Thursday 5 January 2017

ಲೇಖನ: ವ್ಯಕ್ತಿ ಪರಿಚಯ ಸಿಂಧು ಭಾರ್ಗವ್

ಸಾಹಿತ್ಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವವರು ತುಂಬಾ ವಿರಳ. ಒಂದುಕಾಲದಲ್ಲಿ ಜನರ ಅಭಿಪ್ರಾಯ ಹಾಗಿತ್ತು "ಅದರಿಂದ ಏನು ಲಾಭವಿಲ್ಲ, ನಮ್ಮ ಕೈಯಿಂದಲೇ ಹಣ ವ್ಯಯಿಸಬೇಕಾಗುತ್ತದೆ. ಈಗಿನ ಕಾಲದಲ್ಲಿ ಒಂದು ಕೃತಿ ಬಿಡುಗಡೆ ಗೊಳಿಸಿದರೆ ಅದನ್ನು ಕೊಂಡು ಓದುವ ಓದುಗರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ೩೦-೪೦ಸಾವಿರ ಖರ್ಚು ಬಂದರೆ ಸಾಹಿತಿಗೆ ಅಷ್ಟೇನು ಲಾಭ ಸಿಗುವುದಿಲ್ಲ. ಆದರೆ ಹೆಸರು ,ಕೀರ್ತಿ,ಸನ್ಮಾನ, ಹೊಗಳಿಕೆಯ ಮಾತು ಕಿವಿತುಂಬುತ್ತದೆ. ಜೇಬು ತುಂಬುವುದು ಅನುಮಾನವೇ..  ಅದನ್ನು ನಂಬಿ ಜೀವನ ನಡೆಸಲು ಅಸಾಧ್ಯ ಎನ್ನುತ್ತಿದ್ದರು. ಆದರೆ ಈಗಿನ ಯುವ ಪೀಳಿಗೆಯವರು ಆ ಮಾತನ್ನು ಸುಳ್ಳುಮಾಡಲು ಹೊರಟಿದ್ದಾರೆ. ಪುಸ್ತಕವನ್ನು ಕೊಂಡು ಓದುವ ಒಂದು ವರ್ಗ ಇನ್ನೂ ಇದೆ. ಹಿರಿಯ ಸಾಹಿತಿಗಳ ಅನುಭವೀ ಸಾಹಿತಿಗಳ ಹೊಸಹೊಸ ಕೃತಿಗಳು ಯಾವಾಗ ಬಿಡುಗಡೆಯಾಗುತ್ತದೆ ಎಂದು ಕಾಯುತ್ತಿರುತ್ತಾರೆ. ಆನ್ಲೈನ್ ಮೂಲಕ ಕೊಂಡು ಓದುತ್ತಾರೆ. ಅಲ್ಲದೇ ಪುಸ್ತಕದ ಮಳಿಗೆಗಳಿಗೆ ಭೇಟಿನೀಡಿ ಕೊಂಡುಕೊಳ್ಳುತ್ತಾರೆ. ಬರವಣಿಗೆ ಎನ್ನುವುದು ಕವಿಯ ಮನಸ್ಸಿನ ವಿವಿಧ ತುಮುಲಗಳನ್ನು , ಭಾವನೆಗಳನ್ನು ಹೊರಹಾಕುವ ಪ್ರಕ್ರೀಯೆ ಎನ್ನಬಹುದು. ಕೆಲವರು ಕಲ್ಪನೆಗೆ ಜೀವನೀಡುತ್ತಾರೆ. ಇನ್ನು ಕೆಲವರು ತಮ್ತಮ್ಮ ಪ್ರೀತಿ ಪಾತ್ರರ ಹೊಗಳಿ ಬರೆಯುತ್ತಾರೆ. ಇನ್ನು ಸಾಮಾಜಮುಖಿಯಾಗಿ, ಕ್ರಾಂತಿಕಾರಿಯಾಗಿ ಸಮಾಜದಲ್ಲಿ ,ಜನರಲ್ಲಿ ಸಂಚಲನ ಮೂಡಿಸುವಂತೆ ಬರೆಯುವವರು ಇದ್ದಾರೆ. ಅದಕ್ಕೇ ತಾನೆ "ಲೇಖನಿ ಎಂಬುದು ಖಡ್ಗದ ಹಾಗೆ ಹರಿತ" ಎನ್ನುವುದು.
