Wednesday 21 December 2016

ಕವನ - ಒರಟು ಕಲ್ಲಿನ ಸಂಧಿಯಿಂದ



ಒರಟು ಕಲ್ಲಿನ ಸಂಧಿಯಿಂದ ಪ್ರೀತಿಬಳ್ಳಿ ಚಿಗುರಿದೆ...
ಕುರುಚಲು ಗಡ್ಡಕೊಂದು ಮೊದಲ ಮುತ್ತು ಸಿಕ್ಕಿದೆ..

ಬೆಂಕಿ ಆತ ಕರಗಿದ ಬೆಣ್ಣೆಯಂತೆ..
ಬೆಣ್ಣೆ ಈಕೆ ಪ್ರೀತಿಯಲಿ ಮಗುವಿನಂತೆ..

ಮನಸು ಮಾಯವಾಗಲು ಕಣ್ಣೋಟವೇ ಸಾಕಾಯ್ತು..
ಪ್ರೀತಿ ಕುಸುಮ ಅರಳಿ ಸಲುಗೆ ಹೆಚ್ಚಾಯ್ತು..

ಸಿಡಿಲಿನ ಮಳೆ ಬಂದರೂ ನೆನೆಯುವ ಆಸೆಯಾಗಿದೆ..
ಕಾಡುಮರಗಳಿಂದ ಹೂವುಗಳ ಘಮವು ಹರಡಿದೆ..

ಮಾಯಾವಿನಿಯಾಗಿ ನಾನು ನಿನ್ನ ಜೊತೆ ಹೆಜ್ಜೆಹಾಕಬೇಕಿದೆ..
ಮುದ್ದು ಮಾಡುತಾ ಸಮಯ ಕಳೆಯಬೇಕಿದೆ..

ಸೋಲುತಿಹೆನು ಆದರೂ ಗೆಲುವೇ ನನಗೆ..
ನಿನ್ನ ಪಡೆದ ಭಾಗ್ಯ ವರ್ಣಿಸಲಿ ಹೇಗೆ?!

~ ಸಿಂಧುಭಾರ್ಗವ್.

No comments:

Post a Comment