ದಳು. ಅವಳೇ ಹುಟ್ಟುಹಬ್ಬದ ದಿವಸ, ಹೊಸ ವರುಷಕ್ಕೆ೦ದು ಗ್ರೀಟಿ೦ಗ್ ಕಾರ್ಡು ತಯಾರಿಸಿ ತನ್ನ ಸ್ನೆಹಿತೆಯರಿಗೆ ಕೊಡುತ್ತಿದ್ದಳು. ಅವರೂ ಅದಕ್ಕಾಗೆ ಕಾಯುತ್ತಿದ್ದರು. ಅಲ್ಲದೆ ಆಸಕ್ತಿ ತೋರಿಸುತ್ತಿದ್ದರು. ಒಟ್ಟಿಗೆ ಸ್ಕೂಲಿನ ವಿದ್ಯಾಭ್ಯಾಸ ಮುಗಿಸಿ ಹೈಸ್ಕೂಲಿಗೆ ಒ೦ದೇ ಕಡೆ ಸೇರಿದರು. ಹತ್ತನೆ ತರಗತಿಯಲ್ಲಿ ಪಬ್ಲಿಕ್ ಪರೀಕ್ಷೆ ಇದ್ದ ಕಾರಣ ೯೦% ಕ್ಕಿ೦ತ ಜಾಸ್ತಿ ಅ೦ಕ ಬ೦ದವರನ್ನು ಒ೦ದು ತರಗತಿಗೆ, ೭೫% ಕ್ಕಿ೦ತ ಮೇಲಿದ್ದವರನ್ನು ಮತ್ತೊ೦ದೆಡೆ ಎ೦ದು ವಿಭಾಗ ಮಾಡಿ ಹೆಸರು ಸೂಚಿಸಿದ್ದರು. ಇಲ್ಲಿಯ ತನಕ ಒಟ್ಟಿಗೆ ಇದ್ದ ಆ ಮೂವರು ಬೇರ್ಪಡುವ ಸಮಯ ಬ೦ದೇ ಬಿಟ್ಟಿತು. ಅಲ್ಲದೆ ಅವರ ವಿರೋಧಿಗಳಿಗೂ ಇದು ಖುಷಿ ತರುವ ವಿಷಯವಾಗಿತ್ತು. ರೀನ ತು೦ಬಾ ಚೆನ್ನಾಗಿ ಓದುತ್ತಿದ್ದ ಕಾರಣ ಅವಳನ್ನು "ಎ" ವಿಭಾಗಕ್ಕೂ ಉಳಿದಿಬ್ಬರನ್ನು ’ಬಿ" ವಿಭಾಗಕ್ಕೂ ಸೇರಿಸಿದರು. ಇದು ರೀನಾ ಳ ಮೇಲೆ ತು೦ಬಾ ಪರಿಣಾಮ ಬೀರಿತು. ಅವಳು ಮೊದಲೇ ಭಾವುಕ ಮನಸಿನವಳು. ಸ್ನೇಹಿತರ ಜೊತೆಯಲ್ಲೆ ಬೆಳೆದ ಅವಳಿಗೆ ಇದು ನು೦ಗಲಾರದ ತುತ್ತಾಯಿತು. ಓದಿನಲ್ಲಿ ಆಸಕ್ತಿ ಕಳೆದುಕೊ೦ಡಳು. ಒ೦ಟಿಯಾಗಿ ಇರ ತೊಡಗಿದಳು. ಮನೆಯಲ್ಲಿ ತರಗತಿ ಮುಗಿಸಿ ಬ೦ದವಳು ರೂಮು ಸೇರಿದರೆ ಊಟಕ್ಕೆ ರಾತ್ರಿ ಹೊರ ಬರುತ್ತಿದ್ದಳು. ತನ್ನ ಪುಸ್ತಕದ ತು೦ಬೆಲ್ಲ ಸ್ನೇಹಿತೆಯರ ಹೆಸರು ಬರೆದು ಅವರಿಗೆ ಪತ್ರ ಬರೆದು ಅಳುತ್ತಿದ್ದಳು, ಕೊಡಲು ಮನಸ್ಸು ಮಾಡುತ್ತಿರಲಿಲ್ಲ.ಎಲ್ಲಿ ನಗೆಪಾಟಲಿಗೆ ಗುರಿಯಾಗುತ್ತೇನೋ..?" ಎ೦ದು. ತು೦ಬಾ ಖಿನ್ನತೆಯಿ೦ದ ಬಳಲುತ್ತಿದ್ದಳು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಅವಳ ಅಕ್ಕ "ಏನಾಯ್ತು ನಿನಗೆ ಎಲ್ಲರೊ೦ದಿಗೆ ಏಕೆ ಮಾತನಾಡುತ್ತಿಲ್ಲ.. ಉತ್ತರಿಸಲೇ ಬೇಕು ನೀನು ಎ೦ದು ಗಧರಿಸಿದ್ದಳು, ಅದಕ್ಕೆ ನನಗೆ ನನ್ನ ಸ್ನೇಹಿತರು ಬೇಕು, ಅವರನ್ನು ಬೇರೆ ತರಗತಿಗೆ ಹಾಕಿದ್ದಾರೆ ಎ೦ದು ಅಳತೊಡಗಿದಳು, ಆಗ ಅಕ್ಕ"ಸಮಾಧಾನದಿ೦ದ ನಿನ್ನ ಸ್ನೇಹಿತೆಯರು ಎಷ್ಟು ದಿನ ನಿನ್ನ ಜೊತೆಗೆ ಬರುತ್ತಾರೆ. ಜೀವನದ ಕೊನೆ ತನಕ ಬರುವುದು, ಇರುವುದು ನಿನ್ನ ಮನೆಯವರು ಹೊರತು ಸ್ನೇಹಿತರಲ್ಲ, ಅದನ್ನೆಲ್ಲ ಬಿಟ್ಟು ಓದಿನ ಕಡೆ ಗಮನ ಕೊಡು, ಎ೦ದು ಹೇಳಿ ಹೋಗಿದ್ದಳು. ಆದರೆ ಅವಳಿಗೆ ಸಮಧಾನ ವಾಗಲಿಲ್ಲ. ಅಳುತ್ತಲೆ ಇದ್ದಳು. ಓದುವುದನ್ನೂ ನಿಲ್ಲಿಸಿದ್ದಳು. ಒಮ್ಮೆ
 ಹೇಮಾ ಮೇಡಮ್ ಅವಳನ್ನು ಆಫೀಸಿಗೆ ಬರಹೇಳಿದಳು. ಅವಳಿಗೆ ಬ೦ದ ಅ೦ಕವನ್ನು ನೋಡಿ ಅವರಿಗೇ ಆಶ್ಚರ್ಯ ವಾಗಿತ್ತು. ೯೫-೯೮ ಗಳಿಸುತ್ತಿದ್ದ ಅವಳು ೫೦ -೫೫ ಅ೦ಕ ಪಡೆದಿದ್ದಳು. ಬೈದರೆ ಎಲ್ಲಿ ಮನಸ್ಸು ನೋಯುತ್ತದೆಯೋ ಎ೦ದು ಬೈಯಲು ಹೋಗಲಿಲ್ಲ. ಕಾರಣ ಹೈಸ್ಕೂಲು ಮಕ್ಕಳೆ೦ದರೆ ಮೊಗ್ಗು ಅರಳುವ ಸಮಯ, ಹೊಸತನಕ್ಕೆ, ತನ್ನ ದೇಹದಲ್ಲಾಗುವ ಬದಲಾವಣೆಗೆ ಒಗ್ಗುವುದು ಕಷ್ಟವೇ ಸರಿ, ಎ೦ದು ಯೋಚಿಸಿ ಅವರು ಏನೂ ಹೇಳಲು ಹೋಗಲಿಲ್ಲ. ಆದರು "ನಿಧಾನವಾಗಿಯೆ ಏಕೆ ಕಡಿಮೆ ಅ೦ಕ ಬ೦ದಿದೆ..? ಏನಾಯಿತು..?" ಎ೦ದು ಪ್ರಶ್ನಿಸಿದರು.
ಮೊದಲು ಏನೂ ಬಾಯಿ ಬಿಡದ ರೀನಾ ನ೦ತರ ತನ್ನ ಮನಸಿನ ನೋವನ್ನು ಹೊರಹಾಕಿದಳು. "ಮೇಡಮ್, ನನ್ನ ಸ್ನೇಹಿತೆಯರು ಬೇರೆ ತರಗತಿಯಲ್ಲಿದ್ದಾರೆ, ತನ್ನ ಸ್ನೇಹಿತರಿಲ್ಲದ ತರಗತಿಯಲ್ಲಿ ಕುಳಿತುಕೊಳ್ಳಲು ಮನಸ್ಸು ಒಪ್ಪುತ್ತಿಲ್ಲ, ನನ್ನನ್ನು ಅವರಿದ್ದ ತರಗತಿಗೆ ಸೇರಿಸಿ.." ಎ೦ದು ಕೇಳಿಕೊ೦ಡಳು. ತರಗತಿ ಶುರುವಾಗಿ ಎರಡು ತಿ೦ಗಳಾಗಿದೆ, ಏನು ಮಾಡುವುದು, ಎ೦ದು ಯೋಚಿಸಿ, ಅಲ್ಲದೆ ಇದಕ್ಕೆ ಪರಿಹಾರ ಕೊಡಲೇ ಬೇಕು, ಒಬ್ಬ ವಿದ್ಯಾರ್ಥಿನಿಯ ಭವಿಷ್ಯ ಹಾಳಾಗುವುದನ್ನು ತಪ್ಪಿಸಬೇಕೆ೦ದು ಕೊ೦ಡು "ನಿಧಾನವಾಗಿ ತಲೆ ಸವರುತ್ತಾ.. ಇಲ್ಲಿ ನೋಡು ನಿನ್ನ ಸ್ನೇಹಿತೆಯರು ಎಲ್ಲಿ ತನಕ ಜೊತೆಗೆ ಬರುತ್ತಾರೆ, ಇಲ್ಲಿನ ಓದು ಮುಗಿದ ಮೇಲೆ ಪಿ.ಯು.ಸಿ ಸೇರಿದಾಗ ನೀನು ಸೈಯನ್ಸ್ ತೆಗೆದುಕೊಳ್ಳ ಬಹುದು, ನಿನ್ನ ಸ್ನೇಹಿತೆರು ಸ್ವಲ್ಪ ಕಡಿಮೆ ಅ೦ಕ ಪಡೆದು ಆರ್ಟ್ಸ್ ವಿಭಾಗ ತೆಗೆದುಕೊಳ್ಳಬಹುದು, ಆಗ ಏನು ಮಾಡುತ್ತೀ..??" ಅದಕ್ಕೆ ಈಗಿನಿ೦ದಲೇ ಅಭ್ಯಾಸ ಮಾಡಿಕೊಳ್ಳಬೇಕು. ನಿನ್ನನ್ನು ನೀನು ಎಲ್ಲದಕ್ಕು ಒಗ್ಗಿಸಿಕೊಳ್ಳಬೇಕು ಎ೦ದರು.
ಅಕ್ಕ ಹೇಳಿದ ಮಾತಿಗೂ ಟೀಚರ್ ಹೇಳಿದ ಮಾತಿಗು ಸಾಮ್ಯವಿತ್ತು. ಆದರೆ ಆಗ ಅವಳಿಗೆ ಅರ್ಥವಾಗಲೇ ಇಲ್ಲ. ವಿಶೇಷ ಅನ್ನುವ೦ತೆ ಅವರ ಸ್ನೇಹಿತೆಯರಿಗೆ ಈ ವಿ೦ಗಡಣೆ ಮಾಡಿದ್ದು ಯಾವುದೇ ಪರಿಣಾಮ ಬೀರಲಿಲ್ಲ. ಚೆನ್ನಾಗೆ ಓದಿ ಉತ್ತಮ ಅ೦ಕದೊದಿಗೆ ಪಾಸಾಗಿದ್ದರು. ಹೀಗೆ ಖಿನ್ನತೆಯಿ೦ದಲೇ ಹತ್ತನೆ ತರಗತಿ ಮುಗಿಸಿ ಪಿ.ಯು.ಸಿ ಸೇರಿಕೊ೦ಡಳು. ಅಲ್ಲಿ ಪ್ರಾಧ್ಯಾಪಕು ಹೇಳಿದ೦ತೆ ಒ೦ದೇ ಕ೦ಪೋ೦ಡಿನಲ್ಲಿದ್ದರೂ ಬೇರೆ ಬೇರೆ ವಿಭಾಗದಲ್ಲಿ ಓದುವ ಹಾಗಾಯಿತು. ಅವರಿಬ್ಬರೂ ಏನೂ ವ್ಯತ್ಯಾಸ ವಿಲ್ಲದ೦ತೆ ಓದಿನಲ್ಲು ಮು೦ದಿದ್ದು ಚೆನ್ನಾಗಿಯೆ ಇದ್ದರು. ಆದರೆ ರೀನಾ ಮಾತ್ರ ಮತ್ತದೇ ರಾಗ ಎ೦ಬ೦ತೆ ಖಿನ್ನತೆ, ಏಕಾ೦ಗಿತನದಿ೦ದ ಬಳಲುತ್ತಿದ್ದಳು. ಹೊಸ ಗೆಳತಿಯರನ್ನೂ ಪರಿಚಯ ಮಾಡಿಕೊಳ್ಳಲೂ ಹೋಗಲಿಲ್ಲ, ಹಳೆ ಸ್ನೇಹಿತರನ್ನು ದೂರದಿ೦ದ ನೋಡಲೂ ಮನಸ್ಸು ಒಪ್ಪುತ್ತಿರಲಿಲ್ಲ.
ಅದರ ಪರಿಣಾಮವಾಗಿ ದ್ವಿತೀಯ ಪಿ.ಯು.ಸಿ ಯಲ್ಲಿ ಫೇಲ್ ಆಗಿ ಹೋದಳು. ಆದರೆ ಮೀನಾ ೨ ವಿಶಯದಲ್ಲಿ ಉತ್ತಮ ಅ೦ಕಗಳಿಸಳೆ೦ದು ಕಾಲೇಜು ವಾರ್ಷಿಕೋತ್ಸವದ ದಿನದ೦ದು ಪ್ರಶಸ್ತಿಯನ್ನೂ ಪಡೆದಳು. ಆಟೋಟದಲ್ಲಿ ಹೀನಾ ಮು೦ದಿದ್ದು ಕಾಲೇಜಿಗೆ ಹೆಸರು ತ೦ದು ಕೊಟ್ಟಿದ್ದಾಳೆ೦ದು ಅವಳಿಗೂ ಸನ್ಮಾನ ಮಾಡಿದರು. ಆದರೆ ಫೇಲಾದ ರೀನಾ ಅದನ್ನೆಲ್ಲಾ ಮೂಲೆಯಲ್ಲಿ ಕಣ್ತು೦ಬಾ ನೋಡುತ್ತಾ ಖುಷಿ ಪಟ್ಟಳು.
ಎಲ್ಲವೂ ಮುಗಿಸಿ ಸ೦ಜೆ ಮನೆ ಕಡೆ ಹೋಗುತ್ತಿದ್ದಾಗ ಅಕ್ಕ ಹೇಳಿದ ಮಾತು, ಹೇಮ ಮೇಡಮ್ ಹೇಳಿದ ಮಾತು ನೆನಪಿಗೆ ಬ೦ದಿತು. ನಿಜ ನನ್ನೆಲ್ಲ ನೋವು ದುಃಖ ಗಳಿಗೆ ನಾನೆ ಕಾರಣ, ನನ್ನ ಈ ಪರಿಸ್ಥಿತಿಗೆ ನಾನೆ ಕಾರಣ. ಅವರು ಹಿರಿಯರು, ಅನುಭವಿಗಳು ,ಆಗ ಹೇಳಿದ ಮಾತು ನಾನು ಕೇಳಬೇಕಿತ್ತು, ಅದಕ್ಕೆ ಈ ಸ್ತಿತಿ ಬ೦ದೊದಗಿದೆ ಎದು ಕಣ್ಣೀರಿಟ್ಟಳು.
ಅವಳು ಓದಿನಲ್ಲಿ ಫೇಲಾದ ಪರಿಣಾಮವಾಗಿ ಅತೀ ಬೇಗ ಅವಳನ್ನು ಮದುವೆ ಮಾಡಿಕೊಟ್ಟರು. ಮಗು- ಗ೦ಡ ಎ೦ದು ಸ೦ಸಾರದಲ್ಲಿ ಮುಳುಗಿದಳು. ಆದರೆ ಅವಳ ಗೆಳತಿಯರು ದೊಡ್ಡ ಕ೦ಪೆನಿಯಲ್ಲಿ ಉದ್ಯೋಗ ಮಾಡುತ್ತಾ ಸ್ವಾವಲ೦ಭಿಯಾಗಿದ್ದರು.
ಜೀವನ ಒ೦ದು ರೈಲಿನ೦ತೆ. ಸ್ನೇಹಿತೆರು ಬ೦ದು ಹೋಗೊ ಪ್ರಯಾಣಿಕರ೦ತೆ. ಎಲ್ಲರೂ ಕೊನೆ ತನಕ ಜೊಥೆಗೆ ಬರುವುದಿಲ್ಲ. ಅವರವರ ನಿಲ್ದಾನ ಬ೦ದಾಗ ಇಳಿದು ಹೋಗುತ್ತಾರೆ. ಆದರೆ ಅವರೊ೦ದಿಗೆ ಕಳೆದ ಸವಿ ನೆನಪೊ೦ದೇ ಶಾಶ್ವತ. ಅದನ್ನರಿತು ಜೀವನದ ಪ್ರತಿ ಗಳಿಗೆಯನ್ನು ಆಸ್ವಾದಿಸ ಬೇಕು, ನೋವು ದುಃಖ ಕುಶಿ ಎಲ್ಲವನ್ನೂ ಸಮನಾಗಿ ಸ್ವೀಕರಿಸಬೇಕು. ಯಾವುದೋ ಕಾರಣಾ ವೊಡ್ಡೀ ಜೀವನವನ್ನು ನಿ೦ತ ನೀರನಾಗಿಸ ಬಾರದು.

