Wednesday 2 December 2020

Green tea uses ಗ್ರೀನ್ ಟೀ ಉಪಯೋಗ ಆರೋಗ್ಯಮಾಹಿತಿ

ಕಿರು ಲೇಖನ ಆರೋಗ್ಯ ವಿಭಾಗ : ಗ್ರೀನ್ ಟೀ ಕುಡಿದು ಆರೋಗ್ಯ ಹೆಚ್ಚಿಸಿಕೊಳ್ಳೋಣ 

ಸಿಂಧು ಭಾರ್ಗವ್  ಬೆಂಗಳೂರು-೨೧



ಹೌದು . ಇತ್ತೀಚಿಗಿನ ಟ್ರೆಂಡ್ ಗ್ರೀನ್ ಟೀ ಕುಡಿಯುವುದು. ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿದರೆ ಮನಸ್ಸಿಗೆ ಉಲ್ಲಾಸ ನೀಡುತ್ತದೆ. ದಿನವಿಡೀ ದೇಹ ಹಗುರವಾದಂತೆ ಭಾಸವಾಗುತ್ತದೆ.

ಒಂದು ಜಾಹಿರಾತಿನಲ್ಲಿ ತೋರಿಸುತ್ತಾರೆ. ಹೊಟ್ಟೆ ತುಂಬಾ ಊಟ ಮಾಡಿ , ಉಬ್ಬರಿಸಿದಂತಾದರೆ, ಗ್ರೀನ್ ಟೀ ಕುಡಿದು ಸರಿಮಾಡಿಕೊಳ್ಳಬಹುದು ಎಂದು. ಅಂದರೆ ಅದರ ಅರ್ಥ ಗ್ರೀನ್ ಟೀಯಿಂದ ಕೆಟ್ಟ ಕೊಲೆಸ್ಟರಾಲ್‌ ಕಡಿಮೆಯಾಗುತ್ತದೆ. ನಿಮ್ಮ ದೇಹದ ಕೊಬ್ಬು ಕರಗಿಸುತ್ತದೆ. ಹಾಗಾಗಿ ನಿಮಗಿಷ್ಟವಾದ ಆಹಾರದ ಮೇಲೆ ಹಿಡಿತ ಸಾಧಿಸುವುದೇನು ಬೇಡ ಎಂದು ಹೇಳುತ್ತಾರೆ... ಹಾಗೆ ಹೇಳಿದರೆ ಯಾರಿಗೆ ತಾನೇ ಖುಷಿಯಾಗುವುದಿಲ್ಲ.

ನಿಜ. ಗ್ರೀನ್ ಟೀಯಲ್ಲಿ ಫ್ಲೊವೊನಾಯ್ಡ್​ ಅಂಶಗಳು ಹೇರಳವಾಗಿವೆ. ಕೆಫೀನ್ ಅಂಶ ಕಡಿಮೆಯಿದೆ. ಇದು ದೇಹದ ಉರಿಯೂತವನ್ನು ಕಡಿಮೆ ಮಾಡುವುದಲ್ಲದೆ, ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ದಿನಕ್ಕೆ ಎರಡು ಅಥವಾ ಒಂದೇ ಬಾರಿ ಈ ಗ್ರೀನ್ ಟೀ‌ ಕುಡಿಯಬೇಕು. ನೆನಪಿರಲಿ. ರಾತ್ರಿ ಸಮಯದಲ್ಲಿ ಕುಡಿಯಬೇಡಿ. ನಿರಂತರವಾಗಿ ಇದರ ಬಳಕೆಯಿಂದ ನಿದ್ರಾಹೀನತೆ ಸಮಸ್ಯೆ ಬರಬಹುದು.
ಹಾಗಾಗಿ ಹಗಲಿನಲ್ಲಿ ಒಮ್ಮೆ ಕುಡಿದರೆ ಸಾಕು.




ಮನೆಯಲ್ಲಿ ಗ್ರೀನ್ ಟೀ ತಯಾರಿಸುವುದು ಹೇಗೆ: ಒಂದು ಲೋಟ‌ ನೀರಿನ್ನು ಕುದಿಯಲು ಬಿಡಿ. ನಂತರ ಕೂಡಲೇ ೧/೨ ಅರ್ಧ ಟೀ ಚಮಚ ಚಹಾಪುಡಿ ಹಾಕಿರಿ. ಕುದಿಸಬೇಡಿ. ಕೂಡಲೇ ಲಿಂಬೆ ರಸ ಹಿಂಡಿ ಕೆಳಗಿಳಿಸಿರಿ. ಒಂದು ಟೀ-ಚಮಚ ಜೇನು ತುಪ್ಪವನ್ನು ಹಾಕಿ ಕಲಸಿ. ಬಿಸಿಬಿಸಿಯಾಗಿ ಸೇವಿಸಿರಿ.

ಇದಕ್ಕೆ ಕೆಟ್ಟ ಕೊಬ್ಬು ಕರಗಿಸುವ ಶಕ್ತಿ ಇದೆ ಎಂದರೆ ಇದರಿಂದ ದೇಹಕ್ಕೆ ಉಷ್ಣವಾಗಬಹುದು. ಹಾಗಾಗಿ ನೆನಪಿರಲಿ ದಿನಕ್ಕೆ ಒಂದು ಅಥವಾ ಎರಡು ಬಾರಿ ಕುಡಿಯಬಹುದು. ಹಾಗೆಯೇ ರಾತ್ರಿ ಕುಡಿಯಬಾರದು. ಗ್ರೀನ್ ಟೀ ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಲೇಖನ ::--  ಸಿಂಧು ಭಾರ್ಗವ್ ಬೆಂಗಳೂರು-೨೧

Thursday 19 November 2020

International men's day 2020ಪುರುಷರ ದಿನಾಚರಣೆಯ ಪ್ರಯುಕ್ತ ಲೇಖನ ಗಂಡಸರು ಹೇಗಿರಬೇಕು??

 

ಪುರುಷರ ದಿನಾಚರಣೆಯ ಪ್ರಯುಕ್ತ ಲೇಖನ ಗಂಡಸರು ಹೇಗಿರಬೇಕು?!

ಲೇಖಕಿ: ಸಿಂಧು ಭಾರ್ಗವ್ ಬೆಂಗಳೂರು-೨೧



ಗಂಡಸರು ಹೇಗಿರಬೇಕು ಎನ್ನುವ ಬದಲು ಹೇಗಿರುತ್ತಾರೆ ಎಂದು ಒಮ್ಮೆ ನೋಡಿ ಬಿಡೋಣ.

ಚಿಕ್ಕಂದಿನಿಂದಲೂ ಅಣ್ಣ, ಅಕ್ಕನಾದವರಿಗೆ ಹೊಂದಿಕೊಂಡು ಹೋಗಲು ಕಲಿಸಿರುತ್ತಾರೆ. ಚಿಕ್ಕವರು ಮಾಡುವ ತಪ್ಪಿಗೆ ತಾವು ಬೈಸಿಕೊಳ್ಳುವುದು ಒಂದಷ್ಟು ತ್ಯಾಗ ಮಾಡುವ ಗುಣ ತನ್ತಾನೆ ಮನದಲ್ಲಿ ಮೂಡಿಸುತ್ತಾರೆ. ಬೆಳೆಯುತ್ತ ಕೆಲಸಗಳನ್ನು ಕಲಿಸಿ ಕೊಡುತ್ತಾರೆ. ಹಣದ ವ್ಯವಹಾರ ಮಾಡಲು ತಿಳಿಸಿಕೊಡುತ್ತಾರೆ. ಗೆಳೆಯರೊಂದಿಗೆ ಆಟವಾಡಿಕೊಂಡು ಇದ್ದ ಮಗ(ಮಗು)ನನ್ನು ಪ್ರತ್ಯೇಕಿಸಲು ನೋಡುತ್ತಾರೆ. ಏಕೆಂದರೆ ಎಲ್ಲಿ ಸಹವಾಸ ದೋಷದಿಂದ ತಮ್ಮ ಮಗನೂ ಬದಲಾದರೆ ಎಂಬ ಭಯ. ಚಿಗುರು ಮೀಸೆ ಕಾಣಿಸಿಕೊಂಡಾಗ ಅಮ್ಮನಿಗೆ ಖುಷಿಯಾಗುತ್ತದೆ. ತನ್ನ ಮಗ ಹೀರೋ ತರಹ ಕಾಣಬೇಕೆಂಬ ಆಸೆಯಾಗುತ್ತದೆ. ಹಾಗೆಯೇ ಹುಡುಗಿಯ ಬಗ್ಗೆ ಎಚ್ಚರಿಕೆ, ಪ್ರೀತಿ- ಪ್ರೇಮ ಎಂಬ ಪಾಶಕ್ಕೆ ಬೀಳಬೇಡ ಎಂದು ಸಾರಿ-ಸಾರಿ  ಹೇಳುತ್ತಾ ಇರುತ್ತಾರೆ. ದುರಭ್ಯಾಸಕ್ಕೆ ಸಿಲುಕದಂತೆ ಎಚ್ಚರಿಸುತ್ತಾರೆ.

ಓದಿ ಅತೀ ಹೆಚ್ಚು ಅಂಕ  ಗಳಿಸದಿದ್ದರೂ ಪರವಾಗಿಲ್ಲ. ಚುರುಕುತನ ಇರಲೆಂದು ಆಶಿಸುತ್ತಾರೆ. ಎಲ್ಲಿ ಹೋದರು ಯಾವ ಕೆಲಸ ಬೇಕಾದರೂ ಮಾಡಿ ಬರುವ ಧೈರ್ಯ ,ಕಲೆ , ವಾಕ್ಚಾತುರ್ಯ ಅವನಿಗೆ ಬರಬೇಕು ಎಂಬ ಬಯಕೆಯಿರುತ್ತದೆ. ಉದ್ಯೋಗ ಸಿಕ್ಕಾಗ ಹೆತ್ತವರಿಗೆ ಆಗುವ ಸಂತಸ ಅಷ್ಟಿಷ್ಟಲ್ಲ. ಮಗನು ಸಂಬಳ ಕೊಡದಿದ್ದರೂ ಪರವಾಗಿಲ್ಲ, ದುಂದುವೆಚ್ಚ ಮಾಡದಂತೆ ನೋಡಿಕೊಳ್ಳುತ್ತಾರೆ. ಕೂಡಿಡುವ ಸಲಹೆ ನೀಡುತ್ತಾರೆ. ಮದುವೆಯಾಗಲೆಂದು ಅವನ ಗುಣಗಾನ ಮಾಡುತ್ತಲೇ ಯೋಗ್ಯ ಹೆಣ್ಣನ್ನು ಹುಡುಕುತ್ತಾರೆ. ತಮ್ಮ ಮಗ ಎಲ್ಲಿ ಬದಲಾಗುತ್ತಾನೋ ಎಂಬ ಭಯಕ್ಕಿಂತ ಬರುವ ಸೊಸೆಯು ಎಲ್ಲಿ ತಮ್ಮ ಮಗನಿಗೆ ಕಟ್ಟುನಿಟ್ಟು ಮಾಡುತ್ತಾಳೋ ಎಂಬ ಭಯವೇ ಜಾಸ್ತಿಯಾಗುತ್ತದೆ. ಮಗು ಬಂದಾಗ ಮುದ್ದಾದ ಮೊಮ್ಮಗುವನ್ನು ಆಡಿಸಲು ಬಯಸುತ್ತಾರೆ. ಮಗನ ಜವಾಬ್ದಾರಿಯನ್ನು, ಗಡಿಬಿಡಿ ಜೀವನವ ಕಣ್ಣಾರೆ  ಕಂಡು ಖುಷಿಪಡುತ್ತಾರೆ. ನಿಟ್ಟುಸಿರು ಬಿಡುತ್ತಾರೆ. ಹೇಗಿದ್ದ ಮಗ ಹೇಗಾಗಿ ಬದಲಾದ ಎಂದು ಚಿಕ್ಕಮಗುವಿನಿಂದ ಅಂದಿನ ತನಕದ ಘಟನೆಗಳ ಮೆಲುಕು ಹಾಕುತ್ತಾರೆ.

ಮಗನೂ ಕೂಡ ಹೆತ್ತವರ ಬಗ್ಗೆ ಹೆಮ್ಮೆ ಪಟ್ಟುಕೊಂಡು ಪ್ರೀತಿ ಹೆಚ್ಚಿಸಿಕೊಂಡು ಗೌರವಿಸುತ್ತಾನೆ. ತನಗೆ ಹೆತ್ತವರು ಹೇಳಿಕೊಟ್ಟ ಪಾಠಗಳನ್ನೇ ತನ್ನ ಮಕ್ಕಳಿಗೂ ಹೇಳುತ್ತಾನೆ. ಇದು ಸಭ್ಯಸ್ತ ಸುಸಂಸ್ಕೃತ ಮನೆತನದ ಮಕ್ಕಳ ಕಥೆ. ಇದರಲ್ಲಿ ಬದಲಾವಣೆಯಾದರೆ ಜೀವನವೇ ಅಂಕುಡೊಂಕಾದೀತು.

💐🍀🍀🍁🌾🌻🌿🌾🌺🍁💐🌷🍀🌺🌿🌿🌼🌻

ಹೌದು, ಅಪ್ಪ ಎಷ್ಟು ಕಷ್ಟ ಪಡುತ್ತಾರೆ ಎಂದು ಅಮ್ಮನಿಗೆ ಮಾತ್ರ ತಿಳಿಯುವುದು. ಮಕ್ಕಳಿಗೆ ಅವರ ಬೇಕು ಬೇಡಗಳ ಪೂರೈಸಿದರೆ ಅಪ್ಪ ಒಳ್ಳೆಯವರು ಎಂದಾಗುತ್ತಾರೆ. ಹಣದ ಪೂರೈಕೆಗೆ ಎಷ್ಟು ಶ್ರಮವಹಿಸುತ್ತಾರೆ ಎಂದೆಂಬುದು ಮಕ್ಕಳಿಗೆ ಬೇಡ. ಅವರಿಗೆ ಬುದ್ಧಿ ಬಂದು, ಉದ್ಯೋಗ ಸಿಕ್ಕು ಜವಾಬ್ದಾರಿ ಹೆಗಲೇರಿದಾಗ ತಂದೆಯ ಕಷ್ಟ ಅರ್ಥವಾಗುತ್ತದೆ.

ಗಂಡಸರ ದಿನ ಯಾನಿ ಪುರುಷರ ದಿನ ಎಂದಾಗ ಸಿರಿವಂತರ ಜೀವನಕ್ಕಿಂತ , ಒಬ್ಬನ ದುಡಿಮೆ ಪೈಸೆ-ಪೈಸೆ ಒಟ್ಟು ಮಾಡುವುದು, ಮನೆಮಂದಿಯ ಬೇಡಿಕೆ ಪೂರೈಸುವ ಅದೆಷ್ಟೋ ಗಂಡು ಹುಡುಗರೋ ಇಲ್ಲ ತಂದೆಯ ನೆನಪು ಮಾಡಿಕೊಂಡರೆ ಒಳ್ಳೆಯದು‌. ತನ್ನ ಆಸೆ ಆಕಾಂಕ್ಷೆಗಳ ಬದಿಗಿಟ್ಟು ಅಕ್ಕ ತಂಗಿಯರ ಮದುವೆ, ತಮ್ಮನ ವಿದ್ಯಾಭ್ಯಾಸಕ್ಕಾಗಿ ನಿಸ್ವಾರ್ಥ ದುಡಿಮೆ ಮಾಡುವ ಗಂಡು ಜೀವವನ್ನು ನೆನಪಿಸಿಕೊಳ್ಳಲೇಬೇಕು.
"ನನಗೇನು ಬೇಡ. ನಿಮಗೇನು ಬೇಕು ತಗೊಳ್ಳಿ.. ನಿಮ್ಮ ಸಂತೋಷವೇ ನನ್ನ ಸಂತೋಷ..." ಎನ್ನುವ ಅವನ/ರ ನುಡಿಗಳಲ್ಲೇ ತ್ಯಾಗದ ಗಂಧ ಬೀರುತ್ತಾ ಇರುತ್ತದೆ. ವರುಷ ದಾಟಿದ ಮೇಲೆ ಮದುವೆ, ಚಿಗುರು ಮೀಸೆ ಗಡುಸಾದ ಮೇಲೆ ಆಸೆಗಳಿಗೆ ಎಲ್ಲಿಯ ಜಾಗ.?!  ಜವಾಬ್ದಾರಿ ಒಂದು ಕೆಳಗಿಳಿಸಿದ ಮೇಲೆ ಮತ್ತೊಂದು ಹೀಗೆ ಮೇಲಿಂದ ಮೇಲೆ ಕರ್ತವ್ಯ , ಜವಾಬ್ದಾರಿ ಹೆಸರಿನಲ್ಲಿ ಬಾರ ಹೊತ್ತುಕೊಂಡೇ ನಡೆಯುವ ಎತ್ತಿನಂತೆ ಬದುಕು ಅವರದ್ದು. ಊಟ ನಿದಿರೆಗೂ ಸಮಯವಿಲ್ಲದೇ ದುಡಿಯುವುದು, ಹಣಕಾಸಿನ ಸಮಸ್ಯೆಗಳನ್ನು ಎದುರಾದರೂ ಯಾರೊಂದಿಗೂ ಹೇಳಿಕೊಳ್ಳಲಾಗದೇ ಸಾಲ ನೀಡಿದವರು ಅಡ್ಡಲಾಗಿ ನಿಂತು ಬೈದಾಗೆಲ್ಲ ಬೈಸಿಕೊಂಡು, ಅವಮಾನ ಸಹಿಸಿಕೊಂಡು, ಸುರಿವ ಬೆವರ ಒರೆಸಿಕೊಂಡು ಕಿವಿಯ ಮುಚ್ಚಿಕೊಂಡು ತಲೆ ತಗ್ಗಿಸಿ ಸಂಜೆ ಮನೆಕಡೆ ಹೆಜ್ಜೆ ಹಾಕುವ ಭಾರವಾದ ಮನಸ್ಸನ್ನು ಅರ್ಥಮಾಡಿಕೊಳ್ಳುವುದೇ ಒಂದು ಒಗಟು.

ಅಪ್ಪನ ದುಡಿಮೆಯಲ್ಲಿ ದುಂದುವೆಚ್ಚ ಮಾಡುತ್ತ, ಓದಿನ ವಯಸ್ಸಿನಲ್ಲಿ ಸರಿಯಾಗಿ ಓದದೇ ಉದ್ಯೋಗವೂ ಸರಿಯಾಗಿ ಸಿಗದೇ ತನ್ನ ಜೀವನದ ಜೊತೆಗೇನೇ ಆಟವಾಡುವ ಬೇಜವಾಬ್ದಾರಿ ಹುಡುಗರು ಸಾವಿರಾರು ಜನರಿದ್ದಾರೆ. ಮದುವೆಯಾದರೆ ಸರಿಯಾಗಬಹುದು ಎಂದೆನಿಸಿ ಮದುವೆ ಮಾಡಿದರೂ ತವರು ಮನೆ ಬಿಟ್ಟು ಬಂದ ಮಡದಿಯನ್ನು ಆಚೈಸದೇ ಹಂಗಿಸಿ ಜಗಳ ಮಾಡಿ ಅವಮಾನ ಮಾಡುತ, ಕುಡಿತ - ಧೂಮಪಾನದ ದಾಸರಾಗಿ ತಮ್ಮ ಜೀವನವನ್ನು ನರಕ ಮಾಡಿಕೊಂಡ ಗಂಡಸರೂ ಇದ್ದಾರೆ. ಎಂದೋ ಅಮಲಿನಲ್ಲಿ ಒಂದಾಗಿ ಹುಟ್ಟಿದ ಮಕ್ಕಳಿಗೆ ಕೂಡ ಸರಿಯಾದ ತಂದೆಯಾಗದೇ, ತದನಂತರದಲ್ಲಿ ಕೂಡ ಬದಲಾಗದೆ, ತಾಯಿಯ ಮೇಲೆ ಸಂಪೂರ್ಣ ಜವಾಬ್ದಾರಿ ಹೊರಿಸಿ ತನ್ನ ಕರ್ತವ್ಯ ಮತ್ತು ಜವಾಬ್ದಾರಿಯಿಂದ ವಿಮುಖನಾದ ಗಂಡಸರೂ ಇದ್ದಾರೆ.
ತಮ್ಮ ಕನಸುಗಳ ಬೆನ್ನಟ್ಟಿ ಶ್ರೀಮಂತ ವ್ಯಕ್ತಿಯಾಗಿ ಸಮಾಜದಲ್ಲಿ ಗೌರವಯುತರಾಗಿ ಬಾಳುತ ದಾನ ಧರ್ಮ ಮಾಡುವವರೂ ಇದ್ದಾರೆ. ತನ್ನ ಕನಸುಗಳ‌ ಭಾಗಿಯಾಗಿ ಮಡದಿ ಮಕ್ಕಳ ಮತ್ತು ಹೆತ್ತವರ ಪ್ರೀತಿಯಿಂದ ಕಾಣುವವರೂ ಇದ್ದಾರೆ.



