Tuesday 30 August 2016

I love my parents

ನಾನು ಒಂದು ಕತೆ ಹೇಳಲಾ?!?
~~~~~~~~~~~~~~
ರೈತಾಪಿ ಕುಟುಂಬದಲ್ಲಿದ್ದ ದಂಪತಿಗಳಿಗೆ ಕೃಷಿ ಬಿಟ್ಟರೆ ಬೇರೆ ಏನೂ ತಿಳಿದಿರಲಿಲ್ಲ..
ಗಂಡ ಹೆಂಡತಿ ನಾಲ್ಕು ವರುಷದ ಮಗು ಚಿಕ್ಕ ಸಂಸಾರವಾದರು ಬಡತನವೇ ಹೊದ್ದುಕೊಂಡಿದ್ದರು. ಹಸು, ಕೊಟ್ಟಿಗೆ, ಗದ್ದೆ ಮನೆ ಕೆಲಸವೇ ಜಾಸ್ತಿಯಾಗಿತ್ತು. ಚಿಕ್ಕ ಹೋಟೆಲ್ ಬೇರೆ ಇತ್ತು. ಆ ಪುಟ್ಟ ಮಗುವನ್ನು ಕಂಬಕ್ಕೆ ಕಟ್ಟಿಹಾಕಿ ಹಸುವಿಗೆ ಒಂದು ಬುಟ್ಟಿ ಹುಲ್ಲು ತರಲು ಹೋಗಿತ್ತಿದ್ದರು ತಾಯಿ. ತಂದೆಗೂ ಮೈತುಂಬಾ ಕೆಲಸ.. ಹಾಗೆ ಎರಡನೇ ಗರ್ಭಿಣಿ ಎಂಬ ಸುದ್ಧಿ ಬಂದಿತು. ಕೆಲಸವೇನೂ ಕಡಿಮೆಯಾಗಲಿಲ್ಲ. ಬಸುರಿ ಹೆಂಗಸು ಬೆನ್ನು ಬಾಗಿಸಿ ಕೆಲಸ ಮಾಡಿದಷ್ಟು ಒಳ್ಳೆಯದು , ಹೆರಿಗೆ ಸುಲಭವಾಗುತ್ತೇ...ಎಂಬುದು ಹಿರಿಯರ ಅಂಬೋಣ.. ಅವರಿಗೂ ಹೌದೇನೋ.
?! ಎಂದು ಕೆಲಸ ಮಾಡುತ್ತಲೇ ಇದ್ದರು. ಏಳು ತಿಂಗಳ ಗರ್ಬಿಣಿಯಾಕೆ. ಒಮ್ಮೆ #ಏತದಿಂದ ನೀರು ಸೇದಿ ನಾಲೆಗೆ ಹಾಯ ಬಿಡುತ್ತಿರುವಾಗ ವಿಪರೀತ ಹೊಟ್ಟೆನೋವು ಕಾಣಿಸುತ್ತದೆ . ಬೊಬ್ಬೆ ಹಾಕಲು ಶುರುಮಾಡಿದಳು. ಗಂಡನಿಗೆ ಕೈಕಾಲು ಆಡುತ್ತಿರಲಿಲ್ಲ. ಸರ್ಕಾರಿ ಹತ್ತಿರದ ಆಸ್ಪತ್ರೆ ಗೆ ಕರೆದುಕೊಂಡು ಹೋದರು.

ವೈಧ್ಯರು ಪರೀಕ್ಷಿಸಿ "ಏನು? ತಾಯಿ-ಮಗುವನ್ನು ಸಾಯಿಸಬೇಕು ಅಂತ ಇದ್ದೀರಾ..?! ಮೊದಲ ಮಗುವಾಗುವಾಗ ಇರುವ ಕಾಳಜಿ ಎರಡನೇ ಮಗುವಿಗೆ ಯಾಕಿಲ್ಲ..?! ಇವರನ್ನು ಮನೆಗೆ ಕಳುಹಿಸಲಾಗದು? ಮಗು ಇನ್ನು ಬೆಳವಣಿಗೆ ಹೊಂದಿಲ್ಲ, ಹೆರಿಗೆಯಾಗುವ ತನಕ ಬೆಡ್ರೆಸ್ಟ್ ನಲ್ಲೆ ಇರಬೇಕು. ಇಲ್ಲದಿದ್ದರೆ ಇಬ್ಬರೂ ಸಾಯಬಹುದು.. ಎಂದು ಗದರಿಸಿದರು.
ಗಂಡನಿಗೆ ಭಯವಾಯಿತು. ಮನೆಯಲ್ಲಿ ಮಗು ಚಿಕ್ಕದು, ರಾಶಿಬಿದ್ದ ಕೆಲಸಗಳು, ಕೈಲಿ ಕಾಸಿಲ್ಲ, ಹೋಟೆಲ್ ನಡೆಸುವುದಾ!? ಇವಳನ್ನು ನೋಡಿಕೊಳ್ಳುವುದಾ? ಆ ಮಗುವನ್ನು?! ಯಾರ ಸಹಾಯವೂ ಇಲ್ಲ. ಒಮ್ಮೆಗೆ ತಲೆ ಕೆಟ್ಟು ಹೋಗುತ್ತದೆ..
ಆಯ್ತು ಎಂದು ಒಪ್ಪಿದರು. ಮಗು ಹಡೆಯುವ ತನಕ ಆಸ್ಪತ್ರೆಯಲ್ಲೇ..
 ಮೂರು ಹೊತ್ತು ತಿಂಡಿ, ಊಟ, ಹಾಲು,ಹಣ್ಣುಹಂಪಲು, ಸ್ನೇಹಿತರ ಜೊತೆ ಮಾತುಕತೆ, ಕಷ್ಟಸುಖ ಹಂಚಿಕೊಳ್ಳುವುದು, ದೇವರ ದ್ಯಾನ, ಗಂಡನ ಕಷ್ಟ ನೋಡಿ ಒಳಗೊಳಗೆ ಅಳುವುದು, ಗಂಡನ ಮೇಲೆ ಇನ್ನೂ ಹೆಚ್ಚಾದ ಪ್ರೀತಿ.. ಹೀಗೆ ಗರ್ಭದೊಳಗಿದ್ದ ಮಗುವಿಗೆ ಎಲ್ಲವೂ ಎರಕವಾಯಿತು..
ಆರೋಗ್ಯಪೂರ್ಣ, ಗುಂಡಮ್ಮ ಹುಟ್ಟಿದಳು.
ಮೊದಲ ಬಾರಿ ನೋಡಿದ ತಾಯಿ " ಅಯ್ಯೋ ಮುಖ ಒಳ್ಳೆ ಗುಂಬಳಕಾಯಿ ತರ ಇದೆ. ನನಗೆ ಬೇಡ ಈ ಮಗು ಎಂದಿದ್ದರಂತೆ.
(@@@)
ಇದು ನನ್ನ ಹೆತ್ತವರ ಕತೆ.
ಅಂದರೆ ನನ್ನದೇ ಕತೆ.
#ಕತೆಯಲ್ಲ_ಇದು_ಜೀವನ.

ಅದಕ್ಕೇ ಹೇಳೊದು..
#ಮಗುವಿಗೆ_ಜನ್ಮ
#ತಾಯಿಗೆ_ಪುನರ್ಜನ್ಮ..

~ ಸಿಂಧುಭಾರ್ಗವ್ .‌ಬೆಂಗಳೂರು

No comments:

Post a Comment