Thursday 16 March 2017

ಕವನ : ಹೋಳೀ ಹುಣ್ಣಿಮೆ



🍁🙏😊😍🌼🌸🌷🌹
ಹೋಳಿಹುಣ್ಣಿಮೆಯ ಶುಭಹಾರೈಕೆಗಳು..
🍁🙏😊😍🌼🌸🌷🌹
ಆಹಾ..ಹುಣ್ಣಿಮೆ ಬಂದಿದೆ ಇನ್ನೊಮ್ಮೆ..
ನೋಡು ಪೂರ್ಣ ಚಂದಿರನ ನೀನೊಮ್ಮೆ..

ಪ್ರೀತಿಯ ಕಣಕಣದಲೂ
ಬಣ್ಣತುಂಬಿದವ ನೀನು..
ಚಂದಿರನ ತುಣುಕೊಂದನು
ಕಾಣಿಕೆ ನೀಡಿದವ ನೀನು..

ತೆಂಗಿನ ಗರಿಗಳ ನಡುವೆ
ನೂರಾರು ಕನಸುಗಳು..
ಮೋಡದ ರಾಶಿಗಳ ನಡುವೆ
ಬೆರೆತ ಪ್ರೀತಿಯ ಉಸಿರು..

ವರ್ಣನೆಗೂ ಅತೀತ ನಿನ್ನಯ ಪ್ರೀತಿ..
ಶ್ಯಾಮನ ನೆನಯುವ ರಾಧೆಯ ರೀತಿ..

ಆಹಾ..! ಹುಣ್ಣಿಮೆ ಬಂದಿದೆ ಇನ್ನೊಮ್ಮೆ..
ನೋಡು ಪೂರ್ಣ ಚಂದಿರನ ನೀನೊಮ್ಮೆ..

- #ಸಿಂಧು_ಭಾರ್ಗವ್. 🍁

Wednesday 8 March 2017

ಮಾರ್ಚ್ ೦೮ ವಿಶ್ವ ಮಹಿಳಾದಿನ



@*@*@*@

@*@*@*@*@*@



(•) *ಬೆಳಿಗ್ಗೆ ಏಳು ಗಂಟೆಗಾಗಲೇ ರೊಟ್ಟಿ ತಿಂದು ೮-೯ತಿಂಗಳ ಮಗುವನ್ನು ಬಿಗಿಯಾಗಿ ಬೆನ್ನಿಗೆ ಕಟ್ಟಿಕೊಂಡು ಕಚ್ಚೆಕಟ್ಟಿ ಪಿಕಾಸಿ ಹಿಡಿದು ರಸ್ತೆ ಬದಿಯಲಿ ಮಣ್ಣು ಅಗೆಯುತಲಿರುವ ಮಹಿಳೆಗೆ ತಿಳಿದೇ ಇಲ್ಲ ಇಂದು ಮಹಿಳಾದಿನವೆಂದು..*

(•) *ನಿನ್ನೆ ಸಂಜೆ ಮಳೆ ಬಂದಿತೆಂದು ಸ್ವಲ್ಪ ಬೇಗನೆ ಮನೆಗೆ ಹೋದ ಕಾರಣ ಇಂದು ಮುಂಜಾನೆ ಆರು ಗಂಟೆಗಾಗಲೇ ತನ್ನ ನಿಗದಿತ ಜಾಗದಲ್ಲಿ ಬಂದು ಕುಳಿತು ವಿಧವಿಧ ತರಕಾರಿಗಳ ಗುಡ್ಡೆಹಾಕಿ ಮಾರಾಟಕ್ಕಿಳಿದ ಮುದಿ ಅಜ್ಜಿಗೆ ತಿಳಿದೇ ಇಲ್ಲ ಇಂದು ಮಹಿಳಾದಿನವೆಂದು..*

(•) *ಬಿಸಿಲು ಮಳೆಗೆ ಮೈಯೊಡ್ಡಿ ಕಾಲಗಳ ಭೇದವಿಲ್ಲದೇ ಸೇವಂತಿಗೆ ,ಮಲ್ಲಿಗೆ ,ಕನಕಾಂಬರ, ಗುಲಾಬಿ ಹಾರ ಮಾಡಿ ಮಾರಲು ಕುಳಿತ ಕಮಲಮ್ಮನಿಗೆ ತಿಳಿದಿಲ್ಲ ಇಂದು ಮಹಿಳಾದಿನವೆಂದು..*

(•) *ಅಷ್ಟೇ ಏಕೆ ದಿನಾ ಬೆಳಿಗ್ಗೆ ಕೋಳಿಕೂಗುವ ಮೊದಲೇ ಎದ್ದು ಕೊಟ್ಟಿಗೆಗೆ ಹೋಗಿ ಹಸುಗಳ ಮೈತೊಳೆಸಿ ಹೊಟ್ಟೆಗೆ ಕೊಟ್ಟು ಹಾಲು ಕರೆದು ಡೈರಿಗೆ ಕೊಡುವ ನನ್ನ #ಹಡೆದವ್ವನಿಗೂ ತಿಳಿದೇ ಇಲ್ಲ ಇಂದು ನಮ್ಮ ದಿನ- ಮಹಿಳಾ ದಿನವೆಂದು..*