💐🌷🍀🍁🌾🌻🌼🌿🌾🌻🌿🌾🌻🍀💐🌷🍁🍀

ಹೀಗೆಯೇ ಮೊದಲಿತ್ತು,
ಗಂಡಾಗಿ ಹುಟ್ಟುತಲೇ ಜವಾಬ್ದಾರಿ ಹೊರುತಾನೆ
ಹೆಣ್ಣು ಹೊರುವಳು ಕೂಸನು
ಸಾಕಿ ಸಲಹಲು ಹೆಣ್ಣು ಶ್ರಮಿಸುವಳು
ಗಂಡು ಬೆವರ ಸುರಿಸಿ ದುಡಿದು ದಣಿವನು
ಹೆಣ್ಣು, ಆದರಿಸಿ ಬಿಸಿಯಾದ ಊಟ ಉಣಬಡಿಸುವಳು
ತುಂಬು ಮನೆಯಲ್ಲಿ ಪ್ರೀತಿ ಪ್ರೇಮವ ಹಂಚುವಳು

🍁🌱💐💐🍀🍁🌲💮🏵🌳🌹🌴🌺🌻🌾🌿🌼

ಹೆಂಡತಿಯ ಪ್ರೀತಿ  ಬೇಡ ಎಂದವನೇ ಮೂರ್ಖ
ಹೆತ್ತವ್ವಗೆ ಸತಾಯಿಸಿ ಸಂಕಟ ಕೊಡುವವನು ಮುಟ್ಠಾಳ
ಪರಸತಿಗೆ/ ಹೆಣ್ಣಿಗೆ ಕಣ್ಣು ಹಾಕುವವ ಕಾಮುಕ
ಸತಿಯ ನಿರ್ಲಕ್ಷಿಸಿ ಅನ್ಯ ಸ್ತ್ರೀ ಸಂಗ ಬಯಸಯವವ ವಂಚಕ

🍀💐🌷🌱🍁🍂🌲🌳🍃🌴🌾🌻🌼🌿🌺🌹🏵

ಈಗ, ಗಂಡು ಹೆಣ್ಣು ಇಬ್ಬರೂ ಸಮಾನರು
ಉದ್ಯೋಗ ಹಣಕಾಸು ಗೌರವ ಬಯಸುವವರು
ಮನೆಕೆಲಸದಲ್ಲಿ ಕೂಡ ಹಂಚಿಕೊಂಡೇ ಮಾಡುವರು
ಪ್ರೀತಿ ಪ್ರೇಮ ವಿನಿಮಯಕೆ ಸಮಯ ಮೀಸಲಿಡುವರು
ವ್ಯಾವಹಾರಿಕ ಯಾಂತ್ರಿಕ ಬದುಕಿನ ದಾಸರು
ಕನಸುಗಳ ಪೂರೈಸುತಲೇ ಕೂಸನು ಗಮನಿಸರು
ಬೆಳೆದ ಮಗನ ಎದುರು ಕೇವಲವಾಗುವರು

- ಸಿಂಧು ಭಾರ್ಗವ್ | ಬೆಂಗಳೂರು-೨೧

Tuesday 3 November 2020

ಚಳಿಗಾಲದ ಆಪ್ತಮಿತ್ರ ನೆಲ್ಲಿಕಾಯಿ

 ಚಳಿಗಾಲದ ಆಪ್ತಮಿತ್ರ ನೆಲ್ಲಿಕಾಯಿ



ನೆಲ್ಲಿಕಾಯಿಯ ಬಗ್ಗೆ ಕಿರುಪರಿಚಯ:-

ನೆಲ್ಲಿಕಾಯಿ,  ಬೆಟ್ಟದ ನೆಲ್ಲಿಕಾಯಿ, ನೆಲ ನೆಲ್ಲಿಕಾಯಿ ಹೀಗೆ ನೆಲ್ಲಿಕಾಯಿಯು ಅನೇಕ ತರಹದಲ್ಲಿ ನಮಗೆ ಕಾಣಸಿಗುತ್ತದೆ. ಆರೋಗ್ಯಕ್ಕೆ ತುಂಬಾ ಉಪಕಾರಿಯಾದ ಈ‌ ನೆಲ್ಲಿಕಾಯಿಯನ್ನು  ಒಂದಿಲ್ಲೊಂದು ರೂಪದಲ್ಲಿರುವ ನಾವು ಸೇವಿಸುತ್ತೇವೆ. ರುಚಿಯಲ್ಲಿ ಹುಳಿ ಮಿಶ್ರಿತ ಒಗರು. ಕಿತ್ತಳೆ ಹಣ್ಣಿಗಿಂತ ೨೦ ಪಟ್ಟು ಹೆಚ್ಚು" ವಿಟಮಿನ್ ಸಿ" ಅಂಶ ಇದರಲ್ಲಿದೆ. ಮೂರು ಕಿತ್ತಳೆ ಹಣ್ಣಿನಲ್ಲಿ ಇರುವ ವಿಟಮಿನ್ ಅಂಶ ಒಂದು ನೆಲ್ಲಿಕಾಯಿಯಲ್ಲಿ ಇರುತ್ತದೆ. 


ವಿಟಮಿನ್ ಸಿ  ಉಪಯೋಗ:-

ವಿಟಮಿನ್ ಸಿ ಅಂಶ ಅತ್ಯಧಿಕವಾಗಿ ಮನುಷ್ಯ ದೇಹಕ್ಕೆ ಬೇಕು. ಪಾಲಕ್ ಸೊಪ್ಪು, ಕಿತ್ತಳೆ‌ಹಣ್ಣು, ಲಿಂಬೆ, ದ್ರಾಕ್ಷಿ, ಹೂಕೋಸು, ಅನಾನಾಸು, ಸ್ಟ್ರಾಬೆರಿ ಹಣ್ಣು, ಟೊಮ್ಯಾಟೊ, ನೆಲ್ಲಿಕಾಯಿ, ಕಿವಿ ಹಣ್ಣಗಳಲ್ಲಿ ವಿಟಮಿನ್ ಸಿ. ಆಂಶ ಅತ್ಯಧಿಕವಾಗಿ ಇರುತ್ತದೆ.  ಇದರಿಂದ ದೃಷ್ಟಿ ದೋಷ ಬರುವುದಿಲ್ಲ. ಚರ್ಮ ವಯಸ್ಸಿಗೂ ಮೊದಲು ನೆರಿಗೆಗಟ್ಟುವುದು ಕಡಿಮೆಮಾಡುವುದು, ಗರ್ಭಿಣಿ ಮಹಿಳೆಯರಿಗೆ ಮಗು ಬೆಳೆಯಲು ಸಹಾಯಕ.  ವಿಟಮಿನ್ ಸಿ ಕೊರತೆಯಾದರೆ ಸ್ಕರ್ವಿ ರೋಗ ಬರುತ್ತದೆ. ಅದನ್ನು ತಡೆಗಟ್ಟಲು ಇವೆಲ್ಲದರ ದಿನಬಳಕೆ ಉಪಯೋಗ ಅಗತ್ಯ. 



ಹಾಗಾಗಿ ಚಳಿಗಾಲದಲ್ಲಿ ಎಲ್ಲರು ಅಗತ್ಯವಾಗಿ ನೆಲ್ಲಿಕಾಯಿಯನ್ನು ಸೇವಿಸಲೇ ಬೇಕು. ಸಾಧಾರಣವಾಗಿ ಅಕ್ಟೋಬರ್ ನಿಂದ ಜನವರಿ ತನಕವೂ ಬೆಳೆಯುತ್ತದೆ. ಈ ಚಳಿಗಾಲದಲ್ಲಿ ಮಾರುಕಟ್ಟೆಗೆ ಈಗಾಗಲೇ ನೆಲ್ಲಿಕಾಯಿ ಲಗ್ಗೆ ಇಟ್ಟಾಗಿದೆ. ಮುಖ್ಯವಾಗಿ ಆಯುರ್ವೇದದ ಅರಸನಾಗಿ ನೆಲ್ಲಿಕಾಯಿ, ಒಣನೆಲ್ಲಿಕಾಯಿ, ನೆಲ್ಲಿ ಪುಡಿ, ಚೂರ್ಣ ಎಂದೆಲ್ಲ ಇದನ್ನು ಬಳಸುತ್ತಾರೆ. ನೆಲ್ಲಿಯ ಬೇರು, ರೆಂಬೆ, ಹೂವು, ಎಲೆಗಳು ಕೂಡ ಆಯುರ್ವೇದ ಗುಣಹೊಂದಿದೆ. ವರ್ಷಪೂರ್ತಿ ನೆಲ್ಲಿಕಾಯಿಯನ್ನು ಒಣಗಿಸಿ ತಿನ್ನಬಹುದು. 



