Friday 27 January 2023

ಕವಿ‌ ಕೃತಿ ಪರಿಚಯ: ಭಾವನೆಗಳಿಲ್ಲದವಳ ಭಾವತೀರಯಾನ ಗಜಲ್ ಸಂಕಲನ

 ಕವಿ‌ ಕೃತಿ ಪರಿಚಯ: ಭಾವನೆಗಳಿಲ್ಲದವಳ ಭಾವತೀರಯಾನ

ಕನ್ನಡ ಗಜಲ್ ಸಂಕಲನ -೨೦೨೧

ಅಮೃತಾ ಎಂ ಡಿ.

ನೇರಿಶಾ ಪ್ರಕಾಶನ ಚಿತ್ರದುರ್ಗ.

Publisher Contact number: 8277889529

Mail Id: 

Nerishaprakashanakadur2020@gmail.com

(ಕರ್ನಾಟಕ ಸರ್ಕಾರ ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಇವರ ಧನ ಸಹಾಯ ಪಡೆದ ಕೃತಿ)




🌼🌼🌼🌼🌼🌼🌼🌼🌼🌼🌼🌼🌼🌼

ಕವಯತ್ರಿ ಅಮೃತಾ ಎಂ ಡಿ ಅವರ ಸ್ವರಚಿತ ಚೊಚ್ಚಲ ಕನ್ನಡ ಗಜಲ್ ಸಂಕಲನ ಇದಾಗಿದೆ. ಕನ್ನಡ ಗಜಲ್ ಗಳ ಮೂಲಕ ಸಾಹಿತ್ಯ ಲೋಕಕ್ಕೆ ಪದಾರ್ಪಣೆ ಮಾಡಿದ್ದಾರೆ. ಗಜಲ್ ಎಂಬುದು ಅರಬ್ಬೀ ಪದ. ಉರ್ದು ಸಾಹಿತ್ಯದಲ್ಲಿ ೨೫ಕ್ಕೂ ಅಧಿಕ ಕಾವ್ಯ ಪ್ರಕಾರಗಳಿವೆ. ಅದರಲ್ಲಿ ಗಜಲ್, ರುಬಾಯಿ, ಶಹರ್ ಕೂಡ ಒಳಗೊಂಡಿದೆ. ಅದರಲ್ಲಿ "ಗಜಲ್ ಉರ್ದು ಕಾವ್ಯದ ರಾಣಿ" ಎನ್ನುವರು. ರುಬಾಯಿ ಶಹರ್ ಪ್ರಸ್ತುತ ಕನ್ನಡದಲ್ಲಿ ಕೂಡ ಸದ್ದು ಮಾಡುತ್ತಿದೆ. 



ನವನವೀನ ಸಾಹಿತ್ಯ ಪ್ರಕಾರಗಳ ಕಲಿತು ಬರೆಯುವ ಯುವ ಕವಿಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿರುವುದು ಸಾಹಿತ್ಯ ಕ್ಷೇತ್ರದಲ್ಲಿ ಭರವಸೆ ಮೂಡಿಸುವ ಕವಿಗಳನ್ನು ಹೊಂದಲು ಸಾಧ್ಯವಾಗಬಹುದು ಎಂಬ ಅಭಿಪ್ರಾಯ ಹಿರಿಯರಲ್ಲಿ ಮೂಡಿದೆ. ಈ ಗಜಲ್ ಎಂದರೆ ಹೆಂಗಸರ ಸಂಭಾಷಣೆ, ಪ್ರೀತಿ, ಅನುರಾಗ, ಭಾವನೆಗಳ ವ್ಯಕ್ತಪಡಿಸುವುದು. ಮತ್ಲಾ, ಕಾಫಿಯಾ, ರದೀಪ ಮಕ್ತಾಗಳಿಂದ ರಚಿಸಲ್ಪಡುತ್ತದೆ. ಉಪಮೆ, ರೂಪಕಗಳ ಮೂಲಕ ಇನ್ನಷ್ಟು ಮೆರಗುನೀಡಬಹುದು. ಕನ್ನಡದಲ್ಲಿ ಮೃದು ಮಧುರ ಭಾವಮೂಡಿಸುವ ಗಜಲ್ ಗಳ ಪರಿಚಯಿಸಿದರು "ಶಾಂತರಸರು". ಗಜಲ್ ಗಳು ಓದಿದವರಿಗೆ ಹೃಯದವನ್ನು ನಾಟುವಂತಿರಬೇಕು. ಚಿಂತನೆಗೆ ತಳ್ಳಬೇಕು, ಮನ ಚಡಪಡಿಸುವಂತಿರಬೇಕು. ನಂತರದಲ್ಲಿ ಜೀವನ ಎಲ್ಲ ಆಯಾಮಗಳಲ್ಲಿಯೂ ಕಷ್ಟ-ಸುಖಗಳನ್ನು ತೋಡಿಕೊಳ್ಳಲು ಗಜಲ್ ರೂ‌ಪ ನೀಡಲಾಯಿತು. ಅಲ್ಲದೇ ಸಮಾಜಮುಖಿಯಾಗಿ ಬರೆಯಲಾರಂಭಿಸಿದರು.


