Showing posts with label ಸಿಂಧು ಭಾರ್ಗವ್. Show all posts
Showing posts with label ಸಿಂಧು ಭಾರ್ಗವ್. Show all posts

Tuesday, 3 November 2020

ಚಳಿಗಾಲದ ಆಪ್ತಮಿತ್ರ ನೆಲ್ಲಿಕಾಯಿ

 ಚಳಿಗಾಲದ ಆಪ್ತಮಿತ್ರ ನೆಲ್ಲಿಕಾಯಿ



ನೆಲ್ಲಿಕಾಯಿಯ ಬಗ್ಗೆ ಕಿರುಪರಿಚಯ:-

ನೆಲ್ಲಿಕಾಯಿ,  ಬೆಟ್ಟದ ನೆಲ್ಲಿಕಾಯಿ, ನೆಲ ನೆಲ್ಲಿಕಾಯಿ ಹೀಗೆ ನೆಲ್ಲಿಕಾಯಿಯು ಅನೇಕ ತರಹದಲ್ಲಿ ನಮಗೆ ಕಾಣಸಿಗುತ್ತದೆ. ಆರೋಗ್ಯಕ್ಕೆ ತುಂಬಾ ಉಪಕಾರಿಯಾದ ಈ‌ ನೆಲ್ಲಿಕಾಯಿಯನ್ನು  ಒಂದಿಲ್ಲೊಂದು ರೂಪದಲ್ಲಿರುವ ನಾವು ಸೇವಿಸುತ್ತೇವೆ. ರುಚಿಯಲ್ಲಿ ಹುಳಿ ಮಿಶ್ರಿತ ಒಗರು. ಕಿತ್ತಳೆ ಹಣ್ಣಿಗಿಂತ ೨೦ ಪಟ್ಟು ಹೆಚ್ಚು" ವಿಟಮಿನ್ ಸಿ" ಅಂಶ ಇದರಲ್ಲಿದೆ. ಮೂರು ಕಿತ್ತಳೆ ಹಣ್ಣಿನಲ್ಲಿ ಇರುವ ವಿಟಮಿನ್ ಅಂಶ ಒಂದು ನೆಲ್ಲಿಕಾಯಿಯಲ್ಲಿ ಇರುತ್ತದೆ. 


ವಿಟಮಿನ್ ಸಿ  ಉಪಯೋಗ:-

ವಿಟಮಿನ್ ಸಿ ಅಂಶ ಅತ್ಯಧಿಕವಾಗಿ ಮನುಷ್ಯ ದೇಹಕ್ಕೆ ಬೇಕು. ಪಾಲಕ್ ಸೊಪ್ಪು, ಕಿತ್ತಳೆ‌ಹಣ್ಣು, ಲಿಂಬೆ, ದ್ರಾಕ್ಷಿ, ಹೂಕೋಸು, ಅನಾನಾಸು, ಸ್ಟ್ರಾಬೆರಿ ಹಣ್ಣು, ಟೊಮ್ಯಾಟೊ, ನೆಲ್ಲಿಕಾಯಿ, ಕಿವಿ ಹಣ್ಣಗಳಲ್ಲಿ ವಿಟಮಿನ್ ಸಿ. ಆಂಶ ಅತ್ಯಧಿಕವಾಗಿ ಇರುತ್ತದೆ.  ಇದರಿಂದ ದೃಷ್ಟಿ ದೋಷ ಬರುವುದಿಲ್ಲ. ಚರ್ಮ ವಯಸ್ಸಿಗೂ ಮೊದಲು ನೆರಿಗೆಗಟ್ಟುವುದು ಕಡಿಮೆಮಾಡುವುದು, ಗರ್ಭಿಣಿ ಮಹಿಳೆಯರಿಗೆ ಮಗು ಬೆಳೆಯಲು ಸಹಾಯಕ.  ವಿಟಮಿನ್ ಸಿ ಕೊರತೆಯಾದರೆ ಸ್ಕರ್ವಿ ರೋಗ ಬರುತ್ತದೆ. ಅದನ್ನು ತಡೆಗಟ್ಟಲು ಇವೆಲ್ಲದರ ದಿನಬಳಕೆ ಉಪಯೋಗ ಅಗತ್ಯ. 