ಒಮ್ಮೆ ನೆಲ್ಲಿಕಾಯಿ ತಿಂದು ನೀರು ಕುಡಿದರೆ ದಣಿವು ಆಯಾಸ ಕಡಿಮೆಯಾಗುತ್ತದೆ. ಬಾಯಿ ತುಂಬಾ ಸಿಹಿಸಿಹಿ ಅನುಭವವಾಗುತ್ತದೆ. ‌ನೆಲ್ಲಿಕಾಯಿ ಉಪ್ಪಿನ ಕಾಯಿ, ಚಟ್ನಿ, ತಂಬುಳಿ ಕೂಡ ಮಾಡಿ ಅಡುಗೆಯಲ್ಲಿ ಬಳಸುತ್ತಾರೆ. ಅಲ್ಲದೇ ದೀಪಾವಳಿಯ ಕಾರ್ತಿಕ ಮಾಸದಲ್ಲಿ ತುಳಸಿ ಪೂಜೆ ಮಾಡುವಾಗ ನೆಲ್ಲಿಕಾಯಿ ತುಪ್ಪದ ದೀಪವು ಅಗತ್ಯವಾಗಿ ಬೇಕಾಗುತ್ತದೆ . ತುಳಸಿ ಗಿಡ, ನೆಲ್ಲಿಕಾಯಿ ರೆಂಬೆಯೊಂದಿಗೆ ಮದುವೆಮಾಡಿಸುವ ಶಾಸ್ತ್ರವಿದೆ. ಅಂದರೆ ಶ್ರೀಕೃಷ್ಣನ ವಾಸಸ್ಥಾನ ನೆಲ್ಲಿ ಮರದಲ್ಲಿದೆ ಎಂಬ ನಂಬಿಕೆಯಿದೆ. ಹೋಮ ಹವನದಲ್ಲಿ ನೆಲ್ಕಿಕಾಷ್ಟಗಳ ಬಳಕೆ ಮಾಡುತ್ತಾರೆ.  ಇದರಿಂದ ವಾತಾವರಣ ಶುಧ್ಧಿಯಾಗುತ್ತದೆ. ಮನುಷ್ಯರಿಗೂ ಶುದ್ಧ ಗಾಳಿ ಉಸಿರಾಡಬಹುದು. 




ನೆಲ್ಲಿಕಾಯಿಯ ಉಪಯೋಗ:-


ನೆಲ್ಲಿಕಾಯಿ ಪುಡಿ ಸೇವನೆಯಿಂದ ಮಧುಮೇಹ ಕಡಿಮೆಯಾಗುತ್ತದೆ.

ರಕ್ತದೊತ್ತಡ ಕಡಿಮೆಯಾಗುತ್ತದೆ. ದೇಹದ ತೂಕ ಕಡಿಮೆಯಾಗುತ್ತದೆ.

ಚಳಿಗಾಲದಲ್ಲಿ ಎದುರಾಗುವ ಸೀತ ಕಡಿಮೆಮಾಡಲು ನೆಲ್ಲಿಕಾಯಿ ಸಹಕಾರಿಯಾಗಿದೆ.

ಬಿಕ್ಕಳಿಕೆ ಬಂದಾಗ ನೆಲ್ಲಿ ಎಸಳು ತಿಂದು ನೀರು ಕುಡಿದರೆ ಒಳ್ಳೆಯದು.

ನೆಲ್ಲಿಕಾಯಿಯನ್ನು  ಅಗಿದು ತಿನ್ನುವುದರಿಂದ ವಸಡು ಗಟ್ಟಿಯಾಗುತ್ತದೆ.

ನೆಲ್ಲಿಕಾಯಿಯನ್ನು ತುಂಡರಿಸಿ ಉಪ್ಪಿನಲ್ಲಿ ನೆನೆಸಿ ಪ್ರತಿದಿನ ಸೇವಿಸಿದರೆ ಕೆಟ್ಟ ಕೊಲೆಸ್ಟರಾಲ್ ( bad cholesterol) ಕಡಿಮೆ ಮಾಡುತ್ತದೆ.

ಚಿಕ್ಕ ಮಕ್ಕಳಿಗೆ ಟಿವಿ ಮೊಬೈಲ್ ನೋಡಿ ದೃಷ್ಟಿ ಸಮಸ್ಯೆ ಬರುವ ಸಾಧ್ಯತೆ ಇದೆ. ಇದರಿಂದ ಕಡಿಮೆಮಾಡಬಹುದು. 


ಸಿಂಧು ಭಾರ್ಗವ್ | ಬೆಂಗಳೂರು-೨೧

Wednesday 21 October 2020

ರೈತನ ಗೋಳು ಕೇಳುವವರು ಯಾರು?

ಕನ್ನಡ ಕವಿತೆ: ರೈತರ ಗೋಳು ( ನವ್ಯಕಾವ್ಯ ಬಂಡಾಯ ಸಾಹಿತ್ಯ)

ರೈತರ ಗೋಳು ಕೇಳುವವರು ಯಾರು
ಮಳೆಯೇ ಬರದಿರೆ ಬರಗಾಲ ಎದುರಿಸುವರು
ಬಿಡದೇ ಸುರಿದರೆ ನೆರೆಗಾಲ ನೋಡುವರು

ರೈತರ ಗೋಳು ಕೇಳುವವರು ಯಾರು?
ಮಧ್ಯವರ್ತಿಗಳ ಹಾವಳಿ ಬೇರೆ,
ಬೆಳೆದ ಬೆಳೆಯೆಲ್ಲ‌ ಕೊಳೆತಿದೆ ಹೊಲದಲ್ಲೆ
ಅಳಿದುಳಿದ ಬೆಳೆಯ ಕೊಂಡೊಯ್ಯಲು ಬರುವ
ಪುಡಿಗಾಸನು ರೈತರ ಕಿಸೆಗೆ ತುರುಕಿಸುವ..

ರೈತರ ಗೋಳು ಕೇಳುವವರು ಯಾರು?
ತರಕಾರಿ ಧಾನ್ಯಗಳ ಬೆಲೆ ಏರಿಸುವ
ಕಾರಣ ಕೇಳಿದರೆ ನೆರೆ ಬಂತು ಎನ್ನುವ
ಸಂಗ್ರಹಿಸಿದ ಬೆಳೆ ಖಾಲಿ ಎನ್ನುವ
ಗೋದಾಮಿನಲ್ಲಿ ತರಕಾರಿ‌ ಇಲ್ಲೆನ್ನುವ

ರೈತರ ಗೋಳು ಕೇಳುವವರು ಯಾರು?
ಹೇಳಿದ ಹಣವ ಕೊಡಲೇಬೇಕು
ಗ್ರಾಹಕನಿಗೆ ಜೀವನ‌ ನಡೆಯಲೇಬೇಕು
ರೈತರಿಗೆ ಹಣವು ಸಿಗದು ತಮ್ಮ
ಕೊಳೆತ ಬೆಳೆಯು ನಳನಳಿಸದು ತಿಮ್ಮ

ನಿಂತ ನೀರಾಗಿದೆ ಜೀವನವೀಗ
ಕೊಳೆತ ಬಾಳು ಸರಿಯಾಗುವುದು ಯಾವಾಗ?ಸಂಕಷ್ಟದ ಕಾಲಕ್ಕೆ ಇಲ್ಯಾರು ಬಾರರು
ರೈತರ ಗೋಳು ಕೇಳುವವರು ಯಾರು?

(೨)
ಹೋ ದಂಡು ದಂಡೇ ದಾವಿಸಿದೆ ನೋಡಿ
ಸನಿಹಕೆ ಬಂದರು, ಮೊಸಳೆ ಕಣ್ಣೀರು ಸುರಿಸಿ
ಮುಷ್ಕರಕ್ಕೆ ಇವರೇ ಮೊದಲಿಗರು
ಕಂಡ ಕಂಡಲ್ಲಿ ಬೆಂಕಿ ಹಾಕುವರು
ರೈತರ ಪರ ಹೋರಾಟಗಾರರು
ಅಸಲಿಗೆ ಇವರೆಲ್ಲ ಯಾರು?  ಯಾರೂ ತಿಳಿಯರು..
ರಾಜಕೀಯದ ದಾಳವಾಗಿಸಿ ಬಿಟ್ಟರು,
ಬಡರೈತರು ಗಾಳಕೆ ಕಟ್ಟಿದ ಮಿನಿಮಾಂಸವಾದರು//

ಒಂದೆರಡು ವಾರ ಹಾರಾಟ ಕೂಗಾಟ
ಮಾಧ್ಯಮದಲ್ಲೆಲ್ಲ ಇವರದೇ ಕಟುಮಾತು, ನೋಟ
ರೈತರ ಗೋಳಿಗೆ ನ್ಯಾಯವು ಸಿಗದೆ, ತಲೆ ಮೇಲೆ‌ ಕೈಹೊತ್ತು ಕುಳಿತ
ಮುಷ್ಕರಕೆ ಬೆಂಬಲ ಸೂಚಿಸಿ ಬಂದವನು ನಗುತ ಬಿರಿಯಾಣಿ ಸವಿದ...

ರೈತರ ಗೋಳು ಕೇಳುವವರು ಯಾರು?

