)(@)(
#ದೀಪಾವಳಿ ಎಂದರೆ ನೆನಪಾಗುವುದು
ಪಕ್ಕದ ಶೆಟ್ಟರ ಮನೆಯ ಶ್ರೀಮಂತಿಕೆ,
ಆಗಸದೆತ್ತರಕ್ಕೆ ಹಾರಿ ಚಿತ್ತಾರ ಮೂಡಿಸುವ ರಾಕೇಟ್,
ನಮ್ಮ ಮನೆಯಲಿ ನಗುತಲಿದ್ದ ಪುಟ್ಟ ಹಣತೆ, ಹಿರಿಯರ ನೆನಪಿಸುವ ಆಕಾಶಬುಟ್ಟಿ, ಬಿಡಿ ಪಟಾಕಿ ಕಲ್ಲಿನಿಂದ ಜಜ್ಜುತ್ತಿದ್ದ, ಪಿಸ್ತೂಲ್ ತೋರಿಸಿ ಹೆದರಿಸುತ್ತಿದ್ದ ನೆರೆಮನೆ ಮಕ್ಕಳು,
ಎಲ್ಲಿ ಯಾವಾಗ ಪಟಾಕಿ ಸಿಡಿಯುವುದೋ ಎಂಬ ಭಯದ ಜೊತೆಜೊತೆಗೆ ಪೇಚಿಗೆ ಸಿಲುಕಿಸುವ ತರಲೆ ಮಕ್ಕಳು,
ಅಮ್ಮನ ಬಿಡುವಿರದ ಕೆಲಸ,
ಅಪ್ಪನ ಗಡಿಬಿಡಿ ತಕಪಕ ಕುಣಿತ,
ಅಕ್ಕ-ಅಣ್ಣನ ಲೆಕ್ಕದ ನಕ್ಷತ್ರಕಡ್ಡಿ ಕದಿಯುವುದು,
ಕೈಸುಟ್ಟುಕೊಂಡು ವಿಪರೀತ ನೋವಿನಿಂದ ಅಳುವುದು,
#ದೀಪಾವಳಿ ಎಂದರೆ ನೆನಪಾಗುವುದು,
ಎಣ್ಣೆ ಸ್ನಾನ, ಗೋಪೂಜೆ, ಲಕ್ಷ್ಮಿ ಪೂಜೆ, ತುಳಸೀಪೂಜೆ, ಗದ್ದೆಗೂ, ಕಟಾವು ಮಾಡಿ ತಂದ ಬತ್ತದ ರಾಶಿಗೂ ಪೂಜೆ ಮಾಡುವುದು.
#ದೀಪಾವಳಿ ಎಂದರೆ,
ಹೊಸ ಬಟ್ಟೆ , ಪಾಯಸ, ಸಿಹಿಯೂಟ, ಗೆಜ್ಜೆಸದ್ದು ,ಬಳೆಯ ಸಂಗೀತ ರಂಗೋಲಿ, ಭಜನೆ,ಭಕ್ತಿ, ಮದುವೆಯಾದ ಮೊದಲ ವರುಷ ಅಳಿಯ ಬರುವ ಸಡಗರ, ಕತ್ತಲೆ ಕವಿದ ಪುಟ್ಟ ಗೂಡಿಗೂ ಹಣತೆ ಹಚ್ಚಿ ದೀಪ ತೋರಿಸಿ ಬೆಳಕು ತುಂಬುವ ಸಮಯ.#ಬಲಿಚಕ್ರವರ್ತಿ ಬಂದು ಈ ಸಂಭ್ರಮ ನೋಡಿ ಎಲ್ಲಾ ರೀತಿಯಲ್ಲಿಯೂ ಸಂತುಷ್ಟನಾಗಿ ಆಶೀರ್ವದಿಸಿ ಮುಂದೆ ಸಾಗುವ ಹಬ್ಬ..
#ದೀಪಾವಳಿ ಎಲ್ಲರಿಗೂ ಶುಭವನ್ನೇ ತರಲಿ.
ಕತ್ತಲೆ ಎಂದರೆ ಅಂಧಕಾರ ಎಲ್ಲಾ ರೀತಿಯ ಅಂಧಕಾರ ಕಳೆದು ಜನರ ಮನಸ್ಸಿನಲ್ಲಿ ಹೊಂಗಿರಣ ಮೂಡಲಿ.
ಒಳ್ಳೆಯ ಮನಸ್ಸಿನಿಂದ ಹೊರ ಜಗತ್ತನ್ನು ನೋಡುವಂತಾಗಲಿ..ನಗುನಗುತಾ ಬಾಳಿರಿ..
- ಶ್ರೀಮತಿ ಸಿಂಧುಭಾರ್ಗವ್. ಬೆಂಗಳೂರು
No comments:
Post a Comment