ಹಾಗಾಗಿ ಚಳಿಗಾಲದಲ್ಲಿ ಎಲ್ಲರು ಅಗತ್ಯವಾಗಿ ನೆಲ್ಲಿಕಾಯಿಯನ್ನು ಸೇವಿಸಲೇ ಬೇಕು. ಸಾಧಾರಣವಾಗಿ ಅಕ್ಟೋಬರ್ ನಿಂದ ಜನವರಿ ತನಕವೂ ಬೆಳೆಯುತ್ತದೆ. ಈ ಚಳಿಗಾಲದಲ್ಲಿ ಮಾರುಕಟ್ಟೆಗೆ ಈಗಾಗಲೇ ನೆಲ್ಲಿಕಾಯಿ ಲಗ್ಗೆ ಇಟ್ಟಾಗಿದೆ. ಮುಖ್ಯವಾಗಿ ಆಯುರ್ವೇದದ ಅರಸನಾಗಿ ನೆಲ್ಲಿಕಾಯಿ, ಒಣನೆಲ್ಲಿಕಾಯಿ, ನೆಲ್ಲಿ ಪುಡಿ, ಚೂರ್ಣ ಎಂದೆಲ್ಲ ಇದನ್ನು ಬಳಸುತ್ತಾರೆ. ನೆಲ್ಲಿಯ ಬೇರು, ರೆಂಬೆ, ಹೂವು, ಎಲೆಗಳು ಕೂಡ ಆಯುರ್ವೇದ ಗುಣಹೊಂದಿದೆ. ವರ್ಷಪೂರ್ತಿ ನೆಲ್ಲಿಕಾಯಿಯನ್ನು ಒಣಗಿಸಿ ತಿನ್ನಬಹುದು. 



ಒಮ್ಮೆ ನೆಲ್ಲಿಕಾಯಿ ತಿಂದು ನೀರು ಕುಡಿದರೆ ದಣಿವು ಆಯಾಸ ಕಡಿಮೆಯಾಗುತ್ತದೆ. ಬಾಯಿ ತುಂಬಾ ಸಿಹಿಸಿಹಿ ಅನುಭವವಾಗುತ್ತದೆ. ‌ನೆಲ್ಲಿಕಾಯಿ ಉಪ್ಪಿನ ಕಾಯಿ, ಚಟ್ನಿ, ತಂಬುಳಿ ಕೂಡ ಮಾಡಿ ಅಡುಗೆಯಲ್ಲಿ ಬಳಸುತ್ತಾರೆ. ಅಲ್ಲದೇ ದೀಪಾವಳಿಯ ಕಾರ್ತಿಕ ಮಾಸದಲ್ಲಿ ತುಳಸಿ ಪೂಜೆ ಮಾಡುವಾಗ ನೆಲ್ಲಿಕಾಯಿ ತುಪ್ಪದ ದೀಪವು ಅಗತ್ಯವಾಗಿ ಬೇಕಾಗುತ್ತದೆ . ತುಳಸಿ ಗಿಡ, ನೆಲ್ಲಿಕಾಯಿ ರೆಂಬೆಯೊಂದಿಗೆ ಮದುವೆಮಾಡಿಸುವ ಶಾಸ್ತ್ರವಿದೆ. ಅಂದರೆ ಶ್ರೀಕೃಷ್ಣನ ವಾಸಸ್ಥಾನ ನೆಲ್ಲಿ ಮರದಲ್ಲಿದೆ ಎಂಬ ನಂಬಿಕೆಯಿದೆ. ಹೋಮ ಹವನದಲ್ಲಿ ನೆಲ್ಕಿಕಾಷ್ಟಗಳ ಬಳಕೆ ಮಾಡುತ್ತಾರೆ.  ಇದರಿಂದ ವಾತಾವರಣ ಶುಧ್ಧಿಯಾಗುತ್ತದೆ. ಮನುಷ್ಯರಿಗೂ ಶುದ್ಧ ಗಾಳಿ ಉಸಿರಾಡಬಹುದು. 




