Tuesday 25 April 2017

ಕನ್ನಡ ಹಾಡು: ಪ್ರೀತಿ ಮೂಡಿದೆ ಹೊಸ ಶಂಕೆ ಕಾಡಿದೆ..

*ಹಾಡು : _ಪ್ರೀತಿ ಮೂಡಿದೆ, ಹೊಸ ಶಂಕೆ ಕಾಡಿದೆ..._*
°°° °°° °°° °°° °°° °°° °°° °°° °°° °°° °°° °°° °°° °°° °°°


 @@()@@

ಹಾಡು: ಪ್ರೀತಿ ಮೂಡಿದೆ, ಹೊಸ ಶಂಕೆ ಕಾಡಿದೆ.

ಮನದಲಿ ಹೊಸ ಭಾವವು
ಮರೆಯದ ಹೊಸ ರಾಗವು
ನೀ ಬಂದು ಎದುರಾಗಲೂ
ಪ್ರೀತಿ ಮೂಡಿದೆ, ಹೊಸ ಶಂಕೆ ಕಾಡಿದೆ...

ಜೀಕುವ ಜೋಕಾಲಿಯ
ಹಿಡಿಯಲಿ ಹೊಸ ಕನಸನು
ನಾ ಈಗ ಹೊಸೆದಿರಲೂ
ಪ್ರೀತಿ ಮೂಡಿದೆ ಹೊಸ ಶಂಕೆ ಕಾಡಿದೆ...

ಹದಮಾಡಿದ ಹಸಿ ಮಣ್ಣಲಿ
ಅರಿಯದೇ ನಿನ್ನ ಬಿಂಬವ
ನಾನೀಗ ಕೊರೆದಿರಲು
ಪ್ರೀತಿ ಮೂಡಿದೆ ಹೊಸ ಶಂಕೆ ಕಾಡಿದೆ.

ಮನಸಿನ ಮೂಲೆಯಲಿ
ಹೂವರಳಿ ನಿಂತಿರಲು
ಮೂಡಿದ ಚಿತ್ರದಲಿ ನಾನಿನ್ನ ನೋಡಿರಲು
ಪ್ರೀತಿ ಮೂಡಿದೆ ಹೊಸ ಶಂಕೆ ಕಾಡಿದೆ.

📝 - ಸಿಂಧು ಭಾರ್ಗವ್ 🍁

Thursday 20 April 2017

ಲೇಖನ: ಜೀವನದ ಸಂತೆಯಲಿ - ಅರಿತು ಬೆರೆತು ಬಾಳಿದರೆ ಸಾಂಸಾರಿಕ ಜೀವನ ಸುಂದರ.

@()@()@

*ಜೀವನದ ಸಂತೆಯಲಿ - ಅರಿತು ಬೆರೆತು ಬಾಳಿದರೆ ಸಾಂಸಾರಿಕ ಜೀವನ ಸುಂದರ*.

@)) ಮದುವೆ ಆಗೋ ಮೊದಲು ಹೆಣ್ಮಕ್ಕಳು ನೂರಾರು ಕನಸುಗಳನ್ನು ಕಟ್ಟಿಕೊಳ್ಳುವುದು ಸಹಜ.

@)) 21-22ರ ವಯಸ್ಸಿನಲ್ಲಿ ಶೇ.70% ರಷ್ಟು ಹೆಣ್ಣು ಮಕ್ಕಳಿಗೆ ಮನೆಯಲ್ಲಿ ಯೋಗ್ಯ ವರನ ನೋಡಿ ಅದೂ 29-30ರ ಆಸುಪಾಸಿನ ಹುಡುಗನ ಜೊತೆಗೆ ಮದುವೆ ಮಾಡಿಸುವುದು ರೂಢಿಯಾಗಿದೆ.

