Tuesday 20 November 2018

ಹಾಡು: ಕಲ್ಯಾಣಂ ತುಳಸೀ


ಹಾಡು: ಕಲ್ಯಾಣಂ ತುಳಸೀ

ಕಲ್ಯಾಣಂ ತುಳಸೀ ಕಲ್ಯಾಣಂ
ತುಳಸೀ ಕಟ್ಟೆಯ ಚಂದದಿ ತೊಳೆದು
ರಂಗೋಲಿಯನು ಚಿತ್ರಿಸಿರಿ...
ಪುಷ್ಪ ಪತ್ರೆಗಳ ಬುಟ್ಟಿಯಲಿ ತಂದು
ತುಳಸೀ ಮಾತೆಗೆ ಅರ್ಪಿಸಿರಿ//ಕಲ್ಯಾಣಂ//

ಅರಸಿನ ಕುಂಕುಮ ಹಚ್ಚಿ ನೀವು
ಮುತೈದೆ ಭಾಗ್ಯಕೆ ಪ್ರಾರ್ಥಿಸಿರಿ...
ನೆಲ್ಲಿ-ಸಾಲಿಗ್ರಾಮವ ಇರಿಸಿ
ಗಂಧ ಅಕ್ಷತೆಯ ಪ್ರೋಕ್ಷಿಸಿರಿ//ಕಲ್ಯಾಣಂ//

ಪಂಚಕಜ್ಜಾಯ, ಭಕ್ಷ್ಯಗಳ ನೀಡಿ
ಶೃದ್ದೆಯಿಂದಲಿ ಬೇಡಿರಿ
ಉತ್ತಮ ಫಲಕಾಗಿ ತಾಯ ನೆನೆಯುತ
ಕೃಷ್ಣ ಶ್ರೀತುಳಸಿಯ ಪೂಜಿಸಿರಿ...
 //ಕಲ್ಯಾಣಂ ತುಳಸೀ ಕಲ್ಯಾಣಂ//
..





#tulsipooja #ಉತ್ಥಾನದ್ವಾದಶಿ #wishes #sindhubhargavquotes
#ತುಳಸಿಪೂಜೆ #ಶ್ರೀಕೃಷ್ಣತುಳಸಿ #ತುಳಸಿಹಬ್ಬ


- ಸಿಂಧುಭಾರ್ಗವ್ 🍁    

Thursday 8 November 2018

Deepavali festival Full HD images

ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು
Wish You All A Very 
Happy And Safe Deepavali festival.

A Festival Full of
 ☀Sweet Childhood Memories,
☀ Sky full of Fireworks,
☀Mouth full of Sweets,
☀House full of Diyas and Heart full of Joy.

☀Wishing you all a Very Prosperous Deepavali☀

🎇🎆☀🌻☺🙏🌝🌞🌷🥒💐🎼🎑🌄🌅🏕🌱🌎🐄🌞🏕
****

****

***

***

***

***


***

***

***

***

***

***

***

****

***

***

***

***

***

***

***

***

***

***

***

***

***

***

***

***

***

****

****

***

***

***

***

***

***

***



#Shot_on_REDMI_NOTE5_PRO
#MI_DUAL_CAMERA

#Redminote5 pro  #diwali #mi_dualcamera #Sindhu_photography #diyas #Bangalore

ಕವನ: ಅರಿವಿನ ದೀಪವ ಬೆಳಗಿರಿ

Model: Chandan Bhat.Udupi

ಕವಿತೆ :- ಅರಿವಿನ ದೀಪವ ಬೆಳಗಿರಿ

ಬೆಳಕಿನ ಕೆಳಗೆ ನೆರಳು ಇದೆ
ನೋವಿನ ಜೊತೆಗೆ ನಲಿವು ಇದೆ
ದೀಪವ ಬೆಳಗಿರಿ! ಅರಿವಿನ ದೀಪವ ಬೆಳಗಿರಿ!!

ಸೋಲಿನ ಹಿಂದೆ ಗೆಲುವು ಇದೆ
ಸಾಧನೆಯ ಹಿಂದೆ ಛಲವು ಇದೆ
ದೀಪವ ಬೆಳಗಿರಿ!ಅರಿವಿನ ದೀಪವ ಬೆಳಗಿರಿ !!

ಹಗಲಿನ ಹಿಂದೆ ಇರುಳು ಇದೆ
ಬಿಸಿಲಿನ ಹಿಂದೆ ನೆರಳು ಇದೆ
ದೀಪವ ಬೆಳಗಿರಿ !ಅರಿವಿನ ದೀಪವ ಬೆಳಗಿರಿ !!