ಇನ್ನು ಕವಯಿತ್ರಿ ಅಮೃತಾ ಎಂ ಡಿ ಅವರ ಬಗೆಗೆ: 



ಮೈಸೂರಿನ ಮಹಾರಾಣಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿಯಾದ ಅಮೃತಾ ಡಿ. ಎಂ. ಅವರಲ್ಲಿನ ಹೊಸಹೊಸದನ್ನು ಕಲಿಯುವ ಆಸಕ್ತಿಯೇ ಈ ಗಜಲ್ ಗಳ ರಚನೆಗೆ ಸ್ಪೂರ್ತಿಯಾಗಿದೆ. ಇದರಲ್ಲಿನ ಪ್ರತಿ ಮಿಸ್ರಾಗಳು ಸುಲಭದಲ್ಲಿ ಓದಿಸಿಕೊಂಡು ಹೋಗುತ್ತವೆ. ಇವರು ಬಹಳ ಗಂಭೀರವಾಗಿ ಜೀವನವನ್ನು ನೋಡುವಂತಿದೆ. "ಶಬರಿ" ಎಂಬ ಕಾವ್ಯನಾಮದಡಿಯಲ್ಲಿ ಸುಮಾರು ೬೪ ಗಜಲ್ ಗಳನ್ನು ಬರೆದಿರುವ ಕವಯಿತ್ರಿ ತಮ್ಮನ್ನೇ ತಾವು ಪ್ರಶ್ನಿಸಿಕೊಳ್ಳುತ್ತಾ, ಈ ಸಮಾಜದಲ್ಲಿನ ದುಸ್ಥಿತಿಗಳ ಕಂಡು ಮರಗುವರು, ಈ ಸಮಾಜ, ಪ್ರಕೃತಿಯ ಉಳಿವಿಗಾಗಿ ಇನ್ನಾದರು ಬದಲಾಗಿ ಎಂದು ಕರೆ ನೀಡುವರು. ಬದುಕಿನಲ್ಲಿ ಎದುರಾಗುವ ಕಷ್ಟಗಳ ವಿರುದ್ಧ ಹೋರಾಡಲು ಮನಸ್ಸು ಗಟ್ಟಿಯಾಗಿಸಿಕೊಳ್ಳಬೇಕು ಎನ್ನುವರು. 