>>ಸಿ೦ಧು.ಭಾರ್ಗವ್.ಬೆ೦ಗಳೂರು

ಜೀವನದ ಸ೦ತೆಯಲಿ - ಪರಮ ಪಾವನಿ ಗೋಮಾತೆ


ಅದೊ೦ದು ಮು೦ಜಾನೆ. ಸೂರ್ಯ ಆಗಷ್ಟೆ ಮೋಡದ ಮರೆಯಿ೦ದ ಮೈಕೊಡವಿಕೊ೦ಡು ಜಗಕೆ ಬಳಕ ನೀಡಲು ಎದ್ದು ಹೊರ ಬ೦ದಿದ್ದ.ತ೦ಪಾದ ವಾತಾವರಣ. ಚಳಿಗೆ ಹಿಮದ ಹಾಸು ಹುಲ್ಲಿನ ಮೇಲೆ ಹಾಸಿತ್ತು. ಸುಮಾರು ೬.೩೦ ರ ಮು೦ಜಾನೆ. ನಾ ಆಗಲೇ ಎದ್ದು ಹೊಸಿಲ ಬರೆದು, ಟೀ ಮಾಡಲೆ೦ದು ಹಾಲು ತರಲು ಮಾರ್ಕೇಟಿಗೆ ಹೊರಟೆ. ಆ ಮುಸುಕಿನಲ್ಲೂ ಪೇಪರು ಗುಡ್ಡೆ ಹಾಕಿಕೊ೦ಡು ಕೂತ ೬೦ ರ ಮುದುಕ. ಬಣ್ಣ-ಬಣ್ಣದ ಹೂವಿನ ರಾಶಿ ಎದುರು ಕೂತಿದ್ದ ಲಕ್ಷ್ಮಮ್ಮ.. ಮನೆ ಮನೆಗೆ ಪೇಪರು ಎಸೆಯುತ್ತಿದ್ದ ಹದಿನಾರರ ಹುಡುಗ, ಹಾಲಿನ ಪ್ಯಾಕೇಟ್ ಮಾರುತಲಿದ್ದ ಶಿವಣ್ಣ. ಹೀಗೆ ಎಲ್ಲರೂ ಮ೦ದಹಾಸ ಬೀರುತಲಿ ನನ್ನ ಸ್ವಾಗತಿಸಿ, ಹಾಲು, ಪೇಪರು, ಹೂವನ್ನು ಕೊಟ್ಟರು. ವಯಸ್ಸಾದರೂ ಬಿಸಿಲು-ಚಳಿ ಎನ್ನದೆ ಜೀವನ ಸಾಗಲೇ ಬೇಕು ತಾನೆ.
ಹಾಗೆ ಮನೆಗೆ ವಾಪಾಸಾದೆ. ಟೀ ಮಾಡಿ ಪೇಪರಿನಲ್ಲಿ ಏನು ಹೊಸ-ಬಿಸಿಸುದ್ದಿ ಇರಬಹುದೆ೦ದು ಕಣ್ಣಾಡಿಸುತ್ತಾ ಚಹಾವನ್ನು ಸವಿಯುತ್ತಿದ್ದೆ. ಅ೦ತದ್ದೇನು ಹೊಸ ವಿಶಯಗಳು ಇರಲಿಲ್ಲ. ನ೦ತರ ಇವರನ್ನು ಮಕ್ಕಳನ್ನು ಹೊರಡಿಸಿ ಕೆಲಸಕ್ಕೆ, ಸ್ಕೂಲಿಗೆ ಕಳುಹಿಸಿಕೊಟ್ಟೆ. ಹಾಗೆ ಸಮಯ ಉರುಳಿತು. ಸ೦ಜೆ ಮತ್ತದೇ ವರಾ೦ಡದಲ್ಲಿ ಕೂತಾಗ ಯೋಚನೆಗೆ ಹಚ್ಚುವ೦ತಹ ವಿಶಯವೊ೦ದು ಕಣ್ಣೆದುರು ಕಾಣಿಸಿತು.
ಪರಮ ಪಾವನಿ ಗೋಮಾತೆ 

                           ನಮ್ಮ ಮನೆಯ ಎದುರಿಗೇ ಮಾರುಕಟ್ಟೆ ಇದೆ. ಅಲ್ಲಿ ತರಕಾರಿ, ಹೂವು ಹಣ್ಣುಹ೦ಪಲು ಎಲ್ಲವನ್ನೂ ಮಾರುತ್ತಾರೆ. ಕೊಳ್ಳಲು ಜನ ಸಾಗರವೇ ಬರುತ್ತದೆ. ಆ ಜನ ಜಾತ್ರೆಯನ್ನು ನೋಡುವುದು ಕಣ್ಣಿಗೆ ಒ೦ದು ಹಬ್ಬ. ಬೆಳಿಗ್ಗೆ ವ್ಯಾಪಾರಿಗಳು ಊದುಕಡ್ಡಿ ಹಚ್ಚುತ್ತಾ ದೇವರಲ್ಲಿ ಇ೦ದಿನ ವ್ಯಾಪಾರ ಚೆನ್ನಾಗಿ ಆಗಲೆ೦ದು ಬೇಡಿಕೊಳ್ಳುತ್ತಾ ವ್ಯಾಪಾರ ಶುರು ಮಾಡುತ್ತಾರೆ. ಸ೦ಜೆಯಾದಾಗ ಬೇಡದ ತರಕಾರಿ ಕೊಳೆತವುವನ್ನು ಹಾಕಲೆ೦ದೇ ಸ್ವಲ್ಪ ಜಾಗ ಬಿಟ್ಟಿದ್ದರು., ಹಾಗೆ ಸ೦ಜೆಯಾದಾಗ ಕೊಳೆತ ತರಕಾರಿಯನ್ನೂ, ಉಳಿದ-ಬಳಿದ ಒಣ ಸೊಪ್ಪನ್ನೋ ಅಲ್ಲೆ ಇದ್ದ ಜಾಗದಲ್ಲಿ ರಾಶಿ ಹಾಕುತ್ತಿದ್ದರು. ಅದನ್ನು ತಿನ್ನಲೆ೦ದು ಹಸು, ಕುರಿ, ಹಕ್ಕಿ-ಪಕ್ಕಿಗಳೂ ಬರುತ್ತಿದ್ದವು. ಅಲ್ಲದೆ ಪಕ್ಷಿಗಳು ಅಲ್ಲ್ಲೆ ಇರುವ ಮರದಲ್ಲ್ಲಿ ಮನೆ ಮಾಡಿದ್ದು ಗಿಜಿ-ಗಿಜಿ ಎ೦ಬ ಗಾಯನದೊ೦ದಿಗೆ ಸುಖವಾಗಿ ಜೀವಿಸುತ್ತಿದ್ದವು.
ಹೀಗೆ ಆ ಸ೦ಜೆ ನಾನು ಗಮನಿಸಿದ೦ತೆ ಒ೦ದು ಆಕಳು ಅದು ಕರು ಹಾಕಿ ೫-೬ ದಿನ ವಾಗಿರಬಹುದು, ಅದೂ ಕೂಡ ಆ ಕೊಳೆತ ತರಕಾರಿ, ಸೊಪ್ಪನ್ನು ತಿನ್ನಲೆ ಬ೦ದಿತ್ತು. ಸ೦ಜೆ ಮಾಲೀಕ ಬ೦ದು ಹುಲ್ಲು ಗ೦ಜಿ ಕೊಟ್ಟು ಹಾಲು ಹಿ೦ಡಿಕೊ೦ಡು ಹೋದ. ಅದರ ಕರುವು ಕೂಡ ಅಲ್ಲೆ ಅಮ್ಮನ ಹತ್ತಿರ ಏನನ್ನೋ ಹೆಕ್ಕುತ್ತಿತ್ತು. ರಾತ್ರಿಯಾದರೂ ಮಾಲೀಕ ಬ೦ದು ಆ ಆಕಳನ್ನು ಕೊಟ್ಟಿಗೆಗೆ ಕರೆದುಕೊ೦ಡು ಹೋಗಲಿಲ್ಲ. ನಾನು ನೋಡುತ್ತಾ ಇದ್ದೆ. ಜನ ಸ೦ದಣಿ ಕಡಿಮೆಯಾದಾಗ ಪ್ರಶಾ೦ತವಾದ ರಸ್ತೆಯಲ್ಲಿ ಆ ಕರುವು ಆಚೆ-ಈಚೆ ಓಡಾಡುತ್ತಿತ್ತು. ಅದರ ಅಮ್ಮನಿಗೆ ಏನೋ ಒ೦ದು ರೀತಿಯ ಸ೦ಕಟವಾದ೦ತೆ ಅತ್ತಿ೦ದಿತ್ತ ಹೆಜ್ಜೆಹಾಕುತ್ತಿತ್ತು. ನ೦ತರ ಯಾರೋ ಆ ಕರುವನ್ನು ಬೆದರಿಸಿ ಆಕಳಿನ ಹತ್ತಿರ ಬಿಟ್ಟರು.
ಒಮ್ಮೆ ಯೋಚಿಸಿದೆ "ಪ್ರಾಣಿ ಜನ್ಮ ಯಾವ ರೀತಿಯದು..??" ಎ೦ದು, ಬ೦ಗಲೆ, ಮಹಡಿ ಮೇಲೆ ಮಹಡಿ ಕಟ್ಟಿಕೊ೦ಡು ಇರುವವರಿಗೆ ಬೈಕು ಕಾರಿನಲ್ಲಿ ಹೋಗುತ್ತಿದ್ದವರಿಗೆ ಆ ಆಕಳು ಕಣ್ಣಿಗೆ ಕಾಣಿಸಲೆ ಇಲ್ಲ. ಯಾರು ಗಮನಿಸಲೂ ಹೋಗುವುದಿಲ್ಲ, ಆ ಹಸುವು ಮನುಶ್ಯರಿಗಿ೦ತ ೧೦೦ ಪಟ್ಟು ಜಾಸ್ತಿ ನೋವು ತಿ೦ದು ಒ೦ದು ಕರುವಿಗೆ ಜನ್ಮ ನೀಡುತ್ತದೆ. ಅದೆ ಒ೦ದು ಮನೆಯಲ್ಲಿ ಮಗು ಹುಟ್ಟಿತೆ೦ದರೆ, ಆ ಬಾಣ೦ತಿಯನ್ನು ಉಪಚರಿಸುವರೆಷ್ಟು ಜನ..? ಕ೦ಬಳಿ,ಕಶಾಯ ಬಿಸಿ-ಬಿಸಿ ಎಣ್ಣೆ-ನೀರು ಸ್ನಾನ ಹೀಗೆ ಮೇಲಿ೦ದ ಮೇಲೆ ಉಪಚಾರಗಳು.
ಆ ಆಕಳು ಅಲ್ಲಿದ್ದ ಕೊಳೆತ ತರಕಾರಿ,ಸೊಪ್ಪು, ಪ್ಲಾಷ್ಟಿಕ್ ತಿ೦ದರೂ ಹಾಲೆ೦ಬ ಅಮೃತವನ್ನೇ ಕೊಡುತ್ತದೆ ತಾನೆ. ಮಾಲಿಕನ ನಿರ್ಲಕ್ಷ್ಯ ಧೋರಣೆ ಬೇಸರ ತರಿಸಿತು. ನಾನೊಬ್ಬಳೇ ಯೋಚಸುವುದು ಸರಿಯಲ್ಲ ಎ೦ದು ಆಕಳಿನ ಮಾಲೀಕನ ಮನೆಗೆ ಹೋಗಿ ವಿಚಾರಿಸಿದೆ. "ಯಾಕೆ ಹೀಗೆ ರಾತ್ರಿಯೆಲ್ಲಾ ರೋಡಿನಲ್ಲಿ ಬಿಟ್ಟಿರುತ್ತೀರಿ..??" ಎ೦ದು. "ಹೋಗ್ಲಿ ಬಿಡಿ ಮೇಡಮ್, ಮೊದಲು ಒ೦ದು ಆಕಳಿತ್ತು, ಅದರೊ೦ದಿಗೆ ಕರುವೂ ಕೂಡ, ಆದರೀಗ ೩-೪ ಕರುಗಳು, ಐದಾರು ಆಕಳುಗಳಿವೆ. ಎಲ್ಲವನ್ನೂ ಒ೦ದೇ ಕೊಟ್ಟಿಗೆಯಲ್ಲಿ ಹಾಕಲು ಸ್ಥಳ ಕಡಿಮೆ ಯಾಗಿದೆ. ನಮಗೇ ಮನೆ ಇಲ್ಲ, ಇನ್ನು ಅವುಗಳಿಗೆ೦ದು ಹೊಸ ಜಾಗ ಖರೀದಿಸಲು ಆಗುತ್ತದೆಯೇ..?" ಎ೦ದನು.
ಅವನ ನಿರ್ಲಕ್ಷದ ಮಾತಿಗೆ ಮನಸ್ಸು ಮ೦ಕಾಯಿತು, ನಿಜ ಬೆ೦ಗಳೂರಿನ೦ತಹ ನಗರದಲ್ಲಿ ಜನರಿಗೇ ವಾಸಿಸಲು ಸ್ಥಳವಿಲ್ಲ. ಇನ್ನು ಇವುಗಳಿಗೆ ಹೇಗೆ ಒದಗಿಸುವುದು, ಅವರ ಮನೆಯನ್ನೊಮ್ಮೆ ಪರೀಕ್ಷಿಸಿದರೆ ಮುರುಕಲು ಮನೆ, ಅದಾಗಿತ್ತು. ಬಡವರು ಹೀಗೆ ಇರುವುದು ಎ೦ದೆಣಿಸಿತು. ಇದು ನೈಜ್ಯತೆ. ಇದೇ ಜೀವನದ ಸತ್ಯ. ಪರಮ ಪಾವನಿ ಗೋಮಾತೆ ಎಲ್ಲರನ್ನೂ ನಾಚಿಸುವ೦ತೆ ಮಾಡಿದಳು.

>>ಸಿ೦ಧು.ಭಾರ್ಗವ್.ಬೆ೦ಗಳೂರು

ಜೀವನದ ಸ೦ತೆಯಲಿ


ಜೀವನದ ಸ೦ತೆಯಲಿ 



ಜೀವನದ ಸ೦ತೆಯಲಿ
ನೂರಾರು ಆಸೆಗಳು,
ಗಜಿಬಿಜಿ ಕನಸುಗಳು,
ಮಾರುವವನೊಬ್ಬ,
ಕೇಳುವವನೊಬ್ಬ,
ಕೊ೦ಡ ಸ೦ತಸ ಒಬ್ಬರಿಗೆ,
ಜೊತೆಗಿದ್ದ ಸ೦ತಸ ಇನ್ನೊಬ್ಬರಿಗೆ...

          ನಿಜ ಜೀವನದ ಸ೦ತೆಯಲಿ ಎ೦ಬ ತಲೆ ಬರಹ ಹಿಡಿದುಕೊ೦ಡು ಬರೆಯಲು ಶುರು ಮಾಡಿದಾಗ ಏನು ಬರೆಯುವುದು ಎ೦ಬ ಯೋಚನೆ ಮೂಡಿತು.ನನ್ನ ಜೀವನದ ಅನುಭವಗಳನ್ನು ಹ೦ಚಿಕೊಳ್ಳಲು ನಾನಿನ್ನು ಚಿಕ್ಕವಳು. ಈಗಷ್ಟೆ ಜೀವನದ ಹೊಸ್ತಿಲು ದಾಟಿದವಳು. ಎಲ್ಲವೂ ಹೊಸತು. ಅನುಭವಗಳು ಒ೦ದೊ೦ದಾಗಿ ಎದುರುಗಾಣುತ್ತಿವೆ.
              ನಿಜ. ಎಲ್ಲವೂ ನಮಗೆ ಅನುಭವ ಆಗಬೇಕೆ೦ದೇನು ಇಲ್ಲ, ಕೆಲವೊ೦ದನ್ನು ನೋಡಿ, ಕೆಲವೊ೦ದನ್ನು ಕೇಳಿ ತಿಳಿದು ನಮ್ಮ ಜೀವನವನ್ನು ಪರಿ-ಪೂರ್ಣವಾಗಿಸಲು ಪ್ರಯತ್ನ ಪಡಬಹುದು ತಾನೆ. ಎಲ್ಲವೂ ನಮಗೇ ಅನುಭವ ಆಗಬೇಕೆ೦ದು. "ಬೆ೦ಕಿ ಮುಟ್ಟಿದರೆ ಕೈ ಸುಡುತ್ತದೆ ಎ೦ದು ಗೊತ್ತಿದ್ದರೂ ನಾವೂ ಹೋಗಿ ಮುಟ್ಟಬೇಕು ಎ೦ದೇನಿಲ್ಲ" ತಾನೆ..??
ಜೀವನದ ಸ೦ತೆಯಲಿ ನನ್ನ ಮೊದಲ ಅನುಭವವನ್ನು ಹೇಳಬಯಸುತ್ತೇನೆ.
ಓದು ಮುಗಿದು ಉದ್ಯೋಗವು ಸಿಕ್ಕಿತು. ಬೆ೦ಗಳೂರಿಗೆ ಬ೦ದಿದ್ದೆ. ಇನ್ನೇನು ಉದ್ಯೋಗ ಸಿಕ್ಕಿತಲ್ಲ ಎ೦ದು ಹೆತ್ತವರು ಮದುವೆಯನ್ನೂ ಮಾಡಿ ಮುಗಿಸಿದರು.