@)) ಕೆಲವು ಹುಡುಗರು ತನ್ನೆಲ್ಲಾ ಭಾವನೆಗಳನ್ನು ಮನಬಿಚ್ಚಿ ಮಾತನಾಡಲು ಬಯಸುವರು. ಪತ್ನಿಯ ಆಗಮನಕ್ಕೆ ಕಾಯುತಲಿರುವರು. ಅಂತವರಿಗೆ ತನ್ನ ಜೀವನದ ಬಹುದೊಡ್ಡ ಘಟ್ಟ "ಮದುವೆ" ಎಂಬ ನಂಬಿಕೆ ಇರುತ್ತದೆ. ಅಲ್ಲದೇ ಒಂದಷ್ಟು ಕನಸುಗಳನ್ನು ಕಟ್ಟಿಕೊಂಡಿರುವರು.
ಪತ್ನಿಯ ಜೊತೆಗೆ ಕುಳಿತು ಮಾತನಾಡುವುದು, ತಮಾಷೆ, ರೇಗಿಸುವುದು ಬಾಲ್ಯದ ನೆನಪುಗಳನ್ನು ಹೇಳೆಂದು ಅವಳ‌ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಹೋಗುತ್ತಾರೆ.
*ಅಲ್ಲಿ ಅನ್ಯೋನ್ಯತೆ ಮನೆಮಾಡುತ್ತದೆ. ಸಂಬಂಧ ಗಟ್ಟಿಯಾಗಿ ಬೆಸೆದುಕೊಳ್ಳುತ್ತದೆ. ಒಬ್ಬರನ್ನೊಬ್ಬರ ಅರಿತು ನಡೆಯುವುದರಿಂದ ಜೀವನ ಸುಂದರವಾಗಿರುತ್ತದೆ.*

@)) ಕೆಲವು ಗಂಡಸರು ಹಾಗಲ್ಲ, ಅವರಿಗೆ ಹೆಂಡತಿ ಮೇಲೆ ಪ್ರೀತಿಯೇನೊ ತುಂಬಾ ಇರುತ್ತದೆ. ಆದರೆ ವ್ಯಕ್ತಪಡಿಸಲು ಬರುವುದಿಲ್ಲ. ಬೇಕು-ಬೇಡಗಳ ತಂದುಕೊಡುತ್ತಾರೆ. ರಾಣಿಯ ಹಾಗೆ ನೋಡಿಕೊಳ್ಳುತ್ತಾರೆ. ಆದರೆ ಜೊತೆಗೆ ಕೂತು ಹರಟೆ, ತಮಾಷೆ, ಭಾವನೆಗಳ ವಿನಿಮಯ ಮಾಡಿಕೊಳ್ಳಲು ಬರುವುದಿಲ್ಲ. ಅಂತವರಿಂದ ಯಾವ ನಿರೀಕ್ಷೆಯು ಇಟ್ಟುಕೊಳ್ಳಲು ಸಾಧ್ಯವಿಲ್ಲ. ಹಾಗೆ ಅವಳು ಕಾಣುವ ಅದೆಷ್ಟೋ ಸಣ್ಣ ಸಣ್ಣ ಕನಸುಗಳು ಕಣ್ಣೀರಾಗಿ ಹರಿದುಹೋಗಿರುತ್ತದೆ. ಕಾರಣ ಗಂಡನಿಗೆ ಮನಸ್ಸಿನ ಭಾವನೆ ಅರ್ಥವಾಗುವುದಿಲ್ಲ.
*ಇಂತಹ ಪತಿರಾಯರನ ಜೊತೆಗೆ ಜೀವಿಸಲು ತುಂಬಾ ಸಹನೆಯಿಂದಿರಬೇಕಾಗುತ್ತದೆ. ಅವನನ್ನು ಅರ್ಥಮಾಡಿಕೊಂಡು ನಡೆದರೆ ಜೀವನ  ಚೆನ್ನಾಗಿ ನಡೆಸಬಹುದು. ಹಾಗೆ ಪತ್ನಿಯೇ ಒಂದಷ್ಟು ಬಾಯಿ ಬಿಟ್ಟು ಮನದ ಮಾತನ್ನು ಹೇಳಿಕೊಂಡರೆ ಅವನು ಬದಲಾಗಲೂ ಬಹುದು. ಇಲ್ಲದಿದ್ದರೆ ಮನಸ್ಸು ಹದಗೆಡುತ್ತದೆ. ಸಂಬಂಧ ಬಿರುಕು ಬಿಡುತ್ತದೆ.*