~~~
ಬರವಣಿಗೆ ಎನ್ನುವುದು ಕವಿಯ ಮನಸ್ಸಿನ ವಿವಿಧ ತುಮುಲಗಳನ್ನು , ಭಾವನೆಗಳನ್ನು ಹೊರಹಾಕುವ ಪ್ರಕ್ರೀಯೆ ಎನ್ನಬಹುದು. ಕೆಲವರು ಕಲ್ಪನೆಗೆ ಜೀವನೀಡುತ್ತಾರೆ. ಇನ್ನು ಕೆಲವರು ತಮ್ತಮ್ಮ ಪ್ರೀತಿ ಪಾತ್ರರ ಹೊಗಳಿ ಬರೆಯುತ್ತಾರೆ. ಇನ್ನು ಸಾಮಾಜಮುಖಿಯಾಗಿ, ಕ್ರಾಂತಿಕಾರಿಯಾಗಿ ಸಮಾಜದಲ್ಲಿ ಹಾಗೂ ಜನರ ಮನಸ್ಸಿನಲ್ಲಿ ಸಂಚಲನ ಮೂಡಿಸುವಂತೆ ಬರೆಯುವವರು ಇದ್ದಾರೆ. ಅದಕ್ಕೇ ತಾನೆ "ಲೇಖನಿ ಎಂಬುದು ಖಡ್ಗದ ಹಾಗೆ ಹರಿತ" ಎನ್ನುವುದು.
~~~
ಉಡುಪಿ ಜಿಲ್ಲೆ ಕಲೆ,ಸಾಹಿತ್ಯ,ಸಂಸ್ಕೃತಿಗೆ  ಹೆಸರುವಾಸಿಯಾಗಿದೆ. ಕೋಟ ಶಿವರಾಮ ಕಾರಂತರಿಂದ ಹಿಡಿದು ಅದೆಷ್ಟೋ ಹಿರಿಯ ಸಾಹಿತಿಗಳು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ಅವರು ಹಾಕಿಕೊಟ್ಟ ಹಾದಿಯಲ್ಲಿ ಈಗಿನ ಪೀಳಿಗೆಯವರು ನಡೆಯುತ್ತಿದ್ದಾರೆ ಎಂಬುದೇ ವಿಷೇಶ. ಸಿಂಧುಭಾರ್ಗವ್ ಉಡುಪಿ ಜಿಲ್ಲೆಯ ಬಾರಕೂರಿನ ಪುಟ್ಟ ಹಳ್ಳಿ ಹೇರಾಡಿಯಲ್ಲಿ ಶ್ರೀಮತಿ ವಸಂತಿ ಭಟ್ ಮತ್ತು ಚಂಡೆ ಶ್ರೀ ನರಸಿಂಹ ಭಟ್'ರ‌ (ಬಾರಕೂರಿನಲ್ಲಿ ಪ್ರಖ್ಯಾತ ಪಾಕ ತಜ್ಞರು) ಎರಡನೇ ಪುತ್ರಿಯಾಗಿ‌ ಜನಿಸಿದ ಇವರು ಪ್ರಾರ್ಥಮಿಕ ಶಿಕ್ಷಣವನ್ನು ಹೇರಾಡಿ ಶಾಲೆಯಲ್ಲಿಯೂ, ಹೈಸ್ಕೂಲ್ ಮತ್ತು ಕಾಲೇಜು ಶಿಕ್ಷಣವನ್ನು NJC ಬಾರಕೂರಿನಲ್ಲಿ ಮುಗಿಸಿದರು. ನಂತರ ಡಿಪ್ಲೋಮಾ ಇನ್ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್‌ ಉಡುಪಿಯ ಇಂದಿರಾ ಶಿವರಾವ್ ಪಾಲಿಟೆಕ್ನಿಕ್ ಕಡಿಯಾಳಿಯಲ್ಲಿ ಮುಗಿಸಿದರು. ಕಾಲೇಜು ಜೀವನ ಮುಗಿಸಿ BHEL ನಲ್ಲಿ HR Dept ನಲ್ಲಿ ಕೆಲಸಕ್ಕೆ ಸೇರಿದ್ದರು. ನವೀನ್ ಭಟ್ ರನ್ನು ವಿವಾಹವಾಗಿ  ಬೆಂಗಳೂರಿಗೆ ಬಂದು ನೆಲಸಿದರು.
