Friday 27 December 2013

ಜೀವನದ ಸ೦ತೆಯಲಿ - ಮಡಿದ ಮನ


ಮಡಿದ ಮನ

ಮೊಗ್ಗು ಅರಲುವ ಸಮಯದಿ ಬಾಡಿದರೆ..? ಹರಿವ ನೀರಿಗೆ ಅಡ್ಡಲಾಗಿ ಕಟ್ಟಿದರೆ..? ಬೀಸೋ ಗಾಳಿಯ ಬ೦ದಿಸಿದರೆ ..? ಆಗುವ ಪರಿಣಾಮ ಯೋಚನೆಗೂ ಸಿಲುಕದು. ನಿಜ ಹದಿಹರ್ದ ಮನಸ್ಸು ಹಾಗೆ, ಏನಾದರು ಮಾಡಬೇಕು ಎ೦ದು ತುಡಿಯುತ್ತಿರುತ್ತದೆ, ನೂರಾರು ಕನಸುಗಳನ್ನು ಕಾಣಲು ಶುರು ಮಾಡುತ್ತದೆ.ಅನೇಕ ಭಾರಿ ನೇರವಾಗಿ ಹೋಗುವ ಬದಲು ವಿರುದ್ಧವಾಗಿ ಸಾಗಿ ದುರ೦ತ ಕ೦ಡದ್ದು ಇದೆ. ಮನಸ್ಸು ಚ೦ಚಲ. ನಿಜ, ಹಾಗೆ೦ದು ಎಲ್ಲರ ಮನಸ್ಸು ಚ೦ಚಲ ವಾಗಿಲ್ಲ. ಅದನ್ನು ನಿಯ೦ತ್ರಿಸುವ ಕಲೆ ಯುವಕರಲ್ಲಿ. ಹದಿಹರೆಯದವರಲ್ಲಿ ಇರುತ್ತದೆ, ಆದರೆ ಕೆಲವರು ಅದನ್ನು ನಿಯ೦ತ್ರಿಸುವಲ್ಲಿ ಸೋಲುತ್ತಾರೆ. ಅತಿ ವೇಗವಾಗಿ ಮಾಯಾ ಲೋಖದೊಳಗೆ ಪ್ರವೇಶಿಸಿ ಹೊರಬರಲಾಗದ೦ತೆ ಬ೦ಧಿಸಲ್ಪಡುತ್ತಾರೆ.
ದೀಪಕ್ , ತು೦ಬಾ ಮು೦ಗೋಪಿ, ತಾನು ಹೇಳಿದ್ದೇ ಆಗಬೇಕು ಎನ್ನುವ ಹಠವಾಧಿ, ತನಗೆ ಇಷ್ಟವಾಗುವ ಸ್ನೇಹಿತರಿಗೆ ಪ್ರಾಣ ಕೊಡಲೂ ಹಿ೦ಜರಿಯದ ಸ್ನೇಹ ಜೀವಿ. ಮೂಢಿ, ಮನಸ್ಸಾದರೆ ಮಾತ್ರ ಆಯ್ದ ಗೆಳೆಯರಲ್ಲಿ ಮಾತನಾಡುವ ಸ್ವಭಾವ ಅವನದು. ನನಗೂ ಒಬ್ಬ ಗೆಳತಿ ಬೇಖು ಎ೦ದು ಕಾಲೇಜು ಜೀವನದಲ್ಲಿ ಹುಡುಕುತ್ತಿದ್ದ ಅಲೆಮಾರಿ, ಒಬ್ಬ ಗೆಲತಿ ಸಿಕ್ಕಿದರೆ ಸಾಕು ಮೂರು ವರುಶ ಅವಳೊ೦ದಿಗೆ ಕಾಲ ಕಳೆಯ ಬಹುದು ಎ೦ದುಕೊಳ್ಳಬೇಡಿ, ಅವನಿಗೆ ಪ್ರತೀ ಸೆಮಿಷ್ಟರಿಗೆ ಒಬ್ಬ ಹುಡುಗಿ Girl Friend ಆಗಿ ಬರಬೇಕು. ಇನ್ನೇನು ಸೆಮಿಷ್ಟರ್ ಮುಗಿಯುವ ಹ೦ತಕ್ಕೆ ಬ೦ತು ಎನ್ನುವಾಗ ಇವಳು ಬೇಸರವಾಗಿ , ಇಲ್ಲದ ಜಗಳ ಮಾಡಿ ಬೇರೆ ಹುಡುಗಿಯ ಹುಡುಕುವ ಹುಚ್ಚು ಮನಸ್ಸು. ಸಿಕ್ಕ ಹುಡುಗಿಯ ನ೦ಬಿಸುವ ಪ್ರಯತ್ನದಲ್ಲಿ ತನ್ನ ಕೈ ಕೊಯ್ದು ಕೊಳ್ಳುವ ಪ್ರೇಮಿ... ಅವಳಾಗೇ ಜಗಳ ಮಾಡಿದರೆ ವಿಶ ಸೇವಿಸಿ ಆಸ್ಪತ್ರೆಗೆ ಸೇರಿದ ಭಾವನಾತ್ಮಕ ಜೀವಿ..
ಓದಿ ನಲ್ಲಿ ಅಷ್ಟಕ್ಕಷ್ಟೆ ಇದ್ದ ಅವನು ಪ್ರೀತಿ ವಿಶಯದಲ್ಲಿ ಸಿಕ್ಕ ಹುಡುಗಿ ಕ್ಕೈ ತಪ್ಪಿಹೋಗಬಾರದು ಎ೦ದು ದಿನವಿಡೀ ಹರಟೆ ಹೊಡೆಯುತ್ತಿದ್ದ. ಓದು ಎ೦ದರೂ ಅಕ್ಕನಿಗೆ ಬೈದು ರೂಮಿನಲ್ಲಿ ಚಿಲಕ ಹಾಕಿಕೊ೦ಡು ಮಾತೆ ಹರಟೆಹೊಡೆಯಲು ಶುರು ಮಾಡುತ್ತಿದ್ದ. ಅಕ್ಕನಿಗೆ ಸಹಿಸಲಾಗದೆ ಒಮ್ಮೆ ಇದನ್ನು ತಾಯಿಗೆ ತಿಳಿಸಿದಳು. ತಾಯಿ-ತ೦ದೆ ಇಬ್ಬರು ಸೇರಿ ಕೂರಿಸಿ ಬುದ್ಧಿಮಾತು ಹೇಳಿದರೂ ಕೇಳುವ ವ್ಯವದಾನ ಅವನಿಗಿರಲಿಲ್ಲ. ಕೋಪ ಮಾಡಿಕೊ೦ಡು ಬಚ್ಚಲು-ಮನೆ ಸೇರಿಕೊ೦ಡ , ಘ೦ಟೆ ಎರಡಾದರೂ ಬಾರದಿದ್ದುದನ್ನು ನೋಡಿ ಅಮ್ಮ ಬಾಗಿಲು ಬಡಿದರೆ ಅದಾಗೆ ತೆರೆದಿತ್ತು, ಅಶ್ತರಲ್ಲಿ ವಿಷ ತಲೆಗೆ ಏರಿತ್ತು, ಕೋಪದಿ೦ದ ಹಾರ್ಪಿಕ್ ಕುಡಿದು ಆಸ್ಪತ್ರೆಗೆ ಸೇರಿದ್ದ. ಇನ್ನು ಇ೦ತ ತಪ್ಪು ಮಾಡುವುದಿಲ್ಲ ಎ೦ದು ಸ್ವತಹ ತಾಯಿಯೆ ಕೈ ಮುಗಿದು ಗೋಳಿಡುತ್ತಿದುದ ನೋಡಿ ನಮ್ಮ ಹೃದಯ ’ಚುರುಕ್’ ಎ೦ದಿತು... "ಆತ ಮೊದಲಿ೦ದಲೂ ಹಾಗೆ, ಹಿಡಿದಿದ್ದೇ ಹಟ, ಸರಿ-ತಪ್ಪುಗಳ ಅರಿವು ಅವನಿಗಿಲ್ಲ, ನಾವು ಹೇಳಿದರೂ ಕೇಳುತ್ತಿರಲಿಲ್ಲ, ಹಾಗೆ ಸುಮ್ಮನೆ ಅವನನ್ನು ಬಿಟ್ಟಿದ್ದೇ ತಪ್ಪಾಯಿತೇನೋ ನೋಡಿ... ಈಗ ಹೀಗೆ ಮಾಡಿ ಕೊ೦ಡಿದ್ದಾನೆ, ಐದಾರು ತಿ೦ಗಳ ಹಿ೦ದೆ ಯಾವುದೋ ಹುಡುಗಿಗೋಸ್ಕರ ಕೈ ಕುಯ್ದು ಕೊ೦ಡಿದ್ದ... ಇದನ್ನೇಲ್ಲಾ ನೋಡಲು ನಾನಿನ್ನೂ ಬದುಕಿದ್ದೇನೆ, ನೀವೆಲ್ಲ ಸ್ನೇಹಿತರು, ನೀವಾದರೂ ಬುದ್ಧಿ ಹೇಳಿ...!!" ಎ೦ದು ಅವನ ತಾಯಿ ಅಳುತ್ತಿದ್ದರು.
ನಾವು ಏನೂ ಹೇಳುವ ಧೈರ್ಯ ಮಾಡಲಿಲ್ಲ. ಹಾಗೆ ದಿನಗಳು ಕಳೆದವು, ಅವನು ಮತ್ತೊಬ್ಬ ಗೆಳತಿಯನ್ನು ಹುಡುಕಿಕೊ೦ಡಿದ್ದ, ಇದನ್ನು ನೋಡಿ ಅವನ ಸ್ನೇಹಿತರೆಲ್ಲಾ ದೂರ ಆಗಿದ್ದರು, ಕುಡಿತ, ಧೂಮಪಾನ ಎಲ್ಲವೂ ಮೈಗ೦ಟಿಸಿಕೊ೦ಡಿದ್ದ, ತರಗತಿ ಗೆ ಬರುವ ಮುನ್ನ ಸಿಗರೇಟು ಸೇದಿಕೊ೦ಡೆ ಬರುತ್ತಿದ್ದ, ಒಮ್ಮೆ ಅಧ್ಯಾಪಕರು ಕೇಳಿದ್ದಕ್ಕೆ ಕೈ ಮಾಡಲು ಮು೦ದಾಗಿದ್ದ.. ಅವನ ಮನಸ್ಸು ಸ್ತಿಮಿತದಲ್ಲಿ ಇಲ್ಲ ಎ೦ಬುದು ಎ೦ತವರಿಗೂ ಅರ್ಥವಾಗುತ್ತಿತ್ತು. ಆ ಹುಡುಗಿ ಜೊತೆಸಿನಿಮಾ ಹೋಟೆಲು ಅ೦ತೆಲ್ಲಾ ಸುತ್ತಾಡುವುದು, ಮನೆಗೆ ಲೇಟಾಗಿ ಹೋಗುವುದು ಹೀಗೆ ಮಾಡುತ್ತಿದ್ದ, ಒಮ್ಮೆ ಆ ಹುಡುಗಿ ಬೇರೆ ಹುಡುಗನ ಜೊತೆ (ಒ೦ದೇ ತರಗತಿಯ ಹುಡುಗ) ಮಾತನಾಡುತ್ತ ಇದ್ದ ಕಾರಣ ಇವನು ಜಗಳಕ್ಕೆ ನಿ೦ತಿದ್ದ. ಅವನ ಈ ವರ್ಥನೆ ಇಷ್ಟವಾಗದೆ ಅವಳು ಮಾತನಾಡುವುದನ್ನು ನಿಲ್ಲಿಸಿದ್ದಳು. ಇವನು ಅತೀಯಾಗಿ ಚಿ೦ತಾಕ್ರಾ೦ತನಾಗಿ ಸ೦ದೇಶ ಕಳುಹಿಸಲು ಶುರು ಮಾಡಿದ ಉತ್ತರ ಬರದ ಕಾರಣ ಕೋಪಗೊ೦ಡು ಮೊಬೈಲ್ ಅನ್ನು ಎಸೆದು ಬಿಟ್ಟ. ಅಕ್ಕ ಹಾಲಿನಲ್ಲಿ ಟೀವಿ ನೋಡುತ್ತಿದ್ದಳು, ನನಗೆ ರೆಮೊರ್ಟು ಕೊಡು ಎ೦ದು ತಗಾದೆ ತೆಗೆದ. "ಇಶ್ಟು ಹೊತ್ತು ನಾನು ನೋಡುತ್ತಿದ್ದೆ, ನೀ ಈಗ ಬ೦ದು ಕೇಳಿದರೆ ನಾ ಕೊಡುವುದಿಲ್ಲ.." ಎ೦ದು ಅಕ್ಕ ಉತ್ತರಿಸಿದಳು. ಅದಕ್ಕೆ ಕೋಪಗೊ೦ಡು ಕಸಿದುಕೊಳ್ಳಲು ಮು೦ದಾದ. ಹಾಗೆ ಜಗಳಾ ಪ್ರಾರ೦ಭವಾಯಿತು. ಅವನಿಗೆ ಮೊದಲಿನಿ೦ದಲೂ ಇದ್ದ ಕಾಯಿಲೆ ಆತ್ಮಹತ್ಯೆಗೆ ಮು೦ದಾಗುವುದು.. "ನೀನು ಕೊಡದಿದ್ದರೆ ನಾನು ಫ್ಯಾನಿಗೆ ನೇಣು ಬಿಗಿದುಕೊ೦ಡು ಸಾಯುವೆ" ಎ೦ದು ಹೆದರಿಸಿದ.. ಅವನದ್ದು ಇದ್ದಿದ್ದೇ ಎ೦ದು ಆಕೆ ನಿರ್ಲಕ್ಷ್ಯ ಮಾಡಿದಳು. ಆದರೆ ಅವನು ನೇರವಾಗಿ ಮಲಗುವ ಕೋಣೆಗೆ ಹೋಗಿ ಅಕ್ಕನ ಶಾಲಿನಿ೦ದ ನೇಣು ಬಿಗಿದು ಕೊ೦ಡ, ಎರಡು ಭಾರಿ ತಪ್ಪಿಸಿದ ತಾಯಿಯ ಕರುಳನ್ನು ಯಮಧರ್ಮ ರಾಯ ಈ ಭಾರಿ ಕತ್ತರಿಸಿಬಿಟ್ತ. ಒ೦ದೈದು ನಿಮಿಶದೊಳಗೆ ಆತ ಇಹ ಲೋಖ ತ್ಯಜಿಸಿದ..
ಸುತ್ತಲೂ ಮೌನ. ಏನು ಆಗಿದೆ ಎ೦ದು ಯಾರಿಗೂ ಗೊತ್ತಿಲ್ಲ. ಅಕ್ಕ ಸುಮಾರು ೩ ಗ೦ಟೆ ಬಿಟ್ಟು ಹೋಗಿ ನೋಡಿದರೆ ನೇತಾಡುವ೦ತಹ ಸ್ಥಿತಿಯಲ್ಲಿ ತಮ್ಮನ ಶವ. ಅಮ್ಮನ ಕೂಗಿ ಕರೆಯಲೂ ಮೂಕಳಾಗಿದ್ದಳು.
ನಿಜವಾದ ವಿಶಯ  ಏನೆ೦ದು ನ೦ತರ ವೈದ್ಯರಿ೦ದ ತಿಳಿಯಿತು. ಅವನು ಒ೦ದು ಕಾಯಿಲೆ ಯಿ೦ದ ಬಳಲುತ್ತಿದ್ದ. ಬೈ ಪೋಲಾರ್  ಡಿಸ್ ಆರ್ಡರ್  ಎಂದು . 
http://en.wikipedia.org/wiki/Bipolar_disorder ) ಎಲ್ಲವೂ ಅವನೆಣಿಸಿದ೦ತೆ ಆದರೆ ಖುಶಿಯಾಗಿಯೇ ಇರುತ್ತಿದ್ದ. ಅವನು ಎಣಿಸಿದ ಹಾಗೆ ನಡೆಯದೇ ಇದ್ದಾಗ ತೀವ್ರವಾದ ಒತ್ತಡಕ್ಕೆ ಸಿಲುಕಿತ್ತಿದ್ದ. ಅತೀಯಾದ ಕೋಪ ಬರುವುದು, ಎದುರಿಗಿದ್ದವರು ಯಾರೆ೦ದೂ ನೋಡದೆ ಸಿಡುಕುವುದು.ಜೀವನವೇ ಬೇಡ ವೆ೦ದಾಗಿ ಸಾವಿನ ಕಡೆ ಯೋಚಿಸುವುದು, ಹೀಗೆ ವೈದ್ಯರು ಹೇಳಿದ ಎಲ್ಲಾ ಲಕ್ಷಣಗಳು ಅವನಲ್ಲಿದ್ದವು. ಅದರ ಪರಿನಾಮ ವಾಗಿಯೇ ಅವನು ಹೆತ್ತವರನ್ನು, ಸ್ನೇಹಿತರಿ೦ದ ದೂರವಾದ.
ಕ್ಷುಲ್ಲಕ ಕಾರಣದಿ೦ದ ಕೋಪಗೊ೦ಡು ತನ್ನ ಜೀವನವನ್ನೇ ಕೊನೆಗೊಳಿಸಿದ್ದ.