ರಚನೆ: ಸಿಂಧು ಭಾರ್ಗವ್ ಬೆಂಗಳೂರು-೨೧

( ಚಿತ್ರಕೃಪೆ : ಗೂಗಲ್ ಇಮೇಜ್ ) 


Thursday 1 October 2020

ಲೇಖನ : ಕಥೆ ಹೇಳುವ ಬಿಂದಿ ಹಣೆಯ ಬೊಟ್ಟು

 


 ಅರ್ಥಪೂರ್ಣ ಲೇಖನ : "ಕಥೆ ಹೇಳುವ ಬಿಂದಿ"







ನಾನು ಬಿಂದಿ, ಸ್ಟಿಕರ್ , ಹಣೆಗೆ ಹಚ್ಚುವ ಬೊಟ್ಟು. ಗೊತ್ತಾಯಿತಾ..? ಹೆಣ್ಮಕ್ಕಳು ಬೊಟ್ಟು ಇಟ್ಟುಕೊಂಡರೆ ಮಹಾಲಕ್ಷ್ಮಿ ತರಹ ಕಾಣಿಸ್ತಾರೆ ಅಂತ ಹೇಳೋದು ವಾಡಿಕೆ. ಅದು ನಮ್ಮ ಸಂಸ್ಕೃತಿ ತಾನೆ.  ನಿಜ ಬೋಳು ಬೋಳು ಹಣೆಯನ್ನು ಯಾರಿಗೆ ತಾನೆ ನೋಡೋಕೆ ಇಷ್ಟವಾಗುತ್ತೆ. ಹುಡುಗಿಯರು, ಚಿಕ್ಕ ಕಪ್ಪು ಕಲರ್ ಬಿಂದಿ ಹಣೆಗೆ ಇಟ್ಟುಕೊಂಡು ಕಾಲೇಜಿಗೆ ಹೋಗುತ್ತಾರೆ. ಮದುವೆಯಾದ ಮಹಿಳೆಯರು ಕೆಂಪು ಬಿಂದಿ ಹಾಕಿಕೊಳ್ಳುತ್ತಾರೆ. ಇನ್ನೂ ಉಡುಪಿಗೆ ಸರಿಹೊಂದುವ ಬಿಂದಿಯನ್ನು ಹಣೆಗಿರಿಸಿಕೊಳ್ಳುವ ಯುವತಿಯರೇನೂ ಕಡಿಮೆಯಿಲ್ಲ ಬಿಡಿ. ವಿವಿಧ ಆಕಾರದ ಬಿಂದಿಗಳು ಕಾಣಸಿಗುತ್ತವೆ. ಕುಂದನ್ ವರ್ಕ್ ಕೂಡ ಮಾಡುತ್ತಾರೆ.


ವಿಷಯ ಅದಲ್ಲ. ನಾನು ಕಥೆ ಹೇಳಹೊರಟಿರುವುದು, ತುಂಬಾ ಕುತೂಹಲಭರಿತವಾಗಿದೆ ಮುಂದೆ ಓದಿರಿ. ನೀವು ಬಾತ್ ರೂಮ್ ನಲ್ಲಿ ಗಮನಿಸೀದ್ದೀರಾ. ಕನ್ನಡಿಯಲ್ಲಿ ಒಂದು ಪುಟ್ಟ ಕೆಂಪು ಬಣ್ಣದ ಬಿಂದಿ ಬಣ್ಣ ಮಾಸಿದರೂ ಹಾಗೆಯೇ ಅಂಟಿಕೊಂಡಿರುತ್ತದೆ‌. ಸ್ನಾನಕ್ಕೆ ಹೋಗುವಾಗ ಇಲ್ಲ ಮುಖ ತೊಳೆದುಕೊಳ್ಳುವಾಗ ದರ್ಪಣದ ಮೇಲೋ ಇಲ್ಲ ಗೋಡೆಯ ಮೇಲೋ ನನ್ನನ್ನು ಅಂಟಿಸಿಟ್ಟು ತಮ್ಮ ಮುಖವನ್ನು ತೊಳೆದುಕೊಳ್ಳುತ್ತಾರೆ. ಆಮೇಲೆ ಮರೆತುಬಿಟ್ಟು ಹಾಗೆ ಹೋಗುತ್ತಾರೆ. ನಾನು ಮಾತ್ರ ಗೋಡೆ ಮೇಲೆ ಅಂಟಿಕೊಂಡಿರಬೇಕು. ಕೆಲವರು ನನ್ನ ಮೇಲಿನ ಪ್ರೀತಿಗೆ ಮತ್ತೆ ವಾಪಾಸು ಬಂದು ಹಣೆಗಿರಿಸಿಕೊಳ್ಳುತ್ತಾರೆ. ಕೆಲವು ಕಂಜೂಸು ಹೆಣ್ಮಕ್ಕಳು ಹುಡುಕಿ ಹುಡುಕಿ ಅದೇ ಬಿಂದಿಯನ್ನು ಹಣೆಗಿರಿಸಿಕೊಳ್ಳುತ್ತಾರೆ. ವರುಷಕ್ಕೊಮ್ಮೆ ಗೋಡೆಗೆಲ್ಲ ಪೇಯಿಂಟ್ ಹಚ್ಚುವಾಗ ನನಗೂ ಬಣ್ಣ  ಬಳಿಯುತ್ತಾರೆ. ಇನ್ನೂ ಬೆಡ್ ರೂಮಿನ ಕಪಾಟಿನ ಮೇಲೆ ಅಮ್ಮನ ಕೆಂಪು ಬಣ್ಣದ ಕಾಸಿನಷ್ಟಗಲದ ಬಿಂದಿ ಗಮನಿಸಿದ್ದೀರಾ. ಎಷ್ಟು ವರುಷವಾದರೂ ಇನ್ನೂ ಹಾಗೆಯೇ ಅಂಟಿಕೊಂಡಿರುತ್ತದೆ. ಅದರ ಮೇಲೆಲ್ಲ ಪೌಡರ್ ಸ್ಪರ್ಷಿಸಿ ಬಿಳಿ ಬೂದಿಯಾಗಿರುತ್ತದೆ. ಅಮ್ಮನ ಮಮತೆ ಕೂಡ ಅದರಲ್ಲಿ ತುಂಬಿರುತ್ತದೆ.


ಇನ್ನು ನೀವೇನಾದರೂ ನೆಂಟರಿಷ್ಟರ ಮನೆಗೆ ಹೋದರೂ ಅದೇ ಅಭ್ಯಾಸ, ಬೊಟ್ಟು ತೆಗೆದಿಟ್ಟು ಮುಖ ತೊಳೆದುಕೊಳ್ಳುವುದು. ಅದರ ಜೊತೆಗೆ ಮರೆವಿನ ಕಾಯಿಲೆ ಇರುವುದರಿಂದ ಅದನ್ನು ಅಲ್ಲೇ ಬಿಟ್ಟು ಹಿಂತಿರುಗುವುದು. ನಿಮ್ಮಿಂದಾಗಿ ನಮಗೆ ಊರಿಂದೂರಿಗೆ ಬಡ್ತಿ. ಇನ್ನೂ ಹೇಳಲು ಅಸಯ್ಯವಾಗುವ ವಿಷಯ. ಅಪ್ಪ ಅಮ್ಮ ಮನೆಯಲ್ಲಿ ಇಲ್ಲದ ದಿನ ಗಮನಿಸಿ ಈ ಗಂಡುಹೈಕಳು ಡೇಟಿಂಗ್ ಗೆ ಅಂತ ಹುಡುಗಿಯನ್ನು ಕರೆದುಕೊಂಡು ಬರುವುದು. ಅವಳು ಕೂಡ ಅವನ ಬೆಡ್ ರೂಮಿನ ವಾಷ್_ಬೇಸಿನ್ ನಲ್ಲಿರುವ ಮಿರರ್ ಮೇಲೆ ಬಿಂದಿ ಅಂಟಿಸಿ ಮರೆತು ಹೋಗಿರುವುದು.  ಇಲ್ಲ ಅವನಿಗೆ ಯಾವಾಗಲೂ ತನ್ನ ನೆನಪಾಗಲಿ ಎಂದು ಬೇಕಂತಲೇ ಆ ಬಿಂದಿಯನ್ನು ಅಂಟಿಸಿಹೋಗಿದ್ದರೆ ನಾನು ಹುಡುಗರ ರೂಮಿನಲ್ಲಿಯೂ ಟಿಕಾಣಿ ಹೂಡಬೇಕಾಗುವ ಕರ್ಮ ಬರುತ್ತದೆ. ಎಲ್ಲಿಯಾದರೂ ಅವನ ಅಮ್ಮನೋ ತಂಗಿಯೋ ಗಮನಿಸಿದರೆ ಅವನಿಗೆ ಬಡಿತ ಗ್ಯಾರೆಂಟಿ. ಹ್ಹ..ಹ್ಹ..ಹ್ಹ..😆😆 ಒಮ್ಮೆ ಯೋಚಿಸಿ. ನಿಮಗೇ ಬಿದ್ದು ಬಿದ್ದು ನಗು ಬರುವುದು.


ನಡುರಾತ್ರಿಯಲ್ಲಿ ಗಂಡ ಹೆಂಡಿರ ಸಲ್ಲಾಪ ಮುಗಿದು , ಗಂಡನ ಕೆನ್ನೆ ಮೇಲೆ ಕೂಡ ನಾನು ಅಂಟಿಕೊಂಡಿರುವುದುಂಟು, ಯಾರಾದರು ಕಂಡು ಹೇಳುವಾಗ ಅವನಿಗೆ ನಾಚಿಕೆ. ಇನ್ನೂ ಈ ಬೇಸಿಗೆ ಬೆವರಿನ ಕಷ್ಟ ಎಷ್ಟು ಹೇಳಿದರೂ ತೀರದು. ಕೆಲವು ಹುಡುಗೀಯರಿಗೆ ದಿನಕ್ಕೆ ಎರಡು ಮೂರು ಬಿಂದಿ ಬೇಕಾಗುತ್ತದೆ. ಬೆವರಿಗೆ ಅಂಟು ಕಿತ್ತುಹೋಗಿ ಬಿಂದಿ ಬಿದ್ದು ಹೋಗುತ್ತದೆ. ಕೆಲವರಿಗೆ ಹಣೆಯಲ್ಲಿನ ಬಿಂದಿ ಬಿದ್ದು ಹೋಗಿರುವುದೇ ತಿಳಿದಿರುವುದಿಲ್ಲ. ಯಾರಾದರೂ ಅವರ ಮುಖ ನೋಡಿ ಹೇಳಿದ ಮೇಲೆಯೇ ಗೊತ್ತಾಗೋದು‌‌. ಕೂಡಲೇ ಪರ್ಸ್ ತೆಗೆದು ಸ್ಟಿಕರ್ ಪ್ಯಾಕ್ನಲ್ಲಿದ್ದ ಒಂದು ಬೊಟ್ಟು ಹಣೆ ಏರುತ್ತದೆ. ಒಂದ್ಚೂರು ಅಂಟು ಇಲ್ಲ ಎಂದು ನನ್ನ ಬೈದುಕೊಳ್ಳುವವರೂ ಇದ್ದಾರೆ.

