Thursday 5 January 2017

ಕವಿತೆ : ಅಪ್ಪ ಸೂಕ್ಷ್ಮತೆಯ ಜೀವಾಳ

ಕವನ :ಅಪ್ಪ :.

ಅಪ್ಪನ ಅಡುಗೆ ರುಚಿ
ತಿನ್ನಲು ಪುಣ್ಯಬೇಕು,
ಅವರ ಸವೆದ ಚಪ್ಪಲಿ ಹಾಕಿ
ನಾಲ್ಕ್ ಹೆಜ್ಜೆ ನಡೆಯಬೇಕು..

ಅಮ್ಮನೋ ನೋವು ,ಅಳುವನು
ಒಂದೇ ತಕ್ಕಡಿಯಲಿ ತೂಗುವಳು.
ಅದಕ್ಕೆಂದೇ ಸೆರಗನು
ಕೈಯಲ್ಲೇ ಹಿಡಿದಿಹಳು..

ಅಪ್ಪನ ಮನದ ನೋವ
ನೋಡಿದಿರಾ ನೀವು.?!
ದುಃಖ ಉಮ್ಮಳಿಸಿ ಬಂದರೂ
ಕಣ್ಣಂಚಿನಲೇ ತುಂಬಿಕೊಂಡಿರುವರು..

ಚಳಿಗೆ ನಡುಗುವಾಗ ಬಂದು
ಹೊದಿಕೆ ಹೊದಿಸುವರು..
ಸುಖನಿದಿರೆ ಮಾಡೆಂದು
ತಲೆ ಸವರಿ ಹೋಗುವರು..

ಪರೀಕ್ಷೆಯಲಿ ಫೇಲಾದರೆ
ಹುಸಿಕೋಪಗೊಳ್ಳುವರು..
ಅಳಬೇಡ ಇನ್ನೊಮ್ಮೆ
ನೋಡು ಎನ್ನುವರು..

ಭುಜದ ಮೇಲೆ ಹೊತ್ತು
ಜಾತ್ರೆ ತೋರಿಸುವರು..
ಬೇಕು-ಬೇಡಗಳ ಪೂರೈಸುತಲೇ
ಹೀರೋ ಆಗುವರು.

ಅಮ್ಮನ ಹೊಗಳುವವರೇ ಎಲ್ಲಾ..
ಅಪ್ಪನ ಸವೆತ ಗಮನಿಸಿದವರಿಲ್ಲ..

ಅಪ್ಪನ ಮಗುಮನಸ್ಸ ಅರಿತವರೇ ವಿರಳ..
ಅಪ್ಪ ಸೂಕ್ಷ್ಮತೆಯ ಜೀವಾಳ..

- #ಸಿಂಧುಭಾರ್ಗವ್ 🍁

No comments:

Post a Comment