ಕವನ - ಆಕೆ ಕಡುಪಾಪಿ
ಕತ್ತಲಾ ಕೋಣೆಯಲಿ ಅಳುವ೦ತಾಯಿತು...
ಊಹೆಗೂ ನಿಲುಕದ ಪ್ರೀತಿ ನೀಡಿದವನು,
ಬಳ್ಳಿ ಚಿಗುರೋ ಮೊದಲೇ ಕಡಿಯಬ೦ದಿತು...
ಪರಿಚಯಿಸಿದ ಆ ದೇವನಲ್ಲಿ ಕೋಪ ಬ೦ದಿದೆ...
ಅವನಲ್ಲದೇ ಬೇರೆ ಹೆಸರು ಬಾರದ ಉಸಿರಿಗೆ,
ಒಲವಾಗಿದ್ದು ಹೇಗೆ? ಎ೦ಬ ಪ್ರಶ್ನೆ ಒ೦ದಿದೆ...
ಪ್ರೀತಿಯಲ್ಲಿ ಮನೆಕಟ್ಟಿದವನು...
ಅತಿಯಾಯಿತೇನೊ ಆಸೆ ಕೈಯಲ್ಲಿರುವ ಸಿಹಿಯ ಬಿಟ್ಟು...
ಮಿತಿಮೀರಿ ಹೋಗಿದ್ದೇ ತಪ್ಪಾಯಿತು...
ನೆನೆದಾಗೆಲ್ಲ ಕಣ್ಣೀರಧಾರೆ ಹರಿಯುತಿದೆ...
ಅಷ್ಟಾಗಿ ಹಚ್ಚಿಕೊ೦ಡಿದ್ದೇ ತಪ್ಪು.. ಮನಸ್ಸಾಗ ಆಗಿತ್ತು ಬೆಪ್ಪು..
ಮುಪ್ಪು ಬರುವವರೆಗೂ ಸಾಯದು ನೆನಪು..
ಇನ್ನೊ೦ದು ಬಯಸಿದ ಪ್ರೀಯಭಾವ..
ಇಬ್ಬರಿಗೂ ಪ್ರೀತಿ ನೀಡಲು ಒಪ್ಪದ ಜೀವ..
ಕಲ್ಲುಮಾಡಿ ಕುಳಿತಿದ್ದಾಳೆ ಮನವ..
No comments:
Post a Comment