ಕವನ- ಯಾರಿಗೆ ಗೊತ್ತಿತ್ತು.!
ಕರುಳಬಳ್ಳಿಯ ಕಡಿದುಹಾಕಿ
ಹೊರಗೆ ಬಂದೆ..
ಮಮಕಾರ ಕಾಲಿಗೆ ಸುತ್ತುತ್ತದೆ ಎಂದು
ಯಾರಿಗೆ ಗೊತ್ತಿತ್ತು?!?
ಸಹೋದರ ಸಂಬಂಧವನ್ನು
ಬಾಲ್ಯದಲಿ ಸಂಭ್ರಮಿಸಿದೆ,
ದಾಯಾದಿ ಮತ್ಸರ ಬರುವುದೆಂದು
ಯಾರಿಗೆ ಗೊತ್ತಿತ್ತು..?!
ಗೆಳೆಯರ ಬಳಗಕೆ
ಮೊದಲಿಗಳಂತೆ ಮಿಂಚುತ್ತಿದ್ದೆ..
ಬೆನ್ನಿಗೇ ಚೂರಿಹಾಕುವರೆಂದು
ಯಾರಿಗೆ ಗೊತ್ತಿತ್ತು.!?
ಕನಸುಗಳ ಹನಿಗಳನ್ನು
ಒಂದೊಂದಾಗಿ ಶೇಕರಿಸಿದ್ದೆ..
ಘನೀಕರಿಸಿ ಘಾಸಿಮಾಡುತ್ತದೆ ಎಂದು
ಯಾರಿಗೆ ಗೊತ್ತಿತ್ತು..?!
ಕಣ್ಣು ಮುಚ್ಚಿದ ಮೇಲೆ
ಹೆಗಲು ಕೊಡಲು ನಾಲ್ವರು
ನನ್ನವರೇ ಅವರೆಂದು
ನೋಡಲು ಕಣ್ಣೆಲ್ಲಿತ್ತು..?!
~~
- ಸಿಂಧುಭಾರ್ಗವ್ .
No comments:
Post a Comment