ಹೇಗಿದೆ ನನ್ನ ಕಥೆ...ಓದಿದಿರಾ?


ಬರೆದವರು: ಸಿಂಧು ಭಾರ್ಗವ್ | ಬೆಂಗಳೂರು-೨೧ ಬರಹಗಾರ್ತಿ...




#ಕನ್ನಡಕಥೆ ಅರ್ಥಪೂರ್ಣ #ಹಾಸ್ಯಲೇಖ‌ನ : #ಕಥೆಹೇಳುವಬಿಂದಿ

#ನುಡಿಜೇನು_ದಿನಪತ್ರಿಕೆ ಯಲ್ಲಿ ಪ್ರಕಟವಾಯಿತು

೦೧/೧೦/೨೦೨೦ ಗುರುವಾರ

ಆಯ್ಕೆ ಮಾಡಿ‌ಪ್ರಕಟಿಸಿದ ಸಂಪಾದಕ ಬಳಗಕ್ಕೆ ವಂದನೆಗಳು💐

#Sindhubhargavquotes  #kannadaliterature #kannadigaru #kannadaarticles #dailynewspaper #kannadanewspaper #magazinewriters #kannadaliterature #kannadigaru #kannadakavana #kannadakavitegalu #octobermonth 01/10/2020 ಗುರುವಾರ

Wednesday 30 September 2020

ಭುವನದ ಭಾಗ್ಯ ದ ವಿಮರ್ಶಕ , ಸಾಹಿತಿ ಡಾ. ಜಿ. ಎಸ್. ಆಮೂರ ರ ಕುರಿತಾದ ಸಂಗ್ರಹ ಲೇಖನ

 ಹಿರಿಯ ಸಾಹಿತಿ, ವಿಮರ್ಶಕರಾದ , ಭಾಷಾನುವಾದಿ ಡಾ.ಶ್ರೀ.ಗುರುರಾಜ ಶ್ಯಾಮಾಚಾರ ಆಮೂರರು (೦೮-೦೫-೧೯೨೫- ೨೮-೦೯-೨೦೨೦ ) ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.



🌼🌼🙏🌼🌼🙏🌼🌼🙏🌼🌼🙏 



ಸಂಗ್ರಹ ಲೇಖನ :-



ಧಾರವಾಡದಲ್ಲಿ ನೆಲೆಸಿರುವ ಕನ್ನಡದ ಖ್ಯಾತ ವಿಮರ್ಶಕ ಮತ್ತು ಸಾಹಿತಿ, ಡಾ. ಜಿ.ಎಸ್. ಆಮೂರ, ಸದಾ ಸಾಹಿತ್ಯಾಸಕ್ತರು. ಇವರ "ಭುವನದ ಭಾಗ್ಯ" ಎಂಬ ಕೃತಿಗೆ ೧೯೯೬ ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.

ಅಧ್ಯಾಪಕರಾಗಿದ್ದಾಗಲೇ ‘ಕಾಮಿಡಿಯ ಪರಿಕಲ್ಪನೆ’ಎಂಬ ಮಹಾಪ್ರಬಂಧ ಬರೆದು ಪಿ.ಎಚ್.ಡಿ. ಪಡೆದರು.ಕಳೆದ ಐದು ದಶಕಗಳಿಂದಲೂ ವಿಮರ್ಶಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಡಾ.ಅಮೂರ ಅವರು ಇಂಗ್ಲಿಷ್ ಹಾಗೂ ಕನ್ನಡ ಎರಡೂ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದಾರೆ. ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿ.ಏ(ಗೌರವ) ಪದವಿ ಪಡೆದರು. ಆ ಬಳಿಕ ಕುಮಟಾ ಹಾಗು ಗದಗ ಹಾಗು ಔರಂಗಾಬಾದ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ೧೬ ವರ್ಷ ಸೇವೆ ಸಲ್ಲಿಸಿದರು.

ಆಧುನಿಕ ಕನ್ನಡಸಾಹಿತ್ಯ ವಿಮರ್ಶಕರಲ್ಲಿ ಅತಿ ಅಗ್ರಮಾನ್ಯರಲ್ಲೊಬ್ಬರೆಂದು ಪರಿಗಣಿಸಲ್ಪಟ್ಟಿರುವ ಡಾ. ಅಮೂರ ರವರು, "ಕರ್ನಾಟಕ ರಾಜ್ಯಸರ್ಕಾರಪ್ರದಾನಮಾಡುವ, ಪಂಪ ಪ್ರಶಸ್ತಿವಿಜೇತರು" . 


ಕನ್ನಡ ಹಾಗೂ ಇಂಗ್ಲೀಷ್ ಸಾಹಿತ್ಯಪ್ರಾಕಾರಗಳಲ್ಲಿ ಪ್ರಕಾಂಡ ಪಂಡಿತರೆಂದು ಪರಿಗಳಿಸಲ್ಪಟ್ಟಿರುವ ಡಾ. ಅಮೂರರು, ಕನ್ನಡ ಸಾಹಿತ್ಯವನ್ನು ಇಂಗ್ಲೀಷ್ ಓದುಗರಿಗೆ ಪರಿಚಯಿಸಿದ್ದಾರೆ. ಇಂಗ್ಲೀಷ್ ಹೇಳಿಕೊಡುವ ಭಾಷೆಯಾದರೆ, ಬರೆಯುವುದು, ಕೃತಿರಚನೆಗಳು ಸಾಮಾನ್ಯವಾಗಿ ಕನ್ನಡಭಾಷೆಯಲ್ಲಿ. ಧಾರವಾಡ, ಔರಂಗಬಾದ್ ; ಹೀಗೆ ಹೋದಡೆಯೆಲ್ಲಾ ಅಪಾರ ಶಿಷ್ಯರನ್ನು ಗಳಿಸಿದ್ದಾರೆ. ವಿಮರ್ಶೆಯ ಜೊತೆಗೆ, ಸತತ ಓದು, ಬರವಣಿಗೆ, ತಮ್ಮ ಅಧ್ಯಾಪನ ಕಾರ್ಯ, ಆಡಳಿತಕಾರ್ಯಗಳ ಜೊತೆಗೆ ಎಲ್ಲವನ್ನು ಸರಿತೂಗಿಸಿಕೊಂಡು ತಾವೂ ಬೆಳೆದು, ತಮ್ಮ ಅಪಾರ ಶಿಷ್ಯವೃಂದಕ್ಕೆ ಮಾರ್ಗದರ್ಶನ ಮಾಡುತ್ತಿರುವ ರೀತಿ, ಅನನ್ಯ.

ನೃಪತುಂಗ ಪ್ರಶಸ್ತಿ - 2020 ಕ್ಕೆ ಕೂಡ ಭಾಜನರಾಗಿದ್ದರು.


ಹಿರಿಯ ಸಾಹಿತಿಗಳ ಆತ್ಮಕ್ಕೆ ಶಾಂತಿ ಕೋರೋಣ... 🙏🌼

🌼🌼🌼🌼🌼🌼🌼🌼🌼🌼🌼🌼🌼🌼🌼🌼

ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳ ಸಂಗ್ರಹ.....

ಕೃಪೆ : ವಿಜಯವಾಣಿ, ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ ಪೇಪರ್ ದಿನಪತ್ರಿಕೆ ದಿನಾಂಕ : ೨೯/೦೯/೨೦೨೦ 
























Saturday 26 September 2020

ಗಾಯನ ನಿಲ್ಲಿಸಿದ ಕೋಗಿಲೆ SPB balasubramaniam

ಹಾಡು ನಿಲ್ಲಿಸಿದ ಗಾನ ಕೋಗಿಲೆ:-










ಸುಮಾರು ನಲವತ್ತು ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಬಹುಭಾಷೆಗಳಲ್ಲಿ ಹಾಡಿದ ಭಾರತೀಯ ಜನಪ್ರಿಯ ಸಂಗೀತಗಾರ, ಸಂಗೀತ ನಿರ್ದೇಶಕ, ಡಬ್ಬಿಂಗ್ ಆರ್ಟಿಸ್ಟ್ ಭಿನ್ನ ವಿಭಿನ್ನ ಶೈಲಿಯ ಗಾಯನದ ಮೂಲಕ  ಪ್ರಖ್ಯಾತಿ ಪಡೆದ ಎಸ್. ಪಿ. ಬಾಲಸುಬ್ರಹ್ಮಣ್ಯಂ ಇಂದು ನಮ್ಮನ್ನೆಲ್ಲ ಅಗಲಿದ್ದಾರೆ.

ಅವರ ಹಾಡುಗಳ ಸಂಗ್ರಹ ಶ್ರೋತೃಗಳಿಗೆ ಹಾಗು  ಸಂಗೀತಲೋಕಕ್ಕೆ ಒಂದು ಆಸ್ತಿ.
ನೋವು ನಲಿವಿನಲ್ಲಿ ಅವರ ಹಾಡುಗಳೇ ಸ್ಪೂರ್ತಿ.
ಕೆಲವು ಹಾಡುಗಳ ಮೊದಲ ಸಾಲುಗಳನ್ನು ಬರೆದಿರುವೆನು. ಸ್ನೇಹ, ಪ್ರೀತಿ, ಸಂಸಾರ, ದಾಂಪತ್ಯ, ಕರುನಾಡು, ಕಾವೇರಿ, ಜೀವನದ ಸಾರ ತಿಳಿಸುವ ಒಂದಷ್ಟು ಹಾಡುಗಳ ಸಂಗ್ರಹ ನಿಮಗಾಗಿ. ಓದುತ್ತಾ ಗುನುಗಲು ಶುರುಮಾಡಿ. ಸರ್ವಂ ನಾದಮಯಂ.