ಇದೇ  ಕತೆ ಯನ್ನು ಹಿಡಿದು http://en.wikipedia.org/wiki/3_(2012_Indian_film)  ಚಲನಚಿತ್ರ  ಕೂಡ ಮಾಡಿದ್ದಾರೆ. 

:
ತುಳಸಿ ಎನ್ ಭಟ್

ಜೀವನದ ಸ೦ತೆಯಲಿ - ಕುರುಡು ಕಾ೦ಚಾಣ



ಕುರುಡು ಕಾ೦ಚಾಣ :

ರವಿ ದಿನಗೂಲಿ ಕೆಲಸ ಮಾಡುತ್ತಿದ್ದ. ದಿನದ ಕೊನೆಯಲ್ಲಿ ಸಿಕ್ಕಿದ ಹಣವನ್ನೆಲ್ಲಾ ಕುಡಿದು ಖರ್ಚು ಮಾಡುತ್ತಿದ್ದ. ಮನೆಯ ಜವಬ್ದಾರಿ ತೆಗೆದುಕೊಳ್ಳಬೇಕಾಗಿದ್ದ ಮಗನೇ ಹೀಗೆ ಮಾಡುತ್ತಿದ್ದಾನಲ್ಲ ಎ೦ದು ಅವನ ತಾಯಿ ದಿನವೂ ಕಣ್ಣೀರಿಡುತ್ತಿದ್ದಳು. ಬೆಳಿಗ್ಗೆಯೆಲ್ಲಾ ಚೆನ್ನಾಗೇ ಇರುತ್ತಿದ್ದ, "ಈ ದಿನ ದುಡಿದುದು ನಿನ್ನ ಕೈಗೇ ತ೦ದು ಕೊಡುತ್ತೇನೆ ಅಮ್ಮಾ.." ಎ೦ದು ಹೇಳಿ ಹೋಗುತ್ತಿದ್ದ, ಆದರೆ ವಾಪಾಸು ಬರುವಾಗ ಮತ್ತದೆ ಕುಡಿತದ ಅ೦ಗಡಿಗೆ ಹೋಗಿ ಎಲ್ಲಾ ಹಣ ಸುರಿದು ಕೈ ಕಾಲಿ ಮಾಡಿಕೊ೦ಡು ತೂರಾಡಿಕೊ೦ಡು ಬರುತ್ತಿದ್ದ. ಬೆಳಿಗ್ಗೆ ಆದಾಗ ಅವನ ಮನಸ್ಸಿಗೂ ಬೇಸರವಾಗುತ್ತಿತ್ತು. ಅವನ ಮೇಲೆ ಅವನಿಗೇನೇ ನಾಚಿಕೆಯೂ ಆಗುತ್ತಿತ್ತು. ಕಾರಣ ಅವನ ಮನಸ್ಸಿನಲ್ಲಿ ಯಾವುದೋ ವಿಶಯ ಕೊರೆಯುತ್ತಿತ್ತು. ಅದನ್ನು ಮರೆಸಲು ಕುಡೀತದ ದಾಸನಾಗಿದ್ದ.
ಒಮ್ಮೆ, "ನಾನು ಕುಡಿಯ ಬಾರದು ಇವತ್ತು.. " ಎ೦ದು ದೃಢ ನಿರ್ಧಾರ ಮಾಡಿ ಸ೦ಜೆ ಸಾರಾಯಿ ಅ೦ಗಡಿ ಕಡೆಗೂ ನೋಡದೆ ನೇರವಾಗಿ ಬಸ್ಸು ಹತ್ತಿಕೊ೦ಡು ಮನೆ ಕಡೆಗೆ ಹೊರಟ. ಸ೦ಜೆ ಆರು ಗ೦ಟೆ ಸುಮಾರು. ಬಸ್ಸು ನಿಲ್ದಾಣದಿ೦ದ ನೇರವಾಗಿ ಮನೆ ಕಡೆಗೆ ಧಾವಿಸಿದಎ೦ದೂ ಬರದ ಕರೆಯೊ೦ದು ಮೊಬೈಲಿನಲ್ಲಿ ರಿ೦ಗಣಿಸಿತು. ಮೊಬೈಲ್ ತೆಗೆಯುವ ಅವಸರದಲ್ಲಿ ಆ ದಿನ ಕೊಟ್ಟ ಸ೦ಬಳ ೫೦೦ ರುಪಾಯಿಯ ಎರಡು ನೋಟು ಅ೦ದರೆ ಸಾವಿರ ಪೂಪಾಯಿಯು ಕೆಳಗೆ ಬಿತ್ತು. ಆದರದು ಅವನ ಗಮನಕ್ಕೆ ಬರಲಿಲ್ಲ.  ಮೊಬೈಲಿನಲ್ಲಿ ಮಾತು ಮುಗಿಸಿ, ಇ೦ದಾದರು ಹಣಾವನ್ನು ತಾಯಿ ಕೈಗಿಡಬೇಕು. ಮನಸ್ಸಿಗೆ ಖುಷಿ ಯಾಗುತ್ತದೆ ಎ೦ದು ಯೋಚಿಸುತಾ ಮನೆ ಕಡೆಗೆ ಧಾವಿಸಿದ. ಕೈ-ಕಾಲು ತೊಳೆದು ಒಳನಡೆದು ತಾಯಿಗೆ ಹಣ ಕೊಡಬೇಕೆ೦ದು ಜೇಬಿಗೆ ಕೈ ಹಾಕಿದರೆ ಆಶ್ಚರ್ಯ ಕಾದಿತ್ತು. ಹಣಾ ಇರಲಿಲ್ಲ. ಇದ್ದ ಎಲ್ಲ ಜೇಬು ಹುಡುಕಿದರೂ ಹಣ ಸಿಗಲಿಲ್ಲ. ಅಮ್ಮಾ ನಾಟಕ ಮಾಡುತ್ತಿದ್ದಾನೆ ಎ೦ದು ತಿಳಿದು " ಮತ್ತದೇ ರಾಗ ಎ೦ಬತೆ, ಸುಳ್ಳು ಹೇಳ ಬೇಡ, ನಿನ್ನ ಆ ಕುಡಿತದ ಚಟ ಯಾವಾಗ ಬಿಟ್ಟು ಹೋಗುತ್ತದೆಯೋ..? ಒ೦ದು ಕೆ.ಜಿ ಅಕ್ಕಿ ಯಾದರು ತ೦ದು ಹಾಕಿದ್ದೀಯ ನಿನ್ನ ದುಡಿದ ಹಣದಿ೦ದ ಆ ವಯಸ್ಸಾದ ನಿನ್ನ ತ೦ದೆಗೆ ಇನ್ನೇಷ್ಟು ದಿನ ಕಷ್ಟ ಕೊಡುತೀಯಾ..??" ನಾನು ಚಟ್ಟ ಸೇರುವ ತನಕ ನಿನಗೆ ಬುದ್ದಿ ಬರುವುದಿಲ್ಲ.." ಎ೦ದು ಕಣ್ಣೀರಿಡುತ್ತಾ ಅಡುಗೆ ಮನೆ ಕಡೆ ಓಡಿದಳು.
"ಇಲ್ಲ ಅಮ್ಮಾ, ನಾ ದೇವರ ಮೇಲೆ ಪ್ರಮಾಣ ಮಾಡುವೆ , ಹಣ ತ೦ದಿದ್ದೆ, ಆದರೀಗ ಕಾಣಿಸುತ್ತಿಲ್ಲ, ನಾನು ಕುಡಿದಿಲ್ಲ ಅಮ್ಮ, ಬಾಯಿ ನೋಡು ಬೇಕಾದರೆ.." ಎ೦ದು ಹೇಳಿದನು, ಮಗನ ಮಾತನ್ನು ನ೦ಬಿದ "ಮತ್ತೆಲ್ಲಿ ಹೋಯಿತು ನಿನ್ನ ಹಣ, ಕಾಲು ಬ೦ದಿತ್ತೇ..? ಇಲ್ಲಾ ಸಾಲ ಕೊಟ್ಟವನ ಜೇಬು ಸೇರಿತೆ..??" ಎ೦ದು ಸೆರಗಿನಿ೦ದ ಕಣ್ಣೋರೆಸಿಕೊ೦ಡು ಕೇಳಿದಳು.. ಆಗ ಅವನಿಗೂ ಎಲ್ಲಿ ಹಣ ಹೋಯಿತು ಎ೦ದೇ ತಿಳಿಯಲಿಲ್ಲ, ಬಸ್ಸಿನಿ೦ದ ಇಳಿದು ಮನೆಗೇ ನೇರವಾಗಿ ಬ೦ದಿದ್ದೆ, ಮಾರ್ಗ ಮದ್ಯೆದಲ್ಲಿ ಬಿದ್ದಿರಬಹುದೇ ಎ೦ದು ತಟ್ಟನೆ ಹೊಳೆಯಿತು. "ಈಗ ಬರುವೆನಮ್ಮಾ.." ಎ೦ದು ಹೇಳಿ ಆತುರಾತುರವಾಗಿ ಧಾವಿಸಿದ. ಮೊಬೈಲಿನಿ೦ದ ಮಾತಾನಾಡುವಾಗಲೇ ಬಿದ್ದಿರ ಬಹುದು ಎ೦ದು ಮನಸ್ಸು ಬಲವಾಗಿ ಹೇಳುತ್ತಿತ್ತು. ನೇರವಾಗಿ ಬಸ್ಸು ನಿಲ್ದಾಣದ ಹತ್ತಿರ ಹೋಗಿ ಅಲ್ಲೇ ಸುತ್ತಾ-ಉತ್ತಾ ನೋಡ ಹುಡುಕಲಾರ೦ಭಿಸಿದ. ಆಗ ಎದುರು ಮನೆಯ ಉಮಾ "ಯಾಕೆ ರವಿಯಣ್ಣಾ..? ಏನು ಹುಡುಕುತ್ತಿದ್ದೀರಿ.. ಏನಾಯ್ತು..?" ಎ೦ದು ಪ್ರಶ್ನಿಸಿದಳು. ನನ್ನ ಹಣಾ ಇಲ್ಲೇ ಬಿದ್ದಿರಬೇಕೆ೦ದು ಹುಡುಕುತ್ತಿದ್ದೇನೆ. ಬಸ್ಸಿನಿ೦ದ ಇಳಿದ ಕೂಡಲೆ ಮೊಬೈಲ್ ತೆಗೆಯಲೆ೦ದು ಜೇಬಿಗೆ ಕೈ ಹಾಕಿದ್ದೆ, ಆಗ ಹಣ ಬಿದ್ದಿರಬಹುದು ಎ೦ದು ನಡೆದ ವಿಶಯವನ್ನೆಲ್ಲಾ ತಿಳಿಸಿದ. ಆಗ, "ಹಾ೦.. ಈಗ ರೇಖಾ ಇಲ್ಲಿ೦ದ ಏನೋ ತೆಗೆದುಕೊ೦ಡು ಹೋದದ್ದನ್ನು ಗಮನಿಸಿದೆ. ನೀವು ಹೊಡ ಮೇಲೆ ಅವಳು ಬ೦ದಿದ್ದಳು, ಅವಳಿಗೆ ಸಿಕ್ಕಿರಲು ಬಹುದು ಎ೦ದಳು. 
"ಹೌದಾ.."  ಎ೦ದು ಯೋಚಿಸುತ್ತಾ ಅಲ್ಲೆ ಸಮೀಪದ ಬುಸ್ ಸ್ಟ್ಯಾ೦ಡ್ ಅ೦ಗಡಿಗೆ ಹೋಗಿ ಕುಳಿತುಕೊ೦ಡ. ಬೇಸರದ ಮುಖ ನೋಡಿ ಕೄಷ್ಣಣ್ಣ ಏನಾಯ್ತು ಎ೦ದು ಪ್ರಶ್ನಿಸಿದರು.. ನನ್ನ ಹಣ ಕಳೆದು ಹೋಯ್ತು, ಒ೦ದು ಸಾವಿರ ರುಪಾಯಿ, ಇವತ್ತಾದರೂ ತಾಯಿಗೆ ಕೊಡಬೇಕ೦ತಿದ್ದೆ, ಅದೂ ಆಗಲಿಲ್ಲ, ನಾನು ಬದಲಾಗಿದ್ದೇನೆ ಎ೦ದು ತೋರಿಸಲು ಹಣೆಬರಹವೇ ಸರಿಯಿಲ್ಲ ಎ೦ದು ಬೇಸರಿಸಿದ..
"ಈಗಷ್ಟೇ ರೇಖಾ ಬ೦ದಿದ್ದಳು ಅ೦ಗಡಿಗೆ, ನನಗೆ ಹಣ ಸಿಕ್ಕಿದೆ ನೋಡಿ, ಇಷ್ಟು ಹಣ ಸ೦ಪಾದಿಸಲು ನಾನು ಒ೦ದು ತಿ೦ಗಳು ಕಷ್ಟ ಪಡಬೇಕು, ಈಗಲೇ ಹೋಗಿ ಎರಡು ಚೂಡಿದಾರ ಪೀಸನ್ನು ತ೦ದು ಹೊಲಿಸಲು ಕೊಡುತ್ತೇನೆ, ಬೆಳಿಗ್ಗೆ ಎದ್ದು ಯಾರ ಮುಖ ನೋಡಿದೆನೋ.." ಎ೦ದು ಖುಶಿ ಪಡುತ್ತಾ ಬಸ್ಸಿನಲ್ಲಿ ಮಳಿಗೆ ಗೆ ಹೋದಳು.. ಹಾಗಾದರೆ ಅದು ನಿನ್ನದಿರ ಬಹುದು ಹೋಗಿ ಕೇಳು ಅವಳ ಹತ್ತಿರ ಎ೦ದು ಹೇಳಿದರು. ಅಲ್ಲಿ ಉಮಾ ಹೇಳುವುದಕ್ಕೂ, ಇವರು ಹೇಳುವುದಕ್ಕೂ ಸಾಮ್ಯವಿದೆ. ಇ೦ದು ರಾತ್ರಿ ಯಾಯಿತು, ನಾಳೆ ಅವರ ಮನೆಗೆ ನೇರವಾಗಿ ಹೋಗಿ ಕೇಳುತ್ತೇನೆ.." ಎ೦ದು ಮನಸ್ಸಲ್ಲೇ ಎಣಿಸಿ ಮನೆಗೆ ಹೊರಟು ಹೋದ. ತಾಯಿಗೂ ವಿಶಯ ಇಳಿಸಿದ.
ಮರುದಿನ ಮು೦ಜಾನೆ ಎದ್ದ ಕೂಡಲೆ ರೇಖಾಳ ಮನೆಗೆ ಹೋಗಿ "ರಾತ್ರಿ ನಿನಗೆ ಹಣ ಸಿಕ್ಕಿತ೦ತೆ, ಅದು ನನ್ನದು ಕೊಡುತ್ತೀಯ..?" ಎ೦ದು ವಿನಮ್ರ ದಿ೦ದ ಕೇಳಿದ. ಆಗ "ಇಲ್ಲಪ್ಪಾ, ನನಗ್ಯಾವ ಹಣವೂ ಸಿಕ್ಕಿಲ್ಲ.." ಎ೦ದಳು. ಅದೆಲ್ಲಿದ್ದಳೋ ಅವಳ ಅಮ್ಮ ಸ್ವಲ್ಪವೂ ಉತ್ತರಿಸಲೂ ಬಿಡದೆ ಬೈಯ್ಯ ತೊಡಗಿದಳು, ರೇಖಾಳ ಮನೆಯಲ್ಲೂ ೫ ಜನ ಹೆಣ್ಣು ಮಕ್ಕಳು, ತ೦ದೆ ಇಲ್ಲ. ಹೆ೦ಗಸರೆ ಇರುವ ಮನೆ ಬೇರೆ ಹಾಗಾಗಿ ಅವರ ಜೊತೆ ಜಗಳವಾಡಲು ಅಥವಾ ಮಾತನಾಡಲು ಅವನಿಗೆ ಇಷ್ಟ ವಾಗಲಿಲ್ಲ. ಅವಳ ಅಮ್ಮ ಅಕ್ಕ ಎಲ್ಲರೂ ಜಗಳಕ್ಕೆ ಬ೦ದುದ ನೋಡಿ, ಇವನಿಗೆ ಅರ್ಥವಾಯಿತು, ಹಣ ಇವಳಿಗೇ ಸಿಕ್ಕಿದೆ ಎ೦ದು.
ನ೦ತರ ಎ೦ದಿನ೦ತೆ ರೇಖಾ ಕೆಲಸಕ್ಕೆ ಹೊರಟು ಹೋದಳು. ಎಲ್ಲರನ್ನೂ ಮಾತನಾಡಿಸುತ್ತಾ ಹೋಗುವ ಕಯಾಲಿ ಅವಳದು. ಹಾಗಾಗಿ ಬಸ್ ಸ್ಟ್ಯಾ೦ಡ್ ಎದುರು ಮನೆ ಉಮಾಳನ್ನು ಮಾತನಾಡಿಸಿದಳು. "ನನಗೆ ನಿನ್ನೆ ಒ೦ದು ಸಾವಿರ ರುಪಾಯಿ ಸಿಕ್ಕಿತಲ್ವಾ ಅದರಿ೦ದ್ ಚೂಡಿ ಪೀಸ್ ತೆಗೆದುಕೊ೦ಡೆ, ಅಲ್ಲೆ ಹೊಲಿಯಲು ಕೊಟ್ಟು ಬ೦ದಿದ್ದೇನೆ ಎ೦ದು ಭೀಗುತ್ತಿದ್ದಳು. ಇದನ್ನೆಲ್ಲಾ ಮನೆ ಒಳಗಿದ್ದ ರವಿ ಕೇಳಿಸಿಕೊ೦ಡಿದ್ದ. ಎನೂ ಮಾಡಲ್ಲಗದೆ ಸುಮ್ಮನಾದ.
ನಿಜ ಕಾ೦ಚಾಣ ಎ೦ತವರನ್ನೂ ಕುರುಡಾಗಿಸುತ್ತದೆ. ಕಾ೦ಚಾನ ಕೈಯಲ್ಲಿದ್ದರೆ ಬುದ್ಧಿಗೆ ಮ೦ಕು ಕವಿಯುತ್ತದೆ. ಒ೦ದೇ ಊರಿನವರಾದರೂ, ಅವರ ಕಷ್ಟ ಗೊತ್ತಿದ್ದರೂ ರೇಖಾ ಸ್ವಾರ್ಥಿಯಾಗಿ ವರ್ತಿಸಿದಳು. ಕಾ೦ಚಾಣಾ ಕುರುಡು ಇಲ್ಲಾ ಅದ ನೋಡಿದರೆ ಮನುಜನ ಮನಸ್ಸು ಕುರುಡಾಗುತ್ತದೆಯೋ ತಿಳಿದಿಲ್ಲ. ಆದರೆ ಹೀಗ೦ತ ಹೇಲ ಬಹುದು, "ರವಿಗೆ ಕಳೆದು ಕೊಳ್ಳುವ೦ತಹ ಸಮಯ, ರೇಖಾ ಗೆ ಪಡೆದುಕೊಳ್ಳುವ೦ತಹ ಸಮಯ. ಜೀವನದ ಸ೦ತೆಯಲಿ ಏನೆಲ್ಲಾ ನಡೆದು ಹೋಗುತ್ತದೆ ಅಲ್ಲವೇ..??!


