Friday 6 March 2020

Navaparvafoundation books release ceremony 2020

ನವಪರ್ವ ಫೌಂಡೇಶನ್ (ರಿ.) ಬೆಂಗಳೂರು ಇವರ ವತಿಯಿಂದ,
🧸🧸🧸🧸🧸🧸🧸🧸🧸🧸🧸🧸
ಇಂದಿನ ದಿನ ಬಹಳ ವಿಶೇಷ.
29-02-2020 ಅಧಿಕಮಾಸ . ಈ 29 ತಾರೀಖು ಇನ್ನು ನಾಲ್ಕು ವರ್ಷದ ನಂತರವೇ ಬರುವುದು.
ಈ ಸುದಿನದಂದು,
🌹ಪ್ರೊ. ಮುರುಳೀಧರ್ ಕೆ. ಎಸ್.
🌹ತುಳಸಿ ಭಟ್ ( ಸಿಂಧು ಭಾರ್ಗವ್ ) ಅವರ ಸಂಪಾದಕತ್ವದಡಿಯಲ್ಲಿ
ಮೂರು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.
📚✍️📚✍️📚✍️📚✍️📚✍️📚✍️📚
📌 ಬೆಟ್ಟದ ಹಾದಿಯಲ್ಲಿ (ಕಥಾ ಸಂಕಲನ)
📌 ನವಿಲ ಹೆಜ್ಜೆ (ಕವನ ಸಂಕಲನ)
📌 ಕೌಸ್ತುಭ (ವೈಚಾರಿಕ ಲೇಖನಗಳು)

ಅಲ್ಲದೇ ಮೂರೂ ವಿಭಾಗದಲ್ಲಿ ಬರೆದ ಬರಹಗಾರರಿಗೆ "ನವಪರ್ವ ಸವ್ಯಸಾಚಿ ಪ್ರಶಸ್ತಿ" ಪ್ರದಾನ ಮಾಡಲಾಯಿತು‌. ಹೆತ್ತವರಿಗೂ, ಗುರುಗಳಿಗೂ, ವಿಧ್ಯಾಭ್ಯಾಸ ಕ್ಕೆ ಧನಸಹಾಯಮಾಡಿದ ಹಿರಿಯರಿಗೂ ಗೌರವಾರ್ಥ ಸನ್ಮಾನಿಸಲಾಯಿತು. ಹಾಗೆಯೇ ವಿವಿಧ ಶಿಕ್ಷಕರ ಸಾಧನೆ ಪರಿಗಣಿಸಿ ಸಾವಿತ್ರಿ ಬಾ ಫುಲೆ ಪ್ರಶಸ್ತಿ ಮತ್ತು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಪ್ರಶಸ್ತಿ ಪ್ರದಾನ ಮಾಡಲಾಯಿತು.  ಕನ್ನಡ ಸಾಹಿತ್ಯ ಪರಿಷತ್ತು ಚಾಮರಾಜಪೇಟೆ, ಬಸವನಗುಡಿ ಬೆಂಗಳೂರು೧೮ ಇಲ್ಲಿ ನಮ್ಮ ಕಾರ್ಯಕ್ರಮ ಬಹಳ ಸುಂದರವಾಗಿ ಸುಸಂಸ್ಕೃತವಾಗಿ ನಡೆಯಿತು ಎನ್ನಬಹುದು.

🙏 🌹ಭಾಗವಹಿಸಿದ ಸರ್ವರಿಗೂ ಹೃತ್ಪೂರ್ವಕ ವಂದನೆಗಳು🌹 🙏


ತುಳಸಿ ಭಟ್ (ಉಪಾಧ್ಯಕ್ಷರು)
ನವಪರ್ವ ಸಂಸ್ಥೆ (ರಿ.) ಬೆಂಗಳೂರು
ಕೆಲವು ಚಿತ್ರಗಳು ನಿಮಗಾಗಿ....