ನಿನ್ನ ಕಂಡಾಗೆಲ್ಲ ನೆನಪು ಮತ್ತೆ ಕಾಡುವುದು..
ದಿನವ ದೂಡಬೇಕಲ್ಲ ಮರೆತಂತೆ ನಟಿಸುವುದು..
ಮಾತು ಮೂಕವಾಗಿದೆ..
ಕಣ್ಣಸನ್ನೆ ಮರೆತಂತಿದೆ..
ನೋಟ ಓರೆಯಾಗಿದೆ..
ಹಾಡು ಹುಟ್ಟಿಕೊಂಡಿದೆ..
ಕಣ್ಣಹನಿಯೂ ಸದ್ದಿಲ್ಲದೇ ಉರುಳುತಿದೆ..
ಎದೆಬಡಿತವು ಬಿಡದೇ ಬಡಬಡಿಸುತಿದೆ..
ವಿರಹದ ಗೀತೆ ಮೂಡಿದೆ..
ಮನವು ಮೌನವಾಗಿದೆ..
ಪದಗಳ ಉಸಿರು ಕಟ್ಟಿದೆ..
ಲೇಖನಿ ಅರ್ಧಕ್ಕೆ ನಿಂತಿದೆ..
ನೀನು ಬಂದು ಗೋರಿ ಮೇಲೆ ಹೂವು ಇಡಬೇಕಿದೆ...
ಸಿಂಧುಭಾರ್ಗವ್. ಬೆಂಗಳೂರು
ದಿನವ ದೂಡಬೇಕಲ್ಲ ಮರೆತಂತೆ ನಟಿಸುವುದು..
ಮಾತು ಮೂಕವಾಗಿದೆ..
ಕಣ್ಣಸನ್ನೆ ಮರೆತಂತಿದೆ..
ನೋಟ ಓರೆಯಾಗಿದೆ..
ಹಾಡು ಹುಟ್ಟಿಕೊಂಡಿದೆ..
ಕಣ್ಣಹನಿಯೂ ಸದ್ದಿಲ್ಲದೇ ಉರುಳುತಿದೆ..
ಎದೆಬಡಿತವು ಬಿಡದೇ ಬಡಬಡಿಸುತಿದೆ..
ವಿರಹದ ಗೀತೆ ಮೂಡಿದೆ..
ಮನವು ಮೌನವಾಗಿದೆ..
ಪದಗಳ ಉಸಿರು ಕಟ್ಟಿದೆ..
ಲೇಖನಿ ಅರ್ಧಕ್ಕೆ ನಿಂತಿದೆ..
ನೀನು ಬಂದು ಗೋರಿ ಮೇಲೆ ಹೂವು ಇಡಬೇಕಿದೆ...
ಸಿಂಧುಭಾರ್ಗವ್. ಬೆಂಗಳೂರು
No comments:
Post a Comment