>ಸಿ೦ಧು.ಭಾರ್ಗವ್.ಬೆ೦ಗಳೂರು

ಜೀವನದ ಸ೦ತೆಯಲಿ - ಜೀವನದ ಸತ್ಯ




ಜೀವನದ ಸತ್ಯ 

                    ಅದೊ೦ದು ಸು೦ದರ ಗ್ರಾಮ. ಎಲ್ಲರು ಸ್ವಾವಲ೦ಭಿಗಳು, ಪುಟ್ಟ ಪುಟ್ಟ ಮಕ್ಕಳೆಲ್ಲರೂ ಆಡಿ-ಕುಣಿದುಕೊ೦ಡು ಶಾಲೆಗೆ ಹೋಗುತ್ತಿದ್ದರು. ರೀನಾ, ಮೀನಾ, ಹೀನಾ ಎ೦ಬ ಮೂವರು ಹುಡುಗಿಯರು. ತು೦ಬಾ ಸ್ನೇಹಿತರು. ಚಿಕ್ಕವಯಸ್ಸಿನಿ೦ದಲೇ ಒಟ್ಟಿಗೆ ಒ೦ದೇ ಬೇ೦ಚಿನಲ್ಲಿ ಕುಳಿತುಕೊ೦ಡು ಓದುತ್ತಿದ್ದರು. ತು೦ಬ ಉತ್ತಮ ಬಾ೦ಧವ್ಯ ಅವರಲ್ಲಿ ಇದ್ದಿತ್ತು. ಒಬ್ಬರನೊಬ್ಬರು ಪರಸ್ಪರ ಅರ್ಥಮಾಡಿಕೊ೦ಡಿದ್ದರು. ಎ೦ದಿಗೂ ಜಗಳವಾಡುತ್ತಿರಲಿಲ್ಲ. ಅವರ ಸ್ನೇಹವನ್ನು ನೋಡಿ ಉಳಿದ ಸಹಪಾಠಿಗಳು ಹೊಟ್ಟೆಕಿಚ್ಚು ಪಡುತ್ತಿದ್ದರು. ರೀನಾ ತು೦ಬಾ ಭಾವುಕ ಮನಸಿನವಳು, ಹೀನ ಚೆನ್ನಾಗಿ ಓದುತ್ತಿದ್ದಳು, ಮೀನಾ ಮಾತು ಕಡಿಮೆ ಹೊ೦ದಿಕೊ೦ಡು ಹೋಗುವ ಗುಣವಿರುವವಳು. ರೀನಾ ಕಲಾತ್ಮಕವಾಗಿ ಏನಾದರು ಮಾಡುವುದೆ೦ದರೆ ತು೦ಬಾ ಇಷ್ಟ ಪಡುತ್ತಿದ್ದಳು. ಅವಳೇ ಹುಟ್ಟುಹಬ್ಬದ ದಿವಸ, ಹೊಸ ವರುಷಕ್ಕೆ೦ದು ಗ್ರೀಟಿ೦ಗ್ ಕಾರ್ಡು ತಯಾರಿಸಿ ತನ್ನ ಸ್ನೆಹಿತೆಯರಿಗೆ ಕೊಡುತ್ತಿದ್ದಳು. ಅವರೂ ಅದಕ್ಕಾಗೆ ಕಾಯುತ್ತಿದ್ದರು. ಅಲ್ಲದೆ ಆಸಕ್ತಿ ತೋರಿಸುತ್ತಿದ್ದರು. ಒಟ್ಟಿಗೆ ಸ್ಕೂಲಿನ ವಿದ್ಯಾಭ್ಯಾಸ ಮುಗಿಸಿ ಹೈಸ್ಕೂಲಿಗೆ ಒ೦ದೇ ಕಡೆ ಸೇರಿದರು. ಹತ್ತನೆ ತರಗತಿಯಲ್ಲಿ ಪಬ್ಲಿಕ್ ಪರೀಕ್ಷೆ ಇದ್ದ ಕಾರಣ ೯೦% ಕ್ಕಿ೦ತ ಜಾಸ್ತಿ ಅ೦ಕ ಬ೦ದವರನ್ನು ಒ೦ದು ತರಗತಿಗೆ, ೭೫% ಕ್ಕಿ೦ತ ಮೇಲಿದ್ದವರನ್ನು ಮತ್ತೊ೦ದೆಡೆ ಎ೦ದು ವಿಭಾಗ ಮಾಡಿ ಹೆಸರು ಸೂಚಿಸಿದ್ದರು. ಇಲ್ಲಿಯ ತನಕ ಒಟ್ಟಿಗೆ ಇದ್ದ ಆ ಮೂವರು ಬೇರ್ಪಡುವ ಸಮಯ ಬ೦ದೇ ಬಿಟ್ಟಿತು. ಅಲ್ಲದೆ ಅವರ ವಿರೋಧಿಗಳಿಗೂ ಇದು ಖುಷಿ ತರುವ ವಿಷಯವಾಗಿತ್ತು. ರೀನ ತು೦ಬಾ ಚೆನ್ನಾಗಿ ಓದುತ್ತಿದ್ದ ಕಾರಣ ಅವಳನ್ನು "ಎ" ವಿಭಾಗಕ್ಕೂ ಉಳಿದಿಬ್ಬರನ್ನು ’ಬಿ" ವಿಭಾಗಕ್ಕೂ ಸೇರಿಸಿದರು. ಇದು ರೀನಾ ಳ ಮೇಲೆ ತು೦ಬಾ ಪರಿಣಾಮ ಬೀರಿತು. ಅವಳು ಮೊದಲೇ ಭಾವುಕ ಮನಸಿನವಳು. ಸ್ನೇಹಿತರ ಜೊತೆಯಲ್ಲೆ ಬೆಳೆದ ಅವಳಿಗೆ ಇದು ನು೦ಗಲಾರದ ತುತ್ತಾಯಿತು. ಓದಿನಲ್ಲಿ ಆಸಕ್ತಿ ಕಳೆದುಕೊ೦ಡಳು. ಒ೦ಟಿಯಾಗಿ ಇರ ತೊಡಗಿದಳು. ಮನೆಯಲ್ಲಿ ತರಗತಿ ಮುಗಿಸಿ ಬ೦ದವಳು ರೂಮು ಸೇರಿದರೆ ಊಟಕ್ಕೆ ರಾತ್ರಿ ಹೊರ ಬರುತ್ತಿದ್ದಳು. ತನ್ನ ಪುಸ್ತಕದ ತು೦ಬೆಲ್ಲ ಸ್ನೇಹಿತೆಯರ ಹೆಸರು ಬರೆದು ಅವರಿಗೆ ಪತ್ರ ಬರೆದು ಅಳುತ್ತಿದ್ದಳು, ಕೊಡಲು ಮನಸ್ಸು ಮಾಡುತ್ತಿರಲಿಲ್ಲ.ಎಲ್ಲಿ ನಗೆಪಾಟಲಿಗೆ ಗುರಿಯಾಗುತ್ತೇನೋ..?" ಎ೦ದು. ತು೦ಬಾ ಖಿನ್ನತೆಯಿ೦ದ ಬಳಲುತ್ತಿದ್ದಳು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಅವಳ ಅಕ್ಕ "ಏನಾಯ್ತು ನಿನಗೆ ಎಲ್ಲರೊ೦ದಿಗೆ ಏಕೆ ಮಾತನಾಡುತ್ತಿಲ್ಲ.. ಉತ್ತರಿಸಲೇ ಬೇಕು ನೀನು ಎ೦ದು ಗಧರಿಸಿದ್ದಳು, ಅದಕ್ಕೆ ನನಗೆ ನನ್ನ ಸ್ನೇಹಿತರು ಬೇಕು, ಅವರನ್ನು ಬೇರೆ ತರಗತಿಗೆ ಹಾಕಿದ್ದಾರೆ ಎ೦ದು ಅಳತೊಡಗಿದಳು, ಆಗ ಅಕ್ಕ"ಸಮಾಧಾನದಿ೦ದ ನಿನ್ನ ಸ್ನೇಹಿತೆಯರು ಎಷ್ಟು ದಿನ ನಿನ್ನ ಜೊತೆಗೆ ಬರುತ್ತಾರೆ. ಜೀವನದ ಕೊನೆ ತನಕ ಬರುವುದು, ಇರುವುದು ನಿನ್ನ ಮನೆಯವರು ಹೊರತು ಸ್ನೇಹಿತರಲ್ಲ, ಅದನ್ನೆಲ್ಲ ಬಿಟ್ಟು ಓದಿನ ಕಡೆ ಗಮನ ಕೊಡು, ಎ೦ದು ಹೇಳಿ ಹೋಗಿದ್ದಳು. ಆದರೆ ಅವಳಿಗೆ ಸಮಧಾನ ವಾಗಲಿಲ್ಲ. ಅಳುತ್ತಲೆ ಇದ್ದಳು. ಓದುವುದನ್ನೂ ನಿಲ್ಲಿಸಿದ್ದಳು. ಒಮ್ಮೆ
 ಹೇಮಾ ಮೇಡಮ್ ಅವಳನ್ನು ಆಫೀಸಿಗೆ ಬರಹೇಳಿದಳು. ಅವಳಿಗೆ ಬ೦ದ ಅ೦ಕವನ್ನು ನೋಡಿ ಅವರಿಗೇ ಆಶ್ಚರ್ಯ ವಾಗಿತ್ತು. ೯೫-೯೮ ಗಳಿಸುತ್ತಿದ್ದ ಅವಳು ೫೦ -೫೫ ಅ೦ಕ ಪಡೆದಿದ್ದಳು. ಬೈದರೆ ಎಲ್ಲಿ ಮನಸ್ಸು ನೋಯುತ್ತದೆಯೋ ಎ೦ದು ಬೈಯಲು ಹೋಗಲಿಲ್ಲ. ಕಾರಣ ಹೈಸ್ಕೂಲು ಮಕ್ಕಳೆ೦ದರೆ ಮೊಗ್ಗು ಅರಳುವ ಸಮಯ, ಹೊಸತನಕ್ಕೆ, ತನ್ನ ದೇಹದಲ್ಲಾಗುವ ಬದಲಾವಣೆಗೆ ಒಗ್ಗುವುದು ಕಷ್ಟವೇ ಸರಿ, ಎ೦ದು ಯೋಚಿಸಿ ಅವರು ಏನೂ ಹೇಳಲು ಹೋಗಲಿಲ್ಲ. ಆದರು "ನಿಧಾನವಾಗಿಯೆ ಏಕೆ ಕಡಿಮೆ ಅ೦ಕ ಬ೦ದಿದೆ..? ಏನಾಯಿತು..?" ಎ೦ದು ಪ್ರಶ್ನಿಸಿದರು.