@)) ಕೆಲವು ಹೆಂಗಸರು ಅಲ್ಲದೇ ಗಂಡಸರು ಕೂಡ ಮುಂಗೋಪ, ಅಸಹನೆ, ಹಠಮಾರಿತನ, ಕಲಹ , ದ್ವೇಷಗಳನ್ನೇ ಮದುವೆ ಆದಂದಿನಿಂದ ಪ್ರಾರಂಭಿಸಿ ಸಾಂಸಾರಿಕ ಜೀವನವನ್ನು ನರಕ ಮಾಡಿಕೊಳ್ಳುತ್ತಾರೆ.
*ಹೆಂಗಸರಿಗಾಗಲಿ, ಗಂಡಸರಿಗಾಗಲಿ ಬಯಕೆಗಳು ಇರಬೇಕು (ಅದು ಬೇಕು ಇದು ಬೇಕು ಎಂದು) ಆದರೆ ಪಡೆಯಲೇಬೇಕು ಎಂಬ ಹಠವಿರಬಾರದು..*

@)) *ಈಗಿನ ಕಾಲದಲ್ಲಿ ಹೆಣ್ಮಕ್ಕಳು ಕೆಲಸಕ್ಕೆ ಹೋಗುತ್ತಾರೆ. ಗಂಡು- ಹೆಣ್ಣು ಇಬ್ಬರೂ ಸಮಾನರು ಎಂಬ ಭಾವನೆ ಬಂದುಬಿಟ್ಟಿದೆ. ಮಾನಸಿಕವಾಗಿ ಹೆಣ್ಣು , ಗಂಡಿಗಿಂತ ಗಟ್ಟಿಗಿತ್ತಿಯಾದರೂ ದೈಹಿಕವಾಗಿ ಅಲ್ಲ ಎಂದು ವೈದ್ಯರೇ ಹೇಳುತ್ತಾರೆ. ಹಾಗಾಗಿ ಹೆಣ್ಣು ತನ್ನ ಸ್ಥಾನವನ್ನು ಅರಿತು ,ಕರ್ತವ್ಯವನ್ನು ಅರಿತು ಸಾಂಸಾರಿಕ ಜೀವನವನ್ನು ನಡೆಸಬೇಕು. ತುಂಬಾ ಓದಿದ್ದೇನೆ , ಕೈತುಂಬಾ ಸಂಬಳಬರುತ್ತದೆ, ನಾನು ಯಾರಿಗೂ ಗುಲಾಮಳಾಗಿ ಇರಬೇಕೆಂದಿಲ್ಲ ಎಂಬ ಭ್ರಮೆಯನ್ನು ಬಿಟ್ಟು ಅರಿತು ಬೆರೆತು ಅವರವರ ಸಾಂಸಾರಿಕ ಜೀವನವನ್ನು ಚಂದಗಾಣಿಸಿಕೊಳ್ಳಬೇಕು. ಅದನ್ನು ಬಿಟ್ಟು ಅಹಂಕಾರದಿಂದ ಗಂಡನ ಅವಶ್ಯಕತೆ ಇಲ್ಲವೆಂದರೆ ಒಂಟಿಯಾಗಿ ಜೀವನಮಾಡಬೇಕಾಗುತ್ತದೆ. ಒಂಟಿತನವೂ ಕೆಲವೊಮ್ಮೆ ಖಿನ್ನತೆಯನ್ನು ಮೂಡಿಸುತ್ತದೆ. ಜೀವನವನ್ನು ಗೆಲ್ಲಬೇಕು. ಜಾಣ್ಮೆಯಿಂದ ಗೆಲ್ಲಬೇಕು.*
@()@
*ಈಗ ಹೇಳಿ ಯಾರು ಯಾವ ರೀತಿಯ ಮನಸ್ಥಿತಿಯನ್ನು ಹೊಂದಿದ್ದೀರಿ...??*

📝 - ಸಿಂಧು ಭಾರ್ಗವ್ 🍁

Friday 7 April 2017

I promoted as Lyric Writer By the Song Sanjegempu mooditu

ಹಾಡು : ಸಂಜೆಗೆಂಪು‌ ಮೂಡಿತು.
ಬರೆದವರು : ಸಿಂಧು ಭಾರ್ಗವ್.
ಹಾಡಿದವರು : ಜನಪ್ರಿಯ ಚಲನಚಿತ್ರ ಗಾಯಕಿ ಸಂಗೀತ ಬಾಲಚಂದ್ರ ಉಡುಪಿ.
ರೆಕಾರ್ಡಿಂಗ್ : ಗುರುರಾಜ್ ಎಂ.ಬಿ
(ಸಾಯಿರಾಮ್ ಸ್ಟುಡಿಯೋ ಮಂಗಳೂರು)
ಸಂಯೋಜನೆ : ಹುಸೈನ್ ಕಾಟಿಪಳ್ಳ.