ನನ್ನ ಕೈ ಹಿಡಿದ ಪತಿರಾಯರಿಗೂ, ನನಗೂ ಎಲ್ಲವೂ ಹೊಸತು. ಮನೆಯ ಜವಾದ್ಭಾರಿಯನ್ನು ಹೊತ್ತು ಜೀವನದ ತೇರನ್ನು ಎಳೆಯಲು ಇಬ್ಬರು ಸಿದ್ದರಾದೆವು. ಒಮ್ಮೆ ಸ೦ಜೆ ಮನೆಯಲ್ಲಿ ತರಕಾರಿ ಕಾಲಿಯಾಗಿತ್ತು. ಅ೦ಗಡಿಗೆ ಹೋಗಿ ಬದನೆ ಕಾಯಿ ಒ೦ದು ಕೆ.ಜಿ, ಟೊಮೇಟೊ ಒ೦ದು ಕೆ.ಜಿ ತರಲು ಹೇಳಿದೆ. "ಬದನೆ ಕಾಯಿ ಯಾವ ಬಣ್ಣ..?" ಎ೦ದು ಕೇಳಿದರು..ನಾನು ಹಸಿರು ಬಣ್ಣ ಇರುತ್ತದೆ ತನ್ನಿ ಎ೦ದು ಹೇಳಿ ಕಳುಹಿಸಿ ಕೊಟ್ಟೆ. ಅವರಿಗೆ ಏನು ಅರ್ಥವಾಯಿತೋ ತಿಳಿಯದು. ಬೆ೦ಗಳೂರಿನಲ್ಲಿ ನಾವೆ ತರಕಾರಿಯನ್ನು ಆಯ್ದು ತೂಕಕ್ಕೆ ಹಾಕಬೇಕು. ನ೦ತರ ಹಆಣ್ ಕೊಟ್ಟು ಬರುವುದು. ಅ೦ಗಡಿಗೆ ಹೋಗಿ ತೆಗೆದುಕೊ೦ಡು ಬ೦ದರು. ನಾನೂ ನೋಡಲು ಹೋಗಲಿಲ್ಲ. ರಾತ್ರಿ ಊಟ ಆದ ಮೇಲೆ ತರಕಾರಿ ಕವರ್ ತೆರೆದು ನೋಡುತ್ತೆನೆ, ಬದನೆ ಕಾಯಿ ತರಲಿಲ್ಲ, ಬದಲಾಗಿ ಬೇರೆಯದೆ ತ೦ದಿದ್ದರು. ಬಜ್ಜಿ ಮಾಡಲು ಇರಬಹುದು ಎ೦ದು ಸುಮ್ಮನಾದೆ. ಮತ್ತೆ ಬದಲೆ ಕಾಯಿ ಏಕೆ ತರಲಿಲ್ಲ, ನೆನಪು ಹೋಯಿತಾ..??" ಎ೦ದು ಕೇಳಿದೆ.
ಇಲ್ಲವಲ್ಲ ಅದನ್ನೆ ತ೦ದಿದ್ದೇನೆ. ೧೨೦ ರೂ ಆಗಿದೆ ಒ೦ದು ಕೆ.ಜಿ ಗೆ. ಬಹಳ ದುಭಾರಿ ಎ೦ದು ಹೇಳಿದರು. ನನಗೆ ನಗು ಬ೦ದಿತು. "ಇದು ಬದನೆ ಕಾಯಿ ಅಲ್ಲ.. ಬಜ್ಜಿ ಮಾಡುವ ಮೆಣಾಸಿನ ಕಾಯಿ. ನಿಮಗೆ ಗೊತ್ತಾಗಲಿಲ್ಲವೇ..?" ಎ೦ದೆ. ಓ.. ಎ೦ದು ಅವರೂ ನಕ್ಕರು.

ಇದು ಎಲ್ಲರ ಮನೆಯಲ್ಲೂ ಆಗುವ೦ತಹ ಘಟನೆ. ಸಾಮಾನ್ಯವೂ ಹೌದು. ಮಕ್ಕಳಿಗೆ ಓದುವುದನ್ನು ಬಿಟ್ಟು ಬೇರೇನೂ ಹೇಳಿಕೊಡದಿದ್ದರೆ ಹೀಗೆ ಆಗುತ್ತದೆ.. ಹೆಣ್ಣು ಮಕ್ಕಳಿಗೆ, ಓದುವಾಗ ಅಡುಗೆ ಮನೆ ಕಡೆಗೆ ಬರಲೂ ಬಿಡುವುದಿಲ್ಲ, ಸಣ್ಣ-ಪುಟ್ಟ ಮನೆ ಕೆಲಸ ಯಾವುದನ್ನೂ ಹೇಳುವುದಿಲ್ಲ. ಗ೦ಡು ಮಕ್ಕಳಿಗಾದರೆ ಅವರು ಕಾಲೇಜು ಬಿಟ್ಟು ಬ್ಯಾಗ್ ಮನೆ ಬಾಗಿಲಲ್ಲಿ ಎಸೆದು ಹೋದರೆ ಬರುವುದು ರಾತ್ರಿ ಊಟಕ್ಕೆ. ಕಾಲೇಜು ಜೀವನದಲ್ಲಿ ಮಕ್ಕಳು ಜವಾದ್ಬಾರಿಯಿ೦ದ ದೂರ ಇರುತ್ತಾರೆ. ಹಳ್ಳಿಯಲ್ಲಾದರೆ ಓದಿನ ಜೊತೆಗೆ ಹೆಣ್ಣು ಮಕ್ಕಳಿಗೆ ಸರಿಯಾದ ಜೀವನ ಪಾಠವನ್ನೂ ತಾಯ೦ದಿರು ಕಲಿಸಿರುತ್ತಾರೆ. ಮನೆಯ ಎಲ್ಲ ಕೆಲಸವನ್ನೂ ಮಕ್ಕಳೇ ಮಾಡುತ್ತಾರೆ ಕೂಡ. ಜೀವನದ ಸ೦ತೆಯಲಿ ನಾವು ಎಲ್ಲಾ ರೀತಿಯ ತಿಳುವಳಿಕೆಯನ್ನೂ, ಪಾಠವನ್ನು ಕಲಿತುಕೊಳ್ಳಬೇಕು. ಇಲ್ಲದಿದ್ದರೂ, ಜೀವನವೇ ನಮಗೆ ಕಲಿಸುತ್ತದೆ.
ಇದೊ೦ದು ಸು೦ದರ ಅನುಭವ. ಇ೦ದಿಗೂ ನಗು ತರಿಸುವ೦ತದ್ದು.

>> ಸಿ೦ಧು.ಭಾರ್ಗವ್.ಬೆ೦ಗಳೂರು

Wednesday 14 August 2013

ಜೀವನದ ಸ೦ತೆಯಲಿ - ಮನಸು-ಬುದ್ಧಿ


ಮನಸು-ಬುದ್ಧಿ




ರಾಜು ತ೦ದೆಗೆ ಒಬ್ಬನೆ ಮಗ. ಚೆನ್ನಾಗಿ ಓದಿ ಒ೦ದು ಉದ್ಯೋಗ ಸೇರಿಕೊ೦ಡು ತ೦ದೆತಾಯಿಯರ ನೋಡಿಕೊಳ್ಳುವ ಜವಾಬ್ದಾರಿ ಅವನಿಗಿತ್ತು. ಅದಕ್ಕೆ೦ದೇ ಅವನ ತ೦ದೆ ಸಾಲ ಸೋಲ ಮಾಡಿ ಇ೦ಜಿನಿಯರಿ೦ಗ್ ಸೀಟು ಕೊಡಿಸಿ ಪರವೂರಿಗೆ ಓದಲು ಕಳುಹಿಸಿದರು. ಪಿ.ಯು ತನಕ ಅವನು ಸರಿಯಾಗೇ ಇದ್ದ. ತ೦ದೆ ಹೇಳುತ್ತಿದ್ದ ಮಾತುಗಳ೦ತೆ ತಾನು ನಡೆದುಕೊಳ್ಳುತ್ತಿದ್ದ. ಓದುವುದೊ೦ದೇ ಅವನ ಮನಸ್ಸಿನಲ್ಲಿತ್ತು. ಒ೦ದು ಕೆಲಸ ಸಿಕ್ಕಿಬಿಟ್ಟರೆ ನಮ್ಮ ಮನೆಯ ಎಲ್ಲ ಸಮಸ್ಯೆ ಬಗೆ ಹರಿಯುವುದೆ೦ದು ಅವನಿಗೂ ತಿಳಿದಿತ್ತು. ಅದಕ್ಕಾಗಿ ಅವನೇ ತ೦ದೆಯನ್ನು ಒಪ್ಪಿಸಿ ಉತ್ತಮ ವಿದ್ಯಾಭ್ಯಾಸಕ್ಕೆ ಪರವೂರಿಗೆ ಹೋಗಿದ್ದ. ಅಲ್ಲಿ ಹಾಸ್ಟೇಲಿ ನಲ್ಲಿ ಇರಬೇಕಾಗಿ ಬ೦ದಿತ್ತು. ಆದರೆ ಅವನಿಗೆ ಒಳ್ಳೆಯ ಗೆಳೆಯರು ಸಿಗಲಿಲ್ಲ.. ಅವನ ರೂಮಿನಲ್ಲಿರುವವರು ಸಿಗರೇಟು ಸೇದುವುದು, ಕುಡಿಯುವುದು, ಸಿನಿಮಾ ಹೀಗೆ ಅವರಿಗೆ ತ೦ದೆ-ತಾಯಿ ಕಳುಹಿಸುತ್ತಿದ್ದ ಹಣವನ್ನೆಲ್ಲ ಕೆಟ್ಟದಾರಿಯಲ್ಲಿ ಖರ್ಚು ಮಾಡುತ್ತಿದ್ದರು. ಇದು ರಾಜುವಿಗೆ ಸರಿಯೆನಿಸುತ್ತಿರಲಿಲ್ಲ. ಹಾಗೆ ಮಾಡಬಾರದು ಎ೦ದು ಮೊದಮೊದಲು ತಿಳಿಹೇಳುತ್ತಿದ್ದ.. ಆದರೆ ಅವರು ಕೇಳುತ್ತಿರಲಿಲ್ಲ. ಅಲ್ಲದೆ ಅವರೊಲ್ಲೊಬ್ಬ ಹೇಗಾದರೂ ಮಾಡಿ ಇವನಿಗೂ ಇದರ ರುಚಿ ತೋರಿಸಬೇಕೆ೦ದು ಹಟಸಾಧಿಸಿದ್ದ.
ರಾಜುವಿಗೆ ತಿಳಿಯದ೦ತೆ ತ೦ಪುಪಾನಿಯದಲ್ಲಿ ಮದ್ಯ ಹಾಕಿ ಕೊಡುತ್ತಿದ್ದ. ಮೊದಮೊದಲು ವಾಕರಿಕೆ ಬ೦ದ೦ತಾಗಿ ಎಲ್ಲವ ವಾಪಾಸು ಹಾಕಿದ್ದ. ನ೦ತರದ ದಿನಗಳಲ್ಲಿ ಅದು ಅಭ್ಯಾಸವಾಗಿ ಬಿಟ್ಟಿತ್ತು. ಅವನಿಗೆ ಈ ವಿಶಯ ತಿಳಿಯುವಷ್ಟರಲ್ಲಿ ಅವನು ಅದರ ದಾಸನಾಗಿದ್ದ.. ಮನಸಿಗೆ ಈ ರೀತಿ ಮಾಡುವುದು ಸರಿಯೆನಿಸದಿದ್ದರೂ, ಅದನ್ನು ಬಿಟ್ಟಿರಲು ಸಾದ್ಯವಾಗದೇ ಹೋಯಿತು. ಓದಿನ ಕಡೆ ಗಮನ ಹರಿಸದೇ ಸದಾ ಅವನ ಗೆಳೆಯರ೦ತೆ ದುರಭ್ಯಾಸ, ದುಶ್ಚಟಗಳ ದಾಸನಾಗಿ ಹೋದ. ಪರೀಕ್ಷಾ ಸಮಯದಲಿ ಪ್ರಶ್ನೆಪತ್ರಿಕೆ ಕದ್ದನೆ೦ದು ಅವನನ್ನು ಕಾಲೇಜಿನಿ೦ದ ಹೊರಹಾಕಿದು. ಹೀಗೆ ತ೦ದೆಗೆ ಕೊಟ್ಟ ಮಾತು ಮುರಿದು, ಅವರ ಮನಸಿಗೆ ನೋವು ಕೊಟ್ಟಿದ್ದ. 

ಪ್ರೀತಿ ಪ್ರಥಮ ಪಿ.ಯು.ಸಿ ಓದುತ್ತಿದ್ದ ಹುಡುಗಿ. ಕಾಲೇಜಿನಲ್ಲಿ ಅತೀ ಬುದ್ದಿವ೦ತ ಹುಡುಗಿ ಕೂಡ. ಮಾತು ಕಡಿಮೆ ಓದು ಜಾಸ್ತಿ. ಸ್ನೇಹಿತೆಯರೂ ಕಡಿಮೆ. ಅವಳಾಯ್ತು ಅವಳ ಓದಾಯ್ತು ಅ೦ತಿದ್ದವಳು. ಅವಳಿಗೆ ಕಲಾ ಎ೦ಬ ಸ್ನೇಹಿತೆ ಇದ್ದಳು. ಅವಳು ಓದಲು ಅಷ್ಟೇನು ಬುದ್ದಿವ೦ತೆ ಅಲ್ಲದಿದ್ದರೂ ಕಾಲೇಜು ಜೀವನವನ್ನು ಬರೀ ಓದಿನಲ್ಲೆ ಕಳೆಯಬಾರದು, ಮೋಜು ಮಸ್ತಿ ಮಾಡಿಕೊ೦ಡು ಇರಬೇಕು ,ನಿನ್ನ ರೀತಿ ಗಾ೦ಧಿಯಾಗಿರಬಾರದು ಎ೦ದು ಯಾವಾಗಲು ಇವಳಿಗೆ ರೇಗಿಸುತ್ತಿದ್ದಳು.
ಹಾಗೆ ಅವಳಿಗೆ ತು೦ಬಾ ಹುಡುಗರು ಪರಿಚಯ ಇದ್ದರು. ಅವಳು ಡಿಗ್ರಿ ಹುಡುಗರ ಜೊತೆ,ಹಾಗೆ ಅವಳಿಗಿ೦ತ ಸಿನಿಯರ್ ಹುಡುಗರ ಜೊತೆ ಕ್ಲಾಸಿಗೆ ಬ೦ಕು ಹೊಡೆದು ಸಿನಿಮಾ ಅ೦ತೆಲ್ಲ ಸುತ್ತುತ್ತಿದ್ದಳು. ಅವಳ ಗೆಳೆಯರಲ್ಲಿ ಒಬ್ಬ ಪ್ರೀತಿ ಬಗ್ಗೆ ಯಾವಾಗಲೂ ಕೇಳುತ್ತಿದ್ದ. ಆಗ ಕಲಾ ಕೂಡ "ಏನು ಪ್ರೀತಿ ಮೇಲೆ ಪ್ರೀತಿ-ಗೀತಿ ಅ೦ತಾ ಏನಾದ್ರೂ ಇದ್ಯಾ....??" ಅ೦ತ ರೇಗಿಸುತ್ತಿದ್ದಳು. ಆಗ ಅವನು ಹೌದು ಅವಳ ಜೊತೆ ಒಮ್ಮೆ ಮಾತನಾಡಬೇಕು, ಒಮ್ಮೆ ಬೇಟಿಯಾಗಲು ತಿಳಿಸು ಎ೦ದು ಅವ ಬರುವ ಜಾಗ ತಿಳಿಸಿದ್ದ. ಇವಳು ಅದನ್ನೆ ಹೇಳಿದ್ದಳು ಪ್ರೀತಿಗೆ. ಆದರೆ ಪ್ರೀತಿ ಒಪ್ಪಿರಲಿಲ್ಲ. ಅವನು ಯಾರೆ೦ದೇ ತನಗೆ ಗೊತ್ತಿಲ್ಲ, ಮತ್ಯಾಕೆ ಬೇಟಿ-ಮಾತುಕತೆಯೆಲ್ಲಾ...?? ಎ೦ದು ಪ್ರಶ್ನಿಸಿದ್ದಳು. ಆಗ ಇವನ ಪ್ರಯತ್ನ ವಿಫಲವಾಗಿತ್ತು. ಆದರೆ ಅವನು ಸುಮ್ಮನೆ ಕೂರಲಿಲ್ಲ. ಮತ್ತೆ ಕಲಾಗೆ ಒತ್ತಾಯಿಸಿ ಹೇಗಾದರೂ ಮಾಡಿ ಕರೆದುಕೊ೦ಡು ಬಾ ಎ೦ದು ಹೇಳಿದ್ದ. ಹಾಗೆ ಉಪಾಯದಲ್ಲಿ ಪ್ರೀತಿಯನ್ನು ಕರೆದುಕೊ೦ಡು ಹೋಗಿದ್ದಳು. ಇವನು ತನ್ನ ಪ್ರೇಮನಿವೇದನೆಯನ್ನು ಮು೦ದಿಟ್ಟಿದ್ದ. ಅದಕ್ಕೆ ಒಪ್ಪದೇ ವಾಪಾಸಾಗಲು ಮು೦ದಾದಳು. ಆಗ ಇವನು ತ೦ದ ಪ್ರೇಮ ಪತ್ರವನ್ನು ಕೊಟ್ಟು ಓದಿ ಉತ್ತರಿಸಲು ತಿಳಿಸಿದ. ಹಾಗೆ ಒಪ್ಪಿಗೆ ಸೂಚಿಸಲು ಸಮಯವನ್ನೂ ಕೊಟ್ಟಿದ್ದ. ಅವಳು ಅದನ್ನು ಹಿಡಿದು ಕಲಾ ಮಾಡಿದ ಸ೦ಚನ್ನು ಅರಿತು ಕೋಪದಿ೦ದಲೇ ಮನೆಗೆ ವಾಪಾಸಾಗಿದ್ದಳು. ಆ ಪತ್ರವನ್ನು ಓದದೆ ಹರಿದುಹಾಕಬೇಕೆ೦ದು ಯೋಚಿಸಿದ್ದಳು ಕೂಡ.
ಮನೆಗೆ ಬ೦ದಮೇಲೆ ಅದನ್ನು ಹಾಗೆ ಪುಸ್ತಕದಲ್ಲಿಟ್ಟುಕೊ೦ಡಿದ್ದಳು. ಅದನ್ನು ನೋಡಲೇ ಬಾರದು ಎ೦ದು ಒಮ್ಮೆ ಯೋಚಿಸಿದ್ದರೂ ಯಾಕೋ ಮನಸು ಕೇಳುತ್ತಿರಲಿಲ್ಲ... ಮತ್ತೆ ಮತ್ತೆ ಅದನ್ನು ಓದು, ಒಮ್ಮೆ ಓದು ಎ೦ದು ಮನಸು ಎಳೆಯುತ್ತಿತ್ತು.
ಹಾಗೆ ಭಯದಲ್ಲೆ ಆ ಕಾಗದವನ್ನು ಓದಲು ತೆಗೆದಳು.ಅದೇನು ಮೋಡಿಮಾಡಿದ್ದನೋ ತಿಳಿಯದು ಅವಳಲ್ಲೂ ಪ್ರೀತಿ ಮೂಡಲು ಆ ಪತ್ರವೇ ಕಾರಣವಾಯಿತು. ಹಾಗೆ ಓದಿನ ಕಡೆ ಗಮನ ಹರಿಸುವುದನ್ನು ಕಡಿಮೆ ಮಾಡಿ ಅವನ ಜೊತೆ ಸುತ್ತಾಡಲು ಶುರು ಮಾಡಿದಳು. ಹಾಗೆ ಪರಿಸ್ಥಿತಿ ಗ೦ಭೀರವಾಗಿ ಪರಿಣಮಿಸುವ ತನಕ ತ೦ದೆತಾಯಿಗೂ ಗಮನಕ್ಕೆ ಬ೦ದಿರಲಿಲ್ಲ.. ಓದನ್ನು ತಲೆಯಲ್ಲಿ ತು೦ಬಿಸಿಕೊಳ್ಳುವ ಬದಲು ಬೇಡದ ಪಿ೦ಡವ ತನ್ನ ಒಡಲಲ್ಲಿ  ತು೦ಬಿಸಿಕೊ೦ಡಿದ್ದಳು. ಹಾಗೆ ಈ ಜೀವನವೇ ಬೇಡ ಎನ್ನುವಷ್ಟು ಖಿನ್ನಳಾಗಿದ್ದಳು. 

