@()@
ಜನರಿಂದ ನೀರಿಗಾಗಿ ಪರದಾಟ..
ಜನನಾಯಕರಿಂದ ಶಾಂತಿಪಾಠ..
ರೊಚ್ಚಿಗೆದ್ದರು ರಕ್ತಪಾತವಾದರೂ ಯಾರಿಗೂ ಕಾಣಿಸದು..
ಸಾವು ನೋವಿಗೂ ನಿಮ್ಮಿಂದ ಬೆಲೆ ಕಟ್ಟಲಾಗದು..
ಭಯಭೀತಿಯಲಿ ಕಂಗೆಟ್ಟ ಜನಸಾಮಾನ್ಯ..
ದೊರೆಗಳು ನೀಡುವುದಿಲ್ಲ ಇದಕ್ಕೆಲ್ಲ ಮಾನ್ಯ..
ಪರಿಹಾರವಿಲ್ಲದ ಸಾವಿರ ಸಮಸ್ಯೆಗಳು..
ಹುಡುಕ ಹೊರಟವರಿಗೆ ನಿರಾಸೆಗಳು..
ನಮ್ಮ ಕಷ್ಟ ಅಧಿಕಾರಿಗಳಿಗೂ ಬೇಕಿಲ್ಲ..
ಮುಂದೆ ಏನು ಮಾಡಬೇಕೆಂದು
ರೈತರಿಗೂ ಅರಿವಿಲ್ಲ..
ಬೆಂಕಿಯುಂಡೆ ಉಗುಳುವುದರಿಂದ ಏನೂ ಲಾಭವಿಲ್ಲ..
ತಾಳ್ಮೆಯಿಂದ ಸಮಸ್ಯೆಯ ಕಗ್ಗಂಟು ಬಿಡಿಸಬೇಕಲ್ಲ..
ವಿಧ್ಯಾವಂತ ಜನರೇ ನಿರ್ಧರಿಸಬೇಕಿದೆ..
ಯುವಕರೆಲ್ಲ ಒಟ್ಟಾಗಿ ಪರಿಹಾರ ಹುಡುಕಬೇಕಿದೆ..
ಸಿಂಧುಭಾರ್ಗವ್ .ಬೆಂಗಳೂರು
No comments:
Post a Comment