ಕೆಲ ಚಿತ್ರಗಳು :

ಹಾಡಿದವರು ಸಂಗೀತ ಬಾಲಚಂದ್ರ ,ಮೊಹಮ್ಮದ್ ಅಲಿ ಕಮ್ಮರಡಿ ಪಕ್ಕದಲ್ಲಿ ( ಕಲೆಯನ್ನು ಅತೀವವಾಗಿ ಪ್ರೋತ್ಸಾಹಿಸುವ ವ್ಯಕ್ತಿ)


ಹಾಡು ಬರೆದವರು : ಸಿಂಧು ಭಾರ್ಗವ್ 


ವಿಷೇಶವಾಗಿ ನನ್ನ ಬರವಣಿಗೆಯನ್ನು ಗುರುತಿಸಿ ಪ್ರೋತ್ಸಾಹ ನೀಡಿದವರು ಶ್ರೀ ಮೊಹಮ್ಮದ್ ಅಲಿ ಕಮ್ಮರಡಿ.. ಎಲ್ಲರಿಗೂ ಹೃತ್ಪೂರ್ವಕ ವಂದನೆಗಳು. ಒಮ್ಮೆ ಕೇಳಿ. ಆನಂದಿಸಿ.
.
YouTube link is :-

https://youtu.be/x1RkXTxkHc4

ಯುಗಾದಿ ಮತ್ತೆ ಬಂದಿದೆ



ಯುಗಾದಿ ಮತ್ತೆ ಬಂದಿದೆ..‌

ಯುಗದ ಆದಿ ಶುರುವಾಗಿದೆ..
ಅಂಗಳದಲ್ಲಿ ಪ್ರೀತಿಯ ರಂಗವಲ್ಲಿ ಬಿಡಿಸಬೇಕಿದೆ..
ಹೊಸಕನಸುಗಳ ತೋರಣದಲ್ಲಿ ಹೊಸೆಯಬೇಕಿದೆ..
ಹಳೆಯ ನೋವುಗಳ ಇಂಚಿಂಚಾಗಿ ಮರೆಯಬೇಕಿದೆ..

ಹೊಸವರುಷ ಮತ್ತೆ ಬಂದಿದೆ...
ಪಟ್ಟೆ ಸೀರೆಯಲ್ಲಿ ಮನೆಮಗಳಂದವ ನೋಡಬೇಕಿದೆ..
ಮಗನ ರೇಶಿಮೆ ಶಾಲಿನಲ್ಲಿ ಹುರುಪು ತುಂಬ ಬೇಕಿದೆ..
ಪತಿರಾಯರಿಗೆ ಬಿಸಿಬಿಸಿಯ ಒಬ್ಬಟ್ಟು ತಿನ್ನಿಸಬೇಕಿದೆ.‌.

ಯುಗಾದಿ ಮತ್ತೆ ಬಂದಿದೆ..
ನೆರೆಕೆರೆಯವರಿಗೆಲ್ಲ ಹಾರೈಸಿ ಸಂಭ್ರಮ ಪಡಬೇಕಿದೆ..
ಸಿಹಿ ಹಂಚಿ ಅವರ ನಗುಮೊಗವ ನೋಡಬೇಕಿದೆ‌..
ಚಿಗುರೆಲೆ ತಿಂದು ಹಾಡುವ ಕೋಗಿಲೆಯ ಹುಡುಕಬೇಕಿದೆ‌‌‌‌..

ಯುಗಾದಿ ಮತ್ತೆ ಬಂದಿದೆ..
ಮನ,
ಈ ಹೊಸ ವರುಷ ಹರುಷವನ್ನೇ ತರಲಿ ಎಂದಿದೆ.‌.

- ಸಿಂಧು ಭಾರ್ಗವ್ .