****

ಗಜಲ್ ೩ ಪು.ಸಂ೩ ಅದರಲ್ಲಿ ಒಂದು ಶೇರ್


ಬಗ್ಗಲೇ ಬೇಕು, ಮಂಡಿಯೂರಿ ನಿಲ್ಲಲೇ ಬೇಕು

ಗರ್ವವೂ ಕರಗುವಾಗ|

ನಾಲ್ಕು ಜನರಿಗೆ ದಾರಿದೀಪವಾಗಬೇಕು 

ಸಾವು ಅರಸಿ ಬರುವ ಮುನ್ನ|| 


ಅಹಂಕಾರ ಕರಗುವಾಗ ಮಂಡಿಯೂರಿ ನಿಲ್ಲಲೇ ಬೇಕಾಗುತ್ತದೆ. ಸಾವು ಅರಸಿ ಬರುವ ಮೊದಲು ನಾಲ್ಕು ಜನರಿಗೆ ಸಹಾಯ ಮಾಡಿರಿ. ಬದುಕನ್ನು ಅರ್ಥಪೂರ್ಣವಾಗಿ ಜೀವಿಸಿರಿ ಎಂಬ ಸಂದೇಶ ಈ ಶೇರ್ ನಲ್ಲಿದೆ. ಪ್ರಕೃತಿಯ ಮಡಿಲಿಗೆ ಮೀಟುವುದು ಇರಿಯುವುದು ನೀವು ಕಲಿತ ವಿದ್ಯೆಯೇನು ಮೂಢನಂಬಿಕೆಯುಳ್ಳವರೆ ಎಚ್ಚೆತ್ತುಕೊಳ್ಳಿ ಪ್ರಕೃತಿಯ ವಿನಾಶಕ್ಕೆ ತಳ್ಳದಿರಿ ಎನ್ನುವರು. 


ಗಜಲ್ ೧೫ ಪು.ಸಂ.೧೫ ಐದು ಶೇರ್ ಇರುವ ಗಜಲ್ 

ಅನಂತದೆಡೆಗೆ ಧಾವಿಸುವ ಆಸೆ ಹುಚ್ಚಾಟವೆನಿಸಿದೆ| ಕಾರಿರುಳ ದರ್ಶನ ಕೂಪದಲ್ಲೇ ಬೇಯಿಸಿದೆ ಗಾಲಿಬ್|| ಶಬರಿಯ ಜೀವಮಾನವು ಉತ್ತರಕ್ಕಾಗಿ ಅಲೆಯುತ್ತಿದೆ| ಪ್ರಶ್ನೆಗಳ ತಾಣವೇ ಎದುರು ನಿಂತು ನರ್ತಿಸಿದೆ ಗಾಲಿಬ್||

ಭೀತಿಯೊಂದು ಎದುರಾಗಿ ಕಾಡುತ್ತಿದೆ ಸತ್ಯ ಮಿಥ್ಯಗಳ ಸೆಣಸಾಟದಲ್ಲಿ ಬಾಳು ಮರೀಚಿಕೆಯಂತೆ ಎನ್ನುವರು‌. ಜೀವನದ ಬಗ್ಗೆ ಗಂಭೀರ ಚಿಂತನೆ ಮಾಡುವಂತಹ ಗಜಲ್ ಎನ್ನಬಹುದು.


 ಗಜಲ್ ೨೦ ಪು.ಸಂ೨೦ ಇದರ ನಡುವೆ ಇನಿಯನ ನೆನಪಾಗಿ ರಸಮಯ ಕ್ಷಣಗಳ ಕಳೆಯ ಬಯಸುವ ಕವಯಿತ್ರಿ 


ಬೇಹುಗಾರಿಕೆ ಸಾಕಿನ್ನು ಮೃದು ಸ್ಪರ್ಶವ ನೀಡಿನ್ನು ಇನಿಯ|

ಸರಸ ಸಲ್ಲಾಪದಲ್ಲಿ ಮನವು ಮೀಯಬೇಕಿನ್ನು ಇನಿಯಾ|| 

ತುಸು ತರಲೆ ತುಂಟಾಟವ ನೀ ಮಾಡುತ್ತಲೇ ಇರಬೇಕು|

ಪೋಲಿಯೆಂದು ಶಬರಿ ಕೋಪಗೊಳ್ಳಬೇಕಿನ್ನು ಇನಿಯಾ|| ಎನ್ನುವರು.‌ 


ಪ್ರೀತಿಯ ಹಂಬಲಿಸದವರು ಯಾರಿಲ್ಲ ಹೇಳಿ, ಇನಿಯನ ಪ್ರೀತಿಯ ಬಯಸಿದ ಗಜಲ್ ಸೊಗಸಾಗಿದೆ...