*ಏನೀ ಸಂಭ್ರಮ? ಯಾಕೀ ಸಂಭ್ರಮ? ದಿನವೂ ಸವೆಯುತ , ಸೇವೆ ಮಾಡುತ ಏನೂ ಪಡೆದುಕೊಳ್ಳದೆ ಅವರಿಷ್ಟದ ವಿಷಯಗಳನ್ನು ತ್ಯಾಗ ಮಾಡುವ ಅದೆಷ್ಟೋ ಮಹಿಳೆಯರು, ಹಳ್ಳಿಗಳಲಿ, ಹೊಲಗಳಲಿ ಬೆವರುಸುರಿಸಿ ದುಡಿಯುವ ಅದೆಷ್ಟೋ ಮಹಿಳೆಯರು ಇಂದು ಇವರೆಲ್ಲರ ನೆನಪಿಸುವ ಕೆಲಸವಾದರೂ ನಡೆಯಲಿ..*

*ಈ ಒಂದು ದಿನದ ಬಾಯಿಮಾತಿನ ಹಾರೈಕೆಯಿಂದ ಏನೇನೂ ಲಾಭವಿಲ್ಲ..*
🙏🌼🌸🌹🌷🌹🌸🌼🙏
√) *ಹೆಣ್ಣು ಭ್ರೂಣ ಹತ್ಯೆ ನಿಲ್ಲಿಸಲು ಇನ್ನೂ  ಸಾಧ್ಯವಾಗಲಿಲ್ಲ..*
 √) *ವರದಕ್ಷಿಣೆ ಕಿರುಕುಳ, ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಕೊಲೆ ಮಾನಸಿಕವಾಗಿ, ದೈಹಿಕವಾಗಿ ಹಿಂಸಿಸುವುದು ಇನ್ನೂ ನಿಂತಿಲ್ಲ..*
√) *ಹೆಣ್ಣನ್ನು ಮಕ್ಕಳನ್ಹಡೆಯುವ ಯಂತ್ರದಂತೆ, ಕೇವಲ ಭೋಗದ ವಸ್ತುವಿನಂತೆ, ಮನೆಕೆಲಸ ಮಾಡುವ ಆಳಿನಂತೆ ನೋಡುವುದು ಇನ್ನೂ ಬಿಟ್ಟಿಲ್ಲ..*
😔😞😔😢😭
ಸಾಕು.. ಹೆಣ್ಣು ಸೃಷ್ಟಿ -ಸ್ಥಿತಿ-ಲಯ ಎಲ್ಲವೂ.. ಆದರೂ ಈಗಿನ ಕಾಲದಲ್ಲಿ ಅವಳನ್ನು ನೆಮ್ಮದಿಯಿಂದ ಬದುಕಲೂ ಬಿಡುತ್ತಿಲ್ಲ..
😢🙏😔🙏
ಬದಲಾವಣೆ ಬರಲಿ..
.
.
.
ಇದೊಂದು ಕಡೆಯಾದರೆ ಹೆಣ್ಣಿಗೆ ಹೆಣ್ಣೇ ಶತ್ರು ಎನ್ನುವ ಮಾತು ಕೂಡ ಸುಳ್ಳಲ್ಲ. ಸ್ವಾರ್ಥ, ಅಹಂಕಾರ ದರ್ಪ ತೋರಿಸುತ್ತಾ ಬಂದ ಸೊಸೆಯನ್ನು ಮೂಲೆ ಗುಂಪಾಗಿಸುವ ಅತ್ತೆ ,ನಾದಿನಿಯರು, ಇಲ್ಲಾ "ನಾನೂ ಓದಿರುವೆ, ನಾನೂ ದುಡಿಯುವೆ  ಎಂದು ಗಂಡನನ್ನ ಅಗೌರವದಿಂದ ನೋಡುವ ವಯಸ್ಸಾದ ಅತ್ತೆ ಮಾವಂದಿರನ್ನ ನೋಡಿಕೊಳ್ಳಲೂ ಮನಸ್ಸು ಮಾಡದ, ಮಕ್ಕಳನ್ನೂ ಹೆರಲು ಒಪ್ಪದ, ಹೆತ್ತರೂ ಆ ಮಗುವನ್ನು ಚೆನ್ನಾಗಿ ನೋಡಿಕೊಂಡು ತಾಯ್ತನ ಅನುಭವಿಸುವ ಭಾಗ್ಯವೂ ಇಲ್ಲದ ಮಹಿಳೆಯರು...

