Tuesday 30 August 2016

Happy Shri Krishna Janmaastami @Udupi





!! ಕೃಷ್ಣಾಯ ವಾಸುದೇವಾಯ ದೇವಕೀ ನಂದನಾಯಚ !!
!! ನಂದಗೋಪ ಕುಮಾರಾಯ ಗೋವಿಂದಾಯ ನಮೋನಮಃ !!
ಸದ್ಹೃದಯೀ ಮಿತ್ರರಿಗೆಲ್ಲರಿಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು..
~~~~
ಶ್ರೀಕೃಷ್ಣನ ಜನುಮ ದಿನವನ್ನು ಉಡುಪಿ, ಮುಂಬೈ,ಪುಣೆ ,ಮಥುರಾ ,ತಮಿಳುನಾಡು ಹಾಗೂ ದೇಶದ ಉದ್ದಗಲಕ್ಕೂ ಅಲ್ಲದೇ ವಿದೇಶದಲ್ಲಿಯೂ ಬಹಳ ಸಂಭ್ರಮದಿಂದ ಆಚರಿಸುವುದನ್ನು ನಾವು ಕಾಣಬಹುದು. ಅದರಲ್ಲಿಯೂ #ವಿಟ್ಲಪಿಂಡಿ, ಮೊಸರುಕುಡಿಕೆ ಗೊಲ್ಲರಿಂದ ಮಡಿಕೆ ಒಡೆಯುವ ಕಾರ್ಯಕ್ರಮ ಹೆಸರುವಾಸಿಯಾಗಿದೆ. ಪುಟಾಣಿ ಮಕ್ಕಳಿಂದ ಮುದ್ದುಕೃಷ್ಣ ಸ್ಪರ್ಧೆ, ಹುಲಿವೇಷ, ಗೊಲ್ಲರವೇಷ ಮಾನವ ಪಿರಮಿಡ್ ಮೂಲಕ ಆಗಸದೆತ್ತರದ ಮಡಿಕೆ ಒಡೆಯುವುದು ಒಂದು ಸವಾಲೇ ಸರಿ.‌ ಎಲ್ಲರಿಗೂ ಶುಭವಾಗಲಿ.. ಎಲ್ಲರೂ ಸಂಭ್ರಮದಿಂದ ಶ್ರೀ ಕೃಷ್ಣನ ಬರಮಾಡಿಕೊಳ್ಳಿ...
!!..ಬೋಲೋ ಶ್ರೀ ಕೃಷ್ಣ ಪರಮಾತ್ಮ ಕೀ ಜೈ...!!
~
ಶ್ರೀಮತಿ ಸಿಂಧು ಭಾರ್ಗವ್.



ಅಂತಹ ಸವಾಲನ್ನು ಕಳೆದ ಇಪ್ಪತೈದು ವರುಷಗಳಿಂದ ನಡೆಸಿಕೊಂಡು ಬಂದಿರುವ ಬಾಲ್ ಹನುಮಾನ್ ಮಿತ್ರ ಮಂಡಳಿ(ಮುಂಬಯಿ) ಗೆ ತುಂಬು ಹೃದಯದ ಹಾರೈಕೆಗಳು.ಕಳೆದ ನಾಲ್ಕೈದು ವರುಷಗಳಿಂದ ಪಾರಿತೋಷಕವನ್ನು ತಮ್ಮದಾಗಿಸಿಕೊಂಡಿರುವ ಸಂತೋಷ್ ಶೆಟ್ಟಿ ಮತ್ತು ಅವರ ಟೀಮ್ ಗೆ ಒಂದು ಹ್ಯಾಟ್ಸ್ ಆಫ್ ..೨೦೦-೨೫೦ ಜನ ಸದಸ್ಯರಿರುವ ತಂಡ ಸತತ ಅಭ್ಯಾಸದ ಮೂಲಕ ನಗದು ಬಹುಮಾನದ ಜೊತೆಗೆ ಶೀಲ್ಡನ್ನು ಪಡೆದು ಪುರಮಿರ-ಬಾಯೆಂದರ್ ನಲ್ಲಿ ನಂ.೦೧ ತಂಡ  ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.. ಬೆಳಿಗ್ಗೆ ಹತ್ತು ಗಂಟೆಗೆ ಶುರುವಾಗಿ ರಾತ್ರೆ ೧೦ಗಂಟೆ ತನಕವೂ ಕೇರಿಕೇರಿಗಳಿಗೆ ತಿರುಗಿ ಮಡಿಕೆ ಒಡೆಯುತ್ತಾ ಬಹುಮಾನವನ್ನು ತಮ್ಮದಾಗಿಸಿಕೊಳ್ಳುತ್ತಾರೆ.. ಈಗಾಗಲೇ ಮುಂಬಯಿಯಲ್ಲಿ ಬೀಡುಬಿಟ್ಟು ಅಭ್ಯಾಸದಲ್ಲಿ ನಿರತರಾಗಿದ್ದಾರೆ ಎಂದು ಸಂತೋಷ ಶೆಟ್ಟಿಯವರು ತಿಳಿಸಿದರು. 
ಈ ಬಾರಿಯೂ ಅವರಿಗೆ ಜಯಸಿಗಲಿ ಎಂದು ಹರಸುತ್ತಾ ಎಲ್ಲರಿಗೂ ಅಷ್ಟಮಿಯ ಶುಭಾಶಯಗಳು.. ಚಕ್ಕುಲಿ ,ಉಂಡೆ, ಕಡುಬು ಕಳುಹಿಸುತ್ತೇನೆ. ಹಲ್ಲು ಇದ್ದವರು ತಿನ್ನಿ..
!!..ಬೋಲೋ ಶ್ರೀ ಕೃಷ್ಣ ಪರಮಾತ್ಮ ಕೀ ಜೈ...!!

~
ಶ್ರೀಮತಿ ಸಿಂಧು ಭಾರ್ಗವ್..



No comments:

Post a Comment