1) ಕೈತುತ್ತು ಕೊಟ್ಟವೇ ಐ ಕವ್ ಮೈ ಮದರ್ ಇಂಡಿಯಾ
2) ಅಂಬರವೇರಿ ಅಂಬರವೇರಿ ಸೂರ್ಯನು ಬಂದಾನೋ
ಥಳ ಥಳ ಥಳಾ ಜಗ ಥಳ ಥಳ
3) ಮುತ್ತು ಮುತ್ತು ನೀರ ಹನಿಯ ತಾಂ ತನನಾ ಎಂದು ನಲಿಯುತ
4) ಮನಸಾರೆ ಹಕ್ಕಿಯಾಗಿ ಮುಗಿಲಾಗೇ ತೇಲಿ ತೇಲಿ
5) ಈ ಸುಂದರ ಬೆಳದಿಂಗಳ ಈ ಕಂಪಿ‌ನ ಅಂಗಳದಲಿ
ನನ್ನ ನಿನ್ನ ನಡುವಿನಲೀ ಪ್ರೇಮ ಚಿಗುರಲಿ ಎಂದರು//
6) ನಮ್ ಕಡಿ ಸಾಂಬಾರ್ ಅಂದ್ರೆ ನಿಮ್ ಕಡಿ ತಿಳಿಯಂಗಿಲ್ಲ
7) ಬಾರೆ ಸಂತೆಗೆ ಹೋಗುವಾ ಬಾ, ಸಿನಿಮಾ ಥಿಯೇಟರ್ ಲ್ಲಿ ಕೂರುವ ಬಾ...
8) ಕುಚುಕು ಕುಚುಕು ಕುಚುಕು ನಾ ಚಡ್ಡಿ ದೋಸ್ತಿ ಕಣೋ ಕುಚುಕು ಎಂದು ಗೆಳೆಯನ ಹೊಗಳುತ...
9) ರಕ್ಷಕ ರಕ್ಷಕ ಆಪ್ತ ರಕ್ಷಕ ಆಪತ್ತ ಕಳೆವನು
10) ಅಣ್ಣಯ್ಯ ತಮ್ಮಯ್ಯ ನಂಜುಡೇಶ್ವರ ನಾನಯ್ಯ ಎಂದು ಅಭಯ ನೀಡಿದರು//

11) ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ , ಲೋಕದಲ್ಲಿ ಸ್ನೇಹ ಚಿರಂಜೀವಿಯಾಗಿರಲಿ,
12) ಮಾಮರವೆಲ್ಲೋ ಕೋಗಿಕೆ ಎಲ್ಲೋ ಏನೀ ಸ್ನೇಹ ಸಂಬಂಧ ಎಂದರು//
13) ಅಂಕುಡೊಂಕು ದಾರಿಬ್ಯಾಡ, ಸುಂಕ ಇಲ್ಲದ ಊರೇ ಬ್ಯಾಡ
14) ನಗುವ ನಯನ ಮಧುರ ಮೌನ ಎಂದು ತಿಳಿಸುತ
15) ಮದ್ಯರಾತ್ರಿಲಿ ಹೈವೆ ರೋಡಲ್ಲಿ, 16) ಸ್ವಾತಿ ಮುತ್ತಿನ ಮಳೆ ಹನಿಯೇ,
17) ಯಾವುದೋ ಈ ಬೊಂಬೆ ಯವುದೋ,

18) ನೋಡಮ್ಮ ಹುಡುಗಿ ಕೇಳು ಸರಿಯಾಗಿ ಎಂದು ಹರೆಯದ ಹುಡುಗಿಗೆ ಬುದ್ದಿ ಮಾತ ಹೇಳಿದರು//
19) ಯುಗಯುಗಗಳೇ ಸಾಗಲಿ ನಮ್ಮ ಪ್ರೇಮ ಶಾಶ್ವತ 20)ಯಾರಮ್ಮ ಇವನು ನಶೆಯ ಹುಡುಗ

21) ಶ್ರೀಗಂಧ ಶ್ರೀಗಂಧ ಈ ಅಂದ ಈ ಅಂದ ಶ್ರೀಗಂಧ
22) ಏನಾಯಿತು ನನಗೀದಿನ ಏನಾಯಿತು
23) ಗಿಣಿಯೇ ಪಂಚರಂಗಿ ಗಿಣಿಯೇ
24) ಪ್ರೇಮಲೋಕದ ಪಾರಿಜಾತವೇ...
25) ಚೆಲುವೆ ನೀನು ನಕ್ಕರೆ ಓ ಹೋ ಹೋ
26) ಮೀನಾಕ್ಷಿ ನಿನ್ನ ಕಣ್ಣ ಮೇಲೆ ಊರ ಜನರ ಕಣ್ಣು
27) ಸೇವಂತಿಯೇ ಸೇವಂತಿಯೇ ನನ್ನಾಸೆ
28) ಎದೆಯಲ್ಲಿ ಘಮ್ ಅಂತಿಯೇ ಎಂದು ನಾಚಿದರು//

29) ಏರಿ ಮೇಲೆ ಏರಿ ಮೇಲೆ ಕೆಳಗೆ ಹಾರಿ ಮನ್ಸು ಕುಣಿತೈತಲ್ಲೋ
30) ಮಾರಿಕಣ್ಣು ಹೋರಿಮ್ಯಾಲೆ , ಕಟ್ಕಕನ್ನ ...
31) ಒಂಟಿ ಒಂಟಿಯಾಗಿರುವುದು ಬೋರು ಬೋರು
32) ಸುಂದರಿ ಸುಂದರಿ ಸುರಸುಂದರಿ ಸುಂದರಿ ನಿನ್ನ ಪ್ರೇಮದ ಮೋರೆಯನೊಮ್ಮೆ ತೋರುವೆಯಾ
33)/ಮಾಮ ಮಾಮ ಮಸ್ತಿ, ದೊಡ್ಡವರೆಲ್ಲ ಜಾಣರೆಲ್ಲ
34) ಭಲೆ ಭಲೇ ಚಂದದ ಚೆಂದುಟಿ ಹೆಣ್ಣು ನೀನು
35) ಹಳ್ಳಿ ಲಾವಣಿಯಲಿ ಲಾಲಿ ಸುವ್ವಲಾಲಿ
36) ಪ್ರೀತಿಯೇ ನನ್ನುಸಿರು,
37) ಲೋಕವೇ ಹೇಳಿದ ಮಾತಿದು, ವೇದದ ಸಾರವೇ ಕೇಳಿದು,
38) ಬಣ್ಣ ನನ್ನ ಒಲವಿನ ಬಣ್ಣ, ನನ್ನ ಬದುಕಿನ ಬಣ್ಣ
ಎಂದು ಪ್ರೇಮದೇವತೆಯ ಹೊಗಳಿದರು//

39) ನಾ ಹಾಡಲು , ನೀವು ಹಾಡಬೇಕು,
40) ಹಾವಿನ ದ್ವೇಷ ಹನ್ನೆರಡು ವರುಷ ,
41) ನನ್ನ ರೋಷ ನೂರು ವರುಷ
42) ನೀನು ನೀನೆ ಇಲ್ಲಿ ನಾನು ನಾನೇ,
44) ನನ್ನ ಹಾಡು ನನ್ನದು ಎಂದರೂ
45) ಪವಡಿಸು ಪರಮಾತ್ಮ ಶ್ರೀವೆಂಕಟೇಶ ಎಂದು ಭಗವಂತನಿಗೆ ನಮಿಸಿದರು//

46) ಮನಸೇ ಬದುಕು ನಿನಗಾಗೀ ಬವಣೆ ನಿನಗಾಗೀ..
47) ಬಣ್ಣ ನನ್ನ ಒಲವಿನ ಬಣ್ಣ, 48) ಪ್ರೇಮ ಗೀಮ ಜಾ‌ನೇ ದೋ,
49) ನಲಿವ ಗುಲಾಬಿ ಹೂವೇ... ಮುಗಿಲ‌ ಮೇಲೇರಿ ನಗುವೆ

50) ಪ್ರೇಮದ ಕಾದಂಬರಿ ಬರೆದೆನು ಕಣ್ಣೀರಲಿ
ಎಂದು ವಿರಹ ಗೀತೆ ಹಾಡಿದರು//

51) ತಾಳಿ ಕಟ್ಟುವ ಶುಭವೇಳೆ ಕೈಯಲ್ಲಿ ಹೂವಿನ ಮಾಲೆ
52) ದೀಪಾವಳಿ ದೀಪಾವಳಿ ಗೋವಿಂದ ಲೀಲಾವಳಿ
ಮಾವ ಮಗುವಾದನು ಎಂದು ಅಳಿಯ ಮಾವನ ಸಲುಗೆ,
53) ನಮ್ಮ ಮನೆಯಲಿ ದಿನವು ಬೆಳಗೋ ಚೈತ್ರವೇ
54) ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ
55) ಹೊಡಿತವ್ಳೇ ಬಡಿತವ್ಳೇ ನನ್ನ ಹೆಂಡ್ತೀ...
56) ನೀನೇ ನನ್ನ ನೀನೇ ನನ್ನ ತುಂಬಾ ತುಂಬಾ ಪ್ರೀತಿ ಮಾಡೋನು,
57) ಮಲ್ನಾಡ್ ಅಡಿಕೆ ಮೈಸೂರ್ ವಿಳ್ಯದೆಲೆ ಎಂದು ಹೆಂಡತಿಯ ಜೊತೆಗೆ ಹೆಜ್ಜೆಹಾಕಲು ಪ್ರೇರೇಪಿಸಿದರು//

