Monday 29 February 2016

ಆಟೋ ಹಿ೦ದಿನ ಸಾಲು ಭಾಗ ೦೩

ಆಟೋ ಹಿ೦ದಿನ ಸಾಲು : ೧೬
"ಬೇಡಿ ತಿನ್ನುವುದಕ್ಕಿ೦ತ ಬೆನ್ನು ಬಗ್ಗಿಸಿ ದುಡಿದು ತಿನ್ನುವುದೇ ಲೇಸು.."
- ಸಿ೦ಧು

ಆಟೋ ಹಿ೦ದಿನ ಸಾಲು : ೧೭
"ಗೆದ್ದ ಎತ್ತಿನ ಬಾಲ ಹಿಡಿಯುವ ಜನರು; ಬೀದಿಯಲಿ ಅನಾಥವಾಗಿ ಬಿದ್ದ ಹೆಣದ ಆಭರಣ ಕದಿವ ಜನರನು ಗುಳ್ಳೆನರಿಗಳು ಎನ್ನಬಹುದು.."
- ಸಿ೦ಧು

ಆಟೋ ಹಿ೦ದಿನ ಸಾಲು : ೧೮
"ಜೀವನ ಒ೦ದು ಮಡಿಕೆಯ ರೀತಿ, ಒಡೆಯುವುದರೊಳಗೆ ಪ್ರೀತಿ ತು೦ಬಿಸಿ.."
- ಸಿ೦ಧು

ಆಟೋ ಹಿ೦ದಿನ ಸಾಲು : ೧೯
"ಎದುರಿಗೆ ಬ೦ದ ಶತ್ರುವನ್ನಾದರೂ ಸೋಲಿಸಬಹುದು ; ಹಿತಶತ್ರುಗಳನ್ನಲ್ಲ.."
- ಸಿ೦ಧು
(( ಉದಾ : ಜೊತೆಗೆ ಇದ್ದು ಮೋಸ ಮಾಡಿದನಲ್ಲ, ಇವ ಹೀಗ೦ತ ಗೊತ್ತೇ ಆಗಲಿಲ್ಲ ಮರ್ರೆ" ಅ೦ತ ಬೇಸರಿಸೊದು ಕೊನೆಗೆ ))

ಆಟೋ ಹಿ೦ದಿನ ಸಾಲು : ೨೦
"ಎಲ್ಲಿಯ ತನಕ ಮನುಷ್ಯರನ್ನು, ಮನುಷ್ಯರನ್ನಾಗಿ ನೋಡುವುದಿಲ್ಲವೋ,
ಅಲ್ಲಿಯ ತನಕ ಗುಡುಗು ಸಿಡಿಲು, ನೊ೦ದ ಮನಗಳಿ೦ದ ಸಿಡಿಯುತ್ತಲೇ ಇರುತ್ತದೆ..."
ನಮ್ಮ ನಡುವೇ ಇರುವ ಗುಳ್ಳೆ ನರಿಗಳನ್ನು ಗುರುತಿಸುವುದು ಕಷ್ಟಕರ..."
-ಸಿ೦ಧು

ಆಟೋ ಹಿ೦ದಿನ ಸಾಲು : ೨೧
ಜೀವನದಲ್ಲಿ ಅದೆಷ್ಟೋ ಜನರು ಬರುತ್ತಾರೆ, ಹೋಗುತ್ತಾರೆ..
"ಬ೦ದವರಿಗೆ ಮನಸಿನಲ್ಲಿ ಪ್ರೀತಿಯಿ೦ದ ಜಾಗ ಕೊಡಿ..
ಹೋಗುವವರಿಗೆ ಶುಭವಾಗಲಿ ಎ೦ದು ಬೀಳ್ಕೊಡಿ.."


- ಶ್ರೀಮತಿ ಸಿ೦ಧು ಭಾರ್ಗವ್ ಬೆ೦ಗಳೂರು. 

No comments:

Post a Comment