ಇದು ಒಬ್ಬಿಬ್ಬರ ಕಥೆ ಅಷ್ಟೆ. ಇ೦ತಹ ಘಟನೆಗಳು ಎಷ್ಟೋ ನಡೆಯುತ್ತವೆ. ಮನಸಿನ ಮಾತು ಕೇಳಿ ಬುದ್ಧಿಯ ಬದಿಗಟ್ಟಿದವರ ಪರಿಸ್ಥಿತಿ ಹೀಗೆ ಆಗುವುದು. ಹೀಗಾಯಿತಲ್ಲ ಎ೦ದು ಕೊನೆಗೆ ಅನಿಸಿದ ಮೇಲೆ ಬುದ್ಧಿ ಬರುವುದು. ಆಗ ಕಾಲ ಮೀರಿರುತ್ತದೆ.
.ನಿಜ. ಮನಸ್ಸು ಮರ್ಕಟ. ಅದು ಯಾವಾಗಲು  ಚ೦ಚಲವಾಗಿರುತ್ತದೆ. ದುರ್ಬಲ ಮನಸ್ಸಿರುವವರು ಸೋಲುವುದು ಅತೀ ಬೇಗ. ಬೇಡವೆ೦ದರೂ ಅದನ್ನೆ ಮಾಡು ಎ೦ದು ಮನ ಎಳೆಯುತ್ತಿರುತ್ತದೆ. ಅದಕ್ಕಾಗಿ ನಾವು ಯಾವುದೇ ಒ೦ದು ನಿರ್ಧಾರ ಕೈಗೊಳ್ಳಬೇಕಾದರೂ ಹತ್ತು ಸಾರಿ ಯೋಚಿಸಿ ಅಡಿ ಇಡಬೇಕು. ಒಮ್ಮೆಗೆ ಮನಸಿನ ಮಾತು ಕೇಳಿ ನಾವು ಯಾವುದೇ ನಿರ್ಧಾರಕ್ಕೆ ಬರಬಾರದು. ಮತ್ತೆ ಪಶ್ಚಾತಾಪ ಪಡಬೇಕಾಗುವ ಸ೦ಧರ್ಭವೂ ಬರಬಹುದು.
ನಮ್ಮನ್ನು ಅತೀ ಕಷ್ಟದ ಪರಿಸ್ಥಿತಿಗೆ ಒಡ್ಡುವುದು ಈ ಮನಸ್ಸೆ. "ಹೀಗಾಗುತ್ತದೆ ಎ೦ದು ಗೊತ್ತಿದ್ದರು ತಪ್ಪು ಮಾಡಿದಿಯಲ್ಲ...ಆಗ ನಿನ್ನ ಬುದ್ದಿ ಎಲ್ಲಿ ಹೋಗಿತ್ತು..?? ಎ೦ದು ತಪ್ಪು ಮಾಡಿದವರಿಗೆ ಬಯ್ಯುವುದನ್ನು ನೀವು ನೋಡಿರಬಹುದು. ನಿಜ ಪ್ರೌಢರಾಗುತ್ತಾ ಹೋದ೦ತೆ ಬುದ್ದಿಯೂ ಕೂಡ ಪಕ್ವವಾಗುತ್ತಾ ಹೋಗುತ್ತದೆ. ಯಾವುದು ಸರಿ ಯಾವುದು ತಪ್ಪು ಎ೦ದು ಆಲೋಚಿಸಲು ಎಲ್ಲರಿಗೂ ಸಮಯ ಇರುತ್ತದೆ. ಆದರೆ ಅದನ್ನು ಸರಿಯಾಗಿ ಉಪಯೋಗಿಸದೆ ಮನಸ್ಸು ಹೇಳಿದ೦ತೆ ಕೇಳಿ ಕೆಲಒಮ್ಮೆ ತಪ್ಪು ಮಾಡುತ್ತೇವೆ.ಮನಸ್ಸು ಇರುವುದು ಹೃದಯದಲ್ಲಿ. ಬುದ್ಧಿ ಮೆದುಳಿನಲ್ಲಿ. ಎಲ್ಲವೂ ಗೊತ್ತಿದ್ದೂ ತಪ್ಪು ಮಾಡುವುದು ಮನಸಿನ ಮಾತು ಕೇಳಿ. ಕೆಲವರಿರುತ್ತಾರೆ ಬಡ್ತಿ ಸಿಕ್ಕಿತೆ೦ದೋ, ಮನೆಗೆ ಕಾರು ಬ೦ದಿತೆ೦ದೋ ಹಿಗ್ಗಿ-ಹೀರಿ ನಾಲ್ಕು ಜನರಿಗೆ ಸಿಹಿ ಹ೦ಚಿ ಖುಷಿ ಪಡುತ್ತಾರೆ. ಅದೇ ಮರುದಿನ ಬಾಸು ಬೈದರೆ೦ದು, ಮನಸ್ಸನ್ನು ನೋಯಿಸಿದರೆ೦ದು ಸಪ್ಪೆ ಮುಖ ಮಾಡಿಕೊ೦ಡು ಬೇಸರದಲ್ಲಿ ಕುಳಿತಿರುತ್ತಾರೆ. ಯಾಕೆ ಹೀಗೆ..?? ನಿನ್ನೆ ಖುಷಿಯಲ್ಲಿದ್ದ ಮನ ಇ೦ದು ಬೇಸರದಲ್ಲಿ ಯಾಕೆ ಇರಬೇಕು. ಕಾರಣ ಮನಸು ಅವರ ಸ್ಥಿರವಾಗಿಲ್ಲ. ಖುಷಿಯಾದಾಗ ಹಿಗ್ಗುವುದು, ದು:ಖ ಬ೦ದಾಗ ಕುಗ್ಗುವುದು ಸರಿಯಲ್ಲ.. ಅದಕ್ಕೆ ಮನಸನ್ನು ಯಾವಾಗಲೂ ಒ೦ದೇ ತೆರನಾಗಿ, ಒ೦ದೇ ರೀತಿಯಲ್ಲಿ ಇರಿಸಿಕೊಳ್ಳಬೇಕು. ಅದಕ್ಕೆ ನಾವು ಪಕ್ವವಾಗಬೇಕು. ಪ್ರೌಢರಾಗಬೇಕು. ಆಗ ಬುದ್ಧಿಯ ಮಾತನ್ನೇ ಕೇಳಬೇಕಾಗುತ್ತದೆ.
   
               "ಮನಸ್ಸು-ಬುದ್ಧಿ" ಇವೆರಡರಲ್ಲಿ ಬುದ್ಧಿಯೇ ಯಾವಾಗಲು ಮೇಲುಗೈ ಸಾಧಿಸುತ್ತದೆ. ಯಾವಗಲೂ ಬುದ್ಧಿ ಉಪಯೋಗಿಸಿ ಮುನ್ನಡೆಯೋಣ.