ಎಲ್ಲಾ ಅಯೋಮಯ..
- ಸಿಂಧು ಭಾರ್ಗವ್. 🍁

Wednesday 1 March 2017

ರಕ್ತದಾನದ ಬಗ್ಗೆ ಬರೆದ ಕವನಕ್ಕೆ ಸಮಾಧಾನಕರ ಬಹುಮಾನ ದೊರೆತದ್ದು ಮರೆಯಲಾಗದ ಕ್ಷಣ.

.

ರಕ್ತದಾನ ಮಾಡುವುದರ ಬಗ್ಗೆ ಜಾಗ್ರತಿ ಮೂಡಿಸುವ ಸಲುವಾಗಿ  ನಡೆಸಿದ ರಾಜ್ಯಮಟ್ಟದ ಕವನ  ಸ್ಪರ್ಧೆಯಲ್ಲಿ ನನಗೆ ಸಮಾಧಾನಕರ ಬಹುಮಾನ ಸಿಕ್ಕಿದೆ👆🌷😍😘 9th place see 🌷😍👆
ಆಯೋಜಕರಿಗೆ ಅಭಿವಂದನೆಗಳು🙏
•••••••••••
 #ಕವನದ_ಶೀರ್ಷಿಕೆ : ರಕ್ತದಾನ
~~‌ ~~ ~~ ~~ ~~ ~‌~ ~~
ಕಾಲೇಜು ದಿನಗಳಲಿ ಅದೊಂತರಾ ಉತ್ಸಾಹ..
ರಕ್ತದಾನ ಮಾಡುವೆನೆಂದರೆ ಎಲ್ಲರದ್ದೂ ಪ್ರೋತ್ಸಾಹ..

ಉಚಿತವಾಗಿ ಸಿಗುವ ಒಂದು ಸೇಬಿಗಾಗಿ,
ಹತ್ತಾರು ಶಹಬ್ಬಾಸ್ ಗಿರಿಗಾಗಿ..
ಓಡುತ್ತಿದ್ದೆವು ರಕ್ತದಾನ ಮಾಡಲು
ತಾಮುಂದು ನಾಮುಂದಾಗಿ...

ಆಗೆಲ್ಲ ರಕ್ತದಾನದ ಮಹತ್ವ ತಿಳಿದವನೂ ಅಲ್ಲ,
ನನಗೂ ಅದರ ಅಗತ್ಯ
ಬರಬಹುದಾದ ಅರಿವೂ ಇರಲಿಲ್ಲ..

ಬಿಸಿರಕ್ತ, ಮೋಟಾರು ಬೈಕಿನಲಿ ಕುಳಿತರೂ
ಕುದುರೆ ಮೇಲೆ ಕುಳಿತ ಭಾವ..
ಲಗಾಮು ಇಲ್ಲದೇ ಓಡಿಸಿದ್ದಕ್ಕೆ
ನೆಲಕ್ಕುರುಳಿತು ಜೀವ..

ಪ್ರಜ್ಞೆ ತಪ್ಪಿತು, ಮುಂದೇನಾಯಿತು?
ದಡಬಡ ಎಂದು ತುರ್ತು ನಿಗಾ ಘಟಕಕ್ಕೆ ದೇಹ ಹೋಯಿತು..

ವೈಧ್ಯರು ಬಂದರು, ಸ್ನೇಹಿತರ ಕರೆದರು..
ಅಗತ್ಯವಾಗಿ ರಕ್ತ ಬೇಕಾಗಿದೆ..
ಆಸ್ಪತ್ರೆಯಲಿ ಸಂಗ್ರಹಿಸಿದ್ದು ಕಾಲಿಯಾಗಿದೆ..
ಅಲ್ಲಿ ಇಲ್ಲಿ ವಿಚಾರಿಸಿದರು, ಗೆಳೆಯರು ಗಾಬರಿಗೊಂಡರು..
ರಕ್ತದ ಬ್ಯಾಗಿಗಾಗಿ ಉಪಾಯ ಮಾಡಿದರು..

ಗೆಳೆಯನ ರಕ್ತವೇ ದೇಹಕ್ಕೆ ಸರಬರಾಜಾಯಿತು,
ಕೊನೆಯುಸಿರು ಕೂಡ ಸರಾಗವಾಯಿತು..

ಪಿಳಿಪಿಳಿ ಕಣ್ಣಿನಿಂದ ಮತ್ತೆ ಲೋಕ ನೋಡಿದೆ,
ಗೆಳೆಯ ನೀಡಿದ ರಕ್ತದಿಂದ ಮತ್ತೆ ಜೀವ ಬಂದಿದೆ,
ರಕ್ತದಾನದ ನಿಜವಾದ ಅರ್ಥ ಈಗ ಅರಿವಾಗಿದೆ..

"ರಕ್ತದಾನ ಶ್ರೇಷ್ಟ ದಾನ"
( ನಿಮ್ಮಿಂದ ಒಂದು ಜೀವ ಉಳಿಯುವುದೆಂದಾರೆ ಯಾಕೆ ರಕ್ತದಾನಕ್ಕೆ‌ ಮುಂದಾಗಬಾರದು)

- ಸಿಂಧು ಭಾರ್ಗವ್