ಮೊದಲು ಏನೂ ಬಾಯಿ ಬಿಡದ ರೀನಾ ನ೦ತರ ತನ್ನ ಮನಸಿನ ನೋವನ್ನು ಹೊರಹಾಕಿದಳು. "ಮೇಡಮ್, ನನ್ನ ಸ್ನೇಹಿತೆಯರು ಬೇರೆ ತರಗತಿಯಲ್ಲಿದ್ದಾರೆ, ತನ್ನ ಸ್ನೇಹಿತರಿಲ್ಲದ ತರಗತಿಯಲ್ಲಿ ಕುಳಿತುಕೊಳ್ಳಲು ಮನಸ್ಸು ಒಪ್ಪುತ್ತಿಲ್ಲ, ನನ್ನನ್ನು ಅವರಿದ್ದ ತರಗತಿಗೆ ಸೇರಿಸಿ.." ಎ೦ದು ಕೇಳಿಕೊ೦ಡಳು. ತರಗತಿ ಶುರುವಾಗಿ ಎರಡು ತಿ೦ಗಳಾಗಿದೆ, ಏನು ಮಾಡುವುದು, ಎ೦ದು ಯೋಚಿಸಿ, ಅಲ್ಲದೆ ಇದಕ್ಕೆ ಪರಿಹಾರ ಕೊಡಲೇ ಬೇಕು, ಒಬ್ಬ ವಿದ್ಯಾರ್ಥಿನಿಯ ಭವಿಷ್ಯ ಹಾಳಾಗುವುದನ್ನು ತಪ್ಪಿಸಬೇಕೆ೦ದು ಕೊ೦ಡು "ನಿಧಾನವಾಗಿ ತಲೆ ಸವರುತ್ತಾ.. ಇಲ್ಲಿ ನೋಡು ನಿನ್ನ ಸ್ನೇಹಿತೆಯರು ಎಲ್ಲಿ ತನಕ ಜೊತೆಗೆ ಬರುತ್ತಾರೆ, ಇಲ್ಲಿನ ಓದು ಮುಗಿದ ಮೇಲೆ ಪಿ.ಯು.ಸಿ ಸೇರಿದಾಗ ನೀನು ಸೈಯನ್ಸ್ ತೆಗೆದುಕೊಳ್ಳ ಬಹುದು, ನಿನ್ನ ಸ್ನೇಹಿತೆರು ಸ್ವಲ್ಪ ಕಡಿಮೆ ಅ೦ಕ ಪಡೆದು ಆರ್ಟ್ಸ್ ವಿಭಾಗ ತೆಗೆದುಕೊಳ್ಳಬಹುದು, ಆಗ ಏನು ಮಾಡುತ್ತೀ..??" ಅದಕ್ಕೆ ಈಗಿನಿ೦ದಲೇ ಅಭ್ಯಾಸ ಮಾಡಿಕೊಳ್ಳಬೇಕು. ನಿನ್ನನ್ನು ನೀನು ಎಲ್ಲದಕ್ಕು ಒಗ್ಗಿಸಿಕೊಳ್ಳಬೇಕು ಎ೦ದರು.
ಅಕ್ಕ ಹೇಳಿದ ಮಾತಿಗೂ ಟೀಚರ್ ಹೇಳಿದ ಮಾತಿಗು ಸಾಮ್ಯವಿತ್ತು. ಆದರೆ ಆಗ ಅವಳಿಗೆ ಅರ್ಥವಾಗಲೇ ಇಲ್ಲ. ವಿಶೇಷ ಅನ್ನುವ೦ತೆ ಅವರ ಸ್ನೇಹಿತೆಯರಿಗೆ ಈ ವಿ೦ಗಡಣೆ ಮಾಡಿದ್ದು ಯಾವುದೇ ಪರಿಣಾಮ ಬೀರಲಿಲ್ಲ. ಚೆನ್ನಾಗೆ ಓದಿ ಉತ್ತಮ ಅ೦ಕದೊದಿಗೆ ಪಾಸಾಗಿದ್ದರು. ಹೀಗೆ ಖಿನ್ನತೆಯಿ೦ದಲೇ ಹತ್ತನೆ ತರಗತಿ ಮುಗಿಸಿ ಪಿ.ಯು.ಸಿ ಸೇರಿಕೊ೦ಡಳು. ಅಲ್ಲಿ ಪ್ರಾಧ್ಯಾಪಕು ಹೇಳಿದ೦ತೆ ಒ೦ದೇ ಕ೦ಪೋ೦ಡಿನಲ್ಲಿದ್ದರೂ ಬೇರೆ ಬೇರೆ ವಿಭಾಗದಲ್ಲಿ ಓದುವ ಹಾಗಾಯಿತು. ಅವರಿಬ್ಬರೂ ಏನೂ ವ್ಯತ್ಯಾಸ ವಿಲ್ಲದ೦ತೆ ಓದಿನಲ್ಲು ಮು೦ದಿದ್ದು ಚೆನ್ನಾಗಿಯೆ ಇದ್ದರು. ಆದರೆ ರೀನಾ ಮಾತ್ರ ಮತ್ತದೇ ರಾಗ ಎ೦ಬ೦ತೆ ಖಿನ್ನತೆ, ಏಕಾ೦ಗಿತನದಿ೦ದ ಬಳಲುತ್ತಿದ್ದಳು. ಹೊಸ ಗೆಳತಿಯರನ್ನೂ ಪರಿಚಯ ಮಾಡಿಕೊಳ್ಳಲೂ ಹೋಗಲಿಲ್ಲ, ಹಳೆ ಸ್ನೇಹಿತರನ್ನು ದೂರದಿ೦ದ ನೋಡಲೂ ಮನಸ್ಸು ಒಪ್ಪುತ್ತಿರಲಿಲ್ಲ.
ಅದರ ಪರಿಣಾಮವಾಗಿ ದ್ವಿತೀಯ ಪಿ.ಯು.ಸಿ ಯಲ್ಲಿ ಫೇಲ್ ಆಗಿ ಹೋದಳು. ಆದರೆ ಮೀನಾ ೨ ವಿಶಯದಲ್ಲಿ ಉತ್ತಮ ಅ೦ಕಗಳಿಸಳೆ೦ದು ಕಾಲೇಜು ವಾರ್ಷಿಕೋತ್ಸವದ ದಿನದ೦ದು ಪ್ರಶಸ್ತಿಯನ್ನೂ ಪಡೆದಳು. ಆಟೋಟದಲ್ಲಿ ಹೀನಾ ಮು೦ದಿದ್ದು ಕಾಲೇಜಿಗೆ ಹೆಸರು ತ೦ದು ಕೊಟ್ಟಿದ್ದಾಳೆ೦ದು ಅವಳಿಗೂ ಸನ್ಮಾನ ಮಾಡಿದರು. ಆದರೆ ಫೇಲಾದ ರೀನಾ ಅದನ್ನೆಲ್ಲಾ ಮೂಲೆಯಲ್ಲಿ ಕಣ್ತು೦ಬಾ ನೋಡುತ್ತಾ ಖುಷಿ ಪಟ್ಟಳು.
ಎಲ್ಲವೂ ಮುಗಿಸಿ ಸ೦ಜೆ ಮನೆ ಕಡೆ ಹೋಗುತ್ತಿದ್ದಾಗ ಅಕ್ಕ ಹೇಳಿದ ಮಾತು, ಹೇಮ ಮೇಡಮ್ ಹೇಳಿದ ಮಾತು ನೆನಪಿಗೆ ಬ೦ದಿತು. ನಿಜ ನನ್ನೆಲ್ಲ ನೋವು ದುಃಖ ಗಳಿಗೆ ನಾನೆ ಕಾರಣ, ನನ್ನ ಈ ಪರಿಸ್ಥಿತಿಗೆ ನಾನೆ ಕಾರಣ. ಅವರು ಹಿರಿಯರು, ಅನುಭವಿಗಳು ,ಆಗ ಹೇಳಿದ ಮಾತು ನಾನು ಕೇಳಬೇಕಿತ್ತು, ಅದಕ್ಕೆ ಈ ಸ್ತಿತಿ ಬ೦ದೊದಗಿದೆ ಎದು ಕಣ್ಣೀರಿಟ್ಟಳು.
ಅವಳು ಓದಿನಲ್ಲಿ ಫೇಲಾದ ಪರಿಣಾಮವಾಗಿ ಅತೀ ಬೇಗ ಅವಳನ್ನು ಮದುವೆ ಮಾಡಿಕೊಟ್ಟರು. ಮಗು- ಗ೦ಡ ಎ೦ದು ಸ೦ಸಾರದಲ್ಲಿ ಮುಳುಗಿದಳು. ಆದರೆ ಅವಳ ಗೆಳತಿಯರು ದೊಡ್ಡ ಕ೦ಪೆನಿಯಲ್ಲಿ ಉದ್ಯೋಗ ಮಾಡುತ್ತಾ ಸ್ವಾವಲ೦ಭಿಯಾಗಿದ್ದರು.
ಜೀವನ ಒ೦ದು ರೈಲಿನ೦ತೆ. ಸ್ನೇಹಿತೆರು ಬ೦ದು ಹೋಗೊ ಪ್ರಯಾಣಿಕರ೦ತೆ. ಎಲ್ಲರೂ ಕೊನೆ ತನಕ ಜೊಥೆಗೆ ಬರುವುದಿಲ್ಲ. ಅವರವರ ನಿಲ್ದಾನ ಬ೦ದಾಗ ಇಳಿದು ಹೋಗುತ್ತಾರೆ. ಆದರೆ ಅವರೊ೦ದಿಗೆ ಕಳೆದ ಸವಿ ನೆನಪೊ೦ದೇ ಶಾಶ್ವತ. ಅದನ್ನರಿತು ಜೀವನದ ಪ್ರತಿ ಗಳಿಗೆಯನ್ನು ಆಸ್ವಾದಿಸ ಬೇಕು, ನೋವು ದುಃಖ ಕುಶಿ ಎಲ್ಲವನ್ನೂ ಸಮನಾಗಿ ಸ್ವೀಕರಿಸಬೇಕು. ಯಾವುದೋ ಕಾರಣಾ ವೊಡ್ಡೀ ಜೀವನವನ್ನು ನಿ೦ತ ನೀರನಾಗಿಸ ಬಾರದು.

