Tuesday 30 August 2016

ಹರೇ ಕೃಷ್ಣ. ಬಗ್ಗೆ ಭಕ್ತಿಭಾವ




ನಿಂದಕರು ಬೇಕಯ್ಯ ಮಂದೆಯೊಳಗೆ
ಮುಂದಡಿಯಿಡುವಾಗ ಹಿಂದಿಂದೆ ನಿಂದಿಸುತಾ
ಸರಿತಪ್ಪು ತಿಳಿಸುತಾ
ನಡೆವಾಗ ತಡೆಯಾಗುವ
ತಡೆದು ನಾವ್ ಮುಂದಡಿಯಿಡುವಾ...
ನಿಂದಕರು ಬೇಕಯ್ಯಾ ಮಂದೆಯೊಳಗೆ...
~
ಗುರಿಯ ಮುಟ್ಟಿದೊಡೆ
ಹಿಂತಿರುಗಿ ನೀನೋಡು ಒಮ್ಮೆ...
ನಿಂದಕರು ನಿಂತಲ್ಲೇ ಇಲ್ಲದಿರೆ ಕೇಳು ಒಮ್ಮೆ...
ನೊಂದುಕೊಳ್ಳದಿರು ಅವರ ಮಾತಿನಿಂದ
ಹಿಂದುಮುಂದು ಯೋಚಿಸುವ ಕೆಲಸ ಉಳಿಸುವರಯ್ಯ...
ನಿಂದಕರು ಬೇಕಯ್ಯ ಮಂದೆಯೊಳಗೆ....
!!...ಶ್ರೀ ಹರಿ ಕೃಷ್ಣಾರ್ಪಣ ಮಸ್ತು...!!
💐🙏💐🙏💐🙏💐🙏
ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು
💐🙏💐🙏💐🙏💐🙏
~ ಸಿಂಧುಭಾರ್ಗವ್ 

No comments:

Post a Comment