Wednesday 19 October 2016

Kavana- Namma sainikaru

ನಮ್ಮ ಸೈನಿಕರು :

ಯುದ್ಧ ಘೋಷಣೆ ಮಾಡಿಯೇ
ಎಲ್ಲವೂ ನಡೆಯಬೇಕಂದಿಲ್ಲ..
ಸೇನೆಗೆ ಸೇರಿದ ದಿನದಿಂದಲೇ
ಅವರಲ್ಲಿ ಯುದ್ಧ ಶುರುವಾಗುವುದಲ್ಲ..

ನಮ್ಮನ್ನು ರಕ್ಷಿಸಲು ಪ್ರಾಣದ
ಹಂಗು ತೊರೆಯುವರು..
ಹೆತ್ತವರ /ಸಂಸಾರವ ತೊರೆದು
ಪ್ರಾಣ ತ್ಯಾಗಮಾಡುವರು..

ನಾವು ಕಣ್ತುಂಬಾ ನಿದಿರೆ ಮಾಡಲು
ಅವರ ಕಾವಲಿದೆ..
ಈ ಸತ್ಯವ ಅಂಧರಂತೆ ನಾವೆಲ್ಲ
ಮರೆತ ಹಾಗಿದೆ..

ಪ್ರಾಣಪಕ್ಷಿ ಹಾರಿತೆಂದು ಕಣ್ಣೀರು
ಸುರಿಸಿದರೇನು ಪ್ರಯೋಜನ..?!
ಅವರ ಪ್ರಾಣಕ್ಕೇನಾಗದಿರಲಿ
ಎಂದು ಈಗಲೇ ಪ್ರಾರ್ಥಿಸೋಣ..

~ಸಿಂಧು ಭಾರ್ಗವ್.

No comments:

Post a Comment