Wednesday, 29 September 2021

Mom She is Always Great ತಾಯಿಯಾದ ಮೇಲೆ ಆಗುವ ಬದಲಾವಣೆಗಳು


ಲೇಖನ : ತಾಯಿಯಾದ ಮೇಲೆ ಆಗುವ ಬದಲಾವಣೆಗಳು

ಹೆಚ್ಚಿನ ಕಡೆಯಲ್ಲಿ ನೀವು ಗಮನಿಸಿದಂತೆ ೨೦-೨೪ ವರುಷದೊಳಗೆ ಹೆಣ್ಮಕ್ಕಳಿಗೆ ಮದುವೆ ಮಾಡಿಸಿ ಗಂಡನ ಮನೆಗೆ ಕಳುಹಿಸುವುದನ್ನು. ಕೆಲವರಿಗೆ ಮದುವೆಯ ಬಗ್ಗೆ  ಆಸಕ್ತಿ ಇಲ್ಲದಿದ್ದರೂ ಕೂಡ ಮನೆಯವರ ಒತ್ತಾಯದ ಮೇರೆಗೆ ಮದುವೆಯಾಗುತ್ತಾರೆ. ಕೆಲವರು ಮನೆಯವರ ಜವಾಬ್ದಾರಿ ಕಡಿಮೆ ಮಾಡಲು ಒಪ್ಪುತ್ತಾರೆ. ಕೆಲವರಿಗೆ ಮದುವೆ ಬಗ್ಗೆ ಏನೂ ಯೋಚನೆಯೂ ಇಲ್ಲದಿದ್ದರೂ ಮದುವೆಯಾಗಿರುತ್ತದೆ. ಕೆಲವರಿಗೆ ಒತ್ತಾಯದ ಮದುವೆಯಾಗುತ್ತದೆ. ಇನ್ನು ಮದುವೆ ಎಂದರೆ ಬಂಧನ /ಜೈಲು ಎಂದೆಲ್ಲ ಯೋಚಿಸುವವರೂ ಇದ್ದಾರೆ. ಮದುವೆ ಎಂಬುದು ಎರಡು ಮನೆ ಮನಸ್ಸುಗಳ ಬೆಸೆಯುವ ಕೊಂಡಿ. ಹೊಸತನಕ್ಕೆ ಮನಃಪೂರ್ವಕವಾಗಿ ಒಗ್ಗಿಕೊಳ್ಳಲೇಬೇಕು.
ಸಂಭ್ರಮಿಸಬೇಕು. ಖುಷಿಪಡಬೇಕು.

ಅದಕ್ಕೆ ಹೇಳುವುದು ಆಯಾಯ ಸಮಯದಲ್ಲಿ ಏನೇನು ಆಗಬೇಕೋ ಹಾಗೆ ನಡೆದರೆ ಒಳ್ಳೆಯದೆಂದು.  ಹೆಣ್ಮಕ್ಕಳಿಗೆ ಉದ್ಯೋಗ, ಮದುವೆ, ಗಂಡನ ಜೊತೆಗಿನ ಹೊಸ ಜೀವನ ಎಲ್ಲವನ್ನೂ ನಿಭಾಯಿಸುವುದು ಕಷ್ಟ. ಹಾಗೆಯೇ ಇವೆಲ್ಲವನ್ನೂ ನಿಭಾಯಿಸಲು ಶಕ್ತರಾಗುವ ಹೊತ್ತಿಗೆ ವರುಷ ೨೬+ ಆಗಿರುತ್ತದೆ. ಆಗ ಎದುರಾಗುವ ಸಮಸ್ಯೆಗಳು ಬೇರೆಯೇ ಇರುತ್ತದೆ.

ಕೆಲವರಿಗೆ ಅನಿಸುವುದಿದೆ, "ಈಗಿನ ಕಾಲದಲ್ಲೂ ಇಷ್ಟು ಬೇಗ ಮದುವೆ ಮಾಡಿಸೋದಾ..?? ಜಾಬ್ ಗೆ ಹೋಗೋದಿಲ್ವಾ ನಿಮ್ಮ ಸೊಸೆ?!??  ಮನೆಯಲ್ಲೇ ಮಕ್ಕಳ ಸಾಕೊಂಡು ಇದ್ದಾಳಾ?!? " ಎಂದು ಬಾಯಿ ಅಗಲಿಸಿ ಗುಂಡು ಕಣ್ಣು ಮಾಡಿಕೊಂಡು ಕೇಳುತ್ತಾರೆ. ಏನೋ ಅಪರಾಧ ಮಾಡುತ್ತಿರುವಂತೆ, ಅಥವಾ ಅವರಿಗೆ ಮೂರ್ಖರಂತೆ ಕಾಣಿಸುವುದು ಹಾಸ್ಯಾಸ್ಪದ. ತಮ್ಮ ಮೂಲವನ್ನು ಮರೆತು ಈಗಿನ ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುವವರು ಮಾತ್ರವೇ ಈ ರೀತಿ ಕೇಳುವುದು.

ಬೇಗ ಮದುವೆಯಾದರೆ ಹೆಣ್ಮಕ್ಕಳ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎಂದು ವೈದ್ಯಕೀಯ ವಲಯವೇ ಹೇಳುತ್ತದೆ. ಒಂದೆರಡು ವರುಷದೊಳಗೆ ಮಗುವಾದರೆ ಮತ್ತೆ ಅವುಗಳ ಲಾಲನೆ ಪಾಲನೆಯಲ್ಲಿ ೧೦ ಹತ್ತು ವರ್ಷಗಳನ್ನು ವ್ಯಯಿಸಬೇಕಾಗುತ್ತದೆ. ನಮ್ಮ ಜೀವಿತದ ಹತ್ತು ವರುಷ ಏನೂ ಅರಿಯದ ಮುಗ್ಧ ಮಕ್ಕಳನ್ನು ಬೆಳೆಸಲು ತ್ಯಾಗ ಮಾಡಬೇಕಾಗುತ್ತದೆ. ಅದೊಂದು ಗ್ರೇಟ್ ಅನುಭವ. ಮಹತ್ವದ ಸಾಧನೆ. ಈಗಿನ ಕಾಲದಲ್ಲಿ ಒಂದು ಸುಸಂಸ್ಕೃತ ವಾತಾವರಣದಲ್ಲಿ ಮಕ್ಕಳ ಬೆಳೆಸುವುದೂ ಅಗತ್ಯವಾಗಿದೆ.

ನಂತರ ೩೪ ವರ್ಷದ ಮೇಲೆ ಕೆಲಸಕ್ಕೆ ಸೇರಬಹುದು. ನಿಮ್ಮ ಜೀವನ ನಿಮಗಾಗಿ ಬದುಕಬಹುದು. ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸುತ್ತಾರೆ. ಓದುವುದು ಬರೆಯುವುದು, ಗಂಡ ಆಫೀಸಿಗೆ ಹೋದರೆ ಮಕ್ಕಳು ಶಾಲೆಗೆ ಹೋದರೆ ಮನೆ ಖಾಲಿ ಇರುತ್ತದೆ. ಬೇಸರ ಕಳೆಯಲು ನೀವೂ ಉದ್ಯೋಗಕ್ಕೆ ಸೇರಬಹುದು.. ಒಂದು ೫೫-೬೦ ವರುಷಗಳ ಕಾಲ ದುಡಿಯಬಹುದು.

ಹಾಗಾಗಿ ತಾಳ್ಮೆ ಅಗತ್ಯ. ಎಲ್ಲದಕ್ಕೂ ಅತಿಯಾಗಿ ಯೋಚಿಸದೆ ಮಕ್ಕಳಿಗಾಗಿ ಒಂದಷ್ಟು ವರುಷಗಳು ತ್ಯಾಗ ಮಾಡಬೇಕಾಗುತ್ತದೆ.

ಇನ್ನು ತಾಯಿಯಾದ ಮೇಲೆ ಕಂಡ ಬದಲಾವಣೆಗಳು :
*****************************************
ಪ್ರಥಮವಾಗಿ ಸಮಯದ ಅಭಾವ. ನಮಗೆ ಅಂತ ಸಮಯ ಸಿಗುವುದಿಲ್ಲ. ಅತಿಯಾದ ಕೆಲಸ. ಪುಟ್ಟ ಮಕ್ಕಳು ಅವರಾಗೇ ಏನೂ ಮಾಡುವುದಿಲ್ಲವೆಂದಾಗ ಬೆಳಿಗ್ಗೆ ಏಳಿಸಿ ಹಲ್ಲು ಉಜ್ಜಿಸುವುದರಿಂದ ರಾತ್ರಿ ನೀತಿಕತೆ ಹೇಳಿ ಮಲಗಿಸುವ ತನಕ ಎಲ್ಲವೂ ತಾಯಿಯೇ ಮಾಡಬೇಕು. ಹಗಲು - ರಾತ್ರಿ‌ ನಿದಿರೆ ಬಿಡಬೇಕು. ನಮಗಾಗಿ ಕುಳಿತು ತಿನ್ನುವಷ್ಟು ಸಮಯ ಇರುವುದಿಲ್ಲ. ಗಬಗಬ ತಿಂದು, ಅರೆಬರೆ ತಿಂದು ಮಕ್ಕಳ ನೋಡುವುದಾಗುತ್ತದೆ. ಮಗುವಿಗೆ ತಿನಿಸಿದ ಮೇಲೆ ನಮ್ಮ ಹಸಿವು ಇಂಗಿರುತ್ತದೆ. ಸಮಯ ಕಳೆದು ಹೋಗುವುದೇ ತಿಳಿಯುವುದಿಲ್ಲ. ದಪ್ಪ ಆಗುತ್ತಾರೆ. ವ್ಯಾಯಾಮ ಮಾಡಲು ಸಮಯವಿರುವುದಿಲ್ಲ. ಹಾಡು ಸಿನೆಮಾ ಓದುವುದು ಯಾವುದಕ್ಕೂ ವೈಯಕ್ತಿಕ ಸಮಯ ಸಿಗುವುದಿಲ್ಲ. ಮಕ್ಕಳ ಆರೋಗ್ಯ ಕೆಟ್ಟಾಗ ವೈದ್ಯರ ಬಳಿ ಓಡಿ ಹೋಗಿ ಕಾದು ಔಷಧಿ ಕೊಡಿಸಬೇಕು. ರಾತ್ರಿ ನಿದಿರೆ ಬಿಟ್ಟು ಅವರ ಆರೈಕೆ ಮಾಡಬೇಕು.

ಗಂಡನ ಜೊತೆ ಏಕಾಂತವಾಗಿ ಸಮಯ ಕಳೆಯಲು ಆಗುವುದಿಲ್ಲ. ಅವನಿಗೆ ಬೇಸರವಾದರೆ ನಮಗೂ ಬೇಸರ. ಕೆಲವು ಗಂಡಸರು ಕೊಂಚಕೊಂಚವೇ ಬದಲಾಗುತ್ತ ಹೋಗುತ್ತಾರೆ. ಉದ್ಯೋಗಕ್ಕೆ ಹೋಗುವವರು ಕೆಲವೊಮ್ಮೆ ತಮ್ಮ ವೃತ್ತಿಯನ್ನು ನಿಲ್ಲಿಸಿ ಮಗುವಿನ ಪಾಲನೆಯಲ್ಲಿ ತೊಡಗಬೇಕಾಗುತ್ತದೆ. ಕಾರಣ ಸಹಾಯಕ್ಕೆ ಆಯಾ, ಅಥವಾ ಬೇರೆ ಯಾರೂ ಇರದಿದ್ದಾಗ ಈ ಸಮಸ್ಯೆ ಎದುರಾಗುತ್ತದೆ.

ಮಕ್ಕಳ ಎದುರು ಅಳುವ ಹಾಗಿಲ್ಲ. ಬೇಸರವಾದರೆ ತೋಡಿಕೊಳ್ಳುವ ಹಾಗಿಲ್ಲ. ಓಡೋಡಿ ಬಂದು "ಯಾಕಮ್ಮ ಅಳುವೆ " ಎಂದು ಕೇಳುವರು. ಸದಾ ನಗುತ್ತ ಇರಬೇಕು. ನಮ್ಮ ಮನಸ್ಸಿನ ನೋವನ್ನು ನಾವೇ ಯಾವುದೋ ಮೂಲೆಯಲ್ಲಿ ಮಕ್ಕಳಿಗೆ ಗೊತ್ತಾಗದ ಹಾಗೆ ಅಳಬೇಕು. ಅವರೆದು ಹೇಳುವ ಹಾಗಿಲ್ಲ. ನಕಾರಾತ್ಮಕವಾಗಿ ಯೋಚಿಸುವ ಹಾಗಿಲ್ಲ,ಮಾತನಾಡುವ ಹಾಗಿಲ್ಲ. ಸಮಾಧಾನ ಮಾಡಿಕೊಳ್ಳಬೇಕು. ಹೊಂದಿಕೊಂಡು ಹೋಗಬೇಕು. ಸಹಿಸಿಕೊಳ್ಳಬೇಕು. ಕೆಲವರಿಗೆ ಗಂಡ ಸರಿಯಿಲ್ಲದಿದ್ದರೆ ಕೂಡ ಮಕ್ಕಳ ಎದುರು ದೂರು ಹೇಳಬಾರದು. ಮಕ್ಕಳ ಎದುರೇ ಗಂಡನೊಂದಿಗೆ ಜಗಳ ಮಾಡಬಾರದು. ಗಂಡನ ಬಗ್ಗೆ ಕೇವಲ ವಾಗಿ ಮಾತನಾಡಬಾರದು.  ಅವರಿಗೆ ಕೂಡ ತಂದೆಯ ಬಗ್ಗೆ ಕೆಟ್ಟ ಅಭಿಪ್ರಾಯ ಬೆಳೆಯಲು ಕಾರಣವಾದೀತು. ಅವರು ಕೂಡ ತಂದೆಗೆ  ಗೌರವ ಕೊಡದಿರಬಹುದು.

ಬದುಕು ಏನೆಲ್ಲ ಕಲಿಸಿಕೊಡುತ್ತದೆ. ಮೊದಲಿಗೆ ಸಹನೆ ತ್ಯಾಗ ಒಂದೇ ನಾಣ್ಯದ ಎರಡು ಮುಖಗಳಂತೆ. ಹೆಣ್ಣಿಗೆ ಅದೇ ಭೂಷಣ. ತಾಯಿಯಾಗಿ ಮಕ್ಕಳಿಗೆ ಓದಿಸುವುದು ಬರೆಯಲು ಕಲಿಸಿಕೊಡಬೇಕು. ಸ್ನೇಹಿತರ ಜೊತೆಗೆ ಹೇಗೆ ಸ್ನೇಹದಿಂದ ಇರಬೇಕು ಎಂಬುದೂ ತಿಳಿಸಿಕೊಡಬೇಕು. ಹೆದರದೇ ಧೈರ್ಯದಿಂದ ಇರಲು , ಮಾತನಾಡಲು ಕಲಿಸಿಕೊಡಬೇಕು. ನೀತಿ ಕತೆಗಳನ್ನು ಹೇಳಿಕೊಡಬೇಕು.

ಅಮ್ಮ - ಹೇಗೆ ಗ್ರೇಟ್ ಎಲ್ಲರಿಗಿಂತ ಒಂದು ಹಂತ ಮೇಲೆಯೇ ಇರುವುದು ಎಂದು ಯೋಚಿಸುವುದಕ್ಕಿಂತ ಹಾಗೆಯೇ ಬಾಳಿ ತೋರಿಸಬೇಕು. ಮಕ್ಕಳಿಗೆ ಅಮ್ಮನೇ ಸರ್ವಸ್ವ. ಅವಳನ್ನು ನೋಡುತ್ತಲೇ ಅವಳ ಒಡನಾಟದಲ್ಲೇ ಬೆಳೆಯುತ್ತಾರೆ. "ಅಮ್ಮ... ಅಮ್ಮಾ..." ಎಂದು ಕಾಲಿಗೆ ಸುತ್ತು ಹಾಕಿಕೊಂಡಿರುತ್ತಾರೆ. ಪ್ರತಿಯೊಂದಕ್ಕೂ ಅಮ್ಮನನ್ನೇ ಅವಲಂಭಿಸಿಕೊಂಡಿರುತ್ತಾರೆ. ಅಮ್ಮನಿಲ್ಲದ ಮನೆಯೇ ಶೂನ್ಯ ವಾತಾವರಣ.

ಅತಿಯಾಗಿ ನಗಲೂ ಹಾಸ್ಯ ಮಾಡಿಕೊಂಡು ಚಿಲ್ ಔಟ್ ಮಾಡಲೂ ಸಾಧ್ಯವಾಗದು. ಅಮ್ಮ ಯಾವಾಗಲೂ ಎಲ್ಲವನ್ನೂ ತ್ಯಜಿಸುವವಳು.  ಮಮತೆಯ ಸ್ಥಾನವನ್ನು ತುಂಬಿಸುವವಳು. ಆತ್ಮಬಲ, ಶಕ್ತಿ , ಧೈರ್ಯ ನೀಡುವವಳು. ಅಮ್ಮನ ಸ್ಥಾನ ಪಡೆದ ಮೇಲೆ ಏನೆಲ್ಲ ಅನುಭವವಾಗುವುದು. ಇದು ನಿಜಕ್ಕೂ ಗ್ರೇಟ್.