ನೆಲ್ಲಿಕಾಯಿಯ ಉಪಯೋಗ:-


ನೆಲ್ಲಿಕಾಯಿ ಪುಡಿ ಸೇವನೆಯಿಂದ ಮಧುಮೇಹ ಕಡಿಮೆಯಾಗುತ್ತದೆ.

ರಕ್ತದೊತ್ತಡ ಕಡಿಮೆಯಾಗುತ್ತದೆ. ದೇಹದ ತೂಕ ಕಡಿಮೆಯಾಗುತ್ತದೆ.

ಚಳಿಗಾಲದಲ್ಲಿ ಎದುರಾಗುವ ಸೀತ ಕಡಿಮೆಮಾಡಲು ನೆಲ್ಲಿಕಾಯಿ ಸಹಕಾರಿಯಾಗಿದೆ.

ಬಿಕ್ಕಳಿಕೆ ಬಂದಾಗ ನೆಲ್ಲಿ ಎಸಳು ತಿಂದು ನೀರು ಕುಡಿದರೆ ಒಳ್ಳೆಯದು.

ನೆಲ್ಲಿಕಾಯಿಯನ್ನು  ಅಗಿದು ತಿನ್ನುವುದರಿಂದ ವಸಡು ಗಟ್ಟಿಯಾಗುತ್ತದೆ.

ನೆಲ್ಲಿಕಾಯಿಯನ್ನು ತುಂಡರಿಸಿ ಉಪ್ಪಿನಲ್ಲಿ ನೆನೆಸಿ ಪ್ರತಿದಿನ ಸೇವಿಸಿದರೆ ಕೆಟ್ಟ ಕೊಲೆಸ್ಟರಾಲ್ ( bad cholesterol) ಕಡಿಮೆ ಮಾಡುತ್ತದೆ.

ಚಿಕ್ಕ ಮಕ್ಕಳಿಗೆ ಟಿವಿ ಮೊಬೈಲ್ ನೋಡಿ ದೃಷ್ಟಿ ಸಮಸ್ಯೆ ಬರುವ ಸಾಧ್ಯತೆ ಇದೆ. ಇದರಿಂದ ಕಡಿಮೆಮಾಡಬಹುದು. 