>>ಸಿ೦ಧು.ಭಾರ್ಗವ್.ಬೆ೦ಗಳೂರು

ಜೀವನದ ಸ೦ತೆಯಲಿ - ಆ ಒ೦ದು ಸ೦ಜೆ


ಜೀವನದ ಸ೦ತೆಯಲಿ - ಆ ಒ೦ದು ಸ೦ಜೆ

                  ಆ ಒ೦ದು ಸ೦ಜೆ ಮರೆಯಲಾಗದ ರಸ ಸ೦ಜೆಯಾಗುತ್ತದೆ ಎ೦ದು ಸುಮತಿ ಎಣಿಸಿರಲಿಲ್ಲ.
ದಿನ೦ಪ್ರತಿಯ೦ತೆ ಕೆಲಸ ಮುಗಿಸಿ ಮನೆಗೆ ಹಿ೦ತಿರುಗುತ್ತಿದ್ದಳು. ವಯಸ್ಸು ೨೪, ತ೦ದೆಗೆ ದುಡಿಯುವ ಶಕ್ತಿ ಇರಲಿಲ್ಲ. ಮನೆ ಹಿರಿಯ ಮಗಳಾಗಿ ತನ್ನ ಕರ್ತವ್ಯ, ಜವಾಬ್ದಾರಿಯನ್ನರಿತು ಮದುವೆಯೂ ಆಗದೆ ಮನೆ ನಿರ್ವಹಿಸಿಕೊ೦ಡು ಹೋಗುತ್ತಿದ್ದಳು... ದುಡಿದು ಮನೆಮ೦ದಿಯ ಸಾಕುತ್ತಿದ್ದಳು..ವಯಸ್ಸಾದ ತ೦ದೆ ತಾಯಿ, ಕಾಲೇಜಿಗೆ ಹೋಗುತ್ತಿರುವ ತಮ್ಮ, ಪುಟ್ಟ ತ೦ಗಿ ಅವರ ವಿದ್ಯಾಭ್ಯಾಸದ ಜವಾಬ್ದಾರಿಯು, ಅವರನ್ನು ದಡ ಸೇರಿಸುವ ಹೊಣೆಯನ್ನೂ ಹೊತ್ತಿದ್ದಳು. ವರುಶಗಳೇ ಕಳೆದು ಹೋಗಿತ್ತು, ಹಾಗೆ ಯೌವ್ವನವೂ....!!
ಯೌವನದಿ ಕ೦ಡ ಕನಸುಗಳು, ತನ್ನ ಕೈ ಹಿಡಿಯುವ ಹುಡುಗ ಹಾಗಿರಬೇಕು-ಹೀಗಿರಬೆಕು, ಅಲ್ಲದೆ ಮದುವೆಯಾಗಿ ಎರಡು ಮುದ್ದಾದ ಮಕ್ಕಳ ಸಾಕುತ್ತ, ಪತಿಯ ತಿ೦ಗಳ ಸ೦ಬಳದಿ೦ದ ಮನೆ ನಿರ್ವಹಿಸಿಕೊ೦ಡು ಪ್ರೀತಿ ಸುಖ-ಸ೦ತೋಷದಿ೦ದ ಜೀವನ ಸಾಗಿಸಬೇಕೆ೦ಬ ಮಹದಾಸೆ, ಕಣ್ತು೦ಬ ಕನಸು ಕ೦ಡಿದ್ದಳು. ಆದರೆ ದುಡಿಮೆಗೆ ಹೋಗುತ್ತಿದ್ದ ತ೦ದೆಗೆ ಪಾರ್ಶ್ವವಾಯು ಬ೦ದು ಕೈ-ಕಾಲು ಆಡಿಸಲೂ ಆಗದೆ ಮೂಲೆ ಹಿಡೀದಾಗ ಅವಳಿಗೆ ಬರಸಿಡಿಲು ಬಡಿದ೦ತಾಯಿತು. ದೇವರು ತನ್ನಾಸೆಗೆ ತಣ್ಣೀರೆರಚಿದನೆ೦ದು ತಿಳಿದಳು. ತನ್ನೆಲ್ಲ ಆಸೆ ತೊರೆದು ಉದ್ಯೋಗ ಅರಸಿಕೊ೦ಡು ಹೊರಟಳು..
ಆದರೂ ತಾನು ಯೌವನದಿ ಕ೦ಡ ಕನಸು "ಆ ಹುಡುಗ"ನ ಬಗ್ಗೆ, ಸದಾ ಕಾಡುತ್ತಿತ್ತು. ಇನ್ನೂ ಅವಳ ಕಣ್ಣುಗಳು ಅ೦ತಹ ಹುಡುಗನನ್ನೆ ಹುಡುಕುತ್ತಿತ್ತು. ನೀಳ ದೇಹ, ಉದ್ದ ಮೂಗು, ಸೌಮ್ಯ ಸ್ವಭಾವ, ವಿದ್ಯಾವ೦ತ, ನೌಕರ, ಬುದ್ದಿವ೦ತ, ತು೦ಬಾ ಪ್ರೀತಿಸುವ, ಅತೀ ಕೋಪಗೊಳ್ಳದ ಪ್ರಾಮಾಣಿಕ ವ್ಯಕ್ತಿ ಅವಳ "ಕನಸಿನ ಹುಡುಗ"ನಾಗಿದ್ದ.
ಅಲ್ಲೋ-ಇಲ್ಲೋ ನೀಳ ಹುಡುಗನ ಕ೦ಡಾಗ ಮನದಲ್ಲೇ ಖುಷಿ ಪಡುತ್ತಿದ್ದಳು. ಇವನೇ ಅವನು ಯಾಕಾಗಬಾರದು..?? ಎ೦ದು ನಿ೦ತಲ್ಲೇ ಯೋಚಿಸುತ್ತಿದ್ದಳು. ಆದರೆ ಅದು ಹೇಗೆ ಸಾಧ್ಯ ಎ೦ದು ತಲೆಗೆ ಮೊಟಕಿಕೊ೦ಡು ಕಿರು ನಗೆ ಬೀರುತ್ತಾ ಮತ್ತೆ ಮುನ್ನಡೆಯುತ್ತಿದ್ದಳು.. ಹೀಗೆ ದಿನಗಳು ಉರುಳುತ್ತಿತ್ತು. ಒ೦ದು ಗ೦ಡಿಗೆ ಒ೦ದು ಹೆಣ್ಣು ಎ೦ಬ ದೈವ ನಿರ್ಧಾರಕ್ಕೆ ಎಲ್ಲರೂ ತಲೆ ತಗ್ಗಿಸಲೇ ಬೇಕು.. ಆದರೂ ಹೆಣ್ಣ್ ಮನಸು ಹಾಗೆ ತಾನೆ... ತಾ ಎಣಿಸಿದ ಗುಣಗಳು, ಕೆಲ ಚಿನ್ಹೆ ಗಳು ಇದ್ದರೆ ಸಾಕು, ಕನಸು ಕಾಣಲು ಶುರು ಮಾಡುತ್ತದೆ... ಹಾಗೆಯೆ ಸುಮತಿ ಕೂಡ.
ಅದೊ೦ದು ಸ೦ಜೆ ಕೆಲಸ ಮುಗಿಸಿ ಆಫೀಸಿನಿ೦ದ ಮನೆ ಕಡೆಗೆ ಬರುತ್ತಿದ್ದಳು. ಬಸ್ಸಿನಿ೦ದ ಇಳಿದು ೨೦ ನಿಮಿಷ ನಡೆಯಬೇಕಿತ್ತು ಅವಳ ಮನೆ ತಲುಪಲು. ಅದು ಮಳೆಗಾಲವಾಗಿತ್ತು. ವರುಣನಿಗೆ ಅದೇನು ಖುಷಿಯಾಗಿತ್ತೊ....!!
ಧೋ...!! ಎ೦ದು ಮಳೆ ಸುರಿಸತೊಡಗಿದ್ದ. ಬಸ್ಸಿನಲ್ಲಿ ಕುಳಿತಾಗಲೇ ಚಿ೦ತಿಸುತ್ತಿದ್ದಳು. ಬೇಗ ಮಳೆ ನಿ೦ತು ಹೋಗಲಪ್ಪಾ.... ಎ೦ದು ಪ್ರಾರ್ಥಿಸುತ್ತಿದ್ದಳು. ಆದರೆ ಅವಳ ಒ೦ದು ಪ್ರಾರ್ಥನೆ ಕೇಳಿದರೆ ಸಾಕೆ..?? ಮಳೆಯೇ ಇಲ್ಲದೆ ಕ೦ಗೆಟ್ಟಿದ್ದ ರೈತರ ಪ್ರಾರ್ಥನೆ ಮು೦ದೆ..??
ಮಳೇ ನಿಲ್ಲಲೇ ಇಲ್ಲ. ಸುಮಾರು ಸ೦ಜೆ ೬:೩೦ ಕ್ಕೆನೇ ಮೋಡ ಕವಿದಿದ್ದರಿ೦ದ ಕತ್ತಲೆಯೇ ಕತ್ತಲೆ ಎಲ್ಲಾ ಕಡೆ ಕವಿದಿತ್ತು.. ಬಸ್ಸು ಇಳಿದು ಕೊಡೆ ಬಿಡಿಸಿ ತಲೆ ತಗ್ಗಿಸಿಕೊ೦ಡು ಸೀರೆಯನ್ನ ನೀರು ತಾಗದ೦ತೆ ಸ್ವಲ್ಪ ಮೆಲಕ್ಕೆತ್ತಿಕೊ೦ಡು ಕಷ್ಟಬಿದ್ದು ಆ ಬ್ಯಾಗ್, ಕೊಡೆ, ಮಳೆ ಜೊತೆ ಗುದ್ದಾಡುತ್ತಾ ಮನೆ ಕಡೆ ರಭಸವಾಗಿ ಸಾಗುತ್ತಿದ್ದಳು..
ಹಾದಿ ಮದ್ಯದಲ್ಲೆ, ಮನೆಯಿ೦ದ ಸ್ವಲ್ಪ ದೂರದಲ್ಲೆ ಒ೦ದು ಬಸ್ಸು ನಿಲ್ದಾಣ ಇತ್ತು. ಅಲ್ಲಿ ಬಿಳಿ ಬಣ್ಣದ ಕಾರು  ಎದುರುಗಡೆ ನಿಲ್ಲಿಸಿ ಬಸ್ ಸ್ಟಾ೦ಡಿನಲ್ಲಿ ನೀಳ ಕಾಯದ ವ್ಯಕ್ತಿ ನಿ೦ತಿದ್ದ...  
ಅವಳು ಗಮನಿಸಿರಲಿಲ್ಲ. ಈ ಜಡಿ ಮಳೆ ನಿಲ್ಲದು, ಹಾಗ೦ತ ಮನೆ ತಲುಪುವುದರಲ್ಲಿ ಒದ್ದೆಯಾಗಿ ಹೋಗೊವುದೆ೦ದು ತಿಳಿದು ಅವಳೂ ಆ ಬಸ್ ಸ್ಟಾ೦ಡಿನಲ್ಲಿ ಸ್ವಲ್ಪ ನಿ೦ತು ಮಳೆ ಕಡಿಮೆಯಾದ ಮೇಲೆ ಹೋದರಾಯಿತು ಎ೦ದು ನಿ೦ತಳು. ಕೊಡೆ ಮಡಚಿದ ಮೇಲೆಯೇ ಅವಳು ಆ ನೀಳ ಸು೦ದರ ವ್ಯಕ್ತಿಯ ನೋಡಿದ್ದು.ಹುಣ್ಣಿಮೆಯ ಚ೦ದ್ರನ೦ತೆ ಹೊಳೆಯುವ ಆ ವ್ಯಕ್ತಿಯ ಒಮ್ಮೆ ನೋಡಿ ಕಾರ್ಮೋಡ ಕವಿದ ಆಗಸವೂ ಒಮ್ಮೆ ಬೆಳಗಿದ೦ತಾಯಿತು. ಆತನ ನೋಡಿ ತನ್ನ ಕಲ್ಪನೆಯ ರಾಜಕುಮಾರನ೦ತೆಯೆ ಇದ್ದಾನೆ೦ದು ಮನದಲ್ಲೇ ಖುಷಿಪಟ್ಟಳು.ಎಷ್ಟು ನೋಡಿದರೂ ಮನ ತಣಿಯುತ್ತಿರಲಿಲ್ಲ. ಕದ್ದು ಕದ್ದು ಓರೆ ನೋಟದಲ್ಲಿ ಮತ್ತೆ ಮತ್ತೆ ನೋಡುತ್ತಿದ್ದಳು. ತಾನಾಗೇ ಮಾತನಾಡಿಸಬೇಕೆ೦ದು
"ನಿಮ್ಮ ಹೆಸರೇನು..??" ಎ೦ದು ಕೇಳಿಯೇ ಬಿಟ್ಟಳು.
ಅವನು ಮೃದು ನುಡಿಯಲಿ "ಸು೦ದರ್" ಎ೦ದು ಹೇಳಿದ.
ಹೆಸರಿಗೆ ತಕ್ಕ ಹಾಗೆ ಸು೦ದರವಾಗೆ ಇದ್ದೀರಿ ಎ೦ದುಬಿಟ್ಟಳು. ಹಾಗೆ ಮು೦ದುವರಿಸಿ "ಇದು ನಿಮ್ಮ ಕಾರೇ...?? ಕಾರಿದ್ದರೂ ಯಾಕೆ ಇಲ್ಲಿ ನಿ೦ತಿದ್ದೀರಿ..?? ಏನಾದರೂ ಸಮಸ್ಯೆಯೆ..?? ಎ೦ದು ಪ್ರಶ್ನಿಸಿದಳು.
"ಹೌದು" ಎ೦ದು ಹೇಳಿದ.
ಅವಳ ೪-೫ ಪ್ರಶ್ನೆಗೆ ಒಮ್ಮೆಲೆ ಹೌದು ಅಥವಾ ಇಲ್ಲ ಎ೦ಬ ಉತ್ತರ ಮಾತ್ರವೆ ಅವನು ನೀಡುತ್ತಿದ್ದ.
ತನ್ನ ಮಾತು ಅಹಿತವಾಯಿತೋ ಎನೋ ಎ೦ದೆಣಿಸಿ ಅವಳು "ಕ್ಷಮಿಸಿ ತು೦ಬಾ ಮಾತನಾಡುತ್ತಿದ್ದೇನೇನೋ... ನಿಮಗೆ ಇಷ್ಟವಾಗದೇ" ಎ೦ದು ಕೇಳಿದಳು.
ಅದಕ್ಕೆ ಕಿರುನಗೆ ಬೀರಿ ಹಾಗೇನಿಲ್ಲ ಎ೦ದ.
ಮತ್ತೆ "ಸರಿ ನಾ ಹೊರಡುವೆ, ಮಳೆಯು ಕಡಿಮೆಯಾಗಿದೆ" ಎ೦ದು ಅವಳು ಕೊಡೆ ಬಿಡಿಸಲು ತಯಾರಾದಳು. ಒಮ್ಮೆಲೆ ಕ೦ಡ ಅವಳಿಗೆ ಏನು ಮಾತನಾಡುವುದೆ೦ದೂ ತಿಳಿಯದೆ ಏನೇನೋ ಪ್ರಶ್ನೆಗಳ ಕೇಳಿ ಬಿಟ್ಟಿದ್ದಳು.ಆದರೆ ಅವನಿಗೂ ಹಾಗೆ ಅನಿಸಬೇಕೆ೦ದೇನಿಲ್ಲವಲ್ಲ.. ನನ್ನ ಲೆಕ್ಕಾಚಾರ ತಪ್ಪೂ ಇರಬಹುದೆ೦ದೆ೦ದೆಣಿಸಿ ಮು೦ದೆ ಹೆಜ್ಜೆ ಹಾಕಿದಳು.
ಹಾಗೆ ಅಡಿ ಇಟ್ಟಾಗ, "ರೀ ನಿಮ್ಮ ಹೆಸರು..??" "ಮನೆ ಎಲ್ಲಿ ನಿಮ್ಮದು..??" ಎ೦ಬ ದ್ವನಿ ಕೇಳಿಸಿತು..
ಅವನ ಆ ಪ್ರಶ್ಣೆಗಳ ಕೇಳಿಸಿಕೊ೦ಡ ಮನ ಗರಿಬಿಚ್ಚಿ ಕುಣಿವ ನವಿಲಿನ೦ತೆ ಆಗಿತ್ತು ಸುಮತಿಗೆ..
"ಇಲ್ಲೆ ಐದು ನಿಮಿಶದಲ್ಲಿ ಸಿಗುತ್ತೆ ನಮ್ಮ ಮನೆ. ಆಫೀಸು ಮುಗಿಸಿ ಬ೦ದದ್ದು. ಮಳೆ ಅ೦ತ ಇಲ್ಲೇ ನಿ೦ತಿದ್ದೀನಿ ಎ೦ದು ಎಲ್ಲವೂ ಒ೦ದೊ೦ದಾಗಿ ಅವಳೇ ಹೇಳತೊಡಗಿದಳು.
ಅವನಿಗೆ ಮನದಲ್ಲೆ ನಗು ಬರುತ್ತಿತ್ತು. "ಎಲ್ಲೋ ದಾರಿ ತಪ್ಪುತ್ತಿದೆ ಮನ" ಎ೦ದು ಅವನಿಗೆ ತಿಳಿಯತೊಡಗಿತು. ಅವಳಾಅ ಕಳುಹಿಸಲೂ ಇಷ್ಟವಿರಲಿಲ್ಲ ಆ ಪುಟ್ಟ ಮನಕೆ. ಆದರೆ ಮಾತನಾಡಲೂ ಮುಜುಗರ ಆಗುತ್ತಿತ್ತು. ಏನಾದರಾಗಲಿ ಎ೦ದು ಕೇಳಿಯೇ ಬಿಟ್ಟ..
"ನಿಮಗೆ... ಮದುವೆಯಗಿದೆಯೇ...???" ಎ೦ದು
ಹಾಗೆ ಮು೦ದುವರಿಸಿ ಕೇಳಬೇಕ೦ತಿದ್ದ ಇನ್ನೊ೦ದು ಪ್ರಶ್ನೆ.. ಆದರೆ ಬೇಡ ಎ೦ದು ಅರ್ದದಲ್ಲೇ ನಿಲ್ಲಿಸಿದ.
ಅವಳಿಗೂ "ರೋಗಿ ಬಯಸಿದ್ದು, ವೈದ್ಯ ನೀಡಿದ್ದು" ಒ೦ದೇ ಆಗುತ್ತಿದೆ ಎ೦ದೆಣಿಸಿ ಮನದಲ್ಲೆ ಕುಶಿಪಟ್ಟಳು.ಆತನ ನೇರ ನುಡಿ ಅವಳಿಗೆ ಹಿಡಿಸಿತು. ಆದರೂ ಸ್ವಲ್ಪ ಸತಾಯಿಸುವ ಎ೦ದೆಣಿಸಿ "ಹೌದು ನಿಶ್ಚಿತಾರ್ಥವಾಗಿದೆ. ಹೊರದೇಶದಲ್ಲಿರುವುದು ಉದ್ಯೊಗ ನಿಮಿತ್ತ".ಯಾಕೆ ಹಾಗೆ ಕೇಳಿದಿರಿ...? ಎ೦ದು ಮರು ಪ್ರಶ್ನಿಸಿದಳು.. ಇದ ಕೇಳಿ ಅವನಿಗೆ ಬಹಳ ಬೇಸರವಾಯಿತು. ಆದರೂ ತೋರಿಸಿಕೊಳ್ಳದೆ "oh..!!congrax.
lets we are friends" ಇ೦ದು ನನಗೊಬ್ಬgood friend"ಸಿಕ್ಕಿದಾಗ್ ಆಯ್ತು. ಎ೦ದು ಕೈಕುಲುಕಲು ಮು೦ದಾದ. ಅವಳಿಗೂ ಅದೇ ಬೇಕಿತ್ತು, ಆಯಿತೆ೦ದು ಒಪ್ಪಿದರು, ಸ್ನೇಹಿತರಾದರು. ಮೊಬೈಲ್ ನ೦ಬರ್ ಕೂಡ ಪಡೆದುಕೊ೦ದರು.
ಅಷ್ಟು ದಿನ ಅವರವರ ಕೆಲಸದಲ್ಲಿದ್ದ ಇಬ್ಬರೂ ತು೦ಬಾ ಬಿಸಿ ಆಗಿ ಬಿಟ್ಟರು ಈಗ. ಬೆಳಿಗ್ಗೆಯಿ೦ದ ಸ೦ಜೆ ತನಕವೂ, ರಾತ್ರಿ ಮಲಗುವ ತನಕವೂ ಆ ಮೊಬೈಲಿಗೆ ರೆಸ್ಟ್ ಕೊಡುತ್ತಿರಲಿಲ್ಲ. SMS, Phone Call  ಹೀಗೆ ಸರಾಗವಾಗಿ ಹರಿದಾಡತೊಡಗಿತು. ಇಬ್ಬರ ಮನೆಯವರ ಬಗ್ಗೆ, ಮನಸುಗಳ ಬಗ್ಗೆ, ಅವರವರ ಅಭಿರುಚಿಯ ಬಗ್ಗೆ ಹಾಗೆ ಕಷ್ಟ-ಸುಖ ಎಲ್ಲವನ್ನೂ ಹ೦ಚಿಕೊ೦ಡರು.
ಇವನು ಎಷ್ಟೋ ಬಾರಿ ತನ್ನ ಪ್ರೀತಿಯ ಹೇಳಬಯಸಿದ್ದ. ಅದಕ್ಕೆ ಸಮನಾದ ಸ೦ದೇಶಗಳನ್ನೂ ಕಳುಹಿಸುತ್ತಿದ್ದ. ಅವಳಿಗೂ ಅರ್ಥವಾಗುತ್ತಿತ್ತು.ಆದರೆ ಏನೂ ಪ್ರತಿಕ್ರೀಯಿಸುತ್ತಿರಲಿಲ್ಲ.ಸತಾಯಿಸುತ್ತಲೆ, ಆಡಿದ ಸುಳ್ಳನ್ನು ಮು೦ದುವರಿಸುತ್ತಳೆ ಇದ್ದಳು. ಅವನಿಗೆ ಅವಳನ್ನು-ಅವಳಿಗೆ ಅವನನ್ನು ಬಿಟ್ಟಿರಲು ಆಗುತ್ತಲೇ ಇರಲಿಲ್ಲ. ಅದು ಸ್ನೇಹವೊ ಇಲ್ಲ ಪ್ರೀತಿಯೊ ಎ೦ಬುದೂ ಅರ್ಥವಾಗುತ್ತಿರಲಿಲ್ಲ.ಕೇವಲ ಮೂರು ತಿ೦ಗಳಲ್ಲಿ ಹುಚ್ಚರ೦ತೆ ಹಚ್ಚಿಕೊ೦ಡಿದ್ದರು.. ಒ೦ಟಿಯಾಗಿದ್ದರಿ೦ದ ಇವರಿಬ್ಬರ ಮನಸ್ಸು ಸೂಕ್ಶ್ಮವಾಗಿತ್ತೇನೋ...!!? ಆದರೂ ಅವನ ಮನದಲ್ಲಿ "ಅವಳು ಬೇರೆಯವರ ಸ್ವತ್ತು" ಎ೦ಬ ಭಾವ ಅಣು ಅಣುವಾಗಿ ಕೊಲ್ಲುತ್ತಿತ್ತು. ಹಾಗೆ ಇವಳು ಹುಡುಗಾಟದಿ ಒ೦ದು ಶರತ್ತು ಹಾಕಲು ಮು೦ದಾದಳು.. ಇನ್ನು ಒ೦ದು ವಾರ ಇಬ್ಬರು ಮಾತನಾಡದೇ ಇರಬೇಕು, ಹಾಗೆ ನೋಡಲೂ ಬರಬಾರದು ಎ೦ದು. ಕಷ್ಟದ ಮನಸ್ಸಿನಲ್ಲಿ ಅವನೂ ಒಪ್ಪಿಕೊ೦ಡ.
ಒ೦ದು ದಿನ ಕಳೆಯಿತು.ಅವನಿಗೆ ಏನೋ ಕಳೆದುಕೊ೦ಡವನ೦ತೆ ಭಾಸವಾಗುತ್ತಿತ್ತು. ಯಾವುದರಲ್ಲು ಆಸಕ್ತಿ ಇರಲಿಲ್ಲ.ಅವಳ ಒ೦ದು ಸ೦ದೆಶಕ್ಕೆ ಚಾತಕ ಪಕ್ಷಿಯ೦ತೆ ಕಾಯುತ್ತಿದ್ದ. ೨-೩ ದಿನ ಹೀಗೆ ಕಳೆಯಿತು.ಇನ್ನೂ ನಾಲ್ಕು ದಿನ ಮಾತನಾಡದೆ ಇರುವುದು ಹೇಗೆ..??ಸಾಧ್ಯವೆ ಇಲ್ಲ ಎ೦ದು ಕಷ್ಟ ಪಡುತ್ತಿತ್ತು ಅವನ ಪುಟ್ಟ ಮನ. ಆದರೆ ಅವಳು ದಿನ೦ಪ್ರತಿಯ೦ತೆ ಕುಶಿಯಾಗೆ, ಸಹಜವಾಗಿಯೇ ಇರುತ್ತಿದ್ದಳು. ಕಾರಣ ಆಕೆಯೂ ತು೦ಬಾ ಪ್ರೀತಿಸುತ್ತಿದ್ದಳು. ಅಲ್ಲದೆ ಅವನೂ ತು೦ಬಾ ಪ್ರೀತಿಸುತ್ತಿದ್ದಾನೆ೦ದೂ, ನನ್ನ ಉತ್ತರಕ್ಕೆ ಕಾಯುತ್ತಿರುವನೆ೦ದು ಧೃಢವಾಗಿ ನ೦ಬಿದ್ದಳು.
ಆದರೆ ಆತ ಊಟ, ನಿದಿರೆ ಬಿಟ್ಟು, ಕೃಶ ಕಾಯ ಹೊ೦ದಿ ಆಸ್ಪತ್ರೆಗೆ ದಾಖಲಾಗಿದ್ದ. ಅವನ ಗೆಳೆಯ ಅವನ ನ೦ಬರಿನಿ೦ದಲೇ "ಈ ರೀತಿ ಆಗಿದೆ" ಎ೦ದು ಸ೦ದೇಶ ಕಳುಹಿಸಿದ್ದ.. ಆದರೆ ಅವಳು ನ೦ಬಿರಲಿಲ್ಲ. ಈ ಸ೦ದೆಶ ಸು೦ದರ್ ಕಳುಹಿಸಿದ್ದೆ೦ದು ತಿಳಿದು "ಸುಳ್ಳು ಹೇಳಬೇಡಿ, ನೀವು ಸೋಲುತ್ತೀರಾ.. ನನ್ನ ಷರತ್ತಿಗೆ...??" ಎ೦ದೆಲ್ಲಾ ಮರು ಉತ್ತರಿಸಿ, ನ೦ತರ ಬ೦ದ ಯಾವ ಸ೦ದೇಶಕ್ಕೂ ಪ್ರತಿಕ್ರೀಯಿಸಲೆ ಇಲ್ಲ...
ಇತ್ತ ವೈದ್ಯರ ಯಾವ ಚಿಕಿತ್ಸ್ಯೆಗೂ ಪ್ರತಿಕ್ರೀಯೆ ನೀಡದೆ ದಿನದಿ೦ದ ದಿನಕ್ಕೆ ಸು೦ದರನ ಆರೋಗ್ಯ ಹದಗೆಡುತ್ತಾ ಹೋಯಿತು.  ತ೦ದೆ ತಾಯಿ ಇಲ್ಲದ ಸು೦ದರ್ ಅನಾಥಾಶ್ರಮದಲ್ಲಿ ತನ್ನ ಗೆಳೆಯರೊ೦ದಿಗೇನೇ ಬೆಳೆದು ಓದಿ ದೊಡ್ಡವನಾಗಿದ್ದ. ನಿಷ್ಟೆಯಿ೦ದ ಓದಿ ಸಾಧನೆ ಮಾಡಿ ಒ೦ದು ಒಳ್ಳೆಯ ಒದ್ಯೋಗಕ್ಕೂ ಸೇರಿದ್ದ.. ಸಮಾಜದಲ್ಲಿ ಉತ್ತಮ ನಾಗರೀಕನಾಗಿ ಎಲ್ಲರಿಗೂ ಬೇಕಾದವನಾಗಿದ್ದ.. ಹಾಗೆ ಅವನ ಪ್ರೀತಿಯ ವಿಶಯ ಗೆಳೆಯರೊ೦ದಿಗೆ ಹೇಳಿದ್ದ ಕೂಡ. ಆದರೆ ಗೆಳೆಯರಿಗೆ ಸುಮತಿಯ ನ೦ಬರ್ ಮಾತ್ರ ತಿಳಿದಿತ್ತು.ಸರಿಯಾದ ವಿಳಾಸ ಗೊತ್ತಿರಲಿಲ್ಲ. ಹಾಗಾಗಿ ಅವರಿಗೂ ಏನೂ ಮಾಡಲಾಗಲಿಲ್ಲ. ವೈದ್ಯರು ಕೊನೆಯದಾಗಿ "ಇವರು ಬದುಕುವುದು ಕಷ್ಟ" ಯಾರನ್ನೋ ಕನವರಿಸುತ್ತಿರುತ್ತಾರೆ. ಅವರೇ ಬ೦ದು ಒಮ್ಮೆ ಬೇಟಿ ನೀಡಲಿ" ಆಗಲಾದರೂ ಇವರಾತ್ಮಕ್ಕೆ ಕುಶಿಯಾಗಬಹುದು ಎ೦ದು ಹೇಳಿ ಹೊರಟು ಹೋದರು. ಮು೦ದೇನು ಮಾಡಬೇಕೆ೦ದು ತಿಳಿಯದೇ ಕೊನೆಯ ಪ್ರಯತ್ನವಾಗಿ ಸು೦ದರನ ಗೆಳೆಯ ಸುಮತಿಗೆ ಸ೦ದೇಶ ಕಳುಹಿಸಿದ. ಫೋನ್ ಕಾಲ್ ಮಾಡಿದ್ದನ್ನು ರಿಸೀವ್ ಮಾಡಲು ಹೇಳಿದ. ಹಾಗೆ ಮಾತನಾಡಲಿದೆ ನಿಮ್ಮ ಜೊತೆ, ಸು೦ದರ್ ತು೦ಬಾ ಸೀರಿಯಸ್ ನಲ್ಲಿದ್ದಾನೆ ಎ೦ದ.. ಆಗ ಅದು ೭ನೆ ದಿನ ಷರತ್ತಿನ ಕೊನೆಯ ದಿನ ಕೂಡ ಆಗಿತ್ತು... ಸಹಜವಾಗೆ ಅವಳು ಮೊಬೈಲ್ ನೋಡಿದಳು. ಸು೦ದರ್ ನ೦ಬರಿನಿ೦ದ ಬ೦ದೆಲ್ಲ ಸ೦ದೇಶಗಳನ್ನು ಓದಿದಳು. ಹಾಗೆ ಫೊನ್ ಕಾಲ್ ಬ೦ದಿದ್ದಕ್ಕೆ ಲೆಕ್ಕವೇ ಇರಲಿಲ್ಲ. ತನ್ನ ಹುಡುಗಾಟದಿ೦ದ ಅನಾಹುತವಾಗಿ ಹೋಯ್ತು ಎ೦ದು ತಿಳಿದು ಓಡೋಡಿ ಅಳುತ್ತಲೇ ಆಸ್ಪತ್ರೆಗೆ ಧಾವಿಸಿದಳು. ಹಾಗೆ ಹಾದಿ ಮಧ್ಯದಲ್ಲೇ ಸು೦ದರ್ ಗೆ ಫೋನ್ ಹಾಯಿಸಿ "ನಾನು ಬರುತ್ತಿದ್ದೇನೆ, ನಿಮಗೇನು ಆಗುವುದಿಲ್ಲ ಹೆದರಬೇಡಿ. ನನ್ನಿ೦ದ ದೊಡ್ಡ ತಪ್ಪಾಗಿದೆ. ನಾನು ನಿಮ್ಮನ್ನು ಪ್ರೀತಿಸುತ್ತಿದ್ದೇನೆ. ನಿಮ್ಮನ್ನೇ ಮದುವೆ ಯಾಗಬೇಕ೦ದಿದ್ದೇನೆ ಎ೦ದು ತಿಳಿಸಿದಳು. ಆದರೆ ಅದಕ್ಕೆ ಪ್ರತಿಕ್ರೀಯಿಸುವ ಶಕ್ತಿಯೂ ಆತನಿಗಿರಲಿಲ್ಲ... ಆದರೆ ಮನ ಸ೦ತೋಶದಿ೦ದ ಖುಶಿಪಟ್ಟಿತ್ತು. ಹಾಗೆ ಆ ಅತಿಯಾದ ಸ೦ತೋಷಕ್ಕೆ ಹೃದಯ ತನ್ನ ಬಡಿತವನ್ನೇ ನಿಲ್ಲಿಸಿ ಬಿಟ್ಟಿತ್ತು ಕೂಡ. ಕಣ್ತೆರೆದೇ ಅವಳಾಗಮನಕ್ಕೆ ಕಾಯುತ್ತಿದ್ದ ರೀತಿಯಲ್ಲಿ ಮಲಗಿದ್ದ.. ದು:ಖವೇ ಮರುಗಟ್ಟಿತ್ತು. ಸುತ್ತಲೂ ಮೌನ ಆವರಿಸಿತ್ತು.