ಧನ್ಯವಾದಗಳು
ಸಿಂಧು ಭಾರ್ಗವ ಬೆಂಗಳೂರು

(ಲೇಖಕಿ)

Tuesday, 28 September 2021

ಲೇಖನ : ಹೆಣ್ಣಿನ ಶೋಷಣೆಗೆ ಕೊನೆ ಎಂತು??

 

Source images stop abused save girls

ಲೇಖನ : ಹೆಣ್ಣಿನ ಶೋಷಣೆಗೆ ಕೊನೆ ಎಂತು??

ಹೆಣ್ಣು ಮನೆ ಬೆಳಗುವ ದೀಪ. ಸದಾ ತನ್ನವರ ಒಳಿತನ್ನೇ ಬಯಸುವವಳು. ತನ್ನ ವಯೋಸಹಜ ಆಸೆ ಆಕಾಂಕ್ಷೆಗಳನ್ನು ಬದಿಗಿಟ್ಟು ಬದುಕುವ ತ್ಯಾಗಮಯಿ. ಆದರೆ ಹೆಣ್ಣಾಗಿ ಹುಟ್ಟಿದಿ ನೀ ಹುಣ್ಣಿನಂತ ಬಾಳು ಬದುಕು, ಮಣ್ಣಾಗುವ ವರೆಗೂ ನೀ ಎಲ್ಲವನ್ನೂ ಸಹಿಸು ಎಂಬರ್ಥದ ಹಿರಿಯ ಜನಪದ ಹಾಡನ್ನು ಕೂಡ ನಾವು ಕೇಳಿರುತ್ತೇವೆ.  ಹೆಣ್ಣಾಗಿ ಹುಟ್ಟಿದುದಕ್ಕೆ ಎಲ್ಲವನ್ನೂ ಸಹಿಸಿಕೊಂಡು ಹೋಗಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಮನೆಯಲ್ಲಿ ಮಾತ್ರವಲ್ಲದೇ ಈ ಸಮಾಜದಲ್ಲಿ, ವೃತ್ತಿಜೀವನದಲ್ಲಿ ಅದೆಷ್ಟೋ ಮಹಿಳೆಯರು ಕಿರುಕುಳ, ಒತ್ತಡದ , ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಕೆಲವರು ಮೂಕವೇದನೆ ಅನುಭವಿಸುತ್ತಾರೆ. ಕೆಲವರು ಅಂತಹ ಸ್ಥಳದಿಂದ ಹೊರನಡೆಯುತ್ತಾರೆ. ಇನ್ನೂ ಕೆಲವರು ಇಹಲೋಕ ತ್ಯಜಿಸುವುದೂ ಉಂಟು.

ಹಾಗಾಗಿ ಹೆಣ್ಣಿನ ಶೋಷಣೆಗೆ ಕೊನೆ ಇಲ್ಲ ಎಂದೇ ಹೇಳಬಹುದು.  ಕೆಲವರಿಗೆ ಹೆಣ್ಣು ಮಗು ಹುಟ್ಟಿತೆಂದು ಸಸಾರ. ಇನ್ನು ಕೆಲವರಿಗೆ ಕೆಲಸದ ಆಳು, ಮನೆಯಲ್ಲಿಯೇ ಬಿದ್ದಿರಬೇಕು. ವರದಕ್ಷಿಣೆ ಕಿರುಕುಳದಿಂದ ಅಮಾನವೀಯ ಕೃತ್ಯ ಎಸಗುವುದು ಸರ್ವೇಸಾಮಾನ್ಯವಾದ ಸಂಗತಿ. ಯಾರೊಂದಿಗೂ ಹೇಳಿಕೊಳ್ಳುವ ಹಾಗಿಲ್ಲ. ಹೇಳಿದರೂ ಸಾಂತ್ವಾನದ ಮಾತುಗಳು ಕೇಳಿ ಬರುವ ಬದಲು "ಎಲ್ಲರ ಮನೆಯ ದೋಸೆ ತೂತೆ...ಹೊಂದಿಕೊಂಡು ಹೋಗು .." ಎಂಬ ಮಾತು ತೇಲಿಸಿಬಿಡುತ್ತಾರೆ. ಆಕೆಯ ಮನಸ್ಸಿನ ಮೇಲಾಗುವ ಪರಿಣಾಮಗಳನ್ನು ಯಾರೂ ಅರ್ಥಮಾಡಿಕೊಳ್ಳಲು ಹೋಗುವುದಿಲ್ಲ. ಇಷ್ಟೇ ಅಲ್ಲದೇ ಇನ್ನೊಂದು ಮುಖವಾಗಿ ತಮ್ಮ ಯವ್ವನದ ಕಾಮಕೇಳಿಗೆ ಗರ್ಭಿಣಿಯಾಗಿ ಗರ್ಭಪಾತ ಮಾಡಿಸಿಕೊಳ್ಳುವ ಹೆಣ್ಮಕ್ಕಳು, ಅಥವಾ ಹೆತ್ತು ತೊಟ್ಟಿಯಲ್ಲಿ ಶಿಶುವನ್ನು ಎಸೆದು ಹೋಗುವವರು ಇದ್ದಾರೆ. ಮಾದಕ ದ್ರವ್ಯಗಳ ಸೇವನೆಗೆ ಬಲಿಯಾಗಿ ಹೆಣ್ಮಕ್ಕಳು ತಮ್ಮ ಸುಂದರ ಬದುಕನ್ನು ನಾಶಮಾಡಿಕೊಳ್ಳುವವರೂ ಇದ್ದಾರೆ. ಇನ್ನು ಹಣದ ಆಸೆಗೆ ವೇಶ್ಯಾವಾಟಿಕೆ  ದಂಧೆಗೆ ನೂಕುವ ಕ್ರೂರಿಗಳು, ಎಳೆ ಮಗುವಿನಿಂದಾದಿಯಾಗಿ ವೃದ್ಧ ಹೆಂಗಸು, ಬಿಕ್ಷುಕಿಯನ್ನೂ ಬಿಡದೇ ನಡೆಯುವ ಅತ್ಯಾಚಾರಗಳು, ಕೊನೆಗೆ ವಿಷಯ ಹೊರಬರಬಾರೆಂದು ಕೊಲೆಯಲ್ಲಿ ಅಂತ್ಯ. ತಮ್ಮ ಕೈಗೆ ಸಿಗದಿದ್ದರೆ ಶೀಲಗೆಟ್ಟವಳೆಂಬ ಪಟ್ಟ ಕಟ್ಟುವುದು ಇಲ್ಲ ಕೆಲ ಗಂಡಸರು ತಮ್ಮ ಹೆಂಡತಿಯ ಮೇಲೆಯೇ ಶಂಕೆ ಪಡುವುದು... ಒಂದೇ ಎರಡೇ...

            ಇದೆಲ್ಲವೂ ಸಮಾಜದಲ್ಲಿ ನಡೆದಾಗ ಉಳಿದ ಹೆಣ್ಮಕ್ಕಳ ರಕ್ತ ಕುದಿಯುತ್ತದೆ. ಅದೇ ತನಗೇ ಹಾಗೆ ಆದಾಗ ಬಾಯಿ ಮುಚ್ಚಿಕೊಂಡು ಸಹಿಸಿಕೊಳ್ಳುತ್ತಾರೆ. ಕೆಲವರು ಮುಂದೆ ಬಂದು ದನಿ ಎತ್ತಿದರೂ ಕಾಣದ ಬಲಿಷ್ಠ ಕೈಗಳು ಅಲ್ಲಿಯೇ ಕ್ಷೀಣಿಸುವ ಹಾಗೆ ಮಾಡಿ ಬಿಡುತ್ತಾರೆ. ಕೆಲವರಿಗೆ ಮಾತ್ರವೇ ನ್ಯಾಯ ಸಿಗುತ್ತದೆ.

Source images: save girls, stop abused


ಅತ್ಯಾಚಾರ, ಆಸಿಡ್ ದಾಳಿ, ಕೊಲೆಯತ್ನ, ಹಲ್ಲೆ ಇವೆಲ್ಲದಕ್ಕೂ ಅವಳ ಮೇಲಿನ ದ್ವೇಷಕ್ಕೆ ಇರಬಹುದು. ಪ್ರೀತಿಯ ವಿಚಾರಕ್ಕಿರಬಹುದು. ಹಣಕ್ಕಾಗಿ ಕೂಡ ಕೃತ್ಯವೆಸಗಬಹುದು. ಅಥವಾ ಅಚಾನಕ್ ಆಗಿ ಯಾರು ಅಪರಿಚಿತನಿಂದಲೂ  ಅತ್ಯಾಚಾರಕ್ಕೊಳಗಾಗಬಹುದು. ಆಸಿಡ್ ದಾಳಿಗಳಾಗಬಹುದು. ಮಹಿಳೆಯರು ಮತ್ತು ಮಕ್ಕಳ ಮೇಲೆ ಆಗುವ ಇಂತಹ ದೌರ್ಜನ್ಯಕ್ಕೆ ತಕ್ಕ ಶಿಕ್ಷೆಯನ್ನು ನಮ್ಮ ಕಾನೂನು ಜಾರಿಗೊಳಿಸಿದರೆ ಅದರ ಭಯ ಅಪರಾಧಿಗಳಿಗೆ ಮೂಡುವುದು ಸುಳ್ಳಲ್ಲ. ಅತ್ಯಾಚಾರಕ್ಕೆ ಒಳಗಾದ ಸಂತೃಸ್ತೆಯ ಹೇಳಿಕೆ ಪಡೆದು ಅಪರಾಧಿಗಳ ಹುಡುಕಿ, ಅಪರಾಧವೆಸಗಿದ್ದು ಸಾಬೀತಾದರೆ ನೇರವಾಗಿ ಗುಂಡಿಕ್ಕಿ ಸಾಯಿಸುವ ಶಿಕ್ಷೆ ನೀಡಬೇಕು. ಕೆಲವು ಸಂತೃಸ್ತರು ದೂರನ್ನು ದಾಖಲಿಸಲು ಮುಂದೆ ಬರುವುದೇ ಇಲ್ಲ. ಮತ್ತೊಂದಿಷ್ಟು ಪ್ರಶ್ನೆಗಳ ಕೇಳಿ ಮನಸ್ಸನ್ನು ಘಾಸಿಗೊಳಿಸುತ್ತಾರೆ ಎಂಬ ಭಯ. ಅಥವಾ ಆಕೆಗೂ ಹಾಗು ಮನೆಯವರಿಗೂ ಅವಮಾನದ ಮೇಲೆ ಅವಮಾನ ಎದುರಿಸುವ ಆತ್ಮಸ್ಥೈರ್ಯ ಕುಂದಿರುವುದು ಇದಕ್ಕೆ ಕಾರಣ ಎನ್ನಬಹುದು.

ಕೆಲವೊಮ್ಮೆ ಆಕೆಯ‌ ಮನೆಯವರಿಗೆ ಒಂದಷ್ಟು ಹಣ ನೀಡಿಯೋ, ಇಲ್ಲ ಮದುವೆ ಮಾಡಿಕೊಂಡೋ ವಿಷಯವನ್ನು ಅಲ್ಲೇ ಮುಚ್ಚಿಹಾಕುತ್ತಾರೆ. ಕಾರಣ, ಕೆಲವೊಮ್ಮೆ ಅತ್ಯಾಚಾರವು ಪರಿಚಿತರಿಂದಲೇ ನಡೆಯುವುದು. ಮಹಿಳೆಯ ಮೇಲಾಗುವ ದೌರ್ಜನ್ಯ ,ಹಿಂಸೆಯು ಕೂಡ ಹಿರಿಯರ ಸಮ್ಮುಖದಲ್ಲಿ ಮಾತುಕತೆ ಸಂಧಾನದ ಮೇಲೆ ವಿಷಯವು ಅಲ್ಲೇ ತಣ್ಣಗಾಗುವುದು. ಹಾಗಾಗಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸರ್ಕಾರವಾಗಲಿ ,ಕಾನೂನಾಗಲಿ ಕಠಿಣ ಶಿಕ್ಷೆಯನ್ನು ವಿಧಿಸಿದರೆ ಮಾತ್ರವೇ ಇಂತಹ ಘಟನೆಗಳು ಮರುಕಳಿಸದಂತೆ ಇರಲು ಸಾಧ್ಯ. ಅಲ್ಲದೇ ತಮಗಾದ ಅನ್ಯಾಯದ ವಿರುದ್ಧ ದನಿ ಎತ್ತಲು ಮಹಿಳೆಯರಿಗೆ ಧೈರ್ಯಬರುವುದು. ಅಂತಹ ಕೂಪದಲ್ಲಿ ಬಿದ್ದು ಸಾಯುವುದಕ್ಕಿಂತ ಸ್ವತಂತ್ರವಾಗಿ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುವುದು.

ಮಹಿಳೆಯರಾಗಿ ಇಂತಹ ವಿಷಮ ಸ್ಥಿತಿಯಲ್ಲಿ ಧೈರ್ಯಗೆಡಬಾರದು. ಬದುಕು ಕಟ್ಟಿಕೊಳ್ಳಬೇಕು. ಈ ಸಮಾಜ ಆಡುವ ಚುಚ್ಚು ಮಾತಿಗೆ ಧೃತಿಗೆಡದೆ ತಲೆ ಎತ್ತಿ ಬಾಳಬೇಕು. ನ್ಯಾಯಕ್ಕಾಗಿ ಹೋರಾಡಬೇಕು. ಇಲ್ಲ ಅಂತಹ ಕೆಟ್ಟ ಪರಿಸರದಿಂದ ಹೊರಬಂದು ಹೊಸ ಜೀವನ ಪ್ರಾರಂಭಿಸಬೇಕು. ಬದಲಾಗಿ ಸಾವಿಗೆ ಶರಣಾಗಬಾರದು. ಈ ಜಗತ್ತಿನಲ್ಲಿ ಸಾಂತ್ವಾನ ಹೇಳುವ ಕೈಗಳು ಕೂಡ ಇವೆ‌. ನೆನಪಿರಲಿ. ಹೆಣ್ಣನ್ನು ಕೇವಲ ಭೋಗದ ವಸ್ತುವಾಗಿ, ಹೆರುವ ಯಂತ್ರವಾಗಿ, ವರದಕ್ಷಿಣೆ ತಂದು ಕೊಡುವ ATM ಯಂತ್ರವಾಗಿ ನೋಡುವ ಬದಲು, ನಾನಾ ಕಾರಣ ಒಡ್ಡಿ ಪೀಡಿಸುವ ಬದಲು ಅವಳಿಗೂ ಮನಸ್ಸಿದೆ. ನೋಯಿಸದಿರಿ. ಬದುಕಲು ಬಿಡಿ ಎಂಬುದ ಅರ್ಥ ಮಾಡಿಕೊಳ್ಳಿರಿ.

ಸಿಂಧು ಭಾರ್ಗವ್ | ಬೆಂಗಳೂರು-೨೧
ಬರಹಗಾರ್ತಿ

Uses of Amla Custurd Apple and Gauva ಸೀಬೆಹಣ್ಣು, ಸೀತಾಫಲ ಹಾಗು ನೆಲ್ಲಿಕಾಯಿಯ ಉಪಯೋಗ

ಕನ್ನಡ ಲೇಖನ


ಮಾರುಕಟ್ಟೆಯ ಆವರಿಸಿದ ಸೀತಾಫಲ ಹಾಗೂ ಸೀಬೆಹಣ್ಣುಗಳು

ಕಾಲಕ್ಕೆ ತಕ್ಕಂತೆ ಕೋಲ ಕಟ್ಟು ಎಂಬ ಹಿರಿಯರ ನಾಣ್ನುಡಿಯಂತೆ ಆಯಾಯ ಕಾಲಕ್ಕೆ ತಕ್ಕಂತೆ ನಾವು ಹೊಂದಿಕೊಂಡು ಬದುಕಬೇಕು. ನಮ್ಮ ಆಹಾರಕ್ರಮದಲ್ಲಿ ಋತುಗಳಿಗೆ ಅನುಗುಣವಾಗಿ ಕೂಡ ಬದಲಾವಣೆ ಮಾಡಿಕೊಳ್ಳಬೇಕು. ಈಗ ಲ್ಲಿ ಗಲ್ಲಿಯಲ್ಲಿ, ತಳ್ಳೋ ಗಾಡಿಯಲ್ಲಿ, ತರಕಾರಿ ಸಂತೆಗಳಲ್ಲಿ ಕಾಣ ಸಿಗುವ ಹಣ್ಣುಗಳೆಂದರೆ ಸೀಬೆಹಣ್ಣು ಹಾಗೂ ಸೀತಾಫಲ ಹಣ್ಣುಗಳ ರಾಶಿ. ಜೊತೆಗೆ ನೆಲ್ಲಿಕಾಯಿಯು ತನ್ನ ಸ್ಥಾನವನ್ನು ಪಡೆದಿದೆ. ಒಮ್ಮೆ ಗಮನಿಸಿದರೆ ವಿಟಮಿನ್ ಸಿ ಅಂಶ ಹೇರಳವಾಗಿರುವ ಈ ಹಣ್ಣುಗಳು ಈಗಿನ ಮಾಸಕ್ಕೆ ನಮ್ಮ ದಿನನಿತ್ಯದ ಬಳಕೆಯಾಗಬೇಕು. ಇವುಗಳ ಉಪಯೋಗ, ಏಕೆ ಬಳಸಬೇಕು ಎಂದು ನೋಡೋಣ.

