Wednesday 4 January 2017

ಕವನ : ಆಹಾರ ರೈತರ ಬೆವರ ಹನಿ

ಈ ವರ್ಷದ ಆರಂಭ ಚಿತ್ರಕ್ಕೆ ಕವನ ಬರೆಯುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ ಪುಸ್ತಕವನ್ನು ಪಡೆದ ನನ್ನ ಕವನ...
ಧನ್ಯವಾದಗಳು ಯಂಶ ಮತ್ತು ಅನ್ಸಾರ್ ಕಾಟಿಪಳ್ಳ ಅವರಿಗೆ.

ಚಿತ್ರ: ಅರ್ಧ ತಿಂದೆಸೆದ ಆಲೂ ಟ್ವಿಸ್ಟರ್..
~~~~~~~~~~~~~~~~~~~~

@()@

ಹಸಿದವಗೆ ತುತ್ತು
ಅನ್ನಕೂ ಹಾಹಾಕಾರ..
ಹೊಟ್ಟೆ ತುಂಬಿದವಗೆ
ಆಹಾರವೂ ಸಸಾರ..

ಎಸೆದ ತಿನಿಸಿಗೂ
ಇಲ್ಲಿರುವುದು ಬೇಡಿಕೆ..
ಹಸಿದ ಹೊಟ್ಟೆಗಳದು
ಅದೇ ಕೋರಿಕೆ..

ಎಸೆಯುವ ಮೊದಲು
ಸ್ವಲ್ಪ ಯೋಚಿಸಿ,
ನಿಮಗೆಷ್ಟು ಬೇಕೋ
ಅಷ್ಟನ್ನೇ ಉಪಯೋಗಿಸಿ..

ಧೂಳು, ನೊಣಗಳಿಗೂ
ಮರುಕ ಬರುವುದು,
ನಾಚಿಕೆ ಹುಟ್ಟಿಸುವ
ಜನರ ಗುಣವದು..

ಬಡವನ ಹಸಿವು
ಸಾಯುವವರೆಗೂ ನಿಲ್ಲದು.
ಸಿರಿಯನ ಹಸಿವು
ಸಾವಿನಾಚೆಗೂ ನಿಲ್ಲದು..

ರೈತರ ಬೆವರಹನಿ, ಬಡವನ ಕಣ್ಣಹನಿ
ಸುಡುವುದಂತೂ ನಿಜ..
ಪ್ರತಿಹನಿಗೂ ಬೆಲೆಕೊಡಲು
ಕಲಿಯಬೇಕು ಮನುಜ..
~~~~
- ಸಿಂಧುಭಾರ್ಗವ್ 🍁

No comments:

Post a Comment