58) ಸಂಗೀತವೇ ನನ್ನ ಉಸಿರು,ಚಪ್ಪಾಳೆಯೇ ನನ್ನ ದೇವರು
59) ಕನ್ನಡ ನಾಡಿನ ಜೀವನದಿ ಈ ಕಾವೇರಿ
60) ಕೇಳಿಸದೇ ಕಲ್ಲು ಕಲ್ಲಿನಲಿ ಕನ್ನಡ ನುಡಿ
61) ಹಳ್ಳಿ ಮೇಷ್ಟ್ರೇ ಹಳ್ಳಿ ಮೇಷ್ಟ್ರೇ ಪಾಠ ಮಾಡಿ ಬನ್ನಿ
62) ಕಲ್ಲಾದರೆ ನಾನು ಕಾವೇರಿಯ ಮಡಿಲಲಿ ಇರುವೆ
63) ಕಾವೇರಮ್ಮ ಕಾಪಾಡಮ್ಮ ಈ ದೋಣಿಯ ತೇಲಿಸು
64) ಈ ಕನ್ನಡ ಮಣ್ಣನು ಮರಿಬೇಡ ಓ‌ ಅಭಿಮಾನಿ
65) ಇದೇ ನಾಡು ಇದೇ ಭಾಷೆ ಎಂದೆಂದೂ ನಿನ್ನದಾಗಿರಲಿ
ಎಂಬ ಅಭಿಲಾಷೆ ಹೊಂದಿದವರು//

66) ಕೂರಕುಕ್ರಳ್ಳಿ ಕರೆ, ಈ ಭಯ ಬಿಸಾಕಿ ಲವ್ ಮಾಡಿ
67) ಮಂಡ್ಯದ ಗಂಡು, ಮುತ್ತಿನ ಚಂಡು
68) ನೋಡಿ ಸ್ವಾಮಿ ನಾವಿರೋದು ಹೀಗೆ
69) ನಮಗೆ ಮದುವೆ ಬೇಡ ಸ್ವಾಮಿ
70) ನೂರೊಂದು ನೆನಪು ಎದೆಯಾಳದಿಂದ
ಹಾಡಾಗಿ ಬಂತು ಆನಂದದಿಂದ
71) ಏನೊ ಮಾಡಲು ಹೋಗಿ, ಏನು ಮಾಡಿದೆ ನೀನು,
72) ಸಂತ ಅರಳುವ ಸಮಯ , ಮರೆಯೋಣ ಚಿಂತೆಯಾ
73) ಅಂತರಂಗದ ಹೂಬನಕೆ, 
74) ಕೇಳದೇ ನಿಮಗೀಗ ದೂರದಿಂದ ಯಾರೋ
75) ನೀನಿರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ
76) ನೀನೇ ಸಾಕಿದ ಗಿಣಿ, ನಿನ್ನ ಮುದ್ದಿನ ಗಿಣಿ
77) ತನುವಿನ ಮನೆಗೆ ಬಾ ಅತಿಥಿ... ಬಾ ಅತಿಥಿ...
78) ಚಾಮುಂಡಿ ತಾಯಿ ಆಣೆ ನಾನೆಂದು ನಿಮ್ಮೋನೇ
79) ಮಡಿಕೇರಿ ಸಿಪಾಯಿ ಮುತ್ ತಾತಮರೇ‌ನ...
80)ಇದೆ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ

81) ಈ ಭೂಮಿ ಬಣ್ಣದ ಬುಗುರಿ ಆ ಶಿವನೇ ಛಾಟಿ ಕಣೋ
ನಿಂತಾಗ ಬುಗುರಿ ಆಟ, ಎಲ್ಲಾರು ಒಂದೇ ಓಟ
ಕಾಲಾನೇ ಕ್ಷಣಿಕ ಕಣೋ
82) ದೇವರು ಹೊಸೆದ ಪ್ರೇಮದ ದಾರ.....
83) ನಮ್ಮ ಊರ ದೀಪ ಆರಿಹೋಯಿತಲ್ಲೋ.... ಎಂದು ಶ್ರೋತೃಗಳಿಗೆ ಕಣ್ಣೀರು ಹಾಕಿಸುತಲೇ ಹೊರಟುಹೋದರು

- ಸಿಂಧು ಭಾರ್ಗವ್ | ಬೆಂಗಳೂರು-೨೧
#spbalasubramaniam #ಭಾವಪೂರ್ಣ_ಶ್ರದ್ಧಾಂಜಲಿ
#ಎಸ್_ಪಿ_ಬಾಲಸುಬ್ರಹ್ಮಣ್ಯಂ


Friday 25 September 2020

ಎಸ್. ಪಿ. ಬಾಲಸುಬ್ರಮಣ್ಯಂ ಇನ್ನಿಲ್ಲ

 


#ಎಸ್_ಪಿ_ಬಾಲಸುಬ್ರಹ್ಮಣ್ಯಮ್ ಅವರು #ಇನ್ನಿಲ್ಲ  ನಿಮಗಿದೋ #ಭಾವಪೂರ್ಣ_ಶ್ರದ್ಧಾಂಜಲಿ
 #spbalasubramaniam #nomore 
ಹಾಡು ನಿಲ್ಲಿಸಿದ ಕೋಗಿಲೆ 🎶🎼🎤
ಜೀವನ್ಮರಣದ ನಡುವೆ ಹೋರಾಡಿ
ಅಭಿಮಾನಿಗಳ ಮನ ಗೆದ್ದು, ಎದೆಯಲ್ಲಿ ಶಾಶ್ವತವಾಗಿ ನೆಲೆಸಿದ 
ಗಾನ ಕೋಗಿಲೆ, ಅಮರ ಜ್ಯೋತಿ
"SP ಬಾಲಸುಬ್ರಹ್ಮಣ್ಯಂ" 
ನಟ, ಸಂಗೀತಗಾರ, ಮಿಮಿಕ್ರಿಗಾರ, ಡಬ್ಬಿಂಗ್ ಆರ್ಟಿಸ್ಟ್, ಡೈರೆಕ್ಟರ್, ಸಂಗೀತ ನಿರ್ದೇಶಕರು, ಪದ್ಮಶ್ರೀ ಪ್ರಶಸ್ತಿ ವಿಜೇತರು, ಪದ್ಮಭೂಷಣ ಪ್ರಶಸ್ತಿ ವಿಜೇತರು, ಫಿಲ್ಮ್‌ಫೇರ್ ಪ್ರಶಸ್ತಿ ವಿಜೇತರು, ಭಾವಪ್ರಧಾನತೆಯ ಭಕ್ತಿಗೀತೆಗಳ ಹಾಡುಗಾರ 
"SP ಬಾಲಸುಬ್ರಹ್ಮಣ್ಯಂ"
😞😞😞😞😞😞😞😞 ಅವರಿಗೆ,
ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುವೆನು.
#ನವಪರ್ವ_ಫೌಂಡೇಶನ್ #sindhubhargavquotes #ಬಾಲಸುಬ್ರಹ್ಮಣ್ಯಂ    





Thursday 24 September 2020

ಆಟೋ ಹಿಂದಿನ ಸಾಲುಗಳು ಶಂಕರ್ ನಾಗ್ ಅಭಿಮಾನಿ


Dedicating to Shankar Nag 30th Death Anniversary...
Birthday: November/09/1954
Death date : 30/September/1990
I'm Big Fan of  Shankarnag Sir

ಇಂದು ಶಂಕರ್ ನಾಗ್ ಅವರ  30ನೇ ಪುಣ್ಯತಿಥಿ....1990 September 30‌ರಂದು ಕಾರು ಅಪಘಾತದಲ್ಲಿ ನಿಧನರಾದರು. 

ಅವರೊಬ್ಬ ಪಾದರಸ, ಬಹುಮುಖ ಪ್ರತಿಭೆ. 
ಉತ್ಸಾಹಿ ತರುಣರಾಗಿದ್ದರು.
ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು. ನನ್ನ ಕ್ರಿಯಾತ್ಮಕ ಕ್ರಿಯಾಶೀಲತೆಯನ್ನು ಕಾಪಿ ಮಾಡುವುದು ತಪ್ಪು. ಪ್ರತಿಭೆಗೆ ಪ್ರೋತ್ಸಾಹ ನೀಡಿ. ಎಂಬುದೇ ಕೋರಿಕೆ. 
 ಮಲಗಿದ್ದವರ ಎಬ್ಬಿಸಿ ಕೆಲಸ ಮಾಡಲು ಹೇಳುತ್ತಿದ್ದರು. ಅಂದರೆ ಉದಾಶಿನ ಮಾಡಲು ಬಿಡುತ್ತಿರಲಿಲ್ಲ. ಗೆಳೆಯರಿಗೆ ಸಹಾಯ ಮಾಡುತ್ತಿದ್ದರು. ಸ್ನೇಹ ಪ್ರೀತಿ ಪ್ರೋತ್ಸಾಹ ಎಥೇಶ್ಚವಾಗಿ ಹಂಚುತ್ತಿದ್ದರು.
ಸಮಯ ಹಾಳು ಮಾಡಲು ಬಯಸುತ್ತಿರಲಿಲ್ಲ. 
ಮೂವತ್ತು ವರ್ಷ ಮುಂದಿನ ಆಲೋಚನೆ ಅವರಲ್ಲಿತ್ತು. ಬೆಂಗಳೂರಿಗೆ ಮೆಟ್ರೋ ಬರಬೇಕೆಂದು ೧೯೮೦ ಆಸುಪಾಸಿನಲ್ಲಿ ಹೇಳುತ್ತಿದ್ದರು. 
ಹೆತ್ತವರ ಮುದ್ದಿನ ಮಗ, ಅಣ್ಣ ಅನಂತನಾಗ್ 'ಗೆ ಬೆನ್ನೆಲುಬಾಗಿದ್ದರು.
ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದ್ದರು.
ಮಾಲ್ಗುಡಿ ಡೇಸ ಹಿಂದಿಭಾಷೆಯಲ್ಲಿ ಧಾರಾವಾಹಿ ನಿರ್ದೇಶನ ಮಾಡಿದ್ದರು. 
ಭಾರತೀಯ ಸಿನಿರಂಗ ಕಂಡ ಅದ್ಭುತ ಹೊಳೆಯುವ ವಜ್ರ. 

Quickness, Smiling Face, Active, Attractive, Action king, Dancer,Karate king, Director, Late. Shankar Nag !! 🌼🙏 30th death Anniversary.