ಮೊದಲಿಗೆ ಸೀಬೆಹಣ್ಣು : 

Uses of Gauva Fruits



ನಮ್ಮ ದೇಶದಲ್ಲಿ ಅದರಲ್ಲೂ ಕರ್ನಾಟಕಲ್ಲಿ ಅಗಸ್ಟ್ ಮಾಸದಲ್ಲಿಯೇ ಸೀಬೆಹಣ್ಣುಗಳು ಕಟಾವಿಗೆ ಬರುವುದು. ಒಂದಷ್ಟು ಜನರು ನೇರವಾಗಿ ತೋಟಕ್ಕೆ ಹೋಗಿ ಹಣ್ಣುಗಳ ಖರೀದಿಸಿದರೆ, ಹೆಚ್ಚಿನವರು ಮಾರುಕಟ್ಟೆಯಲ್ಲಿ ಬರುವ ಈ ಸೀಬೆಹಣ್ಣನ್ನು ಖರೀದಿಸುವರು. ಕೆ.ಜಿಗೆ 40-50  ರೂಪಾಯಿ ದರವನ್ನು ನಿಗದಿ ಮಾಡಲಾಗಿರುತ್ತದೆ. ಬಿಳಿ ಬಣ್ಣದ, ಕಡುಗುಲಾಬಿ, ಕೆಂಪು ಬಣ್ಣದ ತುಂಬಾ ಸಿಹಿಯಾದ, ಸ್ಪಲ್ಪ ಸಿಹಿಯಾದ ಹಣ್ಣುಗಳ ನಾವು ಕಾಣಬಹುದಾಗಿದೆ. ಅದರಲ್ಲಿಯೂ ಅತ್ಯಂತ ದೊಡ್ಡ ಗಾತ್ರದ ಥೈಲ್ಯಾಂಡ್ ನ ಸೀಬೆಹಣ್ಣುಗಳು ಕೂಡ ನಮ್ಮ ರಾಜ್ಯಕ್ಕೆ ಲಗ್ಗೆ ಇಟ್ಟಿವೆ ಎನ್ನಬಹುದು. ಒಂದು ಹಣ್ಣು ಸುಮಾರು ೭೦೦-೭೫೦ ಗ್ರಾಂ ತೂಕ ತೂಗುತ್ತದೆ.
ಸೀಬೆಹಣ್ಣು ಎಲ್ಲ ಕಾಲದಲ್ಲೂ ಬೆಳೆಯುವ ಬೆಳೆಯಾಗಿದೆ. ಇದರ ಎಲೆಗಳು ಕೂಡ ಉಪಯೋಗಕಾರಿ. ವಿಟಮಿನ್ ಸಿ ಅಂಶ ಹೇರಳವಾಗಿ ಈ ಹಣ್ಣಿನಲ್ಲಿರುತ್ತದೆ. ಅಲ್ಲದೇ ಐರನ್,ಕ್ಯಾಲ್ಸಿಯಂ, ವಿಟಮಿನ್ ಎ ಅಂಶವೂ ಒಳಗೊಂಡಿದೆ. ಕೊಬ್ಬಿನಂಶ ಅತ್ಯಂತ ಕಡಿಮೆಯಿರುವ ಈ ಹಣ್ಣನ್ನು ಎಲ್ಲರೂ ಸೇವಿಸಬಹುದು. ಬಡವರ ಸೇಬು ಎಂದೇ ಹೆಸರುವಾಸಿಯಾದ ಈ ಹಣ್ಣನ್ನು ಪ್ರತಿದಿನ ಒಂದೊಂದು ಹಣ್ಣನ್ನು ತಿಂದರೆ ಜೀರ್ಣಕ್ರಿಯೆ ವೃದ್ಧಿಸುತ್ತದೆ. ಕಿತ್ತಳೆ ಹಣ್ಣಿಗಿಂತ ಅತಿ ಹೆಚ್ಚು ವಿಟಮಿನ್‌ ಸಿ ಅಂಶ ಹೊಂದಿರುವ ಈ ಹಣ್ಣು ಸೇವಿಸುವುದರಿಂದ ಅಲ್ಜೈಮರ್‌, ಅರ್ಥರೈಟಿಸ್‌ ಹಾಗೂ ಕಣ್ಣಿನ ಪೂರೆಯುಂಟಾಗುವಂತಹ ಕಾಯಿಲೆಗಳನ್ನು ದೂರಾಗಿಸುತ್ತದಂತೆ. ಅಷ್ಟೇ ಅಲ್ಲದೆ ಕ್ಯಾನ್ಸರ್‌ ಹಾಗೂ ಹೃದಯ ಕಾಯಿಲೆಗಳನ್ನು ದೂರವಿಡುತ್ತದಂತೆ.
ಹಣ್ಣಿಗೆ ಸ್ವಲ್ಪ ಪುಡಿ ಉಪ್ಪು ಹಾಗೂ ಕಾಳುಮೆಣಸಿನ ಪುಡಿ ಬೆರೆಸಿ ತಿಂದರೆ ಇನ್ನೂ ರುಚಿಯಾಗಿರುತ್ತದೆ.

ಸೀತಾಫಲ ಹಣ್ಣು :

Uses of Custerd Apple


 ಮಳೆಗಾಲದಲ್ಲಿ ಹೇರಳವಾಗಿ ಕಾಣಸಿಗುವ ಹಣ್ಣುಗಳಲ್ಲಿ ಇದು ಕೂಡ ಒಂದು. ಇದರಲ್ಲಿ ಕೂಡ ವಿಟಮಿನ್ ಸಿ ಹಾಗೂ ವಿಟಮಿನ್ ಎ ಯಥೇಚ್ಛವಾಗಿ ಸಿಗುತ್ತದೆ. ಇದು ವಿಪರೀತ ಸಿಹಿಯಾದ ಹಣ್ಣಾಗಿದೆ.  ಕಣ್ಣಿನ ದೃಷ್ಟಿಯನ್ನು ಅಭಿವೃದ್ಧಿ ಪಡಿಸುವಲ್ಲಿ ಸೀತಾಫಲ ಹಣ್ಣು ಪ್ರಮುಖ ಪಾತ್ರವಹಿಸುತ್ತದೆ. ಏಕೆಂದರೆ ಈ ಮೇಲಿನ ವಿಟಮಿನ್ ಅಂಶಗಳು ಇದರಲ್ಲಿ ಇರುವುದರ ಜೊತೆಗೆ ರಿಬೋಫ್ಲಾವಿನ್, ವಿಟಮಿನ್ ಬಿ2 ಅಂಶಗಳು ಕೂಡ ಆಗಿರುವುದರಿಂದ ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಹೋರಾಡುವ ಆಂಟಿ ಆಕ್ಸಿಡೆಂಟ್ ರೂಪಗಳು ನಿಸರ್ಗದತ್ತವಾಗಿ ಈ ಹಣ್ಣುಗಳಲ್ಲಿ ಸಿಗುತ್ತವೆ. ನಿಮ್ಮ ಕಣ್ಣಿನ ಹಲವಾರು ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸುವಲ್ಲಿ ಇವುಗಳ ಪಾತ್ರ ತುಂಬಾ ದೊಡ್ಡದು. ನಾರಿನ ಅಂಶ ಹಾಗೂ ಮ್ಯಾಗ್ನೀಶಿಯಂ ಇದರಲ್ಲಿ ಇರುವುದರಿಂದ ಜೀರ್ಣಕ್ರಿಯೆಗೆ ಸಹಕಾರಿ. ಮಲಬದ್ಧತೆ ಸಮಸ್ಯೆ ದೂರವಾಗಿಸುತ್ತದೆ. ಬಾಯಿಯ ಹುಣ್ಣಿಗೆ ಕೂಡ ರಾಮಬಾಣ. ಸೀತಾಫಲ ಹಣ್ಣುಗಳಲ್ಲಿ ಮೆಗ್ನೀಷಿಯಂ ಮತ್ತು ಪೊಟ್ಯಾಷಿಯಂ ಅಂಶದ ಪ್ರಮಾಣ ತುಂಬಾ ಹೆಚ್ಚಾಗಿ ಕಂಡುಬರುತ್ತದೆ. ಹೃದಯದ ಕಾಯಿಲೆಗಳನ್ನು ದೂರ ಇರಿಸುವ ಮತ್ತು ಮಾಂಸಖಂಡಗಳ ಅಭಿವೃದ್ಧಿಯಲ್ಲಿ ನೆರವಾಗುವ ಜೊತೆಗೆ ರಕ್ತದ ಒತ್ತಡವನ್ನು ಕೂಡ ನಿಯಂತ್ರಣ ಮಾಡಿಕೊಳ್ಳುವ ನಿಟ್ಟಿನಲ್ಲಿ ಸೀತಾಫಲ ಹಣ್ಣುಗಳನ್ನು ಸೇವನೆ ಮಾಡಬಹುದು. ಅಲ್ಲದೆ ಕೊಲೆಸ್ಟರಾಲ್‌ ಪ್ರಮಾಣ ಕಡಿಮೆ ಮಾಡಲು ಸಹಕಾರಿಯಾಗಿದೆ.

ನೆಲ್ಲಿಕಾಯಿ : 



ಬೆಟ್ಟದ ನೆಲ್ಲಿ ಎಂದೇ ಖ್ಯಾತಿಪಡೆದ ನೆಲ್ಲಿಕಾಯಿಯಲ್ಲಿ ಕೂಡ ವಿಟಮಿನ್ ಸಿ ಅಂಶ ಅತ್ಯಧಿಕವಾಗಿರುತ್ತದೆ. ಈಗ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವ ನೆಲ್ಲಿಕಾಯಿಯನ್ನು ತಂದು ಕತ್ತರಿಸಿ ಪುಡಿ ಉಪ್ಪು ಬೆರೆಸಿ ಸೇವಿಸಬಹುದು. ಇದು ಹುಳಿ, ಒಗರು, ಸಿಹಿ ಅಂಶವನ್ನು ಒಳಗೊಂಡಿದೆ. ಇಲ್ಲವೇ ಉಪ್ಪಿನ ಕಾಯಿ ಮಾಡಿಟ್ಟು ಶೇಕರಿಸಿಡಬಹುದು. ಹಾಗೆಯೇ ಕತ್ತರಿಸಿ ಒಣಗಿಸಿ ಡಬ್ಬಿಯಲ್ಲಿ ಸಂರಕ್ಷಿಸಿಡಬಹುದು. ಪ್ರತಿದಿನ ಒಂದೆರಡು ನೆಲ್ಲಿ ಎಸಳು ತಿಂದು ನೀರು ಕುಡಿದರೆ ಕ್ಯಾಲ್ಸಿಯಂ ಅಂಶ ವೃದ್ಧಿಸುತ್ತದೆ. ಸಂಪೂರ್ಣ ದೇಹದ ಆರೋಗ್ಯ ಹೆಚ್ಚಿಸಲು ಸಹಕಾರಿಯಾಗಿದೆ. ಆಯುರ್ವೇದ ಔಷಧದಲ್ಲಿ ಮಹತ್ವದ ಪಾತ್ರ ವಹಿಸುವ ನೆಲ್ಲಿಕಾಯಿ, ಅದರ ಬೇರು, ಎಲೆಗಳು, ಚಕ್ಕೆಗಳನ್ನು ಯಾವಾಗ ಬೇಕಾದರು ನಾವು ಉಪಯೋಗಿಸಬಹುದು. ಇದರಿಂದ ಮಧುಮೇಹವು ನಿಯಂತ್ರಣದಲ್ಲಿರುತ್ತದೆ. ದೇಹದಲ್ಲಿನ ವಿಷಕಾರಿ ಅಂಶಗಳ ಹೊರಹಾಕಲು ಸಹಕಾರಿತಾಗಿದೆ.  ದೇಹದ ತೂಕದ ನಿರ್ವಹಣೆಗೆ ಹಾಗೂ ಕೂದಲಿನ ಪೋಷಣೆ, ಚರ್ಮದ ಆರೈಕೆಯಲ್ಲಿ ಈ ನೆಲ್ಲಿಕಾಯಿ ಮಹಥವದ ಪಾತ್ರ ವಹಿಸುತ್ತದೆ. ಶಾಂಪೂ ರೂಪದಲ್ಲಿ , ನೆಲ್ಲಿಪುಡಿಯ ಬಳಕೆ ಮಾಡಬಹುದಾಗಿದೆ.

ಹಾಗಾಗಿ ಸ್ನೇಹಿತರೇ ಋತುಗಳಿಗನುಸಾರವಾಗಿ ನೈಸರ್ಗಿಕವಾಗಿ ಬೆಳೆಯುವ ಮಾರುಕಟ್ಟೆಯಲ್ಲಿ ಬರುವ ಹಣ್ಣು ತರಕಾರಿಗಳನ್ನು ಮನೆಗೆ ಕೊಂಡೊಯ್ದು ಆಹಾರವಾಗಿ ಸೇವಿಸೋಣ. ಆರೋಗ್ಯವನ್ನು ಕಾಪಾಡಿಕೊಳ್ಳುವ ಕಡೆಗೆ ಗಮನಹರಿಸೋಣ.

- ಸಿಂಧು ಭಾರ್ಗವ ಬೆಂಗಳೂರು (ಲೇಖಕಿ)

Breast cancer ಹೆಣ್ಮಕ್ಕಳ ಕಾಡುವ ಸ್ತನ ಕ್ಯಾನ್ಸರ್

 ಲೇಖನ : ಮಹಿಳೆಯರ ಕಾಡುವ ಸ್ತನ ಕ್ಯಾನ್ಸರ್


ಸ್ತನ ಕ್ಯಾನ್ಸರ್ Breast cancer


ಈಗೀನ ಜೀವನ ಕ್ರಮಕ್ಕೆ, ಬದಲಾಗುವ ಹಾರ್ಮೋನ್‌ಗಳಿಂದ ಒಂದಿಲ್ಲ ಒಂದು ತರಹದ ಕ್ಯಾನ್ಸರ್ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ ಎಂಬುದೇ  ಆಶ್ಚರ್ಯಕರ. ಅದರಲ್ಲಿಯೂ ಮಹಿಳೆಯರ ಕಾಡುವ "ಸ್ತನ ಕ್ಯಾನ್ಸರ್". ಹಲವು ಲಕ್ಷಣಗಳು ಕಾಣಿಸಿಕೊಂಡರು ಕೂಡ  ಕೆಲವೊಮ್ಮೆ ಹೇಳಲು ಮುಜುರುಗ ಎನಿಸುವ ಮನಸ್ಥಿತಿಯಲ್ಲಿ  ಮಹಿಳೆಯರು ಇರುತ್ತಾರೆ. ಗೌಪ್ಯವಾಗಿಡಲು ಪ್ರಯತ್ನಿಸುತ್ತಾರೆ. ಇದರಿಂದ ಮುಖ್ಯವಾಗಿ ಇಂತದ್ದೇ ಸಮಸ್ಯೆ ಮುಂದೆ ಭಾದಿಸಬಹುದು ಎಂಬ ಸುಳಿವು ಕೂಡ ಅವರಿಗಿರುವುದಿಲ್ಲ. ಪ್ರತೀ ವರ್ಷವೂ ಸರಿಸುಮಾರು 1.5 ಲಕ್ಷದಷ್ಟು ಸ್ತ್ರೀಯರಲ್ಲಿ ಈ ರೋಗವು ಪತ್ತೆಯಾಗುತ್ತಿದೆ. ಸಾಕಷ್ಟು ಪ್ರಮಾಣದಲ್ಲಿ ಸಮಸ್ಯೆ ಉಲ್ಬಣಗೊಂಡ ಮೇಲೆಯೇ ಮಹಿಳೆಯರಿಗೆ ಇದರ ಅರಿವಾಗುವುದು. 


