...
...
...
...
ಎಲ್ಲ ಮಕ್ಕಳಿಗೂ ಸ್ಪೂರ್ತಿ ಈ ಗೀತಾ-ಬಬೀತಾ ಜೋಡಿ...
ಹಠ, ಛಲ, ಏಕಾಗ್ರತೆ ಇದ್ದರೆ ಮಾತ್ರ ನಾವು ಸಾಧನೆ ಮಾಡಲು ಸಾಧ್ಯ. ನಾಳೆ ಮಾಡಿದರಾಯಿತು. ಇಂದು ಒಂದು ದಿನ ಫ಼್ರೀ ಆಗಿ ಇರುವಾ, ಎಂದು ಎನಿಸಿದರೆ ಆ ಏಕಾಗ್ರತೆ ಕಳೆದುಕೊಳ್ಳುತ್ತೇವೆ. ಸಾಧನೆ ಎನ್ನುವುದೇ ತಪಸ್ಸು..ಕಠಿಣ ಪರಿಶ್ರಮ ಅತ್ಯಗತ್ಯ. ಹೆಣ್ಣು ಮಕ್ಕಳಾದರೇನು? ಗಂಡುಮಕ್ಕಳಾದರೇನು..?
ಹಾಗೇ ಇಂತಹುದೇ ಹಾದಿಯಲ್ಲಿ ಹೋಗು ಎಂದು ಹೇಳಲು ಒಬ್ಬ ಮಾರ್ಗದರ್ಶಕ ಬೇಕು. ತಿದ್ದಲು ಮೆಂಡರ್ ಬೇಕು. ಹಾಗಿದ್ದರೆ ಮಾತ್ರ ಸಾಧ್ಯ. ಹೆತ್ತವರು ತಾವು ಕಂಡ ಕನಸನ್ನು ಮಕ್ಕಳಿಂದ ಸಾಕಾರಗೊಳಿಸಿಕೊಳ್ಳುತ್ತಾರೆ. ಹಾಗೆಯೆ ಕೆಲವೊಮ್ಮೆ ಒಬ್ಬ ಹುಡುಗ/ಗಿ ಯಲ್ಲಿನ ಪ್ರತಿಭೆ ಗುರುತಿಸಿ ನೀರೆರೆದು ಪ್ರೋತ್ಸಾಹಿಸುತ್ತಾರೆ.
ಗೀತಾ-ಬಬೀತಾ ತಂದೆಯ ಕನಸನ್ನು ನನಸು ಮಾಡಿದವರು. ( ಗೀತಾ ಪೋಗತ್ - ೨೦೧೦ರ ಕಾಮನ್ ವೆಲ್ತ್ ಕ್ರೀಡಾಕೂಟದ ರೆಷ್ಟ್ಲಿಂಗ್ಸ್ ನಲ್ಲಿ ಚಿನ್ನ , ಹಾಗೂ ಬಬೀತಾ ಕುಮಾರಿ ಬೆಳ್ಳಿ ಗೆದ್ದು ದಾಖಲೆ ನಿರ್ಮಿಸಿದ ಹೆಣ್ಣುಮಕ್ಕಳು. ) ಹಾಗೆ ನಮ್ಮ ದೇಶದ ಹೆಸರು ಬೆಳಗಿಸಬೇಕು, ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ರಾಷ್ಟ್ರ ಗೀತೆಯನ್ನು ಮೊಳಗುವಂತೆ ಮಾಡಿದವರು. ಅದಕ್ಕೆ ಚಿನ್ನದ ಪದಕ ಪಡೆದರೇನೆ ಸಾಧ್ಯವಾಗುವುದು. ನಿಜ. ಇಂತಹ ಸಾಧಕರ ಜೀವನಾಧಾರಿದ ಸಿನೇಮಾಗಳು ಹೆಚ್ಚೆಚ್ಚು ಬಂದರೇನೆ ನಮಗೂ ಅವರ ಬಗ್ಗೆ ತಿಳಿದುಕೊಳ್ಳಲು ಸಾಧ್ಯ. ಗೆದ್ದಾಗ ಎರಡು ದಿನ ಹೊಗಳುತ್ತೇವೆ, ಸೋತರೆ ಒಬ್ಬಬ್ಬೊಬ್ಬರು ಒಂದೊಂದು ರೀತಿ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. ಆದರೆ ಅದರ ಹಿಂದಿರುವ ಕಠಿಣ ಪರಿಶ್ರಮ, ಅಲ್ಲಿ ತರಬೇತುದಾರರು ನಡೆದುಕೊಳ್ಳುವ ರೀತಿ, ಅವರ ಮನಸ್ಥಿತಿ ಅರಿವಾಗಬೇಕಾದರೆ ಇಂತಹ ಸಿನೇಮಾಗಳು ಬರಲೇ ಬೇಕು.. ನಾಕಂಡ ಈ ವರುಷದ ಕೊನೆಯ ಸಿನೇಮಾ " #ದಂಗಲ್ (ಹಿಂದಿ-೨೦೧೬) ,ನಿತೇಶ್ ತಿವಾರಿ
ನಿರ್ದೇಶನದಲ್ಲಿ ಅದ್ಭುತ ಯಶಸ್ಸನ್ನು ಕಂಡಿದೆ.. ಅಮೀರ್ಖಾನ್, ಸಾಕ್ಷಿ ತನ್ವರ್, ಫಾತಿಮಾ ಸನಾ, ಸಾನ್ಯ ಮಲ್ಹೋತ್ರ ಅವರ ನಟನೆ ಹಾಗೂ ಅದಕ್ಕೆಂದೇ ಪಟ್ಟ ಪರಿಶ್ರಮ ಎದ್ದು ಕಾಣಿಸುತ್ತಿತ್ತು...
~
ಇದು ಎಲ್ಲರಿಗೂ ಸ್ಪೂರ್ತಿಯಾದಂತಹ ಸಿನೇಮಾ. ಮಕ್ಕಳಿಗೆ ತೋರಿಸಲೇ ಬೇಕಾದಂತಹ ಸಿನೇಮಾ ಕೂಡ. ಇನ್ನಷ್ಟು ಹೆಸರು,ಕೀರ್ತಿ, ಪದಕಗಳು ಅವರ ಕೈ ಸೇರಲಿ.. ನಮ್ಮ ದೇಶದ ಬಾವುಟ ಅಂತರಾಷ್ಟ್ರೀಯ ಮಟ್ಟದಲ್ಲಿ ಹಾರಾಡಲ.ಿ
- ಸಿಂಧುಭಾರ್ಗವ್. 🍁
No comments:
Post a Comment