.
ರಕ್ತದಾನ ಮಾಡುವುದರ ಬಗ್ಗೆ ಜಾಗ್ರತಿ ಮೂಡಿಸುವ ಸಲುವಾಗಿ ನಡೆಸಿದ ರಾಜ್ಯಮಟ್ಟದ ಕವನ ಸ್ಪರ್ಧೆಯಲ್ಲಿ ನನಗೆ ಸಮಾಧಾನಕರ ಬಹುಮಾನ ಸಿಕ್ಕಿದೆ👆🌷😍😘 9th place see 🌷😍👆
ಆಯೋಜಕರಿಗೆ ಅಭಿವಂದನೆಗಳು🙏
•••••••••••
#ಕವನದ_ಶೀರ್ಷಿಕೆ : ರಕ್ತದಾನ
~~ ~~ ~~ ~~ ~~ ~~ ~~
ಕಾಲೇಜು ದಿನಗಳಲಿ ಅದೊಂತರಾ ಉತ್ಸಾಹ..
ರಕ್ತದಾನ ಮಾಡುವೆನೆಂದರೆ ಎಲ್ಲರದ್ದೂ ಪ್ರೋತ್ಸಾಹ..
•
ಉಚಿತವಾಗಿ ಸಿಗುವ ಒಂದು ಸೇಬಿಗಾಗಿ,
ಹತ್ತಾರು ಶಹಬ್ಬಾಸ್ ಗಿರಿಗಾಗಿ..
ಓಡುತ್ತಿದ್ದೆವು ರಕ್ತದಾನ ಮಾಡಲು
ತಾಮುಂದು ನಾಮುಂದಾಗಿ...
•
ಆಗೆಲ್ಲ ರಕ್ತದಾನದ ಮಹತ್ವ ತಿಳಿದವನೂ ಅಲ್ಲ,
ನನಗೂ ಅದರ ಅಗತ್ಯ
ಬರಬಹುದಾದ ಅರಿವೂ ಇರಲಿಲ್ಲ..
•
ಬಿಸಿರಕ್ತ, ಮೋಟಾರು ಬೈಕಿನಲಿ ಕುಳಿತರೂ
ಕುದುರೆ ಮೇಲೆ ಕುಳಿತ ಭಾವ..
ಲಗಾಮು ಇಲ್ಲದೇ ಓಡಿಸಿದ್ದಕ್ಕೆ
ನೆಲಕ್ಕುರುಳಿತು ಜೀವ..
•
ಪ್ರಜ್ಞೆ ತಪ್ಪಿತು, ಮುಂದೇನಾಯಿತು?
ದಡಬಡ ಎಂದು ತುರ್ತು ನಿಗಾ ಘಟಕಕ್ಕೆ ದೇಹ ಹೋಯಿತು..
•
ವೈಧ್ಯರು ಬಂದರು, ಸ್ನೇಹಿತರ ಕರೆದರು..
ಅಗತ್ಯವಾಗಿ ರಕ್ತ ಬೇಕಾಗಿದೆ..
ಆಸ್ಪತ್ರೆಯಲಿ ಸಂಗ್ರಹಿಸಿದ್ದು ಕಾಲಿಯಾಗಿದೆ..
ಅಲ್ಲಿ ಇಲ್ಲಿ ವಿಚಾರಿಸಿದರು, ಗೆಳೆಯರು ಗಾಬರಿಗೊಂಡರು..
ರಕ್ತದ ಬ್ಯಾಗಿಗಾಗಿ ಉಪಾಯ ಮಾಡಿದರು..
•
ಗೆಳೆಯನ ರಕ್ತವೇ ದೇಹಕ್ಕೆ ಸರಬರಾಜಾಯಿತು,
ಕೊನೆಯುಸಿರು ಕೂಡ ಸರಾಗವಾಯಿತು..
•
ಪಿಳಿಪಿಳಿ ಕಣ್ಣಿನಿಂದ ಮತ್ತೆ ಲೋಕ ನೋಡಿದೆ,
ಗೆಳೆಯ ನೀಡಿದ ರಕ್ತದಿಂದ ಮತ್ತೆ ಜೀವ ಬಂದಿದೆ,
ರಕ್ತದಾನದ ನಿಜವಾದ ಅರ್ಥ ಈಗ ಅರಿವಾಗಿದೆ..
"ರಕ್ತದಾನ ಶ್ರೇಷ್ಟ ದಾನ"
( ನಿಮ್ಮಿಂದ ಒಂದು ಜೀವ ಉಳಿಯುವುದೆಂದಾರೆ ಯಾಕೆ ರಕ್ತದಾನಕ್ಕೆ ಮುಂದಾಗಬಾರದು)
- ಸಿಂಧು ಭಾರ್ಗವ್