ಸ್ತನ ಕ್ಯಾನ್ಸರ್ ನ ಲಕ್ಷಣಗಳು ಮತ್ತು ಕಾರಣಗಳನ್ನು ತಿಳಿಯೋಣ : 

ಮೊದಲನೆಯದಾಗಿ ಸ್ತನ ಕ್ಯಾನ್ಸರ್ ಎಂದರೆ ಸ್ತನದ ಸುತ್ತಲೂ ರೂಪುಗೊಳ್ಳುವ ಗಡ್ಡೆ. ಕ್ಯಾನ್ಸರ್ ಜೀವಕೋಶಗಳು ಸ್ತನದ ಜೀವಕೋಶಗಳನ್ನು ಆವರಿಸಿ ಈ ರೋಗವು ಕಾಣಿಸಿಕೊಳ್ಳುತ್ತದೆ. ಪ್ರತಿಯೊಂದು ಸ್ತನವು ಹಾಲನ್ನು ಉತ್ಪಾದಿಸುವ ಲೋಬ್ಸ್ ಎಂದು ಕರೆಯಲ್ಪಡುವ 15-20 ಗ್ರಂಥಿಗಳನ್ನು ಹೊಂದಿರುತ್ತದೆ. ಸ್ತನ ಕ್ಯಾನ್ಸರ್ ಸಾಮಾನ್ಯವಾಗಿ ಈ ಲೋಬ್ಸ್‌ನಲ್ಲಿ ಪ್ರಾರಂಭವಾಗುತ್ತದೆ. ಇದು ತೊಟ್ಟುಗಳ ಪ್ರದೇಶದ ಕೆಳಗಿರುವ ಒಂದು ಗಟ್ಟಿ ಗಡ್ಡೆಯಾಗಿ ಕಂಡುಬರುತ್ತದೆ. ಈ ಮಾರಣಾಂತಿಕ ರೋಗಕ್ಕೆ ವಿವಿಧ ಹಂತಗಳಿವೆ. ಮೊದಲ ಹಂತದಲ್ಲಿದ್ದರೆ, ಕ್ಯಾನ್ಸರ್ ಸ್ತನ ನಾಳಕ್ಕೆ (ಹಾಲು ಉತ್ಪಾದಿಸುವ ಸ್ಥಳ) ಸೀಮಿತವಾಗಿದೆ ಎಂದರ್ಥ, ಇದು ಮೊದಲಿನ ಹಂತವಾಗಿದೆ. ಅಲ್ಲದೇ ಸ್ತನ ಕ್ಯಾನ್ಸರ್ಗೆ ಕಾರಣವಾಗುವ ಕೆಲವು ಅಪಾಯಕಾರಿ ಅಂಶಗಳೆಂದರೆ ಸ್ತ್ರೀ ಲೈಂಗಿಕ ಸಂಬಂಧ, ಬೊಜ್ಜು, ದೈಹಿಕ ವ್ಯಾಯಾಮದ ಕೊರತೆ, ಮದ್ಯ ಹಾಗೂ ಧೂಮಪಾನ ಸೇವನೆ, ಋತುಬಂಧದ ಸಮಯದಲ್ಲಿ ಹಾರ್ಮೋನು ಬದಲಿ ಚಿಕಿತ್ಸೆ, ಆಲಸ್ಯವಾಗಿ ಮಕ್ಕಳಾಗುವುದು ಅಥವ ಮಕ್ಕಳು ಆಗದೇನೇ ಇರುವುದು, ಮುದಿ ವಯಸ್ಸಿನಲ್ಲಿ ಕೂಡ ಬರಬಹುದು. 

ಮಹಿಳೆಯರು ಸ್ತನದಲ್ಲಿ ಗಡ್ಡೆಯಾಗಿದೆಯಾ ಎಂದು ಸ್ವತಃ ಪರೀಕ್ಷಿಸಬಹುದು. ಅಥವಾ ತೋಳುಗಳ ವ್ಯಾಯಾಮ ಮಾಡುವಾಗ ನೋವು ಬರುವುದೇ ಎಂದು ಗಮನಿಸಬಹುದು. ಅನುಮಾನ ಬಂದರೆ ಅಲ್ಟ್ರಾಸೌಂಡ್ ಸ್ಕ್ಯಾನ್, ಸ್ತನದ ಎಮ್.ಆರ್.ಐ ಸ್ಕ್ಯಾನ್ ಮಾಡಿಸಬಹುದು. 

ಮುಖ್ಯವಾಗಿ ಇನ್ನೊಂದು ಗಮನಿಸಬೇಕಾದ ಅಂಶವೇನೆಂದರೆ ಮಹಿಳೆಯರಲ್ಲಿ "ಹಾರ್ಮೋನಿನ ಅಸಮತೋಲನ" ಉಂಟಾದಾಗಲು ಈ ತರಹ ಸಮಸ್ಯೆ ಬರಲುಬಹುದು. ಗರ್ಭಾಶಯ, ಅಂಡಾಶಯದ ಕ್ಯಾನ್ಸರ್ ಬಂದಿದ್ದರೆ ನಂತರದಲ್ಲಿ ಸ್ತನದ ಕಡೆಗೂ ವಿಸ್ತರಿಸಬಹುದು. ಹೆರಿಗೆ ಬಾಣಂತಿಯ ಸಮಯದಲ್ಲಿ ಹಾಲೂಡಿಸುವಾಗ ಗಡ್ಡೆ ರಚನೆಯಾಗಿದ್ದರೆ ಇದು ಮುಂದೆ ಕ್ಯಾನ್ಸರ್ ಗಡ್ಡೆಯಾಗುವ ಸಾಧ್ಯತೆಗಳೂ ಇವೆ.  

ಕ್ಯಾನ್ಸರ್ ನಿಂದ ರಕ್ಷಿಸುವ ಬಿಆರ್‌ಸಿಎ1 ಮತ್ತು ಬಿಆರ್‌ಸಿಎ2 ಜೀನ್ಸ್‌ಗಳು ಪ್ರೊಟೀನುಗಳನ್ನು ಉತ್ಪತ್ತಿ ಮಾಡುತ್ತದೆ. ಒಂದು ವೇಳೆ ಅವುಗಳು ದೋಷಪೂರಿತವಾಗಿದ್ದರೆ ೪೦ ವರ್ಷದ ಮೇಲ್ಪಟ್ಟ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಶೇ. 80ರಷ್ಟಿರುತ್ತದೆ. ಖುತುಚಕ್ರದಲ್ಲಿ ಆಗಾಗ್ಗೆ ಏರುಪೇರಾಗುವುದು, ಮಾನಸಿಕ ಆರೋಗ್ಯ ಕೆಡುವುದು, ಅತಿ ಬೇಗ ಭಾವುಕರಾಗುವುದು, ಸಿಡುಕುವುದು, ಕೊರಗುವುದು ಇವೆಲ್ಲವೂ ಹಾರ್ಮೋನುಗಳ ಅಸಮತೋಲನದಿಂದ ಬಳಲುವ ಲಕ್ಷಣಗಳು.  ಸ್ಥೂಲಕಾಯದಿಂದ ಈಸ್ಟ್ರೋಜನ್ ಹಾರ್ಮೋನ್ ಹೆಚ್ಚು ಬಿಡುಗಡೆಯಾಗುತ್ತದೆ. ಇದರಿಂದ ಬ್ರೆಸ್ಟ್ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಸ್ತನದ ತೊಟ್ಟಿನಲ್ಲಿ ಊತ, ತೊಟ್ಟು ಒಳಕ್ಕೆ ಹೋಗಿರುವುದು, ಅಥವಾ ಬಿಳಿ / ಹಳದಿ ಬಣ್ಣದ ಹಾಲು ಜಿನುಗುವುದು, ಮುಟ್ಟಿದಾಗ ಗಡ್ಡೆಯಂತೆ ಭಾಸವಾಗುವುದು, ನೋವು ಕಾಣಿಸಿಕೊಳ್ಳುವುದು, ಕಂಕುಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ, ಚರ್ಮ ಕೆಂಪಾಗುವುದು ಇವೆಲ್ಲವೂ ಲಕ್ಷಣಗಳಾಗಿವೆ.


ಚಿಕಿತ್ಸಾಕ್ರಮ : 

ಓಂಕೋಟೈಪ್ ಡಿಎಕ್ಸ್ ಮತ್ತು ಮಾಮ್ಮಪ್ರಿಂಟ್ ಗಳಂತಹ ಕೆಲವು ವರ್ಣತಂತು ಪರೀಕ್ಷೆಗಳ ಜೊತೆಗೆ ಕೆಲ ನಿರ್ಧಿಷ್ಟ ವರ್ಣತಂತು ಪರೀಕ್ಷೆಗಳೂ ಮಾಡಿಸಬೇಕಾಗುತ್ತದೆ.  ಒಂದೇ ಗುಂಪಿಗೆ ಸೇರಿರೋ ರೋಗಿಗಳು ಹಾರ್ಮೋನ್ ಚಿಕಿತ್ಸೆಯಿಂದ ಪ್ರಯೋಜನ ಪಡೆಯುವರೋ ಅಥವಾ ಕಿಮೋಥೆರಪಿಯಿಂದ ಪ್ರಯೋಜನ ಪಡೆಯುವರೋ ಎಂಬುದನ್ನ ನಿರ್ಧರಿಸಲು ಈ ವರ್ಣತಂತು ಪರೀಕ್ಷೆಗಳು ನೆರವಾಗುತ್ತವೆ. ಅದನ್ನು ಚಿಕಿತ್ಸೆ ನೀಡುವ ವೈದ್ಯರು ಸಲಹೆ ನೀಡುತ್ತಾರೆ. ಆಗಾಗ್ಗೆ ಚಿಕೊತ್ಸೆಗೆ ಒಳಗಾಗುತ್ತಿರಬೇಕು. ಪ್ರಮುಖವಾಗಿ ಧೂಮಪಾನ ಮದ್ಯಪಾನದಿಂದ ದೂರವಿರಬೇಕು.   ಅದರ ಜೊತೆಗೆ ಬೇಳೆಕಾಳು, ಪೌಷ್ಟಿಕಾಂಶ ಆಹಾರ, ಸೊಪ್ಪು ತರಕಾರಿ ಮೊಳಕೆ ಕಾಳುಗಳ ಸೇವನೆ ಅತ್ಯಗತ್ಯ. ಜೊತೆಗೆ ನಿಯಮಿತ ವ್ಯಾಯಾಮ. ಮನಸ್ಸಿಗೆ ಘಾಸಿ ಮಾಡುವ ವಿಷಯದ ಕುರಿತು ಯೋಚಿಸದೇ ಇರುವುದು ಉತ್ತಮ. ನಕಾರಾತ್ಮಕವಾಗಿ ಯೋಚಿಸದೇ ಸದಾ ಧನಾತ್ಮಕ ಚಿಂತನೆ ಮಾಡುತ್ತಿರಬೇಕು. ಆಧಾತ್ಮದ ಕಡೆಗೆ ಮನವನ್ನು ಕೇಂದ್ರೀಕರಿಸಬಹುದು. ಪ್ರಕೃತಿ ಆರಾಧನೆ ಕೂಡ ಬೇಗದಲ್ಲಿ ಚೇತರಿಸಿಕೊಳ್ಳಲು ಸಹಕಾರಿಯಾಗುವುದು. ರೋಗಿಗೆ ಆತ್ಮಸ್ಥೈರ್ಯ ನೀಡುವ ಮಾತುಗಳನ್ನಾಡಬೇಕು. ಜೊತೆಗೆ, ವರ್ಷಕ್ಕೊಂದು ಬಾರಿ ಸ್ತನಗಳ ಎಂ.ಆರ್.ಐ. ಮಾಡಿಸ್ಕೊಳ್ಳೋದು ಮತ್ತು ಹಾರ್ಮೋನಿನ ಚಿಕಿತ್ಸೆಗೊಳಗಾಗೋದು ಸೂಕ್ತ.


- ಸಿಂಧು ಭಾರ್ಗವ ಬೆಂಗಳೂರು ( ಲೇಖಕಿ )




Monday, 27 September 2021

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೋಟ ಶಿವರಾಮ ಕಾರಂತರ ಜನ್ಮದಿನದ ಅಂಗವಾಗಿ ವಿವಿಧ ಸಾಹಿತ್ಯಿಕ ಸ್ಪರ್ಧೆಗಳ ಸಪ್ತಾಹ ಕಾರ್ಯಕ್ರಮ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೋಟ ಶಿವರಾಮ ಕಾರಂತರ ಜನ್ಮದಿನದ ಅಂಗವಾಗಿ ವಿವಿಧ ಸಾಹಿತ್ಯಿಕ ಸ್ಪರ್ಧೆಗಳ ಸಪ್ತಾಹ ಕಾರ್ಯಕ್ರಮ..



✍🏻ಲೇಖನ, ಪ್ರಬಂಧ, ಪ್ರವಾಸ ಕಥನ, ಮಕ್ಕಳ ನಾಟಕ ರಚನೆ, ಕವನ ವಾಚನ ಹಾಗೂ ಇನ್ನಿತರ ಸ್ಪರ್ದೆಗಳು..

"ಬತ್ತದ ತೊರೆ ಸ್ನೇಹ ಬಳಗ" - ಕಾರಂತಜ್ಜನ ನೆರಳಿನಡಿಯಲ್ಲಿ.. ಎಂಬ ಅಡಿಬರಹದೊಂದಿಗೆ ಹುಟ್ಟಿಕೊಂಡ ಹೊಸ ಸಾಹಿತ್ಯ ಬಳಗವು ಅಕ್ಟೋಬರ್ ಮೊದಲ ವಾರದಲ್ಲಿ ಕೋಟ ಶಿವರಾಮ ಕಾರಂತರ ಜನ್ಮದಿನದ ಅಂಗವಾಗಿ ವಿವಿಧ ಸಾಹಿತ್ಯಿಕ ಸ್ಪರ್ಧೆಗಳನ್ನು ನಡೆಸಲು ಮುಂದಾಗಿದೆ. 

(೧) ದಿನಾಂಕ : ೦೪/೧೦/೨೦೨೧ ಸೋಮವಾರ ಕವನ ರಚನೆ ಹಾಗೂ ಕವನ ವಾಚನ ಸ್ಪರ್ಧೆ

(ವಿ.ಸೂ : ವಿಷಯ ನಿಮ್ಮ ಆಯ್ಕೆ. ಸಾಲುಗಳ ಮಿತಿ : ೨೦-೨೪ ಸಾಲುಗಳು. ಮೊಬೈಲ್ ಅಡ್ಡ ಹಿಡಿದು ವೀಡಿಯೋ ಮಾಡಿರಿ. ಸುಮಾರು ಮೂರು ನಿಮಿಷಗಳ ಕಾಲ)

(೨) ದಿನಾಂಕ : ೦೫/೧೦/೨೦೨೧ ಮಂಗಳವಾರ

"ನಾ ಓದಿದ ಕಾರಂತರ ಕಾದಂಬರಿ.. ವಿಮರ್ಶಾ ಲೇಖನ ಸ್ಪರ್ಧೆ" 

(ವಿ.ಸೂ : ಪದಗಳ ಮಿತಿ ೧೦೦೦ ಪದಗಳು ಸುಮಾರು ಎರಡು ಪುಟಗಳಷ್ಟು)

(೩) ದಿನಾಂಕ : ೦೬/೧೦/೨೦೨೧ ಬುಧವಾರ

"ಲಲಿತ ಪ್ರಬಂಧಾ ಸ್ಪರ್ಧೆ" 

(ವಿ.ಸೂ : ವಿಷಯ ನಿಮ್ಮದೇ ಇರಲಿ. ಪದಗಳ ಮಿತಿ ೧೦೦೦- ೧೫೦೦  (ಸುಮಾರು ಎರಡರಿಂದ ಮೂರು ಪುಟಗಳಷ್ಟು)

(೪) ದಿನಾಂಕ : ೦೭/೧೦/೨೦೨೧ ಗುರುವಾರ

ನೀವು ಭೇಟಿ ಮಾಡಿದ ಕುತೂಹಲಭರಿತ ಸ್ಥಳದ ಕುರಿತಾದ "ಪ್ರವಾಸ ಕಥನ"

(ವಿ.ಸೂ : ಪದಗಳ ಮಿತಿ ೧೦೦೦, ಸುಮಾರು ಎರಡು ಪುಟಗಳಷ್ಟು)

(೫) ದಿನಾಂಕ : ೦೮/೧೦/೨೦೨೧ ಶುಕ್ರವಾರ

"ಮಕ್ಕಳ ನಾಟಕ ರಚನೆ" 

(ವಿ.ಸೂ : ವಿಷಯ ನಿಮ್ಮದೇ ಇರಲಿ. ಸುಮಾರು ಎರಡರಿಂದ ಮೂರು ಪುಟಗಳು, ಪಾತ್ರಗಳ ಸಂಖ್ಯೆ ೫-೭)

(೬) ದಿನಾಂಕ : ೦೯/೧೦/೨೦೨೧ ಶನಿವಾರ

ಚಟುವಟಿಕೆ ವಿಭಾಗದಲ್ಲಿ ಕಾರಂತರ ಭಾವಚಿತ್ರ ಅಥವಾ ಅವರ ಕಾದಂಬರಿಯ ಮುಖಪುಟದ ಚಿತ್ರವನ್ನು ಬಿಡಿಸುವುದು.