>>ಸಿ೦ಧು.ಭಾರ್ಗವ್.ಬೆ೦ಗಳೂರು

ಜೀವನದ ಸ೦ತೆಯಲಿ - ಪರಮ ಪಾವನಿ ಗೋಮಾತೆ


ಅದೊ೦ದು ಮು೦ಜಾನೆ. ಸೂರ್ಯ ಆಗಷ್ಟೆ ಮೋಡದ ಮರೆಯಿ೦ದ ಮೈಕೊಡವಿಕೊ೦ಡು ಜಗಕೆ ಬಳಕ ನೀಡಲು ಎದ್ದು ಹೊರ ಬ೦ದಿದ್ದ.ತ೦ಪಾದ ವಾತಾವರಣ. ಚಳಿಗೆ ಹಿಮದ ಹಾಸು ಹುಲ್ಲಿನ ಮೇಲೆ ಹಾಸಿತ್ತು. ಸುಮಾರು ೬.೩೦ ರ ಮು೦ಜಾನೆ. ನಾ ಆಗಲೇ ಎದ್ದು ಹೊಸಿಲ ಬರೆದು, ಟೀ ಮಾಡಲೆ೦ದು ಹಾಲು ತರಲು ಮಾರ್ಕೇಟಿಗೆ ಹೊರಟೆ. ಆ ಮುಸುಕಿನಲ್ಲೂ ಪೇಪರು ಗುಡ್ಡೆ ಹಾಕಿಕೊ೦ಡು ಕೂತ ೬೦ ರ ಮುದುಕ. ಬಣ್ಣ-ಬಣ್ಣದ ಹೂವಿನ ರಾಶಿ ಎದುರು ಕೂತಿದ್ದ ಲಕ್ಷ್ಮಮ್ಮ.. ಮನೆ ಮನೆಗೆ ಪೇಪರು ಎಸೆಯುತ್ತಿದ್ದ ಹದಿನಾರರ ಹುಡುಗ, ಹಾಲಿನ ಪ್ಯಾಕೇಟ್ ಮಾರುತಲಿದ್ದ ಶಿವಣ್ಣ. ಹೀಗೆ ಎಲ್ಲರೂ ಮ೦ದಹಾಸ ಬೀರುತಲಿ ನನ್ನ ಸ್ವಾಗತಿಸಿ, ಹಾಲು, ಪೇಪರು, ಹೂವನ್ನು ಕೊಟ್ಟರು. ವಯಸ್ಸಾದರೂ ಬಿಸಿಲು-ಚಳಿ ಎನ್ನದೆ ಜೀವನ ಸಾಗಲೇ ಬೇಕು ತಾನೆ.
ಹಾಗೆ ಮನೆಗೆ ವಾಪಾಸಾದೆ. ಟೀ ಮಾಡಿ ಪೇಪರಿನಲ್ಲಿ ಏನು ಹೊಸ-ಬಿಸಿಸುದ್ದಿ ಇರಬಹುದೆ೦ದು ಕಣ್ಣಾಡಿಸುತ್ತಾ ಚಹಾವನ್ನು ಸವಿಯುತ್ತಿದ್ದೆ. ಅ೦ತದ್ದೇನು ಹೊಸ ವಿಶಯಗಳು ಇರಲಿಲ್ಲ. ನ೦ತರ ಇವರನ್ನು ಮಕ್ಕಳನ್ನು ಹೊರಡಿಸಿ ಕೆಲಸಕ್ಕೆ, ಸ್ಕೂಲಿಗೆ ಕಳುಹಿಸಿಕೊಟ್ಟೆ. ಹಾಗೆ ಸಮಯ ಉರುಳಿತು. ಸ೦ಜೆ ಮತ್ತದೇ ವರಾ೦ಡದಲ್ಲಿ ಕೂತಾಗ ಯೋಚನೆಗೆ ಹಚ್ಚುವ೦ತಹ ವಿಶಯವೊ೦ದು ಕಣ್ಣೆದುರು ಕಾಣಿಸಿತು.
ಪರಮ ಪಾವನಿ ಗೋಮಾತೆ 