ಸಿಂಧು ಭಾರ್ಗವ್ | ಬೆಂಗಳೂರು-೨೧

Monday, 11 May 2020

ಲೇಖನ : ಅಮ್ಮ ಎಂದಾಗ

ಅಮ್ಮ ಎಂದಾಗ... ಲೇಖನ


ಲೇಖನ: ಅಮ್ಮ ಎಂದಾಗ...
.
.
ಅಮ್ಮ ಎಂದರೆ ಹರುಷ ನೂರ್ಮಡಿಯಾಗುವುದು. ಗರ್ಭಕೊಳದಲ್ಲಿ ಮತ್ಸ್ಯವಾಗಿ ವಿಹರಿಸುತ್ತಿದ್ದ ನಮಗೆ ಅದೇ ಒಂದು ಪರಪಂಚವಾಗಿತ್ತು. ಹಡೆದು ಭೂಮಿತಾಯಿಯ ಮಡಿಲಿಗಿಟ್ಟು ಇನ್ನೊಂದು ಪ್ರಪಂಚವ ಪರಿಚಯಿಸಿಕೊಟ್ಟ ಮಹಾತಾಯಿ ಆಕೆ. ನವಮಾಸವೂ ನೋವ ನುಂಗಿಕೊಂಡು , ಕನಸ ಕಟ್ಟಿಕೊಂಡು ತನ್ನ ಆಸೆ ಆಕಾಂಕ್ಷೆಗಳ ಮೆಲುದನಿಯಲ್ಲಿ ಭ್ರೂಣಕ್ಕೆ ತಿಳಿಸಿ ಮೊಟ್ಟಮೊದಲ ಸಂವಹನ ನಡೆಸಿದವಳು ಆಕೆ‌. ಬಗೆಬಗೆಯ ತಿಂಡಿ ತಿನಿಸುಗಳ "ಬಯಕೆ" ಎಂಬ ಹೆಸರಿನಲ್ಲಿ ತಿಂದು ತನ್ನ ಗರ್ಭದೊಳಗಿರುವ ಕುಡಿಗೂ ಉಣಿಸಿದವಳು ಆಕೆ. ಈ ಜನುಮವೇ ಆಕೆ ನಮಗೆ ನೀಡಿದ ವರದಾನವಾಗಿದೆ. ನಡೆದಾಡುವ ದೇವರು ಎನ್ನಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ತನ್ನ ಅಭಿರುಚಿಗಳ ಬದಿಗೊತ್ತಿ ಕೇವಲ ಮಗುವಿನೊಂದಿಗೆ ಹೊಸದೊಂದು ಪುಟ್ಟಪ್ರಪಂಚವನ್ನು ಸೃಷ್ಟಿಸಿಕೊಂಡು ಬದುಕು ಕಟ್ಟಿಕೊಳ್ಳುವವಳು ಆಕೆ. ಗಂಡ ಉದ್ಯೋಗದಲ್ಲಿ ತಲ್ಲೀನನಾದರೆ ತಾಯಿ ಮಗುವಿನ ಲಾಲನೆ ಪಾಲನೆಯಲ್ಲಿ ತನ್ಮಯಳಾಗಿರುತ್ತಾಳೆ. ತಾಯಿ ಬಳ್ಳಿಯ ಹೂವುಗಳಾಗಿ ಅರಳಿದ ನಮಗೆ ಈಗ ಸಂತೃಪ್ತಿಯ ಜೀವನ ನಡೆಸುವುದೊಂದೇ ದಾರಿ. ರಭಸದಿ ಹರಿಯುವ ಅದೆಷ್ಟೋ ನದಿಗಳಿದ್ದರೂ ಶಾಂತವಾಗಿರುವ ಸರೋವರಗಳ ಸಂಖ್ಯೆ ತೀರ ಕಡಿಮೆ. ಅದಕ್ಕೆ ತಾನೆ, ತಾಯಿಯನ್ನು ಸರೋವರಕ್ಕೆ ಹೋಲಿಸುವುದು. ಸಹನೆ, ತಾಳ್ಮೆಯ ಮೂರುತಿ ಆಕೆ.

