ಕವನ :ಅಪ್ಪ :.
ಅಪ್ಪನ ಅಡುಗೆ ರುಚಿ
ತಿನ್ನಲು ಪುಣ್ಯಬೇಕು,
ಅವರ ಸವೆದ ಚಪ್ಪಲಿ ಹಾಕಿ
ನಾಲ್ಕ್ ಹೆಜ್ಜೆ ನಡೆಯಬೇಕು..
•
ಅಮ್ಮನೋ ನೋವು ,ಅಳುವನು
ಒಂದೇ ತಕ್ಕಡಿಯಲಿ ತೂಗುವಳು.
ಅದಕ್ಕೆಂದೇ ಸೆರಗನು
ಕೈಯಲ್ಲೇ ಹಿಡಿದಿಹಳು..
•
ಅಪ್ಪನ ಮನದ ನೋವ
ನೋಡಿದಿರಾ ನೀವು.?!
ದುಃಖ ಉಮ್ಮಳಿಸಿ ಬಂದರೂ
ಕಣ್ಣಂಚಿನಲೇ ತುಂಬಿಕೊಂಡಿರುವರು..
•
ಚಳಿಗೆ ನಡುಗುವಾಗ ಬಂದು
ಹೊದಿಕೆ ಹೊದಿಸುವರು..
ಸುಖನಿದಿರೆ ಮಾಡೆಂದು
ತಲೆ ಸವರಿ ಹೋಗುವರು..
•
ಪರೀಕ್ಷೆಯಲಿ ಫೇಲಾದರೆ
ಹುಸಿಕೋಪಗೊಳ್ಳುವರು..
ಅಳಬೇಡ ಇನ್ನೊಮ್ಮೆ
ನೋಡು ಎನ್ನುವರು..
•
ಭುಜದ ಮೇಲೆ ಹೊತ್ತು
ಜಾತ್ರೆ ತೋರಿಸುವರು..
ಬೇಕು-ಬೇಡಗಳ ಪೂರೈಸುತಲೇ
ಹೀರೋ ಆಗುವರು.
•
ಅಮ್ಮನ ಹೊಗಳುವವರೇ ಎಲ್ಲಾ..
ಅಪ್ಪನ ಸವೆತ ಗಮನಿಸಿದವರಿಲ್ಲ..
ಅಪ್ಪನ ಮಗುಮನಸ್ಸ ಅರಿತವರೇ ವಿರಳ..
ಅಪ್ಪ ಸೂಕ್ಷ್ಮತೆಯ ಜೀವಾಳ..
- #ಸಿಂಧುಭಾರ್ಗವ್ 🍁
ಅಪ್ಪನ ಅಡುಗೆ ರುಚಿ
ತಿನ್ನಲು ಪುಣ್ಯಬೇಕು,
ಅವರ ಸವೆದ ಚಪ್ಪಲಿ ಹಾಕಿ
ನಾಲ್ಕ್ ಹೆಜ್ಜೆ ನಡೆಯಬೇಕು..
•
ಅಮ್ಮನೋ ನೋವು ,ಅಳುವನು
ಒಂದೇ ತಕ್ಕಡಿಯಲಿ ತೂಗುವಳು.
ಅದಕ್ಕೆಂದೇ ಸೆರಗನು
ಕೈಯಲ್ಲೇ ಹಿಡಿದಿಹಳು..
•
ಅಪ್ಪನ ಮನದ ನೋವ
ನೋಡಿದಿರಾ ನೀವು.?!
ದುಃಖ ಉಮ್ಮಳಿಸಿ ಬಂದರೂ
ಕಣ್ಣಂಚಿನಲೇ ತುಂಬಿಕೊಂಡಿರುವರು..
•
ಚಳಿಗೆ ನಡುಗುವಾಗ ಬಂದು
ಹೊದಿಕೆ ಹೊದಿಸುವರು..
ಸುಖನಿದಿರೆ ಮಾಡೆಂದು
ತಲೆ ಸವರಿ ಹೋಗುವರು..
•
ಪರೀಕ್ಷೆಯಲಿ ಫೇಲಾದರೆ
ಹುಸಿಕೋಪಗೊಳ್ಳುವರು..
ಅಳಬೇಡ ಇನ್ನೊಮ್ಮೆ
ನೋಡು ಎನ್ನುವರು..
•
ಭುಜದ ಮೇಲೆ ಹೊತ್ತು
ಜಾತ್ರೆ ತೋರಿಸುವರು..
ಬೇಕು-ಬೇಡಗಳ ಪೂರೈಸುತಲೇ
ಹೀರೋ ಆಗುವರು.
•
ಅಮ್ಮನ ಹೊಗಳುವವರೇ ಎಲ್ಲಾ..
ಅಪ್ಪನ ಸವೆತ ಗಮನಿಸಿದವರಿಲ್ಲ..
ಅಪ್ಪನ ಮಗುಮನಸ್ಸ ಅರಿತವರೇ ವಿರಳ..
ಅಪ್ಪ ಸೂಕ್ಷ್ಮತೆಯ ಜೀವಾಳ..
- #ಸಿಂಧುಭಾರ್ಗವ್ 🍁
No comments:
Post a Comment