ನಿಯಮಗಳು :

೧) ಹಿರಿಯರು , ಕಿರಿಯರು, ವಿದ್ಯಾರ್ಥಿಗಳು ಕೂಡ ಭಾಗವಹಿಸಬಹುದಾಗಿದೆ. 

೨) ಇಮೇಜ್ ಗಳನ್ನು ಸ್ವೀಕರಿಸುವುದಿಲ್ಲ.

೩) ಬರಹಗಳಿಗೆ ಸೂಕ್ತ ಶೀರ್ಷಿಕೆ ನೀಡಬೇಕಾಗಿ ಕೋರಿಕೆ. 

೪) ಕೊನೆಯಲ್ಲಿ ನಿಮ್ಮ ಹೆಸರು, ಊರು ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ನಮೂದಿಸಿರಬೇಕು. 


ಭಾಗವಹಿಸಿದ ಪ್ರತಿಯೊಬ್ಬರಿಗೂ ಇ-ಪ್ರಮಾಣಪತ್ರವನ್ನು ನೀಡಿ ಗೌರವಿಸಲಾಗುವುದು. ಹಾಗೂ ಮೊದಲ‌ ಮೂವರು ವಿಜೇತರಿಗೆ ಪುಸ್ತಕ ಬಹುಮಾನದ ಜೊತೆಗೆ ಪ್ರಮಾಣಪತ್ರವನ್ನು ನೀಡಿ ಗೌರವಿಸಲಾಗುವುದು.


ಹೆಚ್ಚಿನ ಮಾಹಿತಿಗಾಗಿ ಕಛೇರಿ ಸಂಖ್ಯೆ : +91 7795743862


"ಕಾರಂತರ ಜನ್ಮದಿನದ ಅಂಗವಾಗಿ ಸ್ಪರ್ಧೆಗಾಗಿ" ಎಂದು ನಮೂದಿಸಿರಿ.


ನಿಮ್ಮ ಬರಹಗಳನ್ನು ಕಳುಹಿಸಬೇಕಾದ ಇ-ಮೇಲ್  ಐಡಿ :  battadatore@gmail.com


ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಕೋರಿಕೆ. 


ನಿರ್ವಾಹಕರು ಮತ್ತು ತೀರ್ಪುಗಾರರು

ಬತ್ತದ ತೊರೆ ಸ್ನೇಹ ಬಳಗ, ಬೆಂಗಳೂರು 




Friday, 24 September 2021

September month of articles..

 Paper cuttings.. September month of articles..

1) ಸಂಪದ ಸಾಲು ಮಾಸಪತ್ರಿಕೆ - ಮಕ್ಕಳ ಸಾಹಿತ್ಯ ಪದ್ಯ ನೀತಿ ಕತೆ

೨) ಕೊಂಕಣವಾಹಿನಿ ದಿನಪತ್ರಿಕೆ - ಭಕ್ತಿಗೀತೆಗಳು, ಲೇಖನ ಆರೋಗ್ಯ ಮಾಹಿತಿ

೩) ಜನಮಿಡಿತ ದಿನಪತ್ರಿಕೆ.  ಕವನಗಳು, ಪತ್ರಿಕಾ ವರದ

೪) ಹರ್ಷವಾಣಿ ಮಾಸಪತ್ರಿಕೆ ಮಕ್ಕಳ ಸಾಹಿತ್ಯ ಕತೆ


ಆಯ್ಕೆ ಮಾಡಿ ಪ್ರಕಟಿಸಿದ ಸಂಪಾದಕ ಬಳಗಕ್ಕೆ ವಂದನೆಗಳು🌹










ಸ್ತನ ಕ್ಯಾನ್ಸರ್ ಲಕ್ಷಣಗಳು & ಚಿಕಿತ್ಸಾ ಕ್ರಮಗಳು





















Tuesday, 20 July 2021

Writer Sindhu Bhargav Autobiography ಆತ್ಮಕಥೆ

 Writer Sindhu Bhargav Autobiography 2021

ಮೂವತ್ತ ಮೂರು


ಮೂ - ಮೂರು ಸುತ್ತಿನ ಬದುಕಿದು

ವ - ವರುಷಗಳು ಉರುಳುವುದೇ ತಿಳಿಯದು

ತ್ತ - ತತ್ತರಿಸಿದಿರಿ ಕಷ್ಟನಷ್ಟ, ಅವಮಾನಗಳಿಗೆ

ಮೂ - ಮೂಖವೇದನೆ ಪಡದೆ ಸಹನೆಯಿಂದಿರಿ

ರು - ರುಮಾಲು ಧರಿಸಲು ಮುಂಬರುವರು, ಸಾಧನೆಯ ಹಾದಿ ನಿಮ್ಮದಾಗಿರಲು!!

(ರುಮಾಲು ಅಂದರೆ ಇಲ್ಲಿ ಪೇಟ.)

***

ತನ್ನ ಲೇಖನಗಳ ಮೂಲಕ ಓದುಗರ ಮನಗೆದ್ದ, ನೀತಿಕತೆಗಳ ಮೂಲಕ ಮಕ್ಕಳನ್ನೂ ರಂಜಿಸುವ ಅಪಾರ ಸ್ನೇಹಬಳಗವನ್ನು ಸಂಪಾದಿಸಿರುವ ಲೇಖಕಿ , ಸಂಪಾದಕಿ, ಉತ್ತಮ ಸಾಹಿತ್ಯ ಸಂಘಟಕರು ಹಾಗೆಯೇ ಸಾಹಿತ್ಯ ಲೋಕದಲ್ಲಿ  ಸಿಂಧು ಭಾರ್ಗವ್ ಎಂದೇ ಖ್ಯಾತರಾದ ಶ್ರೀಮತಿ ತುಳಸಿ ನವೀನ್ ಭಟ್, ಅವರ ಒಂದಷ್ಟು ಪರಿಚಯ ಮಾಡಿಕೊಳ್ಳೋಣ. ನಾನು ನಿಮ್ಮೆಲ್ಲರ ನೆಚ್ಚಿನ ಬರಹಗಾರ್ತಿ, ಶಿಕ್ಷಕಿ ಶ್ರೀಮತಿ ಚಂದ್ರಿಕಾ ರಾಘವೇಂದ್ರ ಬಾಯಿರಿ. 

ಇವರು ಕರಾವಳಿ ಭಾಗದ ಬಾರಕೂರಿನ ಹೇರಾಡಿ ಗ್ರಾಮದ ಚಂಡೆ ಎಂಬ ಪುಟ್ಟ ಹಳ್ಳಿಯಲ್ಲಿ ಶ್ರೀ ನರಸಿಂಹ ಭಟ್ ಚಂಡೆ ಹಾಗೂ ಶ್ರೀಮತಿ ವಸಂತಿ.ಎನ್ ಭಟ್ ಇವರ ಎರಡನೇ ಮುದ್ದಿನ ಮಗಳಾಗಿ ಅಗಸ್ಟ್ ಮಾಸದಲ್ಲಿ ಜನಿಸಿದರು. ಅದೇ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ನ್ಯಾಷನಲ್ ಜೂನಿಯರ್ ಕಾಲೇಜು ಬಾರಕೂರು ಇಲ್ಲಿ ಪ್ರೌಢಶಿಕ್ಷಣ ಹಾಗೂ ಕಾಲೇಜು ಶಿಕ್ಷಣವನ್ನು ಮುಗಿಸಿದರು. ನಂತರ ISRP ಕಡಿಯಾಳಿಯಲ್ಲಿ ಡಿಪ್ಲೊಮಾ ಇನ್ ಕಂಪ್ಯೂಟರ್ ಸೈನ್ಸ್ ಪದವಿ ಪಡೆದು ದೂರದ ಬೆಂಗಳೂರಿನ BHEL ನಲ್ಲಿ ಇಂಟರ್ನ್ಶಿಪ್ ಕೋರ್ಸ್ ಮಾಡಲು ಬಂದಿದ್ದರು. ‌ಆಗಲೇ ಉಡುಪಿಯ ನವೀನ್ ಭಟ್ ಎಂಬುವವರೊಂದಿಗೆ ಮದುವೆಯಾಯಿತು. ನಂತರದಲ್ಲಿ ಬೆಂಗಳೂರಿನಲ್ಲಿ ನೆಲೆಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಏನಾದರೂ ಸಾಧನೆ‌ಮಾಡಬೇಕೆಂಬ ತುಡಿತದಿಂದ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಸಾಮಾನ್ಯ ಗೃಹಿಣಿಯಾದ ಇವರು ಮಕ್ಕಳನ್ನು ಸಾಕಿ ಸಲಹುವ ಜೊತೆಗೆ ಒಂದಷ್ಟು ಸಾಧನೆ ಮಾಡಲು ಹೇಗೆ ಸಾಧ್ಯವಾಯಿತು ಎಂದು ಅವರನ್ನೇ ಕೇಳೋಣ ಬನ್ನಿ.


ನಮಸ್ತೆ ಮೇಡಂ, 

* ಒಂದು ಕುತೂಹಲ ಭರಿತ ಪ್ರಶ್ನೆ. ನೀವು ಏಕೆ ಕಾವ್ಯನಾಮದಲ್ಲಿ ಸಂಪೂರ್ಣ ಹೆಸರನ್ನೇ ಬದಲಾಯಿಸಿದಿರಿ? ಇದಕ್ಕೆ ಏನಾದರು ಹಿನ್ನೆಲೆಯಿದೆಯೇ?


 ಕಾಲೇಜು ಜೀವನ ಮುಗಿಸಿ ಹೊರ ಪ್ರಪಂಚಕ್ಕೆ ಬಂದ ಮೇಲೆ ಸ್ನೇಹಿತರೊಬ್ಬರು ಪರಿಚಯವಾದರು. ಅವರಿಗೆ ತಾಯಿ ಇರಲಿಲ್ಲ. ಬಾಲ್ಯದಲ್ಲಿಯೇ ಹೆತ್ತವರ ಪ್ರೀತಿಯಿಂದ ವಂಚಿತರಾದವರು. ವಿಧಿ ಅದೆಷ್ಟು ಕ್ರೂರಿ ಎಂದು ಮನಸ್ಸಿಗೆ ತುಂಬಾ ನೋವಾಗಿತ್ತು. ಚಿಂತನೆ ನಡೆಸಲು ದಾರಿ ಮಾಡಿಕೊಟ್ಟಿತು. ಅವರ ತಾಯಿಯ ಹೆಸರು "ಸಿಂಧು". ಅದೇ ನೆನಪಿಗಾಗಿ ಅವರ ತಾಯಿಯ ಹೆಸರನಿಂದ ಬರೆಯಲು ಪ್ರಾರಂಭಿಸಿದೆ. ನಮ್ಮದು "ಭಾರ್ಗವ" ಗೋತ್ರ. ಹಾಗೆ ತುಳಸಿ ನವೀನ್ ಅವರು ಲೇಖಕಿ "ಸಿಂಧು ಭಾರ್ಗವ" ಆಗಿ ಬದಲಾಗಿದ್ದು.


* ನಿಮಗೆ ಕತೆ, ಕವಿತೆಗಳನ್ನು ಬರೆಯಲು ಪ್ರೇರಣೆ ನೀಡಿದ ಗುರುಗಳು ಯಾರು?

ಹಿರಿಯರು ಹೇಳಿದ ಗಾದೆ ಮಾತೊಂದಿದೆ. ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎಂದು. ನಾನು ಪುಸ್ತಕಗಳ ಓದಿದ್ದು ಕಡಿಮೆ. ಆದರೆ ಸ್ನೇಹಜೀವಿಯಾದ ನಾನು ದೇಶ ಅಲ್ಲದಿದ್ದರೂ ಊರೂರು ಸುತ್ತಿದ್ದೇನೆ. ಬಾಲ್ಯದಲ್ಲಿ ಅನೇಕ ಜಾತಿ, ಅನ್ಯಧರ್ಮದ ಜನರ ಮನೆಗೆ ಭೇಟಿ ಮಾಡಿದ್ದೆ. ಅವರ ಜೀವನ, ಬದುಕುವ ರೀತಿ,ಮನದಾಳದ ನೋವಿನ ಮಾತುಗಳು, ಕಷ್ಟ ನಷ್ಟಗಳು, ಕೆಲವರು ಕಡುಬಡವರು, ಕೆಲವರು ಶ್ರೀಮಂತರು. ಕೆಲವರು ವಿಕಲಾಂಗ ಚೇತನರು, ಬದುಕಿಗಾಗಿ ಹೋರಾಡುವ ಒಂಟಿ ಮಹಿಳೆ, ಒಬ್ಬಿಬ್ಬರಲ್ಲ... ಈ ಪ್ರಪಂಚದಲ್ಲಿ ಎಲ್ಲರೂ ಬದುಕಬೇಕಾಗಿದೆ. ನಮ್ಮ ತಾಯಿಯ ಮೌಲ್ಯಾಧಾರಿತ ಹಿತನುಡಿಗಳು, ತಂದೆಯ ಕಷ್ಟದ ಜೀವನ ಹೀಗೆ ಇವರೆಲ್ಲರು ತುಂಬಾ ಪ್ರಭಾವ ಬೀರಿದರು. ಅದೇ ನನ್ನನ್ನು ಸರಳವಾಗಿ ಬದುಕಲು ಪ್ರೇರೇಪಿಸಿತು. ಬರವಣಿಗೆಯ ಮೂಲಕ್ಕೆ ನಾಂದಿಯಾಯಿತು. ವಿದ್ಯಾರ್ಥಿ ಜೀವನದಲ್ಲಿ ಚುಟುಕು ಬರೆಯುತ್ತಿದ್ದೆ. ಹಾಗೆಯೇ ಸಾಹಿತ್ಯ ಲೋಕದಲ್ಲಿ ಬರೆಯಲು  ಆರಂಭಿಸಿದ್ದು 2011 ಅಕ್ಟೋಬರ್ ತಿಂಗಳಲ್ಲಿ. ನನ್ನ ಮುಖಪುಟದ ಗೆಳೆಯ ಪ್ರಸಾದ್ ಮೈಸೂರು ತುಂಬಾ ಪ್ರಭಾವ ಬೀರಿದ್ದ. ಅವನು ಕವಿತೆ ಬರೆಯುವ ಶೈಲಿ ಅಚ್ಚರಿ ಮೂಡಿಸುತಿತ್ತು. ಅವನಿಂದಲೇ ಕವಿತೆ ಬರೆಯಲು ಶುರುಮಾಡಿದೆ. ಪ್ರಥಮದಲ್ಲಿ ಗದ್ಯರೂಪದಲ್ಲಿ ಬರೆಯುವಾಗ ಶ್ರೀ. ಕೃಷ್ಣ ಪ್ರಸಾದ್ ರವರು ಲಯಬದ್ಧವಾಗಿ ಬರೆಯಲು ತಿಳಿಸಿಕೊಟ್ಟರು‌. ಒಂದು ರಾಗ ಹಾಕಿ, ಪ್ರಾಸಭರಿತವಾಗಿ ಬರೆಯಬೇಕು ಎಂದು ಹೇಳಿದರು. ಹಾಗೆಯೇ ನನ್ನ ಕವಿತೆಯಲ್ಲಿ ಬದಲಾವಣೆ ಮಾಡಿಕೊಂಡು ಬರೆಯತೊಡಗಿದೆ. ಸರಿಸುಮಾರು ಹತ್ತು ವರ್ಷಗಳ ಬರಹಲೋಕದ ಪ್ರಯಾಣ. ಇಲ್ಲಿಯ ತನಕ ಬರೆಯುತ್ತಲೇ ಇರುವೆ. ಇದಕ್ಕೆಲ್ಲ ಪತ್ರಿಕೆಯ ಸಂಪಾದಕರು, ಹಿರಿಯರು, ಸ್ನೇಹಿತರ ಸಹಕಾರ ಕಾರಣವಾಗಿದೆ. 

* ನಿಮ್ಮ ಬರಹಗಳು ಎಲ್ಲಿಯಾದರೂ ಪ್ರಕಟಗೊಂಡಿವೆಯೇ?