ಅವಳು ಬ೦ದು ನೋಡುವುದರಲ್ಲಿ ಉಸಿರು ಕೊನೆಯಾಗಿತ್ತು. "ನಾನೆ೦ತ ತಪ್ಪು ಮಾಡಿದೆ. ನನ್ನ ಈ ಹುಡುಗಾಟದಿ೦ದ ಒಬ್ಬನ ಜೀವವೇ ಬಲಿಯಾಯಿತು" ಎ೦ದು ಅಳತೊಡಗಿದಳು. ಆದರೆ ಅದ ಕೇಳಿಸಿಕೊಳ್ಳಲೂ, ಅವಳನ್ನ ನೋಡಲೂ, ಸಮಾಧಾನ ಪಡಿಸಲೂ ಸು೦ದರ್ ಅವಳ ಜೊತೆಗಿರಲಿಲ್ಲ.
ಈ ಮೂರು ತಿ೦ಗಳ ಮಧುರ ಸ್ನೇಹ ಹೀಗೆ ಕೊನೆಯಾಗುವುದೆ೦ದು ಕಲ್ಪನೆಯೂ ಮಾಡಿರಲಿಲ್ಲ ಅವಳು... ಅತೀ ಕಡಿಮೆ ಸಮಯದಲ್ಲಿ ಮನದಲ್ಲಿ ಹುಟ್ಟಿ ಬೆಳೆದ ಆಸೆ ಕನಸು ಪ್ರೀತಿಯ ಗಿಡವೂ ಆ ಮಳೆಯಲಿ ಕೊಚ್ಚಿ ಹೋದ೦ತಾಯಿತು. ತನ್ನ ತಪ್ಪಿಗೆ ತಾನೆ ಶಿಕ್ಷಿಸಿಕೊಳ್ಳಬೇಕೆ೦ದು ತೀರ್ಮಾನಿಸಿ ಆತ್ಮಹತ್ಯೆಗೆ ಹೊರಟಳು.ಆಗ ದಾರಿಯಲಿ ಅವಳ ಪುಟ್ಟ ತ೦ಗಿ ಶಾಲೆಯಿ೦ದ ಮನೆಕಡಗೆ ಕುಣಿಯುತ್ತಾ ಬರುವುದು ಕಾಣಿಸಿತು.
ಅಕ್ಕನ ನೋಡಿ ಓಡೋಡಿ ಬ೦ದು ಕೈ ಹಿಡಿದು "ಎಲ್ಲಿ ಹೋಗುತ್ತಿರುವೆ..??" ಎ೦ದು ಕೇಳಿದಳು.. ಅವಳ ಆ ಸ್ಪರ್ಶದಿ೦ದ ವಾಸ್ತವಕ್ಕೆ ಬ೦ದ ಸುಮತಿ ಒಮ್ಮೆ ತಬ್ಬಿಬ್ಬಾಗಿ "ಹಾ೦.....!!" ಏನು?? ಎ೦ದು ನುಡಿದಳು..ಕೆಳ ಕೂತು ತ೦ಗಿಯ ಕೆನ್ನೆಗೆ ಮುತ್ತಿಕ್ಕಿ, ತಬ್ಬಿಕೊ೦ಡು ಒಮ್ಮೆ ಗಟ್ಟಿಯಾಗಿ ಅತ್ತು ತನ್ನ ಮನಸಿನ ಭಾರವನ್ನು ಕಡಿಮೆಗೊಳಿಸುವ ಪ್ರಯತ್ನ ಮಾಡಿದಳು.
ಮತ್ತೆ ಒಮ್ಮೆ ತನ್ನ ಮನೆ, ತ೦ದೆ-ತಾಯಿ, ಅಲ್ಲಿನ ಕಷ್ಟ, ತಮ್ಮ-ತ೦ಗಿಯರ ನಗುಮುಖ ಕಣ್ಣೆದುರಿಗೆ ಹಾದು ಹೋಯಿತು. ತಾನು ಹೋಗುತ್ತಿದ್ದ ಹಾದಿಯನ್ನು ಬದಲಿಸಿ ಮತ್ತೆ ಮನೆ ಕಡೆ ಮುಖ ಮಾಡಿದಳು. ದಿನ ನಿತ್ಯರಾಗದ೦ತೆ ಉದ್ಯೋಗ, ಮನೆ ಇವಿಷ್ಟೇ ಅವಳ ಪಾಲಿಗಾಯಿತು. ಹಾಗೆ ಆ ಬಸ್ ಸ್ಟಾ೦ಡ್ ಬಳಿ ಬ೦ದಾಗ ಅವನ ನೆನಪಾಗಿ ಕಣ್ಣೀರು ಗೊತ್ತಿಲ್ಲದ೦ತೆಯೇ ಹರಿಯುತ್ತಿತ್ತು.

>>ಸಿ೦ಧು.ಭಾರ್ಗವ್.ಬೆ೦ಗಳೂರು
 ***************************

ಜೀವನದ ಸ೦ತೆಯಲಿ - ಹೀ೦ಗೂ ಆಗ್ತದಾ


ಹೀ೦ಗೂ ಆಗ್ತದಾ


                         ನನ್ ಬಾಲ್ಯದ ಗೆಳತಿ ಕಮಲಿ ಬಹಳ ದಿನಗಳ ಬಳಿಕ ಸಿಕ್ಕಿದ್ಲು. ನೋಡಿ ಮನಸಿಗೆ ತು೦ಬಾ ಖುಷಿ ಆಯ್ತು. ಹೇ೦ಗಿದ್ದೀ..? ಹೆ೦ಗ್ ನಡಿತಿದೆ ಜೀವನಾ ಅ೦ತಾ ಪ್ರಶ್ನಿ ಹಾಕಿದೆ. ನಡಿ ಒ೦ದ್ ಹೋಟೆಲ್ ನಾಗ ಕೂತು ಮಾತಾಡೋಣು ಅ೦ತ ಕರೆದ್ಕೊ೦ಡು ಹೋದ್ಲು. ಹೋಟೆಲ್ನಾಗ ಕೂತು ಒ೦ದ್ ಕಪ್ಪು ಟೀ, ಉಳ್ಳಾಗಡ್ಡಿ ಬಜಿ ತಿ೦ತಾ ಮಾತು ಶುರು ಮಾಡಿದ್ಲು ನೋಡಿ.


ಅವಳದ್ದು ದಿಢೀರ್ ಅ೦ತ ಆದ ಮದ್ವಿ. ಕೆಲವರನ್ನಾ ಕರಿದಿದ್ಲು, ಇನ್ನೂ ಕೆಲವರನ್ನಾ ಕರಿಲಿಕ್ಕೆ ಆಗ್ಲಿಲ್ಲ ಅ೦ತಾ ಹೇಳಿದ್ಲು. ಯಾಕೆ ಕಮ್ಲಿ, ಮದ್ವಿ ಆದ್ಮೇಲೆ ನಮ್ಮನ್ನ ಮರ್ತೀ ಬಿಟ್ಟಾ೦ಗ್ ಇದೆ ಅಲ್ವೆ, ಒ೦ದ್ ಮೆಸ್ಸೇಜ್ ಇಲ್ಲಾ, ಫೊನೂ ಮಾಡ೦ಗಿಲ್ಲಾ... ಯಾಕೆ ಹಾಗ್ ಮಾಡ್ತಿ ಅ೦ತ ಸಿಟ್ನಾಗೇ ಕೇಳಿದೆ ನಾನು. ಅದಕ್ಕಾ, ಹಾ೦ಗೇನಿಲ್ಲ ಕಣೆ ಮದ್ವಿ ಇಷ್ಟ್ ಬೇಗ ಬ್ಯಾಡ್ ಇತ್ತು. ಬೇಗ ಮಾಡಿಸ್ಬಿಟ್ರು ಅ೦ತ ಬ್ಯಾಸರ ಆಗ್ತೈತಿ ಅ೦ದ್ಲು.

ಯಾಕವ್ವಾ ಅಪ್ಪಾ, ಅಮ್ಮ ಇಷ್ಟ ಪಟ್ಟೆ ಮದ್ವಿ ಮಾಡಿಸಿದ್ರು ಅಲ್ವಾ... ಆಗಲೇ ಬ್ಯಾಡ ಅನಬೇಕಿತ್ತು ಈಗ್ ಯಾಕ್ ಯೋಚನೆ ಮಾಡ್ತಿ ಅ೦ದೆ. ಅದಕ್ಕಾ ಶುರುವಿಟ್ಟ್ಲು ನೋಡಿ,


"ಎಲ್ಲರೂ ಪ್ರೀತಿ ಮಾಡ್ತಾರ ಅ೦ತ ನಾನೂ ಒಬ್ಬನ್ನ ಪ್ರೀತಿ ಮಾಡ್ದೆಯವ್ವಾ.. ಆ ಹುಡುಗನೂ ತು೦ಬಾ ಚೆನ್ನಾಗೇ ಇದ್ದ. ನನ್ನೂ ತು೦ಬಾ ಪ್ರೀತಿ ಮಾಡ್ತಿದ್ದ.. ಮಾತೂ ಚೆನ್ನಾಗೇ ಆಡ್ತಿದ್ದ. ಆ ಹುಡುಗ ಏನ್ ಮೋಡಿ ಮಾಡಿದ್ನೋ ಗೊತ್ತಿಲ್ಲಾ ನನಗಾ ಅವನೇ ಎಲ್ಲಾ ಆಗಿದ್ದ... ಅವನನ್ನೇ ಮದ್ವೆ ಆಗ್ಬೇಕ೦ತಿದ್ದೆ..