 ಗಜಲ್ ೨೩ ಪು.ಸಂ ೨೩ ನಮ್ಮ ನಡೆ ನುಡಿ ಗುರಿಯು ಎಂದಿಗೂ ಎದುರಿಗಿದ್ದವರ ಎದೆ ನಡುಗಿಸುವಂತೆ ಇರಬೇಕು. ಭಯ ಅಂಜಿಕೆಯಿಲ್ಲದೇ ಗುರಿಯತ್ತ ಚಿತ್ತ ಹರಿಸಬೇಕು ಎನ್ನುವರು. ನಮ್ಮ ವ್ಯಕ್ತಿತ್ವ ಇತರರ ಗುಣಗಾನಕ್ಕೆ ಒಳಗಾಗಬೇಕು. 


ಮೊಗದಲ್ಲಿನ ಮಂದಹಾಸ ಆಕರ್ಷಿಸುವಷ್ಟು 

ಮೌನವಾಗಿರಬೇಕು ರಾಜನ್|

ಕಂಚಿನ ಕಂಠದಲ್ಲಿ ಹೊರಡುವ ಮಾತುಗಳು

ಎದೆಗೆ ನಾಟಬೇಕು ರಾಜನ್|| 


ಗಜಲ್ ೩೧. ಪು.ಸಂ೩೧ 


ಪದಪುಂಜ ಸಾಲದು ನಿನ್ನ ಬಣ್ಣಿಸಲು,

ಕುಂಚವೂ ಎಡವಿದಂತಿದೆ ಗೆಳೆಯ|

ಯಾವ ಕಲೆಗಾರನ ಕೈಯಲ್ಲಿ ಚಿತ್ರಿಸಬೇಕೋ

ತಿಳಿಯದಂತಾಗಿದೆ ಗೆಳೆಯ||

ಸಾವಿರ ಜನ್ಮವಿದ್ದರು ನಿನ್ನ ಮಡಿಲ ಕಂದಮ್ಮ ನಾನು, 

ಋಣಭಾರವಿದೆ ಗೆಳೆಯ|

 'ಶಬರಿ' ಮನೆಯ ಜ್ಯೋತಿಯು

ಅಂಗೈಯೊಳಗೆನಿಂತಿದೆ ಗೆಳೆಯ||


ಎಷ್ಟೊಂದು ಮುಗ್ಧಭಾವ. ಓದಿದರೆ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. 

....


ಹೀಗೆ ಒಂದರ ಮೇಲೆ ಒಂದರಂತೆ ಪ್ರೀತಿ ಪ್ರೇಮ ಸಮಾಜಿಕವಾಗಿ ಚಿಂತನೆ ಮಾಡುತ್ತ ರಚಿಸಿದ ಗಜಲ್ ಗಳ ಓದುವಾಗ ಕವಯಿತ್ರಿಯ ಯೋಚನೆಯಲ್ಲಿನ ಗಂಭೀರತೆ, ಸಮಾಜದ ಪರ ಕಾಳಜಿ, ಇನಿಯನ ಬಗೆಗಿನ ಪ್ರೀತಿ ವ್ಯಕ್ತವಾಗುತ್ತದೆ. ಎಲ್ಲರೂ ಕೊಂಡು ಓದಿರಿ. ಅತ್ಯಂತ ಅರ್ಥಪೂರ್ಣವಾದ, ಸಂಗ್ರಹ ಯೋಗ್ಯವಾದ ಗಜಲ್ ಸಂಕಲನವಾಗಿದೆ.

..

ಶುಭಹಾರೈಕೆಗಳು💐 

- ಸಿಂಧು ಭಾರ್ಗವ, ಬೆಂಗಳೂರು

(ಲೇಖಕಿ)

Tuesday 10 January 2023

ನಮ್ಮ ಮುದ್ದಿನ ಅಮ್ಮಮ್ಮ Our GrandMaa is No more.












Our Grand mother is No More. Today Morning at 3:15 AM. Tuesday. ಅಂಗಾರ ಚತುರ್ಥಿ. 

ಶ್ರೀಮತಿ ಗೌರಿ ವೆಂಕಟೇಶ ಬಾಯಿರಿ ಬಂಡಿಮಠ. ಬಾರಕೂರು ಹನೇಹಳ್ಳಿ. ಉಡುಪಿ ಜಿಲ್ಲೆ. 

