ಕವನ : ಆಶಾಮಣಿಗಳ ಮಾಲೆ :
ಬೆಳಕು ಹರಿದಿದೆ ಪಂಚಿ ಹಾರಿದೆ
ಚಿಲಿಪಿಲಿ ಹಾಡು ಕೇಳಿ ಬರುತಿದೆ
ತೊಳೆದ ಮೊಗದಲಿ ಹೊಸ ಕಳೆಯಿದೆ
ದಿನದ ಪುಟವ ಕಾಣ್ವ ತವಕವಿದೆ..
ಮನೆಯಲೇ ಕುಳಿತರೇನು ಬಂತು
ನಡಿ ನೋಡು ಹೊರಗೆ ಹೊಂಟು
ತಪ್ಪುಗಳ ಹುಡುಕುವ ಜನರಗುಂಪು ನೋಡಲ್ಲಿ
ಬೆನ್ನು ಮುರಿದು ಕೆಲಸ ಮಾಡುವರಿಲ್ಲಿ
ಅವರ ಶಕ್ತಿ ಅಡಗಿದೆ ಗುಟುಕು ಚಹಾದಲ್ಲಿ
ನಡುವೆ ಜೀವನಕೆ ಬೇಕಾಗುವ ನುಡಿಯಲ್ಲಿ
ನಮ್ಮದೇ ಮಾತು ಕೆಲವರಿಗೆ ಸ್ಪೂರ್ತಿ
ನಾವೇ ಕುಳಿತಿರುವೆವು ಮಂಕಾಗಿ ಪೂರ್ತಿ
ದಿನೇ ದಿನೇ ಏರುವುದು ನಶೆ..
ಬದಲಾಗುವುದು ನಮ್ಮ ದೆಶೆ..
ಆಶಾ ಮಣಿಗಳ ಎಣಿಸುತ ಕುಳಿತುಕೊಳ್ಳುವುದಲ್ಲ..
ಮಾಲೆಮಾಡಿ ಕೊರಳಿಗಿಸಿ ಕೆಲಸ ನೋಡಲ್ಲ..
ನಿನ್ನೆಯದು ಇಂದಿಲ್ಲ
ಇಂದಿನದು ನಾಳೆಗಿಲ್ಲ
ಪುಟಗಳು ತಿರುವುತಲೇ ಸಾಗಬೇಕಲ್ಲ..
ಹೊಸ ಉತ್ಸಾಹದ ಜೊತೆಗೆ ಹೆಜ್ಜೆಯಿಡು ನೀನು
ಸಿಕ್ಕಸಿಕ್ಕ ಕೆಲಸವ ಮಾಡಿ ಅನುಭವೀ ಆಗು
ಜೊತೆಗೆ ಜನರ ಸ್ನೇಹ ಬೆಳೆಸು
ನಗುಮೊಗದಿ ಸ್ವಾಗತಿಸು..
ಕೆಲವರಿಂದ ನಗುವು
ಹಲವರಿಂದ ಪಾಠವು ಸಿಗುವುದು ನೋಡು..
ಆ ಶುಭ ಗಳಿಗೆ, ಇಂದು ಸಿಗುವುದೋ
ನಾಳೆ ಬರುವುದೋ ಕಾಯಬೇಡ ಮನವೇ..
ಖುಷಿಯು ಸಂಗಡವಿರಲಿ
ರಂಗು ತುಂಬಿಸು, ಜೀವನ ಸಾಗುತಲಿರಲಿ..
ರಂಗು ತುಂಬಿಸು, ಜೀವನ ಸಾಗುತಲಿರಲಿ..
- ಸಿಂಧುಭಾರ್ಗವ್ 🌷
ಬೆಳಕು ಹರಿದಿದೆ ಪಂಚಿ ಹಾರಿದೆ
ಚಿಲಿಪಿಲಿ ಹಾಡು ಕೇಳಿ ಬರುತಿದೆ
ತೊಳೆದ ಮೊಗದಲಿ ಹೊಸ ಕಳೆಯಿದೆ
ದಿನದ ಪುಟವ ಕಾಣ್ವ ತವಕವಿದೆ..
ಮನೆಯಲೇ ಕುಳಿತರೇನು ಬಂತು
ನಡಿ ನೋಡು ಹೊರಗೆ ಹೊಂಟು
ತಪ್ಪುಗಳ ಹುಡುಕುವ ಜನರಗುಂಪು ನೋಡಲ್ಲಿ
ಬೆನ್ನು ಮುರಿದು ಕೆಲಸ ಮಾಡುವರಿಲ್ಲಿ
ಅವರ ಶಕ್ತಿ ಅಡಗಿದೆ ಗುಟುಕು ಚಹಾದಲ್ಲಿ
ನಡುವೆ ಜೀವನಕೆ ಬೇಕಾಗುವ ನುಡಿಯಲ್ಲಿ
ನಮ್ಮದೇ ಮಾತು ಕೆಲವರಿಗೆ ಸ್ಪೂರ್ತಿ
ನಾವೇ ಕುಳಿತಿರುವೆವು ಮಂಕಾಗಿ ಪೂರ್ತಿ
ದಿನೇ ದಿನೇ ಏರುವುದು ನಶೆ..
ಬದಲಾಗುವುದು ನಮ್ಮ ದೆಶೆ..
ಆಶಾ ಮಣಿಗಳ ಎಣಿಸುತ ಕುಳಿತುಕೊಳ್ಳುವುದಲ್ಲ..
ಮಾಲೆಮಾಡಿ ಕೊರಳಿಗಿಸಿ ಕೆಲಸ ನೋಡಲ್ಲ..
ನಿನ್ನೆಯದು ಇಂದಿಲ್ಲ
ಇಂದಿನದು ನಾಳೆಗಿಲ್ಲ
ಪುಟಗಳು ತಿರುವುತಲೇ ಸಾಗಬೇಕಲ್ಲ..
ಹೊಸ ಉತ್ಸಾಹದ ಜೊತೆಗೆ ಹೆಜ್ಜೆಯಿಡು ನೀನು
ಸಿಕ್ಕಸಿಕ್ಕ ಕೆಲಸವ ಮಾಡಿ ಅನುಭವೀ ಆಗು
ಜೊತೆಗೆ ಜನರ ಸ್ನೇಹ ಬೆಳೆಸು
ನಗುಮೊಗದಿ ಸ್ವಾಗತಿಸು..
ಕೆಲವರಿಂದ ನಗುವು
ಹಲವರಿಂದ ಪಾಠವು ಸಿಗುವುದು ನೋಡು..
ಆ ಶುಭ ಗಳಿಗೆ, ಇಂದು ಸಿಗುವುದೋ
ನಾಳೆ ಬರುವುದೋ ಕಾಯಬೇಡ ಮನವೇ..
ಖುಷಿಯು ಸಂಗಡವಿರಲಿ
ರಂಗು ತುಂಬಿಸು, ಜೀವನ ಸಾಗುತಲಿರಲಿ..
ರಂಗು ತುಂಬಿಸು, ಜೀವನ ಸಾಗುತಲಿರಲಿ..
- ಸಿಂಧುಭಾರ್ಗವ್ 🌷
No comments:
Post a Comment