ಗಂಡನ ಪ್ರೀತಿಯ ಜೊತೆಗೆ ಬಾಳಲು ಬಯಸುವ ಆಕೆಗೆ ಮಕ್ಕಳು ಒಂದು ಬದುಕು ಕಟ್ಟಿಕೊಳ್ಳುವ ತನಕ ನೆಮ್ಮದಿಯಿರುವುದಿಲ್ಲ. ಯಾವಾಗಲೂ ಸಕಾರಾತ್ಮಕವಾಗಿ   ಚಿಂತಿಸುವ ಅಮ್ಮ, ಮಕ್ಕಳಿಹೆ ಅದೂ ಹೆಣ್ಮಕ್ಕಳಿಗೆ ಅವರ ಗಂಡನ ಮನೆಯಲ್ಲಿ ಸದಾ ಧೈರ್ಯದಿಂದ ಇರಬೇಕು ಎಂದು ಸ್ಪೂರ್ತಿ ನೀಡುತ್ತಾಳೆ. ಹೆಣ್ಮಕ್ಕಳಿಗೆ ಮದುವೆ ಮಾಡಿಸಿ ಕಳುಹಿಸುವಾಗ ಅಳುವ ಅಮ್ಮ, ತಾನು ಈ ಮನೆಗೆ ಸೊಸೆಯಾಗಿ ಬಂದ ದಿನಗಳನ್ನು ನೆನೆಸಿ ಮೌನವಹಿಸುತ್ತಾಳೆ. ಮದುವೆಯ ಹೊಸತರಲ್ಲಿ ಮಗಳು ಗಂಡ, ಗಂಡನ‌ಮನೆಯವರ ಜೊತೆ ಹೇಗೆ ಹೊಂದಿಕೊಂಡು ಹೋಗುತ್ತಾಳೋ ಎಂಬುವುದೇ ಒಂದು ಚಿಂತೆ ಅವಳಿಗೆ ಕಾಡುತ್ತಿರುತ್ತದೆ. ಗಂಡನ ಮನೆಯಿಂದ ಯಾವ ದೂರು ಬರಬಾರದು ಎಂಬುದೇ ಅವಳ ಆಸೆಯಾಗಿರುತ್ತದೆ.  ಹಾಗೆಯೇ ಮಗನಿಗೆ ಸೊಸೆಯನ್ನು ತಂದುಕೊಳ್ಳುವಾಗಲೂ ತುಂಬಾ ಜಾಗರೂಕಳಾಗಿ ಆಯ್ಕೆ ಮಾಡಲು ಹೋಗುತ್ತಾಳೆ.  ನಮ್ಮನ್ನು ಆರೈಕೆ ಮಾಡದಿದ್ದರೂ ಪರವಾಗಿಲ್ಲ ಮಗನ ಮನಸ್ಸಿಗೆ ನೋಯಿಸದಿರಲಿ ಎಂಬುವುದೇ ಅವಳ ಬಯಕೆಯಾಗಿರುತ್ತದೆ. ಇಷ್ಟು ದಿನ ನಾನು ನೋಡಿಕೊಂಡೆ, ಇನ್ನು ನಿನ್ನ ಜವಾಬ್ದಾರಿ ಎಂದು ಧಾರೆ ಎರೆಯುವ ಸಮಯದಲ್ಲೇ ಸೊಸೆಯನ್ನು ನೋಡಿ ಕಣ್ಣಿಂದಲೇ ಮಾಹಿತಿ ರವಾನಿಸುತ್ತಾಳೆ.
ನಿಜ. ಮಡದಿಯಾಗಿ ಯಾನಿ ಸೊಸೆಯಾಗಿ ಒಬ್ಬರ ಮನೆಗೆ ಬಂದ ಹೆಣ್ಣು ವರುಷದೊಳಗೆ ಶುಭಸಮಾಚಾರ ನೀಡಿ ತಾಯಿಯಾಗಿ ಬಿಡುತ್ತಾಳೆ. ಆ ತಾಯಿಯ ಪಾತ್ರ ನಿರ್ವಹಿಸಲು ಅವಳು ಸಂಪೂರ್ಣವಾಗಿ ತನ್ನ ಆಸೆ ಆಕಾಂಕ್ಷೆಗಳನ್ನು ತ್ಯಾಗ ಮಾಡಲೇಬೇಕಾಗುತ್ತದೆ. ಇಲ್ಲದಿರೆ ಸರಾಗವಾಗಿ ಸುಲಲಿತವಾಗಿ ಜೀವನ ನಡೆಯದು. ಎಲ್ಲ ತಾಯಿಯಂದಿರೂ ಸುಖಸಂತೋಷದಿಂದಿರಲಿ. ಅವರ ಆರೋಗ್ಯ ವೃದ್ಧಿಸಲಿ.
.
.
- ಸಿಂಧು ಭಾರ್ಗವ್ | ಬೆಂಗಳೂರು-೨೧

#happymothersday #kannadaarticle #article #momslove
MOMS love and care 💕
#Sindhubhargavquotes #ಅಮ್ಮಎಂದರೆ #ಅಮ್ಮನಪ್ರೀತಿ ಒಂದು #ಕನ್ನಡಲೇಖನ #ಪ್ರತಿನಿಧಿ_ದಿನಪತ್ರಿಕೆ ಯಲ್ಲಿ ಪ್ರಕಟವಾಗಿದೆ. #may102020 💞 #sundaynewspaper

Monday, 20 May 2019

Kavana Naya_Naajooku ಕವನ ನಯ‌ ನಾಜೂಕು




****

ಕವಿತೆ: ನಯ ನಾಜೂಕು
*** **** ****** *****
ಹೂವಲ್ಲಿ ಗಂಧವು ಇಹುದು
ಮಾತಲ್ಲಿ ವಂಚನೆ ಇಹುದು
ನಯವಾಗಿದೆ ಎಂದು ನಂಬದಿರು
ನಂಬಿ ಮೋಸ ಹೋಗದಿರು!