ಕೆಡುಕಿನ ಹಿಂದೆ ಒಳಿತು ಇದೆ
ಶ್ರಮದ ಹಿಂದೆ ಫಲವು ಇದೆ
ದೀಪವ ಬೆಳಗಿರಿ !ಅರಿವಿನ ದೀಪವ ಬೆಳಗಿರಿ !!

ಹಮ್ಮಿನ ಹೊರತು ವಿನಮ್ರವಿದೆ
ಮತ್ಸರದ ಹೊರತು ಸತ್ಸಂಗವಿದೆ
ದೀಪವ ಬೆಳಗಿರಿ !ಅರಿವಿನ ದೀಪವ ಬೆಳಗಿರಿ !!

ಅಕ್ಷರದ ಒಳಗೆ ಜ್ಞಾನವಿದೆ
ಸುಜ್ಞಾನದ ಒಳಗೆ ವಿನಯವಿದೆ
ದೀಪವ ಬೆಳಗಿರಿ !ಅರಿವಿನ ದೀಪವ ಬೆಳಗಿರಿ !!

ಮೋಹದ ಮಾತಲಿ ಕಾಮವಿದೆ
ತಳುಕಿನ ನಡೆಯಲಿ ಕಪಟವಿದೆ
ದೀಪವ ಬೆಳಗಿರಿ !ಅರಿವಿನ ದೀಪವ ಬೆಳಗಿರಿ !!

ಹಿರಿಯರ ಮಾತಲಿ ಸತ್ಯವಿದೆ
ಸತ್ಯದ ಹಾದಿಯಲಿ ಸಗ್ಗವಿದೆ
ದೀಪವ ಬೆಳಗಿಸಿರಿ !ನಿಮ್ಮಯ ಮನವನು ಅರಳಿಸಿರಿ !!

ಬರೆದವರು- ಸಿಂಧು ಭಾರ್ಗವ್. 

Mud lamp (ಮಣ್ಣಿನ ಹಣತೆ)

Monday 5 November 2018

ದೀಪಾವಳಿ ಹಬ್ಬ ೦೧

ದೀಪಾವಳಿ ಎಂದರೆ
 ಬಾಲ್ಯದ ನೆನಪು :-  ನರಕ ಚತುರ್ದಶಿ ಯ ಹಿಂದಿನ ದಿನ ( #ೀರು_ತುಂಬುವ_ಶಾಸ್ತ್ರ) ನೀರು ತುಂಬುವ ಶಾಸ್ತ್ರ:-


 ಬೂದಿನೀರು ಸ್ನಾನಕ್ಕೆ ಒಲೆಯನ್ನು ತೊಳೆದು ಶುದ್ಧಮಾಡಿ ಒಲೆಯೊಳಗಿದ್ದ ಮಸಿ /ಬೂದಿಯನ್ನು ತೆಗೆದು , ದೊಡ್ಡದಾದ ಹರಿ (ಹಿತ್ತಾಳೆ ಚರಿಗೆ) ತೊಳೆದು ಹೂವಿನ ಹಾರ ಮಾಡಿ ಸೇಡಿಯುಂಡೆಯಿಂದ ಚಿತ್ರ ಬಿಡಿಸಿ ಹೂವಿನ ಹಾರ ಹಾಕಿ ಬಾವಿಯಿಂದ ನೀರು ಸೇದಿ ತಂದು ಜಾಗಂಟೆ ಬಡಿಯುತ್ತಾ ದೇವರ ಪದ ಹಾಡುತ್ತಾ ನೀರು ತುಂಬಿಸುವುದು.
ಮರುದಿನ ಸೂರ್ಯ ಉದಯಿಸುವುದಕ್ಕಿಂತ ಮೊದಲೇ ಎದ್ದು ಅಮ್ಮ ದೇವರ ಕಂಡಿ ಎದುರು ಗಣಪತಿ ಚಿತ್ರ ಬಿಡಿಸಿ ಗರಿಕೆ ಹುಲ್ಲು ತಂದು ಎರಡು ಮಣೆ ಹಾಕಿ ಅಪ್ಪನನ್ನು ಕೂರಿಸಿ ಜೊತೆಗೆ ಮೊದಲ ಮಗ/ಮಗಳನ್ನು ಕೂರಿಸಿ ಎಣ್ಣೆ ಶಾಸ್ತ್ರ ಮಾಡುವುದು. ಚೆನ್ನಾಗಿ ಬೆನ್ನಿಗೆ ಕೈ ಕಾಲಿಗೆ ಎಣ್ಣೆಯನ್ನು ಹಚ್ಚುವುದು. ಜೊತೆಗೆ ಕಿವಿಗೆ ಒಂದು ಚಮಚ ಎಣ್ಣೆ ಹಾಕುವುದು. ನಂತರ ಒಂದರ್ಧ ಗಂಟೆ ಬಿಟ್ಟು ಬಿಸಿಬಿಸಿ ಅಭ್ಯಂಗಸ್ನಾನ ಮಾಡುವುದು.ಮೊದಲು ಅಮ್ಮ ಎರಡು ಚೊಂಬು ನೀರು ಹಾಕಿ ಶಾಸ್ತ್ರ ಮಾಡುವರು. ನಂತರ ಬೂದಿನೀರು ದೋಸೆ ಚಟ್ನಿ ( ಮಸಾಲೆ ದೋಸೆ) ಮಾಡಿ ಹೊಟ್ಟೆ ತುಂಬಾ ತಿನ್ನುವುದು...



