Wednesday, 21 December 2016

ಕವಿತೆ- ಆತ್ಮಜ್ಯೋತಿ ಇದು ದೀಪಾವಳಿಯ ಶುಭಾಶಯಗಳು



ಆತ್ಮಜ್ಯೋತಿ ಇದು,
ದ್ವೇಷ ಅಸೂಯೆ ಕ್ರೌರ್ಯವ
 ತೋರಿದರೆ ಆರುವುದು..!!

ಆತ್ಮಜ್ಯೋತಿ‌ ಇದು,
ಸ್ನೇಹ ಪ್ರೀತಿ‌‌ ಸೌಹಾರ್ಧತೆಯಲಿ ಬೆಳಗುವುದು..!!

ಆತ್ಮಜ್ಯೋತಿ ಇದು 
ದಿನವೂ ಚೈತನ್ಯವಿರಲಿ,
ಅರಳಿದ ಹೂವೊಂದು
ವದನದಲಿ ನಗುತಿರಲಿ..!!

ಆತ್ಮಜ್ಯೋತಿ ಇದು
ನಾಳೆ ಹಾರಿಹೋಗುವುದು,
ಬರಿದೇ ಹಣತೆಯಲ್ಲಿ 
ತೈಲ ಹಿಡಿದು ನಿಲ್ಲುವುದು..!!

ಆತ್ಮಜ್ಯೋತಿ ಇದು 
ಎನಿಸಿದಷ್ಟು ಸುಲಭವಲ್ಲ,
ಪ್ರೀತಿಯಿದ್ದರೇ ಮಾತ್ರ 
ಬೆಳಗುವುದು ,ಸುಳ್ಳಲ್ಲ..!!

ಭಯ,ಭಕ್ತಿ,ಶೃದ್ಧೆ ಜೊತೆಗೆ 
ದಿನವು ನಮಿಸಿ ದೇವನ..
ಸತ್ಯ ,ನ್ಯಾಯ, ಧರ್ಮದಲ್ಲಿ 
ನಡೆಸಿ ನಿಮ್ಮ ಜೀವನ..!!

- ಸಿಂಧುಭಾರ್ಗವ್ 🌷




No comments:

Post a Comment