ನನ್ನ ಬರಹಗಳು ಅಂದರೆ ವೈಚಾರಿಕ ಲೇಖನ , ಕತೆ ಪ್ರಪ್ರಥಮ ಬಾರಿಗೆ ಯುಗಪುರುಷ ಕಿನ್ನಿಗೋಳಿ, ಮಾಸಪತ್ರಿಕೆಯಲ್ಲಿ ೨೦೧೩ ನೇ ಇಸವಿಯಲ್ಲಿ ಪ್ರಕಟವಾಗಿತ್ತು. ಹೊಸ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಅಲ್ಲಿನ ಸಂಪಾದಕರ ಗುಣ ಶ್ಲಾಘನೀಯ. ತದನಂತರ ವಿಜಯ ಕರ್ನಾಟಕ, ಕರ್ಮವೀರ, ವಾರ್ತಾಭಾರತಿ, ನಿಮ್ಮೆಲ್ಲರ ಮಾನಸ, ಹರ್ಷವಾಣಿ, ಯುಗಪುರುಷ ಕಿನ್ನಿಗೋಳಿ, ಅನುಪಮ ಮಹಿಳಾ ಮಾಸಿಕ, ಪಂಜು ಪತ್ರಿಕೆ, ಸಂಗಾತಿ, ಇಸ್ಸನಿ,ನುಡಿಜೇನು ಕಾರವಾರ, ಕಡಲವಾಣಿ ಕಾರವಾರ, ಜನಮಿಡಿತ ದಾವಣಗೆರೆ, ಪ್ರತಿನಿಧಿದಿನಪತ್ರಿಕೆ ಹಾಸನ,  ಮಿಡಿತ ತ್ರೈಮಾಸಿಕ, ಸ್ತ್ರೀ ಜಾಗೃತಿ ಮಹಿಳಾ‌ ಮಾಸಿಮ, ಸಂಗಾತಿ, ವಿಶ್ವವಾಣಿ ದಿನಪತ್ರಿಕೆ, ಸಿಡಿದೆದ್ದ ಸಿಂಹ ಕೊಪ್ಪಳ, ಆಲದ ನೆರಳು ಅಂತರ್ಜಾಲ ಪಾಕ್ಷಿಕದಲ್ಲಿ ಹೀಗೆ ಜಿಲ್ಲಾಮಟ್ಟದ ಹಾಗು ರಾಜ್ಯಮಟ್ಟದ ಹತ್ತಾರು ಮಾಸಪತ್ರಿಕೆಗಳಲ್ಲಿ, ದಿನಪತ್ರಿಕೆಯಲ್ಲಿ, ಅಂತರ್ಜಾಲ ಪಾಕ್ಷಿಕ, ದ್ವೈಮಾಸಿಕ, ತ್ರೈಮಾಸಿಕ ಪತ್ರಿಕೆಗಳಲ್ಲಿಯೂ ಕೂಡ ಕವಿತೆ-ಲೇಖನ-ಕಥೆಗಳು-ಮಕ್ಕಳ ಕತೆಗಳು ಪ್ರಕಟಗೊಳ್ಳುತ್ತಲಿವೆ. 

ನನ್ನದೇ ಸಾಹಿತ್ಯದಲ್ಲಿ ಎರಡು ಭಾವಗೀತೆಗಳ ಹಾಡುಗಳು ಬಿಡುಗಡೆಯಾಗಿವೆ. 

ಮಕ್ಕಳ ಸಾಹಿತ್ಯ ಹಾಗೂ ಜನಪದ ಸಾಹಿತ್ಯಗಳು ಮೂಲೆಗುಂಪಾಗಿರುವ ಈ ಸಮಯದಲ್ಲಿ ಅವುಗಳನ್ನು ಮುಖ್ಯ ವೇದಿಕೆಗೆ ತರುವ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಮಕ್ಕಳ ಸಾಹಿತ್ಯವನ್ನು ಬರೆಯುತ್ತಿದ್ದೇನೆ. ಮಕ್ಕಳ ಸಾಹಿತ್ಯದ ಬಗ್ಗೆ ಸಂಶೋಧನಾ ಲೇಖನವನ್ನು ಬರೆದಿರುವೆನು. 

ಹಾಗೆಯೇ ಸರಿಸುಮಾರು ೨೩+ ಸಂಪಾದಕತ್ವ ಕೃತಿಗಳಲ್ಲಿ ನಾನು ಬರೆದ ಬರಹಗಳು ಪ್ರಕಟವಾಗಿದೆ. 

📚 ಫೇಸ್ ಬುಕ್ಕಾದಾಗ (೨೦೧೩) ಕತೆಕವನಗಳ ಸಂಕಲನ

📚 

📚 

📚 

📚 

ನಮ್ಮದೇ ಸಂಪಾದಕತ್ವದಲ್ಲಿ ನಾಲ್ಕು ಕೃತಿಗಳು ಬಿಡುಗಡೆಯಾಗಿವೆ. 

🌹ಪ್ರೊ. ಮುರುಳೀಧರ್ ಕೆ. ಎಸ್. ಹಾಗೂ

🌹ತುಳಸಿ ಭಟ್ ( ಸಿಂಧು ಭಾರ್ಗವ್ ) ಅವರ ಸಂಪಾದಕತ್ವದಡಿಯಲ್ಲಿ ನಾಲ್ಕು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.

📌  ಬೆಟ್ಟದ ಹಾದಿಯಲ್ಲಿ (ಕಥಾ ಸಂಕಲನ ೨೦೨೦) ಬೆಳಕು ಪ್ರಕಾಶನ ಬೆಂಗಳೂರು

📌  ನವಿಲ ಹೆಜ್ಜೆ (ಕವನ ಸಂಕಲನ ೨೦೨೦) ಬೆಳಕು ಪ್ರಕಾಶನ

📌  ಕೌಸ್ತುಭ (ವೈಚಾರಿಕ ಲೇಖನಗಳು ೨೦೨೦)  ಬೆಳಕು ಪ್ರಕಾಶನ ಬೆಂಗಳೂರು

📌  ಕೂಸುಮರಿ ( ಮಕ್ಕಳ ಸಾಹಿತ್ಯ ೨೦೨೧) (HSRA ಪ್ರಕಾಶನ, ಬೆಂಗಳೂರು)


ಈಗ ನಮ್ಮದೇ ಆದ  "ಆಲದ ನೆರಳು- ಅಂತರ್ಜಾಲ ಪಾಕ್ಷಿಕ"ದ ಸಂಪಾದಕಿಯಾಗಿರುವೆನು. 


*ನಿಮಗೆ ಸಂದ ಪ್ರಶಸ್ತಿಗಳು ಯಾವುವು?

🚩 ವಿವಿಧ  ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವವರ ಗುರುತಿಸಿ ೨೦೧೯ರ ಯುಗಾದಿ ಹೊಸ ವರುಷದ ಅಂಗವಾಗಿ "ಕನ್ನಡ ಸೇವಾರತ್ನ ಪ್ರಶಸ್ತಿ"ಯನ್ನು "ಪತ್ರಿಕಾ ಲೇಖಕರ ವಿಭಾಗದಲ್ಲಿ" ಬೆಂಗಳೂರು ನಗರಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ ಇವರು ನೀಡಿ ಗೌರವಿಸಿದ್ದಾರೆ.

🚩 ೨೦೧೯ ರಲ್ಲಿ ಮೈಸೂರಿನ ಅಭಿರುಚಿ ಬಳಗದಿಂದ "ಅಭಿರುಚಿ ಸಾಧನಾ ಶ್ರೀ" ಪ್ರಶಸ್ತಿ ಕೂಡ ದೊರಕಿದೆ.

🚩 64ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ೨೦೧೯ ರಲ್ಲಿ "ಕನ್ನಡ ಕವಿವಾಣಿ ಪತ್ರಿಕೆ- ಚಿಂತಾಮಣಿ" ಇವರ ವತಿಯಿಂದ "ಕಾವ್ಯಸಿರಿ ಪ್ರಶಸ್ತಿ" ಲಭಿಸಿದೆ.

🚩 ಭೂಮಿ ಪ್ರತಿಷ್ಠಾನ, ಧಾರವಾಡ ಇದರ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ "ಭೂಮಿ ಕಾವ್ಯ ಪುರಸ್ಕಾರ"ಕ್ಕೆ ೨೦೧೯ ರಲ್ಲಿ ಭಾಜನವಾಗಿದೆ. 

🚩 ನವಪರ್ವ ಫೌಂಡೇಶನ್ (ರಿ.) ಬೆಂಗಳೂರು ಇದರ ವತಿಯಿಂದ ಸತತ ಎರಡು ಬಾರಿ " ನವಪರ್ವ ನಕ್ಷತ್ರ ಪ್ರಶಸ್ತಿ " ನೀಡಿ ಗೌರವಿಸಲಾಗಿದೆ.

🚩 ಭೂಮಿ ಪ್ರತಿಷ್ಠಾನ ಧಾರವಾಡ, "ಪುನರ್ನವ ಸಂಶೋಧನಾ ಕೃತಿ ಭಾಗ ೧& ಭಾಗ‌ ೨ ರಲ್ಲಿ" - ನಾನು ಬರೆದ "ಕೋಟ‌ ಶಿವರಾಮ ಕಾರಂತರ ಕಾದಂಬರಿಗಳು:ಜೀವನಕ್ಕೆ ಹಿಡಿದ ಕೈಗನ್ನಡಿ" ಲೇಖನವು ಪ್ರಕಟವಾಗಿದೆ.

ಸಾಹಿತ್ಯಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಲಭಿಸಿದೆ. 

* ಪ್ರಸ್ತುತ ನಿಮ್ಮ ಸಾಹಿತ್ಯ ಚಟುವಟಿಕೆ ಬಗ್ಗೆ ತಿಳಿಸಿರಿ.

ನಾನು ಕಳೆದ ಎರಡು ವರ್ಷಗಳ ಕಾಲ ನವಪರ್ವ ಫೌಂಡೇಶನ್ (ರಿ.) ಬೆಂಗಳೂರು ಇದರ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದೆ. ಆ ಸುಸಂದರ್ಭದಲ್ಲಿ

🌹ಪ್ರೊ. ಮುರುಳೀಧರ್ ಕೆ. ಎಸ್.
🌹ತುಳಸಿ ಭಟ್ ( ಸಿಂಧು ಭಾರ್ಗವ್ ) ಅವರ ಸಂಪಾದಕತ್ವದಡಿಯಲ್ಲಿ ನಾಲ್ಕು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.
📚✍️📚✍️📚✍️📚✍️📚✍️📚✍️📚

📌 ಬೆಟ್ಟದ ಹಾದಿಯಲ್ಲಿ (ಕಥಾ ಸಂಕಲನ)

📌 ನವಿಲ ಹೆಜ್ಜೆ (ಕವನ ಸಂಕಲನ)

📌 ಕೌಸ್ತುಭ (ವೈಚಾರಿಕ ಲೇಖನಗಳು) 

📌 ಕೂಸುಮರಿ (ಮಕ್ಕಳ ಸಾಹಿತ್ಯ)


ನಮ್ಮ‌ಕೆಲಸವನ್ನು ಗುರುತಿಸಿ ಅಧ್ಯಕ್ಷರು ಹಾಗೂ ಸರ್ವ ಪದಾಧಿಕಾರಿಗಳು ಸೇರಿ ನವಪರ್ವ ನಕ್ಷತ್ರ ಎಂಬ ಪ್ರಶಸ್ತಿ ನೀಡಿ ಗೌರವಿಸಿದ್ದರು. ನಂತರ ರಾಜಿನಾಮೆ ನೀಡಿ ಹಿರಿಯರ ಸಹಕಾರ, ಮಾರ್ಗದರ್ಶನದ ಮೇರೆಗೆ ನಮ್ಮದೇ ಆದ ಹೊಸ "ಬತ್ತದ ತೊರೆ ಸ್ನೇಹ ಬಳಗ" ಸಾಹಿತ್ಯ ತಂಡ ರಚಿಸಿದೆವು‌. ಹರಿನರಸಿಂಹ ಉಪಾಧ್ಯಾಯ, ಹಾಗೂ  ಚಂದ್ರಿಕಾ ಆರ್ ಬಾಯಿರಿ ಅವರು ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.


* ನೀವು ಒಬ್ಬ ಉತ್ತಮ ಸಂಘಟನಾಕಾರರು ಎಂದು ಕೇಳ್ಪಟ್ಟೆ. ಅದು ಹೇಗೆ ಸಾಧ್ಯವಾಯಿತು?

ನಾವು ಕರುನಾಡಿನಲ್ಲಿ ಜನಿಸಿರುವುದೇ ಪುಣ್ಯ. ಕನ್ನಡದವರಾಗಿಕ ನ್ನಡಮ್ಮನ ಸೇವೆ ಮಾಡುವ ಮನೋಭಾವ ಎಲ್ಲರಿಗೂ ಇರಬೇಕು. ಕನ್ನಡ ಭಾಷೆ ಉಳಿಸಿ ಎಂದು ಬೊಬ್ಬಿಡುವ ಬದಲು ನಿಮ್ಮದೇ ಹಾದಿಯನ್ನು ಹಿಡಿದು ಆ ಪ್ರಕ್ರಿಯೆಯಲ್ಲಿ ನಡೆಯಬೇಕು. ಇದಕ್ಕೆ ಕನ್ನಡ ಸಾಹಿತ್ಯ ಸ್ವಲ್ಪ ಹತ್ತಿರವಿರುವ ವಿಧಾನ. ಹೊಸ ಹೊಸ ಬರಹಗಾರರನ್ನು ಗುರುತಿಸುವುದು, ಬರೆಯಲು ಪ್ರೋತ್ಸಾಹ ನೀಡುವುದು, ಸ್ಪರ್ಧೆ, ಕವಿಗೋಷ್ಠಿ ನಡೆಸಿ ಬಹುಮಾನ ನೀಡಿ ಗೌರವಿಸುವ ಕೆಲಸ ನಮ್ಮ ಬತ್ತದ ತೊರೆ ಸ್ನೇಹ ಬಳಗದಿಂದ ನಡೆಯುತ್ತಿದೆ. ಹಾಗೆಯೇ ಶಾಲಾಮಕ್ಕಳಲ್ಲಿ ಕನ್ನಡಸಾಹಿತ್ಯ, ಬರವಣಿಗೆಯಲ್ಲಿ ಅಭಿರುಚಿ ಮೂಡಿಸಲು ಪ್ರಯತ್ನ ನಡೆಯುತ್ತಿದೆ.


*ನೀವು ಇಷ್ಟೊಂದು ಸೊಗಸಾಗಿ ಮಕ್ಕಳ ಕತೆಯನ್ನು  ಬರೆಯಲು ಪ್ರೇರಣೆ ಏನು?!

 ನನ್ನ ಮಕ್ಕಳೇ ಪ್ರೇರಣೆ. ಅವರಿಗೆ ಪ್ರತಿ ರಾತ್ರಿ ಮಲಗುವಾಗ ಒಂದೊಂದು ಕತೆಯನ್ನು ಹೇಳುತ್ತೇನೆ. ಆಗ ಪ್ರಶ್ನೆಗಳನ್ನು ಕೇಳಿದರೆ ಅದಕ್ಕೆ ಉತ್ತರಿಸುತ್ತೇನೆ. ನಂತರ ಅದನ್ನೇ ವಿಸ್ತಾರವಾಗಿ ಕತೆಯನ್ನಾಗಿಸುತ್ತೇನೆ. ಪ್ರಥಮ ಪ್ರಯೋಗ ನನ್ನ ಮಕ್ಕಳ ಮೇಲೆಯೇ. (ನಗು) ಅವರಿಗೆ ಮೆಚ್ಚುಗೆಯಾದರೆ ನನಗೂ ಬರೆದುದಕ್ಕೆ ಖುಷಿಯಾಗುತ್ತದೆ.


* ನಿಮ್ಮ ಮುಂದಿನ ಯೋಜನೆಗಳೇನು?

ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಕತೆ, ಲೇಖನ, ಕವಿತೆಗಳು, ಹನಿಗವನ, ಉಲ್ಲೇಖಗಳು, ಮಕ್ಕಳ ನೀತಿ ಕತೆ ಹಾಗೂ ಮಕ್ಕಳ ಪದ್ಯಗಳು ಬರೆದದ್ದು ಇದೆ. ಅದನ್ನು ಪುಸ್ತಕ ರೂಪದಲ್ಲಿ ಹೊರತರಬೇಕು. ಭಾವಗೀತೆಗಳ ಧ್ವನಿಮುದ್ರಣ ತರಬೇಕು. ಸಂಪಾದಕತ್ವ ಕೃತಿ ಬಿಡುಗಡೆ ಮಾಡುವುದು.