ಇನ್ನೊಂದು ವಿಷೇಶವೆಂದರೆ :

ದೀಪಾವಳಿ ದೀಪಾವಳಿ
ಗೋವಿಂದ ಲೀಲಾವಳಿ
ಅಳಿಯ ಮಗನಾದನು!!
ಮಾವ ಮಗುವಾದನು !!
ಎಂಬ ಹಾಡು ಎಷ್ಟು ಅರ್ಥ ಗರ್ಬಿತವಾಗಿದೆ. ಮದುವೆಯಾದ ಹೊಸ ಮದುಮಕ್ಕಳು, ಮಗಳು-ಅಳಿಯನನ್ನು ದೀಪಾವಳಿ ಹಬ್ಬಕ್ಕೆ ಕರೆದು ಎಣ್ಣೆ ಶಾಸ್ತ್ರ, ಉಡುಗೊರೆ ಕೊಡುವ ಶಾಸ್ತ್ರ  ಮಾಡುವುದು. ಹಬ್ಬಕ್ಕೆ ಇನ್ನಷ್ಟು ಮೆರುಗು ನೀಡುತ್ತದೆ. ಮಾವನು ಅಳಿಯನ ಜೊತೆ  ಕುಳಿತು ಮಗಳನ್ನು ಚೆನ್ನಾಗಿ ನೋಡಿಕೊಳ್ಳುವ, ಅವಳ ಬೇಕು ಬೇಡಗಳ ಪೂರೈಸುವ ಕರ್ತವ್ಯದ ಜೊತೆಗೆ ,ಮನೆಯ ಕೆಲವು ಜವಾಬ್ದಾರಿ ಗಳನ್ನು ವಹಿಸುವರು, ಕಿವಿಮಾತಯಗಳನ್ನು ಹೇಳುವರು. ಅಲ್ಲದೇ ಅವರ ಮಾತುಗಳು ನಗೆ ಚಟಾಕಿಯಿಂದ ಆಸಕ್ತಿ ,ಅಭಿರುಚಿಗಳ ವಿನಿಮಯವಾಗಿ ಮೊದಮೊದಲಿಗಿದ್ದ ಭಯವು ದೂರಾಗಿ ಅಳಿಯನಿಗೆ ಮಾವನ ಜೊತೆ ಸಲುಗೆ ಬೆಳೆಯಲು ಇದು ಕಾರಣವಾಗುತ್ತದೆ. ಮಗಳು ಇದನ್ನೆಲ್ಲ ಬಾಗಿಲ‌ ಸಂಧಿಯಲ್ಲೇ ನಿಂತು  ನೋಡುವುದು ಸುಂದರ ದೃಶ್ಯವಾಗಿದೆ. ವರುಷದೊಳಗೆ ತೊಟ್ಟಿಲು ತೂಗುವ ಭಾಗ್ಯ ಕೊಡಿ ಎಂದು ಮಾವ , ಅಳಿಯನನ್ನು ಕೇಳುವುದು ರಸಮಯ ಕ್ಷಣ ಎನ್ನಬಹುದು. ಹೀಗೆ
ದೀಪಾವಳಿಯ ಮೊದಲ ದಿನ ಮುಗಿಯುತ್ತದೆ.

- ಸಿಂಧು ಭಾರ್ಗವ್.
🎇🎇🎇🎇🎇🎇🎇🎆🎆🎆🎆🎆🌇🌆🌆 🌃🎇🎆🌇