~~~
ಸಾಮಾಜಿಕ ಜಾಲತಾಣಗಳಾದ ಮುಖಹೊತ್ತಿಗೆ ,ವಾಟ್ಸ್ ಅಪ್ ಗಳಿಂದ ನಮಗೆ ಲಾಭವೂ ಇದೆ ಹಾಗೆ ಅತೀಯಾದರೆ ತೊಂದರೆಯೂ ಆಗುವುದು. ಸಿಕ್ಕಿದ ಅವಕಾಶವನ್ನು ಪರಿಪೂರ್ಣವಾಗಿ ಉಪಯೋಗಿಸುವ ಕಲೆ ,ಕಲಾವಿದನಿಗೆ ಇರಬೇಕು. ಇದಕ್ಕೆ ನಿದರ್ಶನ ಸಿಂಧುಭಾರ್ಗವ್. ಗೃಹಿಣಿಯಾದ ಇವರು ಬಿಡುವಿನ ಸಮಯದಲ್ಲಿ ಬರೆಯುವುದನ್ನು ಹವ್ಯಾಸವಾಗಿ ಶುರುಮಾಡಿದರು. (೨೦೧೨ರಲ್ಲಿ) ಅದಕ್ಕೆ ಪ್ರೇರಣೆಯಾದದ್ದು ಕನ್ನಡಬ್ಲಾಗ್ ಎನ್ನುವ ತಂಡ. ಅದೊಂದು ಯುವ ಬಹರಗಾರರ ವೇದಿಕೆಯಾಗಿತ್ತು. ಅಲ್ಲಿ ಪ್ರಸಾದ್.ವಿ. ಮೂರ್ತಿ ಎಂಬ ಮಿತ್ರನು ಸರಾಗವಾಗಿ ಕವಿತೆಗಳನ್ನು ಬರೆಯುತ್ತಿದ್ದುದನ್ನು ನೋಡಿ ಬಹಳ ಆಕರ್ಷಿತರಾಗಿ "ಈ ರೀತಿ ಬರೆಯಲು ತನಗೂ ಯಾಕೆ‌ ಸಾಧ್ಯವಿಲ್ಲ ಎಂದು ಸಣ್ಣ ಚುಟುಕುಗಳನ್ನು ಬರೆಯಲು ಲೇಖನಿ ಹಿಡಿದರು. ಈಗ ಕಥೆ,ಲೇಖನಗಳನ್ನು ಬರೆಯುತ್ತಿದ್ದಾರೆ. ಅಲ್ಲದೇ ಸರಳ-ಸುಲಭವಾಗಿ ಕವಿತೆ, ಹಾಡು ಬರೆಯಲು ೨೦೧೬ ರಲ್ಲಿ ಶುರುಮಾಡಿದರು. ಅವರು ಬರೆದ ಕವನ ಓದಿ ತಿದ್ದಿ ತೀಡಿದವರು ಶ್ರೀಯುತ ಕೃಷ್ಣಪ್ರಸಾದ್.(USA) ಇವಳಿಗೆ ಬರೆಯುವ ಕಲೆ ಇದೆ , ಆದರೆ ಹೇಗೆ ಬರೆಯುವುದು ಎಂದು ತಿಳಿದಿಲ್ಲ ಎಂದು ಅರಿತು ಕವಿತೆ ಅಥವಾ ಹಾಡು ಬರೆಯುವುದನ್ನು ಸುಂದರವಾಗಿ ತಿಳಿಸಿಕೊಟ್ಟರು. ಕಳೆದ ಮೂರು ವರುಷದಿಂದ "ಯುಗಪುರುಷ ಕಿನ್ನಿಗೋಳಿ" ಮಾಸಪತ್ರಿಕೆಯು ಇವರ ಲೇಖನಗಳು, ಕಥೆಗಳನ್ನು ಪ್ರಕಟಿಸುತ್ತಾ ಬಂದಿದೆ. ಇನ್ನು ಸಿಂಹನೋಟ ಪತ್ರಿಕೆ, ಸಂಪದಸಾಲು ಮಾಸಪತ್ರಿಕೆಯಲ್ಲಿಯೂ ಹಾಗೆ ಕನ್ನಡಪ್ರಭದಲ್ಲಿ ವಿಶೇಷವಾಗಿ ತಾಯಿ ಬಗ್ಗೆ ಬರೆದ ಲೇಖನ ಪ್ರಕಟಗೊಂಡಿತ್ತು.
ಇನ್ನು ಆನ್ಲೈನ್ ಪತ್ರಿಕೆ, ಬ್ಲಾಗ್ ಗಳಾದ ರೀಡೂಕನ್ನಡ ತಂಡ, ಪಂಜುಪತ್ರಿಕೆಯಲ್ಲಿ, ನೇಸರನ ಜಗಲಿಯಲ್ಲಿ ಬ್ಲಾಗ್ ಗಳಲ್ಲಿ ಲೇಖನಗಳು,‌ಕಾವ್ಯ_ಖಜಾನೆಯಲ್ಲಿ, ಹೊನಲು.ನೆಟ್, ನ್ಯೂಸ್ ಕನ್ನಡ ಆನ್ಲೈನ್ ಪೇಪರ್ ಗಳಲ್ಲಿ ಕವಿತೆಗಳು ಪ್ರಕಟಗೊಂಡಿದ್ದವು. ಅವರು ಬರೆದ "ಜೀವನದ ಸಂತೆಯಲಿ" ಎಂಬ ಕೃತಿಯು ಬಿಡುಗಡೆಯ ಹಂತದಲ್ಲಿದೆ..
ಈಗಷ್ಟೆ ಅಂಬೆಗಾಲಿಡುತಲಿರುವ ಯುವಬರಹಗಾರ್ತಿಗೆ ತುಂಬುಹೃದಯದಿಂದ ಹರಸೋಣ. ಇನ್ನಷ್ಟು ಯಶಸ್ಸು ಅವರದಾಗಲಿ..

No comments:

Post a Comment