Wednesday 19 October 2016

Avalokhana - preeti mattu kartavya

*ಪ್ರೀತಿ ಮತ್ತು ಕರ್ತವ್ಯ* :
~~~~~~~~~~~~~~
ಗಮನಿಸಿ ಸ್ನೇಹಿತರೆ, ಮಳೆರಾಯ ಕಲ್ಲು ಬಂಡೆಗಳ ಮೇಲೆ ಹಾಗೂ ಕಾಡು ಮರಗಳಿರುವ ಭುವಿಯಲ್ಲೂ ತನ್ನ ಕರ್ತವ್ಯವೆಂದು ಜೋರಾಗಿ ಸುರಿಯತೊಡಗಿದ..
ಏನಾಗುತ್ತದೆ ಅದರ ಪರಿಣಾಮ ಹೇಳಿ ನೋಡುವ?! ಕಲ್ಲು ಸ್ವಲ್ಪವೂ ನೀರನ್ನು ಹೀರುವುದಿಲ್ಲ, ಏನೂ ಉಪಯೋಗವೂ ಇಲ್ಲ..ಅದೇ ಕಾಡಿನಲ್ಲಿರುವ ಗಿಡಮರಗಳೆಲ್ಲ ಮಳೆಗೆ ಕುಡಿಯೊಡೆದು ಬೆಳೆಯತೊಡಗಿದವು, ಚಿಗುರಿ ನಿಂತ ಕುಡಿಗಳಲ್ಲಿ ಹೂವು ಹಣ್ಣು ತುಂಬಿಹೋಗಿತ್ತು. ಚಿಟ್ಟೆಗಳಿಗೂ, ಪ್ರಾಣಿಪಕ್ಷಿಗಳಿಗೂ ಗಿಜಿಗಿಜಿ ಎಂದು ಹಾಡುತ್ತಾ ಹೊಟ್ಟೆತುಂಬಾ ಹಣ್ಣುಗಳನ್ನು ತಿನ್ನುತ್ತಾ ಹೂವಿನ ಮಕರಂದವನ್ನು ಹೀರುತ್ತಾ ಝೇಂಕರಿಸುತ್ತಾ ಸಂಭ್ರಮಿಸಿದವು.. ಹೊಸ ಪರ್ವವೇ ಶುರುವಾದಂತೆ ಎಲ್ಲೆಲ್ಲೂ ಸಂಭ್ರಮದ ವಾತಾವರಣ ಸೃಷ್ಡಿಯಾಗಿತ್ತು.
ಇಲ್ಲಿ ಗಮನಿಸಬೇಕಾದುದು ಭುವಿಗೂ ಮಳೆಗೂ ಇರುವ ಪ್ರೀತಿಯನ್ನು.
ಹಾಗೆಯೇ,
ನಮ್ಮ ಮಕ್ಕಳನ್ನ ಹೆತ್ತಿದ್ದೇವೆ ಎಂದು ಅವರ ಚಾಕರಿ( *SpoonFeedBaby* ) ಮಾಡುತ್ತಾ ಅದೆಲ್ಲವೂ‌ ನಮ್ಮ ಕರ್ತವ್ಯ ಎನ್ನುವುದು ಶುದ್ಧ ತಪ್ಪು.. ಕರ್ತವ್ಯ ಯಾವುದೆಂದರೆ ಮಕ್ಕಳನ್ನು ಉತ್ತಮ‌ ಪ್ರಜೆಯನ್ನಾಗಿಸುವುದು, ಸುಶಿಕ್ಷಿತರನ್ನಾಗಿಸುವುದು, ತಮ್ಮಕಾಲಮೇಲೆ ತಾವು ನಿಲ್ಲುವಂತೆ ಮಾಡುವುದು,ಅವರ ಏಳುಬೀಳಿನಲ್ಲಿ ಜೊತೆಗೇ ಇದ್ದು ಧೈರ್ಯತುಂಬುವುದು ಇವೆಲ್ಲವೂ ಕರ್ತವ್ಯವೇ. ಆದರೆ ಇದೆಲ್ಲವನ್ನೂ ಪ್ರೀತಿಯಿಂದ ಮಾಡಿದರೇ ಮಾತ್ರ ಅದಕ್ಕೊಂದು ಅರ್ಥ ಸಿಗುತ್ತದೆ. ಮಕ್ಕಳನ್ನು ಪ್ರೀತಿಯಿಂದ ಸಾಕಿ-ಸಲಹಬೇಕೆ ಹೊರತು ನಮ್ಮ ಕರ್ತವ್ಯ ಎಂದು ಮಾಡಬಾರದು. ಆಗ ಮಾತ್ರ ಆ ಪ್ರೀತಿ ಫಲನೀಡುತ್ತದೆ..
~ * ~
📝 *ಸರಿ ಎನಿಸಿದರೆ ನಿಮ್ಮ ಸ್ನೇಹಿತರೊಂದಿಗೂ ಹಂಚಿಕೊಳ್ಳಿ*.

No comments:

Post a Comment