Wednesday, 2 December 2020

Green tea uses ಗ್ರೀನ್ ಟೀ ಉಪಯೋಗ ಆರೋಗ್ಯಮಾಹಿತಿ

ಕಿರು ಲೇಖನ ಆರೋಗ್ಯ ವಿಭಾಗ : ಗ್ರೀನ್ ಟೀ ಕುಡಿದು ಆರೋಗ್ಯ ಹೆಚ್ಚಿಸಿಕೊಳ್ಳೋಣ 

ಸಿಂಧು ಭಾರ್ಗವ್  ಬೆಂಗಳೂರು-೨೧



ಹೌದು . ಇತ್ತೀಚಿಗಿನ ಟ್ರೆಂಡ್ ಗ್ರೀನ್ ಟೀ ಕುಡಿಯುವುದು. ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿದರೆ ಮನಸ್ಸಿಗೆ ಉಲ್ಲಾಸ ನೀಡುತ್ತದೆ. ದಿನವಿಡೀ ದೇಹ ಹಗುರವಾದಂತೆ ಭಾಸವಾಗುತ್ತದೆ.

ಒಂದು ಜಾಹಿರಾತಿನಲ್ಲಿ ತೋರಿಸುತ್ತಾರೆ. ಹೊಟ್ಟೆ ತುಂಬಾ ಊಟ ಮಾಡಿ , ಉಬ್ಬರಿಸಿದಂತಾದರೆ, ಗ್ರೀನ್ ಟೀ ಕುಡಿದು ಸರಿಮಾಡಿಕೊಳ್ಳಬಹುದು ಎಂದು. ಅಂದರೆ ಅದರ ಅರ್ಥ ಗ್ರೀನ್ ಟೀಯಿಂದ ಕೆಟ್ಟ ಕೊಲೆಸ್ಟರಾಲ್‌ ಕಡಿಮೆಯಾಗುತ್ತದೆ. ನಿಮ್ಮ ದೇಹದ ಕೊಬ್ಬು ಕರಗಿಸುತ್ತದೆ. ಹಾಗಾಗಿ ನಿಮಗಿಷ್ಟವಾದ ಆಹಾರದ ಮೇಲೆ ಹಿಡಿತ ಸಾಧಿಸುವುದೇನು ಬೇಡ ಎಂದು ಹೇಳುತ್ತಾರೆ... ಹಾಗೆ ಹೇಳಿದರೆ ಯಾರಿಗೆ ತಾನೇ ಖುಷಿಯಾಗುವುದಿಲ್ಲ.

ನಿಜ. ಗ್ರೀನ್ ಟೀಯಲ್ಲಿ ಫ್ಲೊವೊನಾಯ್ಡ್​ ಅಂಶಗಳು ಹೇರಳವಾಗಿವೆ. ಕೆಫೀನ್ ಅಂಶ ಕಡಿಮೆಯಿದೆ. ಇದು ದೇಹದ ಉರಿಯೂತವನ್ನು ಕಡಿಮೆ ಮಾಡುವುದಲ್ಲದೆ, ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ದಿನಕ್ಕೆ ಎರಡು ಅಥವಾ ಒಂದೇ ಬಾರಿ ಈ ಗ್ರೀನ್ ಟೀ‌ ಕುಡಿಯಬೇಕು. ನೆನಪಿರಲಿ. ರಾತ್ರಿ ಸಮಯದಲ್ಲಿ ಕುಡಿಯಬೇಡಿ. ನಿರಂತರವಾಗಿ ಇದರ ಬಳಕೆಯಿಂದ ನಿದ್ರಾಹೀನತೆ ಸಮಸ್ಯೆ ಬರಬಹುದು.
ಹಾಗಾಗಿ ಹಗಲಿನಲ್ಲಿ ಒಮ್ಮೆ ಕುಡಿದರೆ ಸಾಕು.




ಮನೆಯಲ್ಲಿ ಗ್ರೀನ್ ಟೀ ತಯಾರಿಸುವುದು ಹೇಗೆ: ಒಂದು ಲೋಟ‌ ನೀರಿನ್ನು ಕುದಿಯಲು ಬಿಡಿ. ನಂತರ ಕೂಡಲೇ ೧/೨ ಅರ್ಧ ಟೀ ಚಮಚ ಚಹಾಪುಡಿ ಹಾಕಿರಿ. ಕುದಿಸಬೇಡಿ. ಕೂಡಲೇ ಲಿಂಬೆ ರಸ ಹಿಂಡಿ ಕೆಳಗಿಳಿಸಿರಿ. ಒಂದು ಟೀ-ಚಮಚ ಜೇನು ತುಪ್ಪವನ್ನು ಹಾಕಿ ಕಲಸಿ. ಬಿಸಿಬಿಸಿಯಾಗಿ ಸೇವಿಸಿರಿ.

ಇದಕ್ಕೆ ಕೆಟ್ಟ ಕೊಬ್ಬು ಕರಗಿಸುವ ಶಕ್ತಿ ಇದೆ ಎಂದರೆ ಇದರಿಂದ ದೇಹಕ್ಕೆ ಉಷ್ಣವಾಗಬಹುದು. ಹಾಗಾಗಿ ನೆನಪಿರಲಿ ದಿನಕ್ಕೆ ಒಂದು ಅಥವಾ ಎರಡು ಬಾರಿ ಕುಡಿಯಬಹುದು. ಹಾಗೆಯೇ ರಾತ್ರಿ ಕುಡಿಯಬಾರದು. ಗ್ರೀನ್ ಟೀ ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಲೇಖನ ::--  ಸಿಂಧು ಭಾರ್ಗವ್ ಬೆಂಗಳೂರು-೨೧

Thursday, 19 November 2020

International men's day 2020ಪುರುಷರ ದಿನಾಚರಣೆಯ ಪ್ರಯುಕ್ತ ಲೇಖನ ಗಂಡಸರು ಹೇಗಿರಬೇಕು??

 

ಪುರುಷರ ದಿನಾಚರಣೆಯ ಪ್ರಯುಕ್ತ ಲೇಖನ ಗಂಡಸರು ಹೇಗಿರಬೇಕು?!

ಲೇಖಕಿ: ಸಿಂಧು ಭಾರ್ಗವ್ ಬೆಂಗಳೂರು-೨೧



ಗಂಡಸರು ಹೇಗಿರಬೇಕು ಎನ್ನುವ ಬದಲು ಹೇಗಿರುತ್ತಾರೆ ಎಂದು ಒಮ್ಮೆ ನೋಡಿ ಬಿಡೋಣ.

ಚಿಕ್ಕಂದಿನಿಂದಲೂ ಅಣ್ಣ, ಅಕ್ಕನಾದವರಿಗೆ ಹೊಂದಿಕೊಂಡು ಹೋಗಲು ಕಲಿಸಿರುತ್ತಾರೆ. ಚಿಕ್ಕವರು ಮಾಡುವ ತಪ್ಪಿಗೆ ತಾವು ಬೈಸಿಕೊಳ್ಳುವುದು ಒಂದಷ್ಟು ತ್ಯಾಗ ಮಾಡುವ ಗುಣ ತನ್ತಾನೆ ಮನದಲ್ಲಿ ಮೂಡಿಸುತ್ತಾರೆ. ಬೆಳೆಯುತ್ತ ಕೆಲಸಗಳನ್ನು ಕಲಿಸಿ ಕೊಡುತ್ತಾರೆ. ಹಣದ ವ್ಯವಹಾರ ಮಾಡಲು ತಿಳಿಸಿಕೊಡುತ್ತಾರೆ. ಗೆಳೆಯರೊಂದಿಗೆ ಆಟವಾಡಿಕೊಂಡು ಇದ್ದ ಮಗ(ಮಗು)ನನ್ನು ಪ್ರತ್ಯೇಕಿಸಲು ನೋಡುತ್ತಾರೆ. ಏಕೆಂದರೆ ಎಲ್ಲಿ ಸಹವಾಸ ದೋಷದಿಂದ ತಮ್ಮ ಮಗನೂ ಬದಲಾದರೆ ಎಂಬ ಭಯ. ಚಿಗುರು ಮೀಸೆ ಕಾಣಿಸಿಕೊಂಡಾಗ ಅಮ್ಮನಿಗೆ ಖುಷಿಯಾಗುತ್ತದೆ. ತನ್ನ ಮಗ ಹೀರೋ ತರಹ ಕಾಣಬೇಕೆಂಬ ಆಸೆಯಾಗುತ್ತದೆ. ಹಾಗೆಯೇ ಹುಡುಗಿಯ ಬಗ್ಗೆ ಎಚ್ಚರಿಕೆ, ಪ್ರೀತಿ- ಪ್ರೇಮ ಎಂಬ ಪಾಶಕ್ಕೆ ಬೀಳಬೇಡ ಎಂದು ಸಾರಿ-ಸಾರಿ  ಹೇಳುತ್ತಾ ಇರುತ್ತಾರೆ. ದುರಭ್ಯಾಸಕ್ಕೆ ಸಿಲುಕದಂತೆ ಎಚ್ಚರಿಸುತ್ತಾರೆ.

ಓದಿ ಅತೀ ಹೆಚ್ಚು ಅಂಕ  ಗಳಿಸದಿದ್ದರೂ ಪರವಾಗಿಲ್ಲ. ಚುರುಕುತನ ಇರಲೆಂದು ಆಶಿಸುತ್ತಾರೆ. ಎಲ್ಲಿ ಹೋದರು ಯಾವ ಕೆಲಸ ಬೇಕಾದರೂ ಮಾಡಿ ಬರುವ ಧೈರ್ಯ ,ಕಲೆ , ವಾಕ್ಚಾತುರ್ಯ ಅವನಿಗೆ ಬರಬೇಕು ಎಂಬ ಬಯಕೆಯಿರುತ್ತದೆ. ಉದ್ಯೋಗ ಸಿಕ್ಕಾಗ ಹೆತ್ತವರಿಗೆ ಆಗುವ ಸಂತಸ ಅಷ್ಟಿಷ್ಟಲ್ಲ. ಮಗನು ಸಂಬಳ ಕೊಡದಿದ್ದರೂ ಪರವಾಗಿಲ್ಲ, ದುಂದುವೆಚ್ಚ ಮಾಡದಂತೆ ನೋಡಿಕೊಳ್ಳುತ್ತಾರೆ. ಕೂಡಿಡುವ ಸಲಹೆ ನೀಡುತ್ತಾರೆ. ಮದುವೆಯಾಗಲೆಂದು ಅವನ ಗುಣಗಾನ ಮಾಡುತ್ತಲೇ ಯೋಗ್ಯ ಹೆಣ್ಣನ್ನು ಹುಡುಕುತ್ತಾರೆ. ತಮ್ಮ ಮಗ ಎಲ್ಲಿ ಬದಲಾಗುತ್ತಾನೋ ಎಂಬ ಭಯಕ್ಕಿಂತ ಬರುವ ಸೊಸೆಯು ಎಲ್ಲಿ ತಮ್ಮ ಮಗನಿಗೆ ಕಟ್ಟುನಿಟ್ಟು ಮಾಡುತ್ತಾಳೋ ಎಂಬ ಭಯವೇ ಜಾಸ್ತಿಯಾಗುತ್ತದೆ. ಮಗು ಬಂದಾಗ ಮುದ್ದಾದ ಮೊಮ್ಮಗುವನ್ನು ಆಡಿಸಲು ಬಯಸುತ್ತಾರೆ. ಮಗನ ಜವಾಬ್ದಾರಿಯನ್ನು, ಗಡಿಬಿಡಿ ಜೀವನವ ಕಣ್ಣಾರೆ  ಕಂಡು ಖುಷಿಪಡುತ್ತಾರೆ. ನಿಟ್ಟುಸಿರು ಬಿಡುತ್ತಾರೆ. ಹೇಗಿದ್ದ ಮಗ ಹೇಗಾಗಿ ಬದಲಾದ ಎಂದು ಚಿಕ್ಕಮಗುವಿನಿಂದ ಅಂದಿನ ತನಕದ ಘಟನೆಗಳ ಮೆಲುಕು ಹಾಕುತ್ತಾರೆ.

ಮಗನೂ ಕೂಡ ಹೆತ್ತವರ ಬಗ್ಗೆ ಹೆಮ್ಮೆ ಪಟ್ಟುಕೊಂಡು ಪ್ರೀತಿ ಹೆಚ್ಚಿಸಿಕೊಂಡು ಗೌರವಿಸುತ್ತಾನೆ. ತನಗೆ ಹೆತ್ತವರು ಹೇಳಿಕೊಟ್ಟ ಪಾಠಗಳನ್ನೇ ತನ್ನ ಮಕ್ಕಳಿಗೂ ಹೇಳುತ್ತಾನೆ. ಇದು ಸಭ್ಯಸ್ತ ಸುಸಂಸ್ಕೃತ ಮನೆತನದ ಮಕ್ಕಳ ಕಥೆ. ಇದರಲ್ಲಿ ಬದಲಾವಣೆಯಾದರೆ ಜೀವನವೇ ಅಂಕುಡೊಂಕಾದೀತು.

💐🍀🍀🍁🌾🌻🌿🌾🌺🍁💐🌷🍀🌺🌿🌿🌼🌻

ಹೌದು, ಅಪ್ಪ ಎಷ್ಟು ಕಷ್ಟ ಪಡುತ್ತಾರೆ ಎಂದು ಅಮ್ಮನಿಗೆ ಮಾತ್ರ ತಿಳಿಯುವುದು. ಮಕ್ಕಳಿಗೆ ಅವರ ಬೇಕು ಬೇಡಗಳ ಪೂರೈಸಿದರೆ ಅಪ್ಪ ಒಳ್ಳೆಯವರು ಎಂದಾಗುತ್ತಾರೆ. ಹಣದ ಪೂರೈಕೆಗೆ ಎಷ್ಟು ಶ್ರಮವಹಿಸುತ್ತಾರೆ ಎಂದೆಂಬುದು ಮಕ್ಕಳಿಗೆ ಬೇಡ. ಅವರಿಗೆ ಬುದ್ಧಿ ಬಂದು, ಉದ್ಯೋಗ ಸಿಕ್ಕು ಜವಾಬ್ದಾರಿ ಹೆಗಲೇರಿದಾಗ ತಂದೆಯ ಕಷ್ಟ ಅರ್ಥವಾಗುತ್ತದೆ.

ಗಂಡಸರ ದಿನ ಯಾನಿ ಪುರುಷರ ದಿನ ಎಂದಾಗ ಸಿರಿವಂತರ ಜೀವನಕ್ಕಿಂತ , ಒಬ್ಬನ ದುಡಿಮೆ ಪೈಸೆ-ಪೈಸೆ ಒಟ್ಟು ಮಾಡುವುದು, ಮನೆಮಂದಿಯ ಬೇಡಿಕೆ ಪೂರೈಸುವ ಅದೆಷ್ಟೋ ಗಂಡು ಹುಡುಗರೋ ಇಲ್ಲ ತಂದೆಯ ನೆನಪು ಮಾಡಿಕೊಂಡರೆ ಒಳ್ಳೆಯದು‌. ತನ್ನ ಆಸೆ ಆಕಾಂಕ್ಷೆಗಳ ಬದಿಗಿಟ್ಟು ಅಕ್ಕ ತಂಗಿಯರ ಮದುವೆ, ತಮ್ಮನ ವಿದ್ಯಾಭ್ಯಾಸಕ್ಕಾಗಿ ನಿಸ್ವಾರ್ಥ ದುಡಿಮೆ ಮಾಡುವ ಗಂಡು ಜೀವವನ್ನು ನೆನಪಿಸಿಕೊಳ್ಳಲೇಬೇಕು.
"ನನಗೇನು ಬೇಡ. ನಿಮಗೇನು ಬೇಕು ತಗೊಳ್ಳಿ.. ನಿಮ್ಮ ಸಂತೋಷವೇ ನನ್ನ ಸಂತೋಷ..." ಎನ್ನುವ ಅವನ/ರ ನುಡಿಗಳಲ್ಲೇ ತ್ಯಾಗದ ಗಂಧ ಬೀರುತ್ತಾ ಇರುತ್ತದೆ. ವರುಷ ದಾಟಿದ ಮೇಲೆ ಮದುವೆ, ಚಿಗುರು ಮೀಸೆ ಗಡುಸಾದ ಮೇಲೆ ಆಸೆಗಳಿಗೆ ಎಲ್ಲಿಯ ಜಾಗ.?!  ಜವಾಬ್ದಾರಿ ಒಂದು ಕೆಳಗಿಳಿಸಿದ ಮೇಲೆ ಮತ್ತೊಂದು ಹೀಗೆ ಮೇಲಿಂದ ಮೇಲೆ ಕರ್ತವ್ಯ , ಜವಾಬ್ದಾರಿ ಹೆಸರಿನಲ್ಲಿ ಬಾರ ಹೊತ್ತುಕೊಂಡೇ ನಡೆಯುವ ಎತ್ತಿನಂತೆ ಬದುಕು ಅವರದ್ದು. ಊಟ ನಿದಿರೆಗೂ ಸಮಯವಿಲ್ಲದೇ ದುಡಿಯುವುದು, ಹಣಕಾಸಿನ ಸಮಸ್ಯೆಗಳನ್ನು ಎದುರಾದರೂ ಯಾರೊಂದಿಗೂ ಹೇಳಿಕೊಳ್ಳಲಾಗದೇ ಸಾಲ ನೀಡಿದವರು ಅಡ್ಡಲಾಗಿ ನಿಂತು ಬೈದಾಗೆಲ್ಲ ಬೈಸಿಕೊಂಡು, ಅವಮಾನ ಸಹಿಸಿಕೊಂಡು, ಸುರಿವ ಬೆವರ ಒರೆಸಿಕೊಂಡು ಕಿವಿಯ ಮುಚ್ಚಿಕೊಂಡು ತಲೆ ತಗ್ಗಿಸಿ ಸಂಜೆ ಮನೆಕಡೆ ಹೆಜ್ಜೆ ಹಾಕುವ ಭಾರವಾದ ಮನಸ್ಸನ್ನು ಅರ್ಥಮಾಡಿಕೊಳ್ಳುವುದೇ ಒಂದು ಒಗಟು.