🌼✍️📚🙏🌼🌼 ಅ ಮ್ಮ ಮ್ಮ 🌼🌼✍️📚😢✍️

ಅಮ್ಮಮ್ಮ ಅಂದರೆ ಹಾಗೆ,

ಮಕ್ಕಳ ಮೊಮ್ಮಕ್ಕಳ ಜೀವದ ಗಂಟು

ಕಳಚಿಕೊಳ್ಳಲಾಗದಷ್ಟು ಬೆಸೆದುಕೊಂಡಿರುವ ನಂಟು..

ತೇಗದ ಮರಗಳ ಮಾರಿ ಹೆಣ್ಮಕ್ಕಳ ಮದುವೆ ಮಾಡಿಸಿದರು

ಮಗಳ ಚೊಚ್ಚಲ ಬಾಣಂತನ ಆರೈಕೆ ಮಾಡಿ ಅಮ್ಮಮ್ಮ ಆಗಿ ಬಡ್ತಿ ಪಡೆದವರು..


ನೂರಾರು ಕಷ್ಟಗಳ ನಡುವೆ ಧೃತಿಗೆಡದೆ ತಮ್ಮ ಬದುಕ ಕಟ್ಟಿಕೊಂಡವರು

ಗಂಡ, ಮನೆ, ಮಕ್ಕಳಿಗಾಗಿ ಜೀವ ಜೀವನ ಸವೆಸಿದವರು..

ಹೆಸರುಕಾಳು, ಗೆಣಸು, ಹರಿವೆ ಗದ್ದೆಯಲ್ಲಿ ಬೆಳೆಸದ ಬೆಳೆಗಳಿಲ್ಲ

ಗೇಣಿ ನೀಡಿ ಬಂದ ಭತ್ತ ಹಣದಿಂದ ಮಕ್ಕಳ ಹೊಟ್ಟೆ ತುಂಬಿಸಿದರಲ್ಲ..


ಇಳಿವಯಸ್ಸಿನಲ್ಲಿ ಶಿಸ್ತಿನ ಜೀವನ ನಡೆಸಿದರು

ತನಗೇನು ಬೇಡ, ಎಲ್ಲ ನಿಮಗೆ ಇರಲಿ ಎಂದು ನೀಡಿದರು

ಮಕ್ಕಳು ಉಂಡರಾ? ಎಂದು ಕೇಳದೇ ತಾನು ಊಟ ಮಾಡಿದವರಲ್ಲ

ಮೊಮ್ಮಗು ಸನಿಹ ಬಂದರೆ ಖರ್ಜೂರದ ಚೂರನ್ನು ನೀಡದೇ ಕಳುಹಿಸುತ್ತಿರಲಿಲ್ಲ..


ಅಭ್ಯಂಜ ಸ್ನಾನ, ಅಶ್ವಿನಿ ಹೇರ್ ಆಯಿಲ್ ತಲೆಗೆ

ಸೊಪ್ಪಿನ ತಂಬುಳಿ ಇಲ್ಲದೇ ಊಟ ಸೇರುತ್ತಿರಲಿಲ್ಲ

ಹಣವಿದ್ದ ಅದೊಂದು ಸೇಫ್ಟಿ ಪರ್ಸ್ ತುಂಬಾ ಮಾತ್ರೆಗಳು

ಬಿಪಿ. ಶುಗರ್ ಜೀವ ಹಿಂಡುವಂತಹ ಕಾಯಿಲೆಗಳು

ಮಗನ ಜೊತೆ ಪುಣ್ಯಕ್ಷೇತ್ರ ರಾಮೇಶ್ವರ ಕಾಶಿಯ ದರುಶನ ಮಾಡಿದರು...


ಮರಿಮಕ್ಕಳ ಕಂಡ ಹಿರಿಯ ಜೀವಚೇತನ..

ಕೃಷ್ಣ🍁 ಕೃಷ್ಣ🍁 ಎನ್ನುವಾಗಲೇ ಕಡಿದುಕೊಂಡ ಭವಬಂಧನ..


✍️ ರಾಧಿಕಾ.. (ಮೊಮ್ಮಗಳು) 🌼🌼🌼🌼🌼🌼🌼🌼🌼🌼🌼🌼