ಕವನ: ನಿನ್ನ ಭೇಟಿಯಾಗಿ ಅರಿತೆನು..
ನಿನ್ನ ಭೇಟಿಯಾಗಿ ಅರಿತೆನು
ಪ್ರೀತಿಯೆಂದರೇನು? ಪ್ರೇಮವೇನೆಂಬುದನು..
ನಿನ್ನ ಮಾತಿನಿಂದ ಅರಿತೆನು
ಬಣ್ಣವೇನು? ರೂಪವೇನೆಂಬುದನ್ನು..
ಖಾಲಿಯಾಗಿದ್ದ ಮನಸೀಗ
ಬಂಧಿಯಾಗಿದೆ..
ನಿನ್ನ ಪ್ರೀತಿಯಲಿ ಲೋಕ ಮರೆತು ಹೋಗಿದೆ..
ಬಯಕೆಗಳ ತೋಟದಲಿ
ಸುಮವೀಗ ಅರಳಿದೆ..
ಎಲ್ಲೆಯನೆಲ್ಲಾ ಮೀರಿ
ಬೆಳೆದ ಹಂದರವಾಗಿದೆ..
ಬೆರೆತಿರುವ ಮನಸುಗಳು ಬಿಗಿಯಾಗಿದೆ,
ನಮ್ಮ ಪ್ರೀತಿಯೀಗ ಪಕ್ವವಾಗಿದೆ..
ಓ ದೇವರೇ ಪ್ರೀತಿಯ ಬೆಳೆಸು, ಪ್ರೇಮಿಗಳ ಉಳಿಸು..
- ಸಿಂಧು. 🍁
ನಿನ್ನ ಭೇಟಿಯಾಗಿ ಅರಿತೆನು
ಪ್ರೀತಿಯೆಂದರೇನು? ಪ್ರೇಮವೇನೆಂಬುದನು..
ನಿನ್ನ ಮಾತಿನಿಂದ ಅರಿತೆನು
ಬಣ್ಣವೇನು? ರೂಪವೇನೆಂಬುದನ್ನು..
ಖಾಲಿಯಾಗಿದ್ದ ಮನಸೀಗ
ಬಂಧಿಯಾಗಿದೆ..
ನಿನ್ನ ಪ್ರೀತಿಯಲಿ ಲೋಕ ಮರೆತು ಹೋಗಿದೆ..
ಬಯಕೆಗಳ ತೋಟದಲಿ
ಸುಮವೀಗ ಅರಳಿದೆ..
ಎಲ್ಲೆಯನೆಲ್ಲಾ ಮೀರಿ
ಬೆಳೆದ ಹಂದರವಾಗಿದೆ..
ಬೆರೆತಿರುವ ಮನಸುಗಳು ಬಿಗಿಯಾಗಿದೆ,
ನಮ್ಮ ಪ್ರೀತಿಯೀಗ ಪಕ್ವವಾಗಿದೆ..
ಓ ದೇವರೇ ಪ್ರೀತಿಯ ಬೆಳೆಸು, ಪ್ರೇಮಿಗಳ ಉಳಿಸು..
- ಸಿಂಧು. 🍁
No comments:
Post a Comment