ನಮ್ಮ ಸೈನಿಕರು :
ಯುದ್ಧ ಘೋಷಣೆ ಮಾಡಿಯೇ
ಎಲ್ಲವೂ ನಡೆಯಬೇಕಂದಿಲ್ಲ..
ಸೇನೆಗೆ ಸೇರಿದ ದಿನದಿಂದಲೇ
ಅವರಲ್ಲಿ ಯುದ್ಧ ಶುರುವಾಗುವುದಲ್ಲ..
ನಮ್ಮನ್ನು ರಕ್ಷಿಸಲು ಪ್ರಾಣದ
ಹಂಗು ತೊರೆಯುವರು..
ಹೆತ್ತವರ /ಸಂಸಾರವ ತೊರೆದು
ಪ್ರಾಣ ತ್ಯಾಗಮಾಡುವರು..
ನಾವು ಕಣ್ತುಂಬಾ ನಿದಿರೆ ಮಾಡಲು
ಅವರ ಕಾವಲಿದೆ..
ಈ ಸತ್ಯವ ಅಂಧರಂತೆ ನಾವೆಲ್ಲ
ಮರೆತ ಹಾಗಿದೆ..
ಪ್ರಾಣಪಕ್ಷಿ ಹಾರಿತೆಂದು ಕಣ್ಣೀರು
ಸುರಿಸಿದರೇನು ಪ್ರಯೋಜನ..?!
ಅವರ ಪ್ರಾಣಕ್ಕೇನಾಗದಿರಲಿ
ಎಂದು ಈಗಲೇ ಪ್ರಾರ್ಥಿಸೋಣ..
~ಸಿಂಧು ಭಾರ್ಗವ್.
No comments:
Post a Comment