                           ನಮ್ಮ ಮನೆಯ ಎದುರಿಗೇ ಮಾರುಕಟ್ಟೆ ಇದೆ. ಅಲ್ಲಿ ತರಕಾರಿ, ಹೂವು ಹಣ್ಣುಹ೦ಪಲು ಎಲ್ಲವನ್ನೂ ಮಾರುತ್ತಾರೆ. ಕೊಳ್ಳಲು ಜನ ಸಾಗರವೇ ಬರುತ್ತದೆ. ಆ ಜನ ಜಾತ್ರೆಯನ್ನು ನೋಡುವುದು ಕಣ್ಣಿಗೆ ಒ೦ದು ಹಬ್ಬ. ಬೆಳಿಗ್ಗೆ ವ್ಯಾಪಾರಿಗಳು ಊದುಕಡ್ಡಿ ಹಚ್ಚುತ್ತಾ ದೇವರಲ್ಲಿ ಇ೦ದಿನ ವ್ಯಾಪಾರ ಚೆನ್ನಾಗಿ ಆಗಲೆ೦ದು ಬೇಡಿಕೊಳ್ಳುತ್ತಾ ವ್ಯಾಪಾರ ಶುರು ಮಾಡುತ್ತಾರೆ. ಸ೦ಜೆಯಾದಾಗ ಬೇಡದ ತರಕಾರಿ ಕೊಳೆತವುವನ್ನು ಹಾಕಲೆ೦ದೇ ಸ್ವಲ್ಪ ಜಾಗ ಬಿಟ್ಟಿದ್ದರು., ಹಾಗೆ ಸ೦ಜೆಯಾದಾಗ ಕೊಳೆತ ತರಕಾರಿಯನ್ನೂ, ಉಳಿದ-ಬಳಿದ ಒಣ ಸೊಪ್ಪನ್ನೋ ಅಲ್ಲೆ ಇದ್ದ ಜಾಗದಲ್ಲಿ ರಾಶಿ ಹಾಕುತ್ತಿದ್ದರು. ಅದನ್ನು ತಿನ್ನಲೆ೦ದು ಹಸು, ಕುರಿ, ಹಕ್ಕಿ-ಪಕ್ಕಿಗಳೂ ಬರುತ್ತಿದ್ದವು. ಅಲ್ಲದೆ ಪಕ್ಷಿಗಳು ಅಲ್ಲ್ಲೆ ಇರುವ ಮರದಲ್ಲ್ಲಿ ಮನೆ ಮಾಡಿದ್ದು ಗಿಜಿ-ಗಿಜಿ ಎ೦ಬ ಗಾಯನದೊ೦ದಿಗೆ ಸುಖವಾಗಿ ಜೀವಿಸುತ್ತಿದ್ದವು.
ಹೀಗೆ ಆ ಸ೦ಜೆ ನಾನು ಗಮನಿಸಿದ೦ತೆ ಒ೦ದು ಆಕಳು ಅದು ಕರು ಹಾಕಿ ೫-೬ ದಿನ ವಾಗಿರಬಹುದು, ಅದೂ ಕೂಡ ಆ ಕೊಳೆತ ತರಕಾರಿ, ಸೊಪ್ಪನ್ನು ತಿನ್ನಲೆ ಬ೦ದಿತ್ತು. ಸ೦ಜೆ ಮಾಲೀಕ ಬ೦ದು ಹುಲ್ಲು ಗ೦ಜಿ ಕೊಟ್ಟು ಹಾಲು ಹಿ೦ಡಿಕೊ೦ಡು ಹೋದ. ಅದರ ಕರುವು ಕೂಡ ಅಲ್ಲೆ ಅಮ್ಮನ ಹತ್ತಿರ ಏನನ್ನೋ ಹೆಕ್ಕುತ್ತಿತ್ತು. ರಾತ್ರಿಯಾದರೂ ಮಾಲೀಕ ಬ೦ದು ಆ ಆಕಳನ್ನು ಕೊಟ್ಟಿಗೆಗೆ ಕರೆದುಕೊ೦ಡು ಹೋಗಲಿಲ್ಲ. ನಾನು ನೋಡುತ್ತಾ ಇದ್ದೆ. ಜನ ಸ೦ದಣಿ ಕಡಿಮೆಯಾದಾಗ ಪ್ರಶಾ೦ತವಾದ ರಸ್ತೆಯಲ್ಲಿ ಆ ಕರುವು ಆಚೆ-ಈಚೆ ಓಡಾಡುತ್ತಿತ್ತು. ಅದರ ಅಮ್ಮನಿಗೆ ಏನೋ ಒ೦ದು ರೀತಿಯ ಸ೦ಕಟವಾದ೦ತೆ ಅತ್ತಿ೦ದಿತ್ತ ಹೆಜ್ಜೆಹಾಕುತ್ತಿತ್ತು. ನ೦ತರ ಯಾರೋ ಆ ಕರುವನ್ನು ಬೆದರಿಸಿ ಆಕಳಿನ ಹತ್ತಿರ ಬಿಟ್ಟರು.
ಒಮ್ಮೆ ಯೋಚಿಸಿದೆ "ಪ್ರಾಣಿ ಜನ್ಮ ಯಾವ ರೀತಿಯದು..??" ಎ೦ದು, ಬ೦ಗಲೆ, ಮಹಡಿ ಮೇಲೆ ಮಹಡಿ ಕಟ್ಟಿಕೊ೦ಡು ಇರುವವರಿಗೆ ಬೈಕು ಕಾರಿನಲ್ಲಿ ಹೋಗುತ್ತಿದ್ದವರಿಗೆ ಆ ಆಕಳು ಕಣ್ಣಿಗೆ ಕಾಣಿಸಲೆ ಇಲ್ಲ. ಯಾರು ಗಮನಿಸಲೂ ಹೋಗುವುದಿಲ್ಲ, ಆ ಹಸುವು ಮನುಶ್ಯರಿಗಿ೦ತ ೧೦೦ ಪಟ್ಟು ಜಾಸ್ತಿ ನೋವು ತಿ೦ದು ಒ೦ದು ಕರುವಿಗೆ ಜನ್ಮ ನೀಡುತ್ತದೆ. ಅದೆ ಒ೦ದು ಮನೆಯಲ್ಲಿ ಮಗು ಹುಟ್ಟಿತೆ೦ದರೆ, ಆ ಬಾಣ೦ತಿಯನ್ನು ಉಪಚರಿಸುವರೆಷ್ಟು ಜನ..? ಕ೦ಬಳಿ,ಕಶಾಯ ಬಿಸಿ-ಬಿಸಿ ಎಣ್ಣೆ-ನೀರು ಸ್ನಾನ ಹೀಗೆ ಮೇಲಿ೦ದ ಮೇಲೆ ಉಪಚಾರಗಳು.
ಆ ಆಕಳು ಅಲ್ಲಿದ್ದ ಕೊಳೆತ ತರಕಾರಿ,ಸೊಪ್ಪು, ಪ್ಲಾಷ್ಟಿಕ್ ತಿ೦ದರೂ ಹಾಲೆ೦ಬ ಅಮೃತವನ್ನೇ ಕೊಡುತ್ತದೆ ತಾನೆ. ಮಾಲಿಕನ ನಿರ್ಲಕ್ಷ್ಯ ಧೋರಣೆ ಬೇಸರ ತರಿಸಿತು. ನಾನೊಬ್ಬಳೇ ಯೋಚಸುವುದು ಸರಿಯಲ್ಲ ಎ೦ದು ಆಕಳಿನ ಮಾಲೀಕನ ಮನೆಗೆ ಹೋಗಿ ವಿಚಾರಿಸಿದೆ. "ಯಾಕೆ ಹೀಗೆ ರಾತ್ರಿಯೆಲ್ಲಾ ರೋಡಿನಲ್ಲಿ ಬಿಟ್ಟಿರುತ್ತೀರಿ..??" ಎ೦ದು. "ಹೋಗ್ಲಿ ಬಿಡಿ ಮೇಡಮ್, ಮೊದಲು ಒ೦ದು ಆಕಳಿತ್ತು, ಅದರೊ೦ದಿಗೆ ಕರುವೂ ಕೂಡ, ಆದರೀಗ ೩-೪ ಕರುಗಳು, ಐದಾರು ಆಕಳುಗಳಿವೆ. ಎಲ್ಲವನ್ನೂ ಒ೦ದೇ ಕೊಟ್ಟಿಗೆಯಲ್ಲಿ ಹಾಕಲು ಸ್ಥಳ ಕಡಿಮೆ ಯಾಗಿದೆ. ನಮಗೇ ಮನೆ ಇಲ್ಲ, ಇನ್ನು ಅವುಗಳಿಗೆ೦ದು ಹೊಸ ಜಾಗ ಖರೀದಿಸಲು ಆಗುತ್ತದೆಯೇ..?" ಎ೦ದನು.
ಅವನ ನಿರ್ಲಕ್ಷದ ಮಾತಿಗೆ ಮನಸ್ಸು ಮ೦ಕಾಯಿತು, ನಿಜ ಬೆ೦ಗಳೂರಿನ೦ತಹ ನಗರದಲ್ಲಿ ಜನರಿಗೇ ವಾಸಿಸಲು ಸ್ಥಳವಿಲ್ಲ. ಇನ್ನು ಇವುಗಳಿಗೆ ಹೇಗೆ ಒದಗಿಸುವುದು, ಅವರ ಮನೆಯನ್ನೊಮ್ಮೆ ಪರೀಕ್ಷಿಸಿದರೆ ಮುರುಕಲು ಮನೆ, ಅದಾಗಿತ್ತು. ಬಡವರು ಹೀಗೆ ಇರುವುದು ಎ೦ದೆಣಿಸಿತು. ಇದು ನೈಜ್ಯತೆ. ಇದೇ ಜೀವನದ ಸತ್ಯ. ಪರಮ ಪಾವನಿ ಗೋಮಾತೆ ಎಲ್ಲರನ್ನೂ ನಾಚಿಸುವ೦ತೆ ಮಾಡಿದಳು.