ಅಪ್ಪನ ದುಡಿಮೆಯಲ್ಲಿ ದುಂದುವೆಚ್ಚ ಮಾಡುತ್ತ, ಓದಿನ ವಯಸ್ಸಿನಲ್ಲಿ ಸರಿಯಾಗಿ ಓದದೇ ಉದ್ಯೋಗವೂ ಸರಿಯಾಗಿ ಸಿಗದೇ ತನ್ನ ಜೀವನದ ಜೊತೆಗೇನೇ ಆಟವಾಡುವ ಬೇಜವಾಬ್ದಾರಿ ಹುಡುಗರು ಸಾವಿರಾರು ಜನರಿದ್ದಾರೆ. ಮದುವೆಯಾದರೆ ಸರಿಯಾಗಬಹುದು ಎಂದೆನಿಸಿ ಮದುವೆ ಮಾಡಿದರೂ ತವರು ಮನೆ ಬಿಟ್ಟು ಬಂದ ಮಡದಿಯನ್ನು ಆಚೈಸದೇ ಹಂಗಿಸಿ ಜಗಳ ಮಾಡಿ ಅವಮಾನ ಮಾಡುತ, ಕುಡಿತ - ಧೂಮಪಾನದ ದಾಸರಾಗಿ ತಮ್ಮ ಜೀವನವನ್ನು ನರಕ ಮಾಡಿಕೊಂಡ ಗಂಡಸರೂ ಇದ್ದಾರೆ. ಎಂದೋ ಅಮಲಿನಲ್ಲಿ ಒಂದಾಗಿ ಹುಟ್ಟಿದ ಮಕ್ಕಳಿಗೆ ಕೂಡ ಸರಿಯಾದ ತಂದೆಯಾಗದೇ, ತದನಂತರದಲ್ಲಿ ಕೂಡ ಬದಲಾಗದೆ, ತಾಯಿಯ ಮೇಲೆ ಸಂಪೂರ್ಣ ಜವಾಬ್ದಾರಿ ಹೊರಿಸಿ ತನ್ನ ಕರ್ತವ್ಯ ಮತ್ತು ಜವಾಬ್ದಾರಿಯಿಂದ ವಿಮುಖನಾದ ಗಂಡಸರೂ ಇದ್ದಾರೆ.
ತಮ್ಮ ಕನಸುಗಳ ಬೆನ್ನಟ್ಟಿ ಶ್ರೀಮಂತ ವ್ಯಕ್ತಿಯಾಗಿ ಸಮಾಜದಲ್ಲಿ ಗೌರವಯುತರಾಗಿ ಬಾಳುತ ದಾನ ಧರ್ಮ ಮಾಡುವವರೂ ಇದ್ದಾರೆ. ತನ್ನ ಕನಸುಗಳ‌ ಭಾಗಿಯಾಗಿ ಮಡದಿ ಮಕ್ಕಳ ಮತ್ತು ಹೆತ್ತವರ ಪ್ರೀತಿಯಿಂದ ಕಾಣುವವರೂ ಇದ್ದಾರೆ.



💐🌷🍀🍁🌾🌻🌼🌿🌾🌻🌿🌾🌻🍀💐🌷🍁🍀

ಹೀಗೆಯೇ ಮೊದಲಿತ್ತು,
ಗಂಡಾಗಿ ಹುಟ್ಟುತಲೇ ಜವಾಬ್ದಾರಿ ಹೊರುತಾನೆ
ಹೆಣ್ಣು ಹೊರುವಳು ಕೂಸನು
ಸಾಕಿ ಸಲಹಲು ಹೆಣ್ಣು ಶ್ರಮಿಸುವಳು
ಗಂಡು ಬೆವರ ಸುರಿಸಿ ದುಡಿದು ದಣಿವನು
ಹೆಣ್ಣು, ಆದರಿಸಿ ಬಿಸಿಯಾದ ಊಟ ಉಣಬಡಿಸುವಳು
ತುಂಬು ಮನೆಯಲ್ಲಿ ಪ್ರೀತಿ ಪ್ರೇಮವ ಹಂಚುವಳು

🍁🌱💐💐🍀🍁🌲💮🏵🌳🌹🌴🌺🌻🌾🌿🌼

ಹೆಂಡತಿಯ ಪ್ರೀತಿ  ಬೇಡ ಎಂದವನೇ ಮೂರ್ಖ
ಹೆತ್ತವ್ವಗೆ ಸತಾಯಿಸಿ ಸಂಕಟ ಕೊಡುವವನು ಮುಟ್ಠಾಳ
ಪರಸತಿಗೆ/ ಹೆಣ್ಣಿಗೆ ಕಣ್ಣು ಹಾಕುವವ ಕಾಮುಕ
ಸತಿಯ ನಿರ್ಲಕ್ಷಿಸಿ ಅನ್ಯ ಸ್ತ್ರೀ ಸಂಗ ಬಯಸಯವವ ವಂಚಕ

🍀💐🌷🌱🍁🍂🌲🌳🍃🌴🌾🌻🌼🌿🌺🌹🏵

ಈಗ, ಗಂಡು ಹೆಣ್ಣು ಇಬ್ಬರೂ ಸಮಾನರು
ಉದ್ಯೋಗ ಹಣಕಾಸು ಗೌರವ ಬಯಸುವವರು
ಮನೆಕೆಲಸದಲ್ಲಿ ಕೂಡ ಹಂಚಿಕೊಂಡೇ ಮಾಡುವರು
ಪ್ರೀತಿ ಪ್ರೇಮ ವಿನಿಮಯಕೆ ಸಮಯ ಮೀಸಲಿಡುವರು
ವ್ಯಾವಹಾರಿಕ ಯಾಂತ್ರಿಕ ಬದುಕಿನ ದಾಸರು
ಕನಸುಗಳ ಪೂರೈಸುತಲೇ ಕೂಸನು ಗಮನಿಸರು
ಬೆಳೆದ ಮಗನ ಎದುರು ಕೇವಲವಾಗುವರು

- ಸಿಂಧು ಭಾರ್ಗವ್ | ಬೆಂಗಳೂರು-೨೧

Tuesday, 3 November 2020

ಚಳಿಗಾಲದ ಆಪ್ತಮಿತ್ರ ನೆಲ್ಲಿಕಾಯಿ

 ಚಳಿಗಾಲದ ಆಪ್ತಮಿತ್ರ ನೆಲ್ಲಿಕಾಯಿ



ನೆಲ್ಲಿಕಾಯಿಯ ಬಗ್ಗೆ ಕಿರುಪರಿಚಯ:-

ನೆಲ್ಲಿಕಾಯಿ,  ಬೆಟ್ಟದ ನೆಲ್ಲಿಕಾಯಿ, ನೆಲ ನೆಲ್ಲಿಕಾಯಿ ಹೀಗೆ ನೆಲ್ಲಿಕಾಯಿಯು ಅನೇಕ ತರಹದಲ್ಲಿ ನಮಗೆ ಕಾಣಸಿಗುತ್ತದೆ. ಆರೋಗ್ಯಕ್ಕೆ ತುಂಬಾ ಉಪಕಾರಿಯಾದ ಈ‌ ನೆಲ್ಲಿಕಾಯಿಯನ್ನು  ಒಂದಿಲ್ಲೊಂದು ರೂಪದಲ್ಲಿರುವ ನಾವು ಸೇವಿಸುತ್ತೇವೆ. ರುಚಿಯಲ್ಲಿ ಹುಳಿ ಮಿಶ್ರಿತ ಒಗರು. ಕಿತ್ತಳೆ ಹಣ್ಣಿಗಿಂತ ೨೦ ಪಟ್ಟು ಹೆಚ್ಚು" ವಿಟಮಿನ್ ಸಿ" ಅಂಶ ಇದರಲ್ಲಿದೆ. ಮೂರು ಕಿತ್ತಳೆ ಹಣ್ಣಿನಲ್ಲಿ ಇರುವ ವಿಟಮಿನ್ ಅಂಶ ಒಂದು ನೆಲ್ಲಿಕಾಯಿಯಲ್ಲಿ ಇರುತ್ತದೆ. 


ವಿಟಮಿನ್ ಸಿ  ಉಪಯೋಗ:-

ವಿಟಮಿನ್ ಸಿ ಅಂಶ ಅತ್ಯಧಿಕವಾಗಿ ಮನುಷ್ಯ ದೇಹಕ್ಕೆ ಬೇಕು. ಪಾಲಕ್ ಸೊಪ್ಪು, ಕಿತ್ತಳೆ‌ಹಣ್ಣು, ಲಿಂಬೆ, ದ್ರಾಕ್ಷಿ, ಹೂಕೋಸು, ಅನಾನಾಸು, ಸ್ಟ್ರಾಬೆರಿ ಹಣ್ಣು, ಟೊಮ್ಯಾಟೊ, ನೆಲ್ಲಿಕಾಯಿ, ಕಿವಿ ಹಣ್ಣಗಳಲ್ಲಿ ವಿಟಮಿನ್ ಸಿ. ಆಂಶ ಅತ್ಯಧಿಕವಾಗಿ ಇರುತ್ತದೆ.  ಇದರಿಂದ ದೃಷ್ಟಿ ದೋಷ ಬರುವುದಿಲ್ಲ. ಚರ್ಮ ವಯಸ್ಸಿಗೂ ಮೊದಲು ನೆರಿಗೆಗಟ್ಟುವುದು ಕಡಿಮೆಮಾಡುವುದು, ಗರ್ಭಿಣಿ ಮಹಿಳೆಯರಿಗೆ ಮಗು ಬೆಳೆಯಲು ಸಹಾಯಕ.  ವಿಟಮಿನ್ ಸಿ ಕೊರತೆಯಾದರೆ ಸ್ಕರ್ವಿ ರೋಗ ಬರುತ್ತದೆ. ಅದನ್ನು ತಡೆಗಟ್ಟಲು ಇವೆಲ್ಲದರ ದಿನಬಳಕೆ ಉಪಯೋಗ ಅಗತ್ಯ. 



ಹಾಗಾಗಿ ಚಳಿಗಾಲದಲ್ಲಿ ಎಲ್ಲರು ಅಗತ್ಯವಾಗಿ ನೆಲ್ಲಿಕಾಯಿಯನ್ನು ಸೇವಿಸಲೇ ಬೇಕು. ಸಾಧಾರಣವಾಗಿ ಅಕ್ಟೋಬರ್ ನಿಂದ ಜನವರಿ ತನಕವೂ ಬೆಳೆಯುತ್ತದೆ. ಈ ಚಳಿಗಾಲದಲ್ಲಿ ಮಾರುಕಟ್ಟೆಗೆ ಈಗಾಗಲೇ ನೆಲ್ಲಿಕಾಯಿ ಲಗ್ಗೆ ಇಟ್ಟಾಗಿದೆ. ಮುಖ್ಯವಾಗಿ ಆಯುರ್ವೇದದ ಅರಸನಾಗಿ ನೆಲ್ಲಿಕಾಯಿ, ಒಣನೆಲ್ಲಿಕಾಯಿ, ನೆಲ್ಲಿ ಪುಡಿ, ಚೂರ್ಣ ಎಂದೆಲ್ಲ ಇದನ್ನು ಬಳಸುತ್ತಾರೆ. ನೆಲ್ಲಿಯ ಬೇರು, ರೆಂಬೆ, ಹೂವು, ಎಲೆಗಳು ಕೂಡ ಆಯುರ್ವೇದ ಗುಣಹೊಂದಿದೆ. ವರ್ಷಪೂರ್ತಿ ನೆಲ್ಲಿಕಾಯಿಯನ್ನು ಒಣಗಿಸಿ ತಿನ್ನಬಹುದು. 



ಒಮ್ಮೆ ನೆಲ್ಲಿಕಾಯಿ ತಿಂದು ನೀರು ಕುಡಿದರೆ ದಣಿವು ಆಯಾಸ ಕಡಿಮೆಯಾಗುತ್ತದೆ. ಬಾಯಿ ತುಂಬಾ ಸಿಹಿಸಿಹಿ ಅನುಭವವಾಗುತ್ತದೆ. ‌ನೆಲ್ಲಿಕಾಯಿ ಉಪ್ಪಿನ ಕಾಯಿ, ಚಟ್ನಿ, ತಂಬುಳಿ ಕೂಡ ಮಾಡಿ ಅಡುಗೆಯಲ್ಲಿ ಬಳಸುತ್ತಾರೆ. ಅಲ್ಲದೇ ದೀಪಾವಳಿಯ ಕಾರ್ತಿಕ ಮಾಸದಲ್ಲಿ ತುಳಸಿ ಪೂಜೆ ಮಾಡುವಾಗ ನೆಲ್ಲಿಕಾಯಿ ತುಪ್ಪದ ದೀಪವು ಅಗತ್ಯವಾಗಿ ಬೇಕಾಗುತ್ತದೆ . ತುಳಸಿ ಗಿಡ, ನೆಲ್ಲಿಕಾಯಿ ರೆಂಬೆಯೊಂದಿಗೆ ಮದುವೆಮಾಡಿಸುವ ಶಾಸ್ತ್ರವಿದೆ. ಅಂದರೆ ಶ್ರೀಕೃಷ್ಣನ ವಾಸಸ್ಥಾನ ನೆಲ್ಲಿ ಮರದಲ್ಲಿದೆ ಎಂಬ ನಂಬಿಕೆಯಿದೆ. ಹೋಮ ಹವನದಲ್ಲಿ ನೆಲ್ಕಿಕಾಷ್ಟಗಳ ಬಳಕೆ ಮಾಡುತ್ತಾರೆ.  ಇದರಿಂದ ವಾತಾವರಣ ಶುಧ್ಧಿಯಾಗುತ್ತದೆ. ಮನುಷ್ಯರಿಗೂ ಶುದ್ಧ ಗಾಳಿ ಉಸಿರಾಡಬಹುದು. 




ನೆಲ್ಲಿಕಾಯಿಯ ಉಪಯೋಗ:-


ನೆಲ್ಲಿಕಾಯಿ ಪುಡಿ ಸೇವನೆಯಿಂದ ಮಧುಮೇಹ ಕಡಿಮೆಯಾಗುತ್ತದೆ.

ರಕ್ತದೊತ್ತಡ ಕಡಿಮೆಯಾಗುತ್ತದೆ. ದೇಹದ ತೂಕ ಕಡಿಮೆಯಾಗುತ್ತದೆ.

ಚಳಿಗಾಲದಲ್ಲಿ ಎದುರಾಗುವ ಸೀತ ಕಡಿಮೆಮಾಡಲು ನೆಲ್ಲಿಕಾಯಿ ಸಹಕಾರಿಯಾಗಿದೆ.

ಬಿಕ್ಕಳಿಕೆ ಬಂದಾಗ ನೆಲ್ಲಿ ಎಸಳು ತಿಂದು ನೀರು ಕುಡಿದರೆ ಒಳ್ಳೆಯದು.

ನೆಲ್ಲಿಕಾಯಿಯನ್ನು  ಅಗಿದು ತಿನ್ನುವುದರಿಂದ ವಸಡು ಗಟ್ಟಿಯಾಗುತ್ತದೆ.

ನೆಲ್ಲಿಕಾಯಿಯನ್ನು ತುಂಡರಿಸಿ ಉಪ್ಪಿನಲ್ಲಿ ನೆನೆಸಿ ಪ್ರತಿದಿನ ಸೇವಿಸಿದರೆ ಕೆಟ್ಟ ಕೊಲೆಸ್ಟರಾಲ್ ( bad cholesterol) ಕಡಿಮೆ ಮಾಡುತ್ತದೆ.

ಚಿಕ್ಕ ಮಕ್ಕಳಿಗೆ ಟಿವಿ ಮೊಬೈಲ್ ನೋಡಿ ದೃಷ್ಟಿ ಸಮಸ್ಯೆ ಬರುವ ಸಾಧ್ಯತೆ ಇದೆ. ಇದರಿಂದ ಕಡಿಮೆಮಾಡಬಹುದು. 


ಸಿಂಧು ಭಾರ್ಗವ್ | ಬೆಂಗಳೂರು-೨೧