ಈ ವರ್ಷದ ಆರಂಭ ಚಿತ್ರಕ್ಕೆ ಕವನ ಬರೆಯುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ ಪುಸ್ತಕವನ್ನು ಪಡೆದ ನನ್ನ ಕವನ...
ಧನ್ಯವಾದಗಳು ಯಂಶ ಮತ್ತು ಅನ್ಸಾರ್ ಕಾಟಿಪಳ್ಳ ಅವರಿಗೆ.
ಚಿತ್ರ: ಅರ್ಧ ತಿಂದೆಸೆದ ಆಲೂ ಟ್ವಿಸ್ಟರ್..
~~~~~~~~~~~~~~~~~~~~
@()@
ಹಸಿದವಗೆ ತುತ್ತು
ಅನ್ನಕೂ ಹಾಹಾಕಾರ..
ಹೊಟ್ಟೆ ತುಂಬಿದವಗೆ
ಆಹಾರವೂ ಸಸಾರ..
•
ಎಸೆದ ತಿನಿಸಿಗೂ
ಇಲ್ಲಿರುವುದು ಬೇಡಿಕೆ..
ಹಸಿದ ಹೊಟ್ಟೆಗಳದು
ಅದೇ ಕೋರಿಕೆ..
•
ಎಸೆಯುವ ಮೊದಲು
ಸ್ವಲ್ಪ ಯೋಚಿಸಿ,
ನಿಮಗೆಷ್ಟು ಬೇಕೋ
ಅಷ್ಟನ್ನೇ ಉಪಯೋಗಿಸಿ..
•
ಧೂಳು, ನೊಣಗಳಿಗೂ
ಮರುಕ ಬರುವುದು,
ನಾಚಿಕೆ ಹುಟ್ಟಿಸುವ
ಜನರ ಗುಣವದು..
•
ಬಡವನ ಹಸಿವು
ಸಾಯುವವರೆಗೂ ನಿಲ್ಲದು.
ಸಿರಿಯನ ಹಸಿವು
ಸಾವಿನಾಚೆಗೂ ನಿಲ್ಲದು..
•
ರೈತರ ಬೆವರಹನಿ, ಬಡವನ ಕಣ್ಣಹನಿ
ಸುಡುವುದಂತೂ ನಿಜ..
ಪ್ರತಿಹನಿಗೂ ಬೆಲೆಕೊಡಲು
ಕಲಿಯಬೇಕು ಮನುಜ..
~~~~
- ಸಿಂಧುಭಾರ್ಗವ್ 🍁
ಧನ್ಯವಾದಗಳು ಯಂಶ ಮತ್ತು ಅನ್ಸಾರ್ ಕಾಟಿಪಳ್ಳ ಅವರಿಗೆ.
ಚಿತ್ರ: ಅರ್ಧ ತಿಂದೆಸೆದ ಆಲೂ ಟ್ವಿಸ್ಟರ್..
~~~~~~~~~~~~~~~~~~~~
@()@
ಹಸಿದವಗೆ ತುತ್ತು
ಅನ್ನಕೂ ಹಾಹಾಕಾರ..
ಹೊಟ್ಟೆ ತುಂಬಿದವಗೆ
ಆಹಾರವೂ ಸಸಾರ..
•
ಎಸೆದ ತಿನಿಸಿಗೂ
ಇಲ್ಲಿರುವುದು ಬೇಡಿಕೆ..
ಹಸಿದ ಹೊಟ್ಟೆಗಳದು
ಅದೇ ಕೋರಿಕೆ..
•
ಎಸೆಯುವ ಮೊದಲು
ಸ್ವಲ್ಪ ಯೋಚಿಸಿ,
ನಿಮಗೆಷ್ಟು ಬೇಕೋ
ಅಷ್ಟನ್ನೇ ಉಪಯೋಗಿಸಿ..
•
ಧೂಳು, ನೊಣಗಳಿಗೂ
ಮರುಕ ಬರುವುದು,
ನಾಚಿಕೆ ಹುಟ್ಟಿಸುವ
ಜನರ ಗುಣವದು..
•
ಬಡವನ ಹಸಿವು
ಸಾಯುವವರೆಗೂ ನಿಲ್ಲದು.
ಸಿರಿಯನ ಹಸಿವು
ಸಾವಿನಾಚೆಗೂ ನಿಲ್ಲದು..
•
ರೈತರ ಬೆವರಹನಿ, ಬಡವನ ಕಣ್ಣಹನಿ
ಸುಡುವುದಂತೂ ನಿಜ..
ಪ್ರತಿಹನಿಗೂ ಬೆಲೆಕೊಡಲು
ಕಲಿಯಬೇಕು ಮನುಜ..
~~~~
- ಸಿಂಧುಭಾರ್ಗವ್ 🍁
No comments:
Post a Comment