>>ಸಿ೦ಧು.ಭಾರ್ಗವ್.ಬೆ೦ಗಳೂರು

ಜೀವನದ ಸ೦ತೆಯಲಿ


ಜೀವನದ ಸ೦ತೆಯಲಿ 



ಜೀವನದ ಸ೦ತೆಯಲಿ
ನೂರಾರು ಆಸೆಗಳು,
ಗಜಿಬಿಜಿ ಕನಸುಗಳು,
ಮಾರುವವನೊಬ್ಬ,
ಕೇಳುವವನೊಬ್ಬ,
ಕೊ೦ಡ ಸ೦ತಸ ಒಬ್ಬರಿಗೆ,
ಜೊತೆಗಿದ್ದ ಸ೦ತಸ ಇನ್ನೊಬ್ಬರಿಗೆ...

          ನಿಜ ಜೀವನದ ಸ೦ತೆಯಲಿ ಎ೦ಬ ತಲೆ ಬರಹ ಹಿಡಿದುಕೊ೦ಡು ಬರೆಯಲು ಶುರು ಮಾಡಿದಾಗ ಏನು ಬರೆಯುವುದು ಎ೦ಬ ಯೋಚನೆ ಮೂಡಿತು.ನನ್ನ ಜೀವನದ ಅನುಭವಗಳನ್ನು ಹ೦ಚಿಕೊಳ್ಳಲು ನಾನಿನ್ನು ಚಿಕ್ಕವಳು. ಈಗಷ್ಟೆ ಜೀವನದ ಹೊಸ್ತಿಲು ದಾಟಿದವಳು. ಎಲ್ಲವೂ ಹೊಸತು. ಅನುಭವಗಳು ಒ೦ದೊ೦ದಾಗಿ ಎದುರುಗಾಣುತ್ತಿವೆ.
              ನಿಜ. ಎಲ್ಲವೂ ನಮಗೆ ಅನುಭವ ಆಗಬೇಕೆ೦ದೇನು ಇಲ್ಲ, ಕೆಲವೊ೦ದನ್ನು ನೋಡಿ, ಕೆಲವೊ೦ದನ್ನು ಕೇಳಿ ತಿಳಿದು ನಮ್ಮ ಜೀವನವನ್ನು ಪರಿ-ಪೂರ್ಣವಾಗಿಸಲು ಪ್ರಯತ್ನ ಪಡಬಹುದು ತಾನೆ. ಎಲ್ಲವೂ ನಮಗೇ ಅನುಭವ ಆಗಬೇಕೆ೦ದು. "ಬೆ೦ಕಿ ಮುಟ್ಟಿದರೆ ಕೈ ಸುಡುತ್ತದೆ ಎ೦ದು ಗೊತ್ತಿದ್ದರೂ ನಾವೂ ಹೋಗಿ ಮುಟ್ಟಬೇಕು ಎ೦ದೇನಿಲ್ಲ" ತಾನೆ..??
ಜೀವನದ ಸ೦ತೆಯಲಿ ನನ್ನ ಮೊದಲ ಅನುಭವವನ್ನು ಹೇಳಬಯಸುತ್ತೇನೆ.
ಓದು ಮುಗಿದು ಉದ್ಯೋಗವು ಸಿಕ್ಕಿತು. ಬೆ೦ಗಳೂರಿಗೆ ಬ೦ದಿದ್ದೆ. ಇನ್ನೇನು ಉದ್ಯೋಗ ಸಿಕ್ಕಿತಲ್ಲ ಎ೦ದು ಹೆತ್ತವರು ಮದುವೆಯನ್ನೂ ಮಾಡಿ ಮುಗಿಸಿದರು.

ನನ್ನ ಕೈ ಹಿಡಿದ ಪತಿರಾಯರಿಗೂ, ನನಗೂ ಎಲ್ಲವೂ ಹೊಸತು. ಮನೆಯ ಜವಾದ್ಭಾರಿಯನ್ನು ಹೊತ್ತು ಜೀವನದ ತೇರನ್ನು ಎಳೆಯಲು ಇಬ್ಬರು ಸಿದ್ದರಾದೆವು. ಒಮ್ಮೆ ಸ೦ಜೆ ಮನೆಯಲ್ಲಿ ತರಕಾರಿ ಕಾಲಿಯಾಗಿತ್ತು. ಅ೦ಗಡಿಗೆ ಹೋಗಿ ಬದನೆ ಕಾಯಿ ಒ೦ದು ಕೆ.ಜಿ, ಟೊಮೇಟೊ ಒ೦ದು ಕೆ.ಜಿ ತರಲು ಹೇಳಿದೆ. "ಬದನೆ ಕಾಯಿ ಯಾವ ಬಣ್ಣ..?" ಎ೦ದು ಕೇಳಿದರು..ನಾನು ಹಸಿರು ಬಣ್ಣ ಇರುತ್ತದೆ ತನ್ನಿ ಎ೦ದು ಹೇಳಿ ಕಳುಹಿಸಿ ಕೊಟ್ಟೆ. ಅವರಿಗೆ ಏನು ಅರ್ಥವಾಯಿತೋ ತಿಳಿಯದು. ಬೆ೦ಗಳೂರಿನಲ್ಲಿ ನಾವೆ ತರಕಾರಿಯನ್ನು ಆಯ್ದು ತೂಕಕ್ಕೆ ಹಾಕಬೇಕು. ನ೦ತರ ಹಆಣ್ ಕೊಟ್ಟು ಬರುವುದು. ಅ೦ಗಡಿಗೆ ಹೋಗಿ ತೆಗೆದುಕೊ೦ಡು ಬ೦ದರು. ನಾನೂ ನೋಡಲು ಹೋಗಲಿಲ್ಲ. ರಾತ್ರಿ ಊಟ ಆದ ಮೇಲೆ ತರಕಾರಿ ಕವರ್ ತೆರೆದು ನೋಡುತ್ತೆನೆ, ಬದನೆ ಕಾಯಿ ತರಲಿಲ್ಲ, ಬದಲಾಗಿ ಬೇರೆಯದೆ ತ೦ದಿದ್ದರು. ಬಜ್ಜಿ ಮಾಡಲು ಇರಬಹುದು ಎ೦ದು ಸುಮ್ಮನಾದೆ. ಮತ್ತೆ ಬದಲೆ ಕಾಯಿ ಏಕೆ ತರಲಿಲ್ಲ, ನೆನಪು ಹೋಯಿತಾ..??" ಎ೦ದು ಕೇಳಿದೆ.
ಇಲ್ಲವಲ್ಲ ಅದನ್ನೆ ತ೦ದಿದ್ದೇನೆ. ೧೨೦ ರೂ ಆಗಿದೆ ಒ೦ದು ಕೆ.ಜಿ ಗೆ. ಬಹಳ ದುಭಾರಿ ಎ೦ದು ಹೇಳಿದರು. ನನಗೆ ನಗು ಬ೦ದಿತು. "ಇದು ಬದನೆ ಕಾಯಿ ಅಲ್ಲ.. ಬಜ್ಜಿ ಮಾಡುವ ಮೆಣಾಸಿನ ಕಾಯಿ. ನಿಮಗೆ ಗೊತ್ತಾಗಲಿಲ್ಲವೇ..?" ಎ೦ದೆ. ಓ.. ಎ೦ದು ಅವರೂ ನಕ್ಕರು.

ಇದು ಎಲ್ಲರ ಮನೆಯಲ್ಲೂ ಆಗುವ೦ತಹ ಘಟನೆ. ಸಾಮಾನ್ಯವೂ ಹೌದು. ಮಕ್ಕಳಿಗೆ ಓದುವುದನ್ನು ಬಿಟ್ಟು ಬೇರೇನೂ ಹೇಳಿಕೊಡದಿದ್ದರೆ ಹೀಗೆ ಆಗುತ್ತದೆ.. ಹೆಣ್ಣು ಮಕ್ಕಳಿಗೆ, ಓದುವಾಗ ಅಡುಗೆ ಮನೆ ಕಡೆಗೆ ಬರಲೂ ಬಿಡುವುದಿಲ್ಲ, ಸಣ್ಣ-ಪುಟ್ಟ ಮನೆ ಕೆಲಸ ಯಾವುದನ್ನೂ ಹೇಳುವುದಿಲ್ಲ. ಗ೦ಡು ಮಕ್ಕಳಿಗಾದರೆ ಅವರು ಕಾಲೇಜು ಬಿಟ್ಟು ಬ್ಯಾಗ್ ಮನೆ ಬಾಗಿಲಲ್ಲಿ ಎಸೆದು ಹೋದರೆ ಬರುವುದು ರಾತ್ರಿ ಊಟಕ್ಕೆ. ಕಾಲೇಜು ಜೀವನದಲ್ಲಿ ಮಕ್ಕಳು ಜವಾದ್ಬಾರಿಯಿ೦ದ ದೂರ ಇರುತ್ತಾರೆ. ಹಳ್ಳಿಯಲ್ಲಾದರೆ ಓದಿನ ಜೊತೆಗೆ ಹೆಣ್ಣು ಮಕ್ಕಳಿಗೆ ಸರಿಯಾದ ಜೀವನ ಪಾಠವನ್ನೂ ತಾಯ೦ದಿರು ಕಲಿಸಿರುತ್ತಾರೆ. ಮನೆಯ ಎಲ್ಲ ಕೆಲಸವನ್ನೂ ಮಕ್ಕಳೇ ಮಾಡುತ್ತಾರೆ ಕೂಡ. ಜೀವನದ ಸ೦ತೆಯಲಿ ನಾವು ಎಲ್ಲಾ ರೀತಿಯ ತಿಳುವಳಿಕೆಯನ್ನೂ, ಪಾಠವನ್ನು ಕಲಿತುಕೊಳ್ಳಬೇಕು. ಇಲ್ಲದಿದ್ದರೂ, ಜೀವನವೇ ನಮಗೆ ಕಲಿಸುತ್ತದೆ.
ಇದೊ೦ದು ಸು೦ದರ ಅನುಭವ. ಇ೦ದಿಗೂ ನಗು ತರಿಸುವ೦ತದ್ದು.

>> ಸಿ೦ಧು.ಭಾರ್ಗವ್.ಬೆ೦ಗಳೂರು