ಚಿತ್ರಕೃಪೆ: ವರದರಾಜ್ ಬ್ಯಾಲ್ಯ ಸರ್..
~~~~~~~~~~~~~~~~~
ಸಂಜೆಗೆಂಪು ಮೂಡಿತು,
ಕೆರೆಯು ತಂಪುಗಟ್ಟಿತು..
ಹಾರೋ ಹಕ್ಕಿ ಗೂಡು ಸೇರಿ
ನಿದಿರೆಗೆ ಜಾರಿತು..
•
ಕೆಲಸ ಮುಗಿಸಿ ರೈತರು
ಮನೆಯ ಕಡೆಗೆ ನಡೆದರು..
ಬಿಸಿಯ ಮುದ್ದೆ ತಿಂದು
ತೇಗಿ ಹರುಷಗೊಂಡರು..
••
ಶಶಿಯು ಮೇಲೆ ಬಂದನು,
ಮನಕೆ ಮುದವ ತಂದನು..
ಜೀರುಂಡೆ ಹಾಡು ಕೇಳಿ
ಉಲ್ಲಾಸಗೊಂಡೆನು..
•
ಕನಸು ಕಾಣೋ ಸಮಯವು
ಹೊದಿಕೆ ಹೊದೆಯೊ ತವಕವು..
ತಂಗಾಳಿ ಮೈಸೋಕಿ
ಇನಿಯನ ನೆನೆಸಿತು ..
••
ಪಿಸುಗುಡುವ ಇನಿಯನು
ಮಾತು ನಿಲ್ಲಿಸಲೆನ್ನಲು..
ಕೆನ್ನೆ ಕೆಂಪಾಗಿ ನಾನು ಅಪ್ಪಿಕೊಂಡೆ
ತನುವನು..
•
ಮತ್ತೆ ರವಿಯು ಬೆಳಗಲು
ಹಕ್ಕಿ ಗೂಡು ಬಿಟ್ಟಿತು..
ರಂಗವಲ್ಲಿ ಮನೆಯ ಎದುರು
ಕಿಲಕಿಲನೆ ನಕ್ಕಿತು..
•••
- #ಸಿಂಧುಭಾರ್ಗವ್ 🍁
No comments:
Post a Comment