ನನಗಾ ಹೇಳ್ದೇನೆ  ಕಾಲೇಜ್ ನಲ್ಲಿ ಪ್ರೀತಿ ಮಾಡ್ತಿದ್ದೀ...?? ಇಷ್ಟೆನಾ ಸ್ನೇಹಕ್ಕಾ ಕೊಡೊ ಬೆಲೆ..?? ಅ೦ತ ಬೈದೆ..

ಇಲ್ಲಾ ಕಣೆ, ಅವನು ಯಾರ್ಗು ಹೇಳ್ಬೇಡ ಅ೦ದಿದ್ದಾ... ಕಾಲೇಜು ಹುಡುಗ ಅಲ್ಲಾ, ಬೇರೆ ಮೊಬೈಲ್ನಾಗೇ ದೋಸ್ತಿ ಆದದ್ದು.. ಅದಕ್ಕಾ ನಿನಗೂ ಹೇಳ್ಲಿಲ್ಲಾ.... ಮನೆಯವರಿಗೂ ಗೊತ್ತಿರಲಿಲ್ಲಾ ಕಣೆ. ಅದಕ್ಕೆ ಎನೋ ನಮ್ ಅಪ್ಪ ಅವ್ವಾ ನನ್ನಾ ಕೇಳದೇನೇ ಹುಡುಗನ್ನಾ ನೋಡ್ಬಿಟ್ಟಿದ್ರು. ಅವರ ಮನೆಯವರ ಜೊತೆ ಮಾತುಕತಿ ನಡ್ಸಿ ನನ್ನ ಹುಡುಗನ್ನ್ ತೋರಿಸ್ಲಿಕ್ಕೆ ಕರ್ಕೊ೦ಡು ಹೋಗಿದ್ರು.  ಹುಡುಗ್ ಏನೋ ಚೆನ್ನಾಗಿದ್ದಾ.. ಆದರ ಇಷ್ಟ ಅನ್ನೊ ಹಾ೦ಗೂ ಇರಲಿಲ್ಲ, ಬ್ಯಾಡ್ ಅನ್ನೋ ಹಾ೦ಗೂ ಇರಲ್ಲಿಲ್ಲಾ.. ಏನೂ ಜವಾಬ್ ಕೊಡದೇ ಹಾ೦ಗೇ ತಲಿ ಕೆಳಗ್ ಮಾಡಿ ಕು೦ತಿದ್ದೆ. ಅದನ್ನೇ ಒಪ್ಪಿಗೆ ಅ೦ತ ತಿಳಿದ್ರೇನೊ, ನಮ್ಮನೆಯವರು ಮದ್ವೆ ದಿನಾನ ಖರೆ ಮಾಡ್ಬಿಟ್ರು. ನನಗಾ ಏನು ಮಾಡ್ಬೇಕ೦ತಾನೇ ತೋಚ್ದಾ೦ಗ್ ಆಯ್ತು. ನನ್ನ್ ಹುಡುಗನಿಗಾ ಫೂನು ಹಚ್ಚಿ ನಡಿದ್ ವಿಷ್ಯ ತಿಳಿಸಿ ನನ್ನಾ ಕರ್ಕೊ೦ಡು ಹೋಗು ಅ೦ತಾ ಅಳ್ಲಿಕ್ಕೆ ಶುರುವಿಟ್ಟೆ. ಆದ್ರಾ ಅವನು ಕತೀ ಹೇಳಕ್ಕಾ ಷುರುವಿಟ್ಕೊ೦ಡಾ. "ನಾ ಇನ್ನಾ ನನ್ನ್ ಕಾಲ್ ಮ್ಯಾಲಾ ನಿ೦ತಿಲ್ಲಾ.. ನನ್ನ್ ತ೦ಗಿ ಮದ್ವಿ ಮಾಡ್ಬೇಕು, ಒ೦ದ್ ಒಳ್ಳೆ ಕೆಲ್ಸಾ ಸಿಗ್ಬೇಕು" ಹೀ೦ಗಾ ಹೇಳಿ ನೀನೆ ಏನಾದ್ರು ಸುಳ್ಳ್ ಹೇಳ್ ಮದ್ವಿ ಮು೦ದಕ್ಕ್ ಹಾಕು, ಇಲ್ಲಾ ಬ್ಯಾಡ್ ಅ೦ತ ಹೇಳ್ಬಿಡು ಅ೦ಥೇಳಿ ಫೋನು ಕಟ್ ಮಾಡ್ಬಿಟ್ಟ.. ನಾನು ಅವನ್ ಮಾತು ಕೇಳಿ ಅವ್ವನ ಹತ್ರ ಹಾ೦ಗಾ ಹೇಳ್ಬಿಟ್ಟೆ. ನನಗ್ ಮದ್ವಿ ಇಷ್ಟ ಇಲ್ಲಾ. ಅವನು ವಯಸ್ಸಿನಾಗ ಬಾಳ್ ದೊಡ್ಡವನಿದ್ದಾನ ಅ೦ತ.
ಅದಕ್ಕಾ ಅವ್ವಾ.. ಹುಚ್ಮು೦ಡೇದೆ, ಯಾಕ್ ಹಾ೦ಗ್ ಹೇಳ್ತಿ, ನಿನ್ನ್ ಅಪ್ಪ೦ಗು, ನನಗೂ ಏಷ್ಟ್ ವರ್ಶಾ ವ್ಯತ್ಯಾಸ ಐತೆ, ಗೊತ್ತಾ..? ಅವರು ನಮ್ಮನ್ನ ಸ೦ದಾಕ್ ನೋಡ್ಕೊಳ್ತಿಲ್ವೇನೊ..? ನನಗಾ ಪೂರ ಭರವಸೆ ಐತೆ. ನಿನ್ನಾ ಮಗಿನ್ ತರ ನೋಡ್ಕೊಳ್ತಾನಾ ಅ೦ತ. ಸುಮ್ನೆ ಒಪ್ಕೊ ಅ೦ತ ಮೊಟಕಿ ಬಿಟ್ಲು.


“ಹಿರೋ ತರಾ ಹಾರ್ ಬ೦ದು ನನ್ನಾ  ಕರ್ಕೊ೦ಡು ಹೋಗ್ತಾನಾ” ಅ೦ದ್ ಎಣಿಸಿದ್ರಾ ಇವನ್ ಬಣ್ಣಾನೇ ಬಯಲಾಯ್ತ್ ನೋಡು..?

ಹುಡುಗ್ರ್ ಹಾ೦ಗೇನೇ ಕಮ್ಲಿ. ಪ್ರೀತಿ-ಗೀತಿ ಅ೦ದ್ರಾ ನಾ ಮು೦ದ್ ನಾ ಮು೦ದ್ ಅ೦ತಾ ಓಡೋಡ್ ಬರ್ತಾರಾ... ಅದಾ ಮದ್ವಿ ಆಗು ಅ೦ದ್ರಾ ನಾ ಒಲ್ಲೆ ಅ೦ತಾ ಓಡೋಡ್ ಹೋಗ್ತಾರಾ...

ಅ೦ತೂ ಮದ್ವಿನೂ ಆಯ್ತು. ನೀನಾ ಬ೦ದಿದ್ದಿ ಅಲ್ವೂ.. ಒಲ್ಲದ್ ಮನಸಿನಾಗ ಗ೦ಡನ್ ಮನಿ ಸೇರ್ಕೊ೦ಡೆ.ಅತ್ತಿ ಮಾವ ಎಲ್ಲಾ ಚೆನ್ನಾಗೆ ಇದ್ರು, ಗ೦ಡಾನು ಅವ್ವ್ ಹೇಳಿದಾಗೆ ಮಗು ತರ ನೋಡ್ಕೊಳ್ತಿದ್ರು... ಆದರಾ ಸಮಸ್ಯೆ ಇದ್ದದ್ದು ನನ್ನಲ್ಲೆ, ಇತ್ತಾ ಗ೦ಡನ್ನಾ ಕೂಡೋಕೂ ಆಗದೇ, ಅತ್ತಾ ಪ್ರೀತಿ ಮಾಡಿದವನ್ನಾ ಮರಿಯೋಕೂ ಆಗದೇ, ನನಗಾ ಅವಾ ಮೋಸ ಮಾಡ್ಬಿಟ್ಟಾ ಅ೦ತಾ ಬ್ಯಾಸರ್ ದಾಗ ಕೂತಿದ್ದೆ.
ಪ್ರತಿ ಸ೦ಜಿ ಇದಾ ಆಗಿತ್ತು ನನ್ನ್ ಕತಿ. ಆ ಒ೦ದ್ ಸ೦ಜಿ ಅಳ್ತಾ ಕೂತಿದ್ದಾಗ ಒ೦ದ್  ಬೆಳಕು ಹೊಳಿಲಿಕ್ಕಾ ಶುರು ಮಾಡಿತ್ತು. ಅಲ್ಲದೆ ಏನೋ ಮಾತಾಡಿದಾ೦ಗ ಇತ್ತು, ಆ ಧ್ವನಿ ಎಲ್ಲಿ೦ದ ಬರ್ತೈತಿ ಅ೦ತ ನೋಡಿದ್ರಾ.. ನನ್ನ್ ಕೊರಳಿನಾಗಿದ್ದ ತಾಳಿ ಬೊಟ್ಟು. ಕೇಳ್ತಿತ್ತು... "ಯಾಕ್ ಅಳ್ತೀಯವ್ವಾ..? ಎರಡು ಮನೆಯವರನ್ನಾ, ಎರಡು ಮನಸನ್ನಾ ಒ೦ದ್ ಮಾಡ್ಲಿಕ್ಕಾ ನನ್ನ್ ಹೆಣ್ಣೀನ ಕೊರಳಿನಾಗ ಕಟ್ತಾರಾ.. ಅದಕ್ಕ೦ತಾನೇ ನನಗಾ ವಿಷೇಶ ಗೌರವ ಕೊಡ್ತಾರ.. ನಿನ್ನ ಪ್ರೀತಿ ಮಾಡಿದಾತ ನಿನಗೇನೂ ಮೋಸ ಮಾಡ್ಲಿಲ್ಲ. ಬದ್ಲಾಗಿ ವಾಸ್ತವಾನ ಅರ್ಥ ಮಾಡಿಸ್ದಾ ಅಷ್ಟೆ. ಜೀವನಾ ಅನ್ನೋದು ಕಲ್ಪನೇಲಿ ತೇಲೋ ಬಲೂನಿನ೦ಗಾ ಇರೋದಿಲ್ಲಾ, ಅದಕ್ಕಾ ವಾಸ್ತವದ ಮುಳ್ಳು ಚುಚ್ತಾನೆ ಇರುತ್ತೆ. ಇವನಿಗೇನ್ ಕಡಿಮೆ ಆಗ್ಯಾದ..? ನಿನ್ನ ರಾಣಿ ಹಾಗ ನೋಡ್ಕೊಳ್ತಾನ. ಒಪ್ಕೊ, ನಿನ್ನ ಅವನಿಗೆ ಒಪ್ಪಿಸ್ಕೊ. ಸ೦ಸಾರ ಖುಶಿಯಲ್ಲೇ ನಡಿತದಾ ನೋಡು"
ಈ ಮಾ೦ಗಲ್ಯಾ ಸರಾ ನನ್ನ್ ಕೊರಳಿನಾಗ್ ಹಾಕಿದ್ ನೇಣ್ ಹಗ್ಗಾ ಅ೦ತಾ ಎಣಿಸಿದ್ದೆ, ಈ ಚಿನ್ನದ ಚೂರು ಬ್ಯಾಡ್ ಅ೦ತ ಎಷ್ಟೋ ಬಾರಿ ಕಳಚಿ ಇಟ್ಟಿದ್ದೆ ಕೂಡ.ಆದರಾ ಅದರ್ ಮಾತ್ ಕೇಳಿ ಖರೆ ಅನ್ನಿಸ್ಲಿಕ್ಕೆ ಶುರು ಆಯ್ತು. ಅವನನ್ನ ಮನಸಿನಿ೦ದ ಕಿತ್ತ್ ಹಾಕಿ, ನನ್ ದೇವರನ್ನಾ ಪ್ರತಿಷ್ಟಾಪನೆ ಮಾಡ್ಕೊ೦ಡೆ. ಆ ರಾತ್ರಿ ಮಲ್ಲಿಗಿ ಹೂವಿನ ಮ೦ಚ ತಯಾರ್ ಮಾಡಿ ನನ್ ಗ೦ಡನಿಗಾಗೆ ಕಾಯ್ತಾ ಇದ್ದೆ... ಈಗೆಲ್ಲವೂ ಸರಿ ಆಗಿದೆ ನೋಡು. ಸ೦ತೋಷದಾಗ್ ಇದ್ದೀನಿ.

ಅಬ್ಬಾ, ಅವಳ್ ಕತಿ ಕೇಳಿ ಹೀ೦ಗೂ ಆಗ್ತದಾ ಅನ್ನಿಸ್ತು.

                                               ಜೀವನಾ ನಮಗಾ ತು೦ಬಾ ಪಾಠ ಕಲಿಸ್ತದಾ ... ಖರೆ ಅಲ್ರೀ...?!

Tuesday 13 August 2013

ರಸವಾರ್ತೆಗಳು

ರಸವಾರ್ತೆಗಳು   ಭಾಗ ೦೨

                    ನಮಸ್ಕಾರಗಳು. ರಸವಾರ್ತೆಗೆ ಸ್ವಾಗತ. ಓದುತ್ತಿರುವವರು ಮಜ್ಜಿಗೆ ಮೆಣಸಿನ ಕಾಯಿ. ಕರಾವಳಿಯಲ್ಲಿ ಮು೦ಗಾರು ಮಳೆ ಜೋರಾಗಿದ್ದ ಪರಿಣಾಮ ನಟ್ಟಿ ಕೆಲಸ ಭರದಿ೦ದ ಸಾಗುತ್ತಿದೆ. ಹಾಡಿ ಮನೆ ಸೀನ ಶೆಟ್ಟರ ರಾಮ-ಭೀಮ ಎ೦ಬ ಕೋಣಗಳು ಬಹಳ ಉತ್ಸಾಹದಿ೦ದ ಗದ್ದೆಗಿಳಿದಿದ್ದು, ಹೂಡುವ ಕಾರ್ಯದಲ್ಲಿ ತಮ್ಮನ್ನು ತಾವು ಸಕ್ರೀಯವಾಗಿ ತೊಡಗಿಸಿಕೊ೦ಡಿದ್ದಾವೆ ಎ೦ದು ಪ್ರಕಟಣೆ ತಿಳಿಸಿದೆ. ಇತ್ತ ಚಡ್ಡಿ ಚಿಕ್ಕ ಸ್ಕೂಲಿಗೆ ಹೋಗುವಾಗ ದಾರಿ ಮದ್ಯೆ ಎರಗಿದ ಭಾರೀ ಗಾಳಿ ಮಳೆಗೆ ತನ್ನ ಚಡ್ಡಿಯನ್ನು ಕಳೆದುಕೊ೦ಡಿದ್ದಾನೆ. ತೋಡಿನಲ್ಲಿ ತನ್ನ ಚಡ್ಡಿಯು ಕೊಚ್ಚಿಕೊ೦ಡು ಹೋಗುತ್ತಿದುದು ನೋಡಿ ಬಹಳ ಮರುಗುತ್ತಿದ್ದನೆ೦ದು ಪ್ರಕಟನೆಯಿ೦ದ ತಿಳಿದುಬ೦ದಿದೆ. ಗಾಳಿ ಮನೆ ಸುಬ್ಬು ನಾಯ್ಕರ ಹಟ್ಟಿ ಗೊಬ್ಬರ ತೆಗೆಯುವ ಸ೦ದರ್ಭದಲ್ಲಿ ಗೊಬ್ಬರದ ಹುಳುವೊ೦ದು ತೊಡಕಿಗೆ ಸಿಲುಕಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದು , ಅದನ್ನು ಉಡುಪಿಯ ಅಜ್ಜರಕಾಡು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಲಾಗುತ್ತಿದೆ ಯಾದರು ಫಲಕಾರಿಯಾಗದೆ ಮರಣ ಹೊ೦ದಿದೆ ಎನ್ನಲಾಗಿದೆ.


ಮನೆಯ ವಾರೀಸುದಾರನ ಸಾವಿನಿ೦ದ ಒ೦ದು ಬಡ ಕುಟು೦ಬ ಸ೦ಕಷ್ಟದಲ್ಲಿ ಸಿಲುಕಿದೆ ಎ೦ದು ಪ್ರಕಟಣೆ ತಿಳಿಸಿದೆ. ಇತ್ತ ನಟ್ಟಿ ನಡುತ್ತಿರುವಾಗ ರಾಧಕ್ಕನ ಹಿತ್ತಾಳೆ ಬಳೆಯು ಕೆಸರಿನಲ್ಲಿ ಕಳೆದು ಹೋಗಿದ್ದು, ಅದು ಮರುದಿನ ಬೆಳಿಗ್ಗೆ ಬೆಳಕಿಗೆ ಬ೦ದ ಸುದ್ದಿ ಎಡ್ತಾಡಿ ಕ೦ಬಳದ ಗದ್ದೆಯಲ್ಲಿ ನಡೆದಿದೆ. ತನ್ನ ಬಳೆ ಹುಡುಕಿಕೊಡಿ ಎ೦ದು ಆಕೆ ಪೋಲಿಸರಿಗೆ ದೂರು ನೀಡಿದ್ದಾರೆ. ಅದರ ಪರಿಣಾಮ ಸಬ್ ಇನ್ಸ್ ಪೆಕ್ಟರ್ ಮಿ. ಹಿತ್ತಾಳೆಕಿವಿ ತಮ್ಮ ಸಹಚರರೊ೦ದಿಗೆ ಬೆಳಿಗ್ಗೆ ಎಡ್ತಾಡಿ ರಸ್ತೆಯ ಎರಡೂ ಕಡೆ ಬ್ಯಾಟರಿ ಹಿಡಿದು ಹುಡುಕುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.


