ಕವನ- ಜೀವನದ ಸಂತೆಯಲಿ ತಿರುಗ ಹೊರಟಿರುವೆ
ಜೀವನದ ಸಂತೆಯಲಿ ತಿರುಗ ಹೊರಟಿರುವೆ..
ನಿನ್ನೆ ಅಲ್ಲಿ ಇಂದು ಇಲ್ಲಿ ನಿಂತಿರುವೆ..!!
ಕನಸುಗಳನ್ನೆಲ್ಲ ಹರಡಿ ಕುಳಿತಿರುವೆ..
ಕೇಳಿದವರಿಗೆಲ್ಲ ಕತೆಯ ಹೇಳುತಿರುವೆ..!!
ಕೊಳ್ಳುವವರೋ ಮಾನ ಹರಾಜು ಹಾಕುವರೋ
ಅವರನೇ ನಂಬಿರುವೆ..
ಮೋಸಮಾಡುವರೋ ಪ್ರಿತಿನೀಡುವರೋ
ಒಂದು ಅರಿಯದಾದೆ..!!
ಮುಗ್ಧೆ ನಾನು ಮನಸ್ಸು ಮುದ್ದೆಯಂತೆ..
ಕಣ್ಣೀರಿನಲ್ಲಿ ಅದ್ದಿ ತೆಗೆದ ಸ್ಪಾಂಜಿನಂತೆ..!!
ಮೆದು ಮಣ್ಣಿಗೆ ಅಂಟಿಕೊಳ್ಳುವ ಭಾವನೆಗಳು..
ಹಳಸದು ಹಳತಾದರೂ ಪಾಚಿಯಂತೆ..!!
ಮಳೆಗಾಲಕೆ ನಳನಳಿಸುವ ಲಿಲ್ಲಿಹೂವು..
ಬೇಸಿಗೆಗೆ ಬತ್ತಿ ಹೋಗುವ ಕೆರೆಯಂತೆ..!!
ಸಾಗುತಿದೆ ಬಾಳು ನದಿಯಂತೆ ಉದ್ದವಾಗಿ..
ಹರಡಿದೆ ಕನಸು ಬಾನಿನಂತೆ ವಿಶಾಲವಾಗಿ..!!
ನಗುವು ಅಳುವು ಎಲ್ಲವೂ ಮಾಮೂಲಿ..
ನೆನಪುಗಳ ಮಳಿಗೆಯೊಂದಿದೆ ಜೀವನದ ಸಂತೆಯಲಿ..!!
~~~
-ಸಿಂಧುಭಾರ್ಗವ್ ಬೆಂಗಳೂರು.
ಜೀವನದ ಸಂತೆಯಲಿ ತಿರುಗ ಹೊರಟಿರುವೆ..
ನಿನ್ನೆ ಅಲ್ಲಿ ಇಂದು ಇಲ್ಲಿ ನಿಂತಿರುವೆ..!!
ಕನಸುಗಳನ್ನೆಲ್ಲ ಹರಡಿ ಕುಳಿತಿರುವೆ..
ಕೇಳಿದವರಿಗೆಲ್ಲ ಕತೆಯ ಹೇಳುತಿರುವೆ..!!
ಕೊಳ್ಳುವವರೋ ಮಾನ ಹರಾಜು ಹಾಕುವರೋ
ಅವರನೇ ನಂಬಿರುವೆ..
ಮೋಸಮಾಡುವರೋ ಪ್ರಿತಿನೀಡುವರೋ
ಒಂದು ಅರಿಯದಾದೆ..!!
ಮುಗ್ಧೆ ನಾನು ಮನಸ್ಸು ಮುದ್ದೆಯಂತೆ..
ಕಣ್ಣೀರಿನಲ್ಲಿ ಅದ್ದಿ ತೆಗೆದ ಸ್ಪಾಂಜಿನಂತೆ..!!
ಮೆದು ಮಣ್ಣಿಗೆ ಅಂಟಿಕೊಳ್ಳುವ ಭಾವನೆಗಳು..
ಹಳಸದು ಹಳತಾದರೂ ಪಾಚಿಯಂತೆ..!!
ಮಳೆಗಾಲಕೆ ನಳನಳಿಸುವ ಲಿಲ್ಲಿಹೂವು..
ಬೇಸಿಗೆಗೆ ಬತ್ತಿ ಹೋಗುವ ಕೆರೆಯಂತೆ..!!
ಸಾಗುತಿದೆ ಬಾಳು ನದಿಯಂತೆ ಉದ್ದವಾಗಿ..
ಹರಡಿದೆ ಕನಸು ಬಾನಿನಂತೆ ವಿಶಾಲವಾಗಿ..!!
ನಗುವು ಅಳುವು ಎಲ್ಲವೂ ಮಾಮೂಲಿ..
ನೆನಪುಗಳ ಮಳಿಗೆಯೊಂದಿದೆ ಜೀವನದ ಸಂತೆಯಲಿ..!!
~~~
-ಸಿಂಧುಭಾರ್ಗವ್ ಬೆಂಗಳೂರು.
No comments:
Post a Comment