ಪ್ರಪ೦ಚದಲ್ಲಿ ಎಲ್ಲೆಲ್ಲೂ ಬೆಳಕು
ಯಾವ ಜಾಗದಲ್ಲಿಲ್ಲ ಹೇಳಿ ಕೊಳಕು..?!
ಪರೋಕ್ಷವಾಗಿ ಮಾಡುತ್ತಿದ್ದಾರೆ ಕೊಲೆ..!!
ದೇವಾಲಯದ ಎದುರು ಭಿಕ್ಷೆ ಬೇಡುವ ಜನರು..!!
ಕೃತಕ ಮೋಡಬಿತ್ತನೆಗೆ ಮು೦ದಾಗುವರು..!!
ಗದ್ದುಗೆ ಏರಿದ ಮೇಲೆ ಎಲ್ಲ ಮರೆಯುವರು..!!
ಏಳಿಗೆಯ ಕಿರಣಗಳು ಕಣ್ಣಿಗೆ ಬೀಳದಿರುವುದು..!!
ಯಾವ ಜಾಗದಲ್ಲಿಲ್ಲ ಹೇಳಿ ಕೊಳಕು..?!
- ಶ್ರೀಮತಿ ಸಿ೦ಧು ಭಾರ್ಗವ್.
No comments:
Post a Comment