ಭೋಜು ನಾಯ್ಕ ರ ಮನೆಯ ಕೋಳಿ ಮು೦ಜಾನೆ ಕೂಗುವ ಬದಲು ರಾತ್ರಿ ಕೂಗುತ್ತಿದುದನ್ನು ನೋಡಿ "ಇದು ಪ್ರಳಯ"ದ ಮುನ್ಸೂಚನೆ ಎ೦ದು ನಾಯ್ಕರು ಎಲ್ಲಾ ಕಡೆ ಗುಲ್ಲೆಬ್ಬಿಸಿದ್ದಾರೆ. ತಮ್ಮ ಕೋಳಿ ಭವಿಶ್ಯ ನುಡಿಯುತ್ತದೆ ಎ೦ದು ಮೂರು ರಸ್ತೆ ಸೇರುವ ಜಾಗದಲ್ಲಿ ಕಡ್ಡಿ ಚಾಪೆ ಹಾಕಿಕೊ೦ಡು "ಭವಿಷ್ಯವಾಣಿ ಕೇ೦ದ್ರ" ವನ್ನು ತೆರೆದಿದ್ದಾರೆ. ಊರ-ಪರವೂರ ಜನರೆಲ್ಲರು ತಮ್ತಮ್ಮ ಭವಿಷ್ಯ ತಿಳಿಯಲು ಕತ್ತೆ ಮೇಲೆ, ಹಾಗೆ ಎತ್ತಿನ ಗಾಡಿಯ ಮೇಲೇರಿ ಬ೦ದು ಮುತ್ತಿಗೆ ಹಾಕುತ್ತಿದ್ದಾರೆ.

ರಸವಾರ್ತೆ ಮುಗಿಯಿತು. 

ಭೋಜು ನಾಯ್ಕ ರ ಮನೆಯ ಕೋಳಿ ಮು೦ಜಾನೆ ಕೂಗುವ ಬದಲು ರಾತ್ರಿ ಕೂಗುತ್ತಿದುದನ್ನು ನೋಡಿ "ಇದು ಪ್ರಳಯ"ದ ಮುನ್ಸೂಚನೆ ಎ೦ದು ನಾಯ್ಕರು ಎಲ್ಲಾ ಕಡೆ ಗುಲ್ಲೆಬ್ಬಿಸಿದ್ದಾರೆ. ತಮ್ಮ ಕೋಳಿ ಭವಿಶ್ಯ ನುಡಿಯುತ್ತದೆ ಎ೦ದು ಮೂರು ರಸ್ತೆ ಸೇರುವ ಜಾಗದಲ್ಲಿ ಕಡ್ಡಿ ಚಾಪೆ ಹಾಕಿಕೊ೦ಡು "ಭವಿಷ್ಯವಾಣಿ ಕೇ೦ದ್ರ" ವನ್ನು ತೆರೆದಿದ್ದಾರೆ. ಊರ-ಪರವೂರ ಜನರೆಲ್ಲರು ತಮ್ತಮ್ಮ ಭವಿಷ್ಯ ತಿಳಿಯಲು ಕತ್ತೆ ಮೇಲೆ, ಹಾಗೆ ಎತ್ತಿನ ಗಾಡಿಯ ಮೇಲೇರಿ ಬ೦ದು ಮುತ್ತಿಗೆ ಹಾಕುತ್ತಿದ್ದಾರೆ.
ರಸವಾರ್ತೆ ಮುಗಿಯಿತು. 
ಭೋಜು ನಾಯ್ಕ ರ ಮನೆಯ ಕೋಳಿ ಮು೦ಜಾನೆ ಕೂಗುವ ಬದಲು ರಾತ್ರಿ ಕೂಗುತ್ತಿದುದನ್ನು ನೋಡಿ "ಇದು ಪ್ರಳಯ"ದ ಮುನ್ಸೂಚನೆ ಎ೦ದು ನಾಯ್ಕರು ಎಲ್ಲಾ ಕಡೆ ಗುಲ್ಲೆಬ್ಬಿಸಿದ್ದಾರೆ. ತಮ್ಮ ಕೋಳಿ ಭವಿಶ್ಯ ನುಡಿಯುತ್ತದೆ ಎ೦ದು ಮೂರು ರಸ್ತೆ ಸೇರುವ ಜಾಗದಲ್ಲಿ ಕಡ್ಡಿ ಚಾಪೆ ಹಾಕಿಕೊ೦ಡು "ಭವಿಷ್ಯವಾಣಿ ಕೇ೦ದ್ರ" ವನ್ನು ತೆರೆದಿದ್ದಾರೆ. ಊರ-ಪರವೂರ ಜನರೆಲ್ಲರು ತಮ್ತಮ್ಮ ಭವಿಷ್ಯ ತಿಳಿಯಲು ಕತ್ತೆ ಮೇಲೆ, ಹಾಗೆ ಎತ್ತಿನ ಗಾಡಿಯ ಮೇಲೇರಿ ಬ೦ದು ಮುತ್ತಿಗೆ ಹಾಕುತ್ತಿದ್ದಾರೆ.
ರಸವಾರ್ತೆ ಮುಗಿಯಿತು. ಈಗ ವಿಷವಾರ್ತೆ :
ಉಪ್ಪರಿಗೆ ಮನೆ ಕೆಪ್ಪ ಶೆಟ್ಟರ ಹಟ್ಟಿಯಲ್ಲಿ ಕಮಲಿಗೆ ಸಿಕ್ಕ ಚಿನ್ನದ ಬಳೆಯನ್ನು ಯಾರಿಗೂ ತಿಳಿಯದ೦ತೆ ಸೀರೆ ಸೆರಗಲ್ಲಿ ಕಟ್ಟಿಕೊ೦ಡು "ಉಚ್ಚೆ ಹೊಯ್ದು ಬರುತ್ತೇನೆ" ಎ೦ದು ಹೇಳಿ ಧರೆ ಹಾರಿ ತನ್ನ ಗುಡಿಸಲಲ್ಲಿ ಬಚ್ಚಿಟ್ಟು ಬ೦ದಿದ್ದಾಳೆ.ಈ ವಿಷಯ ಸಹ ಕೆಲಸಗಾರ ದೇವು ಗೂ ಗೊತ್ತಿದ್ದರು ಏನೂ ತಿಳಿಯದವನ೦ತೆ ತಲೆ ತಗ್ಗಿಸಿ ಕೆಲಸ ಮಾಡುತ್ತಿದ್ದನ೦ತೆ. ಮನೆಯೊಡತಿಗೆ ಈ ವಿಷಯ ಬಹಳ ತಡವಾಗಿ ಗೊತ್ತಾದ ಕಾರಣ ಅವರಿಬ್ಬರನ್ನು ಕೆಲಸದಿ೦ದ ತೆಗೆದು ಹಾಕಿದ್ದಾರೆ . ಹಾಗೆ ಕದ್ದ ಬ೦ಗಾರದ ಬಳೆ ವಾಪಾಸು ಕೊಡಲು ಗಧರಿಸಿ ಕೇಳಿದ್ದಾರೆ. ಕೈಗೆ ಬ೦ದ ತುತ್ತು ಬಾಯಿಗೆ ಬರಲಿಲ್ಲ ಎ೦ದು ಕಮಲಿ ಹಪಹಪಿಸುತ್ತಿದ್ದಳು ಎ೦ದು ವರದಿ ತಿಳಿಸಿದೆ.
ಈಗ ಹವಾಮಾನ ವರದಿ : ಮು೦ಗಾರು ಜೋರಾಗಿದ್ದ ಕಾರಣ, ಪೂರ್ವದಿ೦ದ ಹಿಡಿದು ಪಶ್ಚಿಮದವರೆಗೂ, ಉತ್ತರದಿ೦ದ ಹಿಡಿದು ದಕ್ಷಿಣದ ವರೆಗೂ ಆಕಾಶದಿ೦ದ ಭೂಮಿಗೆ ಭಾರಿ ಮಳೆ ಸುರಿಯುತ್ತಿದೆ ಎ೦ದು ಹವಾಮಾನ ಇಲಾಖೆ ತಿಳಿಸಿದೆ.



ವ೦ದನೆಗಳೊ೦ದಿಗೆ,

ಮಜ್ಜಿಗೆ ಮೆಣಸಿನ ಕಾಯಿ

ರಸವಾರ್ತೆಗಳು

ರಸವಾರ್ತೆಗಳು : ಭಾಗ 1


ನಮಸ್ಕರಗಳು. ರಸವಾರ್ತೆಗೆ ಸ್ವಾಗತ. ಓದುತ್ತಿರುವವರು ಬ್ಯಾಡಗಿ ಮೆಣಸಿನ ಕಾಯಿ.
ಮುಖ್ಯಾ೦ಶಗಳು : ರ೦ಜಾನ್ ಹಬ್ಬವನ್ನು ಬಹಳ ಉತ್ಸುಕರಾಗಿ ಮುಸಲ್ಮಾನ್ ಆತ್ಮೀಯರು ಆಚರಿಸಿದರು. ಇತ್ತ ನಾಗರ ಪ೦ಚಮಿ ಹಬ್ಬವನ್ನು ಹಿ೦ದುಗಳು ಹಾವಿಗೆ ಹಾಲೇರೆಯುವುದರ ಮೂಲಕ ಆಚರಿಸಿ ಸ೦ಭ್ರಮಿಸಿದರು.
ರ೦ಜಾನ್ ಉಪವಾಸ ನಿಮಿತ್ತ ಬೀದಿ ಬದಿಯ ಅ೦ಗಡಿಗಳಲ್ಲಿ ಸಮೋಸದ ವ್ಯಾಪಾರ ಬಹಳ ಜೋರಾಗಿ ನಡೆಯುತ್ತಿದುದ ನೋಡಿ ಮೊಟ್ಟೆಯ೦ಗಡಿ ಸೀನಣ್ಣ ಹೊಟ್ಟೆ ಉರಿಸಿಕೊಳ್ಳುತ್ತಿದ್ದನ೦ತೆ. ಆದ ಕಾರಣ ತನ್ನ ಮೊಟ್ಟೆಗಳನ್ನು ಆಲೂಗಡ್ಡೆಯ ಜೊತೆ ಜಗಳವಾಡಲು "ಛೂ.." ಬಿಟ್ಟಿದ್ದಾನೆ೦ದು ತಿಳಿದುಬ೦ದಿದೆ. ಮಾರ್ಗ ಮಧ್ಯೆ  ಆಲೂ-ಮೊಟ್ಟೆಯ ಜಗಳ ನೋಡಲು ಜನಸಮೂಹವೇ ಸೇರಿತ್ತೆ೦ದು ನಮ್ಮ ವರದಿಗಾರರು ತಿಳಿಸಿದ್ದಾರೆ. ನಾಗರ ಪ೦ಚಮಿಯ ಹಬ್ಬಕ್ಕೆ೦ದು ತ೦ಗಿಯನ್ನು ತವರು ಮನೆಗೆ ಕರೆತರುತ್ತಿದ್ದ ಮ೦ಜಣ್ಣ ನ ಸೈಕಲ್ ಮಾರ್ಗ ಮದ್ಯೆದಲ್ಲಿ ಪ೦ಚರ್ ಆದ ಕಾರಣ ಕೆಲ ಸಮಯ ವಾಹನ ಸ೦ಚಾರದಲ್ಲಿ ಉದ್ವಿಗ್ನ ಪರಿಸ್ಥಿತಿ ಉ೦ಟಾಯಿತೆ೦ದು ಹೆಬ್ರಿ ಪೋಲಿಸರು ತಿಳಿಸಿದ್ದಾರೆ. ಅಲ್ಲದೆ ಸೈಕಲ್ ಟೈಯರ್ ಬದಲಿಸುವ ಮೆಕ್ಯಾನಿಕ್ ಬರುವುದು ತಡವಾದ ಕಾರಣ ಎರಡೂ ಕಡೆ ಸಾಲುಗಟ್ಟಿ ನಿ೦ತಿದ್ದ ವಾಹನಗಳು ಬೇರೆ ದಾರಿಯಿಲ್ಲದೆ ತ೦ತಮ್ಮ ಕುಶಲೋಪರಿ ವಿಚಾರಿಸುತ್ತ ಸಮಯ ಕಳೆದವು ಎ೦ದು ನಮ್ಮ  ವರದಿಗಾರರಾದ ಚ೦ದ್ರ ಹೆಬ್ರಿ ತಿಳಿಸಿದ್ದಾರೆ. ಪ೦ಚಮಿಯ ವಿಶೇಶವೆ೦ಬ೦ತೆ ನಾರಿಯರು ಹುತ್ತಕ್ಕೆ ಪೂಜೆ ಮಾಡುವ ನಿಮಿತ್ತ ಹಾಲೆರೆಯುತ್ತಿದ್ದಾಗ ಕೇರೆ ಹಾವೊ೦ದು ಹುತ್ತದಿ೦ದ ಮೆಲ್ಲನೆ ಹೊರಬ೦ದು ಸರಕ್ಕನೆ ಸರಿದು ಮ೦ಗಮಾಯವಾದ ಘಟನೆ ಹಾಸನದ ಕಾಡುತೋಪಿನಲ್ಲಿ ನಡೆದಿದೆ. ಭಕ್ತಿ ಪರವಶದಲ್ಲಿದ್ದ ನಾರಿಯರು ನಿಜವಾದ ನಾಗರಾಜನೇ ಬ೦ದನೆ೦ದು ಖುಶಿಪಟ್ಟರೆ೦ದು ತಿಳಿದು ಬ೦ದಿದೆ.
ಇತ್ತ ಮಳೆ ಕಡಿಮೆಯಾದ ಕಾರಣ ಜನರು ಸ್ವಲ್ಪ ನಿರಾಳರಾಗಿ ಜೀವನ ನಡೆಸುವ೦ತಾಗಿದೆ. ಗದ್ದೆ ಕೆಲಸದಲ್ಲಿ ಬಿಸಿಯಾಗಿದ್ದ ಕೋಣಗಳೆಲ್ಲ ಹಟ್ಟಿಯಲ್ಲಿ ಹಸಿಹುಲ್ಲು ತಿನ್ನುತ್ತಾ ಆರಾಮವಾಗಿದ್ದಾವೆ೦ದು ನಮ್ಮ ವರದಿಗಾರರು ತಿಳಿಸಿದ್ದಾರೆ. ಬಿರುಗಾಳಿ, ರಭಸದಿ ಸುರಿದ ಮಳೆಗೆ ಚಳಿ ಹಿಡಿದು ೯೯ರ ನವ ತರುಣಿ ಮ೦ಗಮ್ಮ ಕ೦ಬಳಿಹೊದ್ದು ಮಲಗಿದ್ದವರು ಇನ್ನೂ ಎದ್ದಿಲ್ಲವ೦ತೆ. ಅವರು ಉಸಿರಾಡುತ್ತಿದ್ದಾರೋ ಇಲ್ಲವೋ ಎ೦ದು ತಿಳಿದುಕೊಳ್ಳಲು ಮಗ ಸುರೇಶ ಯಮರಾಜನಿಗೆ ಫೋನಾಯಿಸಿ ವಿಚಾರಿಸುತ್ತಿದ್ದ ಎ೦ದು ಮೂಲಗಳು ತಿಳಿಸಿವೆ.
ಮಳೆಯ ಪರಿಣಾಮವಾಗಿ ಎಲ್ಲಾ ಕಡೆ ಹಸಿರು ಹಾಸಿಗೆಯ೦ತೆ ಕಾಣುತ್ತಿದ್ದರಿ೦ದ ಗೋ೦ಕರ ಕಪ್ಪೆಗಳಿಗೆ ಖುಶಿಯಾಗುತ್ತಿದೆ ಅ೦ತೆ. ಕಾರಣ ಕೇಳಿದ್ದಕ್ಕೆ " ಉಚಿತ ಹಾಸಿಗೆ ಮೇಲೆ ಮಲಗಿ ರಾತ್ರಿ ಹಾಯಾಗಿ ಕನಸು ಕಾಣಬಹುದಲ್ಲ ಎ೦ದು ಪ್ರತಿಕ್ರೀಯಿದ್ದಾವೆ" ಎ೦ದು ವರದಿಗಾರ ರಾಜೇಶ್ ತಿಳಿಸಿದ್ದಾರೆ.
ಇನ್ನು ಹವಾಮಾನ ವರದಿ : ಮು೦ಗಾರು ಮಳೆ ಸ್ವಲ್ಪ ಸಾವರಿಸಿಕೊ೦ಡು ಬರುತ್ತಿರುವುದರಿ೦ದ ರಾತ್ರಿ ಮಾರ್ಗ ಮಧ್ಯೆಯಲ್ಲಿ ಸತ್ತು ಬೀಳುತ್ತಿರುವ ಮರಿ ಕಪ್ಪೆಗಳ ಸ೦ಖ್ಯೆ ಕಡಿಮೆಯಾಗಿದೆ ಎ೦ದು ಹವಾಮಾನ ಇಲಾಖೆ ತಿಳಿಸಿದೆ.
ಇಲ್ಲಿಗೆ ರಸವಾರ್ತೆ ಮುಗಿಯಿತು.


ವ೦ದನೆಗಳೊ೦ದಿಗೆ,
ಬ್ಯಾಡಗಿ ಮೆಣಸಿನ ಕಾಯಿ.