ಕವನ : ನೆರೆ-ಕೆರೆಯಲಿ
ನೆರೆ-ಕೆರೆಯಲಿ
ಮುಳುಗಿಹೋದ ಊರದು,
ಹಣತೆ ಹಚ್ಚಬೇಕಿದೆ..
ಕತ್ತಲೆಯ ಬತ್ತಿ ಹೊಸೆದು
ಕಾಯುತಿರುವರು,
ತೈಲ ಸುರಿಯಬೇಕಿದೆ..
ಕಂಟಮಟ್ಟ ನೆನೆದು
ತಂಡಿಗಟ್ಟಿರುವರು
ಹೊದಿಕೆ ನೀಡಬೇಕಿದೆ..
ಬೆಚ್ಚಗಿನ ಹೊದಿಕೆಯಲಿ
ಹಚ್ಚಿದ ಹಣತೆಯಲಿ
ಜೀವನ ನಡೆಸಬೇಕಿದೆ..
ಬನ್ನಿ ಕೈಜೋಡಿಸಿ,
ಬೆಳಕಾಗೋಣ, ಪ್ರೀತಿ ಹಂಚೋಣ,
ಅಸಹಾಯಕರಿಗೆ ಸಹಾಯಮಾಡೋಣ..
ಮೊಗದಲಿ ಹೂವರಳಿಸೋಣ..
ಭರವಸೆಯ ದೀವಟಿಗೆ ಬೆಳಗಿಸೋಣ..
ಭಯವ ದೂರಾಗಿಸೋಣ..
ನಂಬುಗೆಯ ಹೊದಿಕೆ ಹೊದೆಸೋಣ..
~ಸಿಂಧುಭಾರ್ಗವ್ .
ನೆರೆ-ಕೆರೆಯಲಿ
ಮುಳುಗಿಹೋದ ಊರದು,
ಹಣತೆ ಹಚ್ಚಬೇಕಿದೆ..
ಕತ್ತಲೆಯ ಬತ್ತಿ ಹೊಸೆದು
ಕಾಯುತಿರುವರು,
ತೈಲ ಸುರಿಯಬೇಕಿದೆ..
ಕಂಟಮಟ್ಟ ನೆನೆದು
ತಂಡಿಗಟ್ಟಿರುವರು
ಹೊದಿಕೆ ನೀಡಬೇಕಿದೆ..
ಬೆಚ್ಚಗಿನ ಹೊದಿಕೆಯಲಿ
ಹಚ್ಚಿದ ಹಣತೆಯಲಿ
ಜೀವನ ನಡೆಸಬೇಕಿದೆ..
ಬನ್ನಿ ಕೈಜೋಡಿಸಿ,
ಬೆಳಕಾಗೋಣ, ಪ್ರೀತಿ ಹಂಚೋಣ,
ಅಸಹಾಯಕರಿಗೆ ಸಹಾಯಮಾಡೋಣ..
ಮೊಗದಲಿ ಹೂವರಳಿಸೋಣ..
ಭರವಸೆಯ ದೀವಟಿಗೆ ಬೆಳಗಿಸೋಣ..
ಭಯವ ದೂರಾಗಿಸೋಣ..
ನಂಬುಗೆಯ ಹೊದಿಕೆ ಹೊದೆಸೋಣ..
~ಸಿಂಧುಭಾರ್ಗವ್ .
No comments:
Post a Comment