Tuesday 30 August 2016

ರಾಧಾಕೃಷ್ಣ ಮಾತುಕತೆ ಕವನ ಶ್ರೀಮತಿ ಸುರಭಿ ಅವರಿಂದ

(@@@)

ಗೋಕುಲದಲ್ಲಿ ಸಖಿಯರ ಸೇರುತಲಿ 
ನಗುತ ಹಾಡುತಲಿ , ಒಲವ ತೋರುತಲಿ 
ಕೃಷ್ಣ ನ ಜೊತೆ ಸರಸವಾಡಿರಲು 
ರಾಧೆಯ ಮನ ಸುಮ್ಮನಿರುವುದೇ 
ತನು ಮನ ಬೆಂಕಿಯಾಗದೇ
*
ಗೋಪಿಕೆಯರ ಜೊತೆ ಕೂಡಿದರೇನು 
ಕಂಡದ್ದೆಲ್ಲ ನಿಜವೇನು , ಅನುಮಾನವೇನು 
ಕೃಷ್ಣನ ಮನದಲ್ಲಿ ರಾಧೆಯೇ ತುಂಬಿರಲು 
ಸಖಿಯರಲ್ಲಿ ರಾಧೆಯನ್ನು ಕಂಡಿರಲು 
ನೊಂದಳೇ ರಾಧೆ , ಕೃಷ್ಣ ನ ಅರಿಯದೇ...?

ಸುತ್ತಿರಲು ಸಖಿಯರು ಅತ್ತ , ಇತ್ತ 
ರಾಧೆಯ ಮನವು ಕೃಷ್ಣನ ನೆನೆಯುತ್ತ 
ಮರೆವನೇನೋ ಎಂಬ ಭಯದಿ ,
ಕೂತಳು ರಾಧೆಯು ಚಿಂತಿಸುತ್ತ

ನಕ್ಷತ್ರ ಗಳ ನಡುವೆ ಚಂದ್ರ ನಂತೆ 
ಸಖಿಯರ ನಡುವೆ ರಾಧೆ ನೀನಂತೆ 
ಹಿಂದು , ಮುಂದು ಅರಿಯದೇ 
ಅಪವಾದಿಸಿದಳೇ ರಾಧೆ

ಗೋಪಿಯರು ಬಂದು ಹೋಗುವರು 
ರಾಧೆಯನ್ನು ಹೋಲುವರೇ ಅವರು? 
ಹಗಲೆನ್ನದೆ , ಇರುಳೆನ್ನದೆ ಕೃಷ್ಣ ನ 
ಎದೆಯ ಕನವರಿಕೆಗಳು ರಾಧೆಯದೆ

ಕೃಷ್ಣನ ಕಮಲದಂತ ಕಾಂತಿ 
ಕಸಿದುಕೊಳ್ಳುವರೆಂದು ಭೀತಿ 
ಸಖಿಯರ ಮೋಹಕ ಸೆಳೆತ 
ನಲ್ಲನ ಸೆರೆಮಾಡಿತೆಂದು 
ರಾಧೆಯ ಎದೆಯ ಮಿಡಿತ

ಗೋಪಿಕೆಯರ ಸಂಗದಲ್ಲಿ 
ನೆನಪು ಮರೆಯಾಗದಿರಲಿ 
ಬೇಡಿದಳು ರಾಧೆ , ಕೃಷ್ಣ ನಲ್ಲಿ 
ಕೃಷ್ಣ ನು ತಬ್ಬಿ ಬರವಸೆ ಇತ್ತನು 
ರಾಧೆಗೆ ಕಣ್ಣು ಗಳಲ್ಲಿ....
(@@@)


No comments:

Post a Comment