ಹಸಿದಿದ್ದ ಜಿಂಕೆ ಮರಿಗೆ
ಹಸಿಹುಲ್ಲು ತಿನ್ನುವ ಆಸೆ
ವ್ಯಾಘ್ರನಿಗೇ ಹಸಿದ ಉದರ
ಎರಗಿ ತಿಂದಿತು ಜಿಂಕೆಯನೇ
ಹಸಿಬಿಸಿ ರಕುತದಲಿ ದಿನವು
ಕಳೆದು ಹೋಯಿತು ಕ್ಷಣವು
     ನಯವಾಗಿದೆ ಎಂದು ನಂಬದಿರು
     ನಂಬಿ ಮೋಸ ಹೋಗದಿರು!

ಮುಂಜಾನೆ ಇಬ್ಬನಿ ಮೇಲೆ
ಹಸಿರಲೆಯ ಮಿಂಚುವ ಲೀಲೆ
ರವಿತೇಜ ಬರುವನು ನೋಡು
ಇಬ್ಬನಿಯು ಕರಗಿತು ನೋಡು
ಹಸಿರ ಹೃದಯಕೆ ಆದ ಘಾಸಿಯ
ಕೇಳದೇ ಹೋದರೇ ಯಾರು
      ನಯವಾಗಿದೆ ಎಂದು ನಂಬದಿರು
      ನಂಬಿ ಮೋಸ ಹೋಗದಿರು!

ಹರಿಯುವ ನದಿಯಲಿ ಕಲರವ
ಈಜುವ ಮೀನಿಗೆ ಸಂಭ್ರಮ
ಬೇಸಿಗೆ ಕಾಲದ ಬೇಗೆಗೆ
ಆವಿಯಾಗಿದೆ ಜೀವಜಲ
ನೀರನೇ ನಂಬಿದ ಮತ್ಯಕೆ
ಬದುಕಿ ಉಳಿಯುವ ಬಗೆಯೇನು?
      ನಯವಾಗಿದೆ ಎಂದು ನಂಬದಿರು
      ನಂಬಿ ಮೋಸ ಹೋಗದಿರು!



- ಸಿಂಧು ಭಾರ್ಗವ್.

Thursday, 16 May 2019

Kannadasong_nee kaanuve

ಹಾಡು : ನೀ ಕಾಣುವೆ

ಕಂಡ ವಸ್ತುಗಳಲ್ಲೆಲ್ಲ ನೀ ಕಾಣುವೆ ಹೌಹಾರಿ ದಂಗಾಗಿ ನಾ ಕೂರುವೆ

ನಡೆಯುವ ಹಾದಿಯಲಿ ನೆರಳಾಗಿ ನೀ
ಬೀಸುವ ಗಾಳಿಯಲಿ ಮುದವಾಗಿ ನೀ
ಅರಳಿದ ಹೂವಿನಲಿ ಕಂಪಾಗಿ ನೀ
ದುಂಬಿಯ ನಾದದಲಿ ಸೊಂಪಾಗಿ ನೀ
ಕಂಡ ವಸ್ತುಗಳಲ್ಲೆಲ್ಲ ನೀ ಕಾಣುವೆ ಹೌಹಾರಿ ದಂಗಾಗಿ ನಾ ಕೂರುವೆ!

ಹರಿವ ನದಿಯಲಿ ನೊರೆಯಾಗಿ ನೀ
ಚಲಿಪ ಮೋಡದಲಿ ಮಳೆಹನಿಯಾಗಿ ನೀ
ಈಜುವ ಮೀನಿಗೆ ರೆಕ್ಕೆಗಳಾಗಿ ನೀ
ಸುರಿಯುವ ಮಳೆಯಲಿ ಕುಣಿವ ಮಗುವಾಗಿ ನೀ
ಕಂಡ ವಸ್ತುಗಳಲ್ಲೆಲ್ಲ ನೀ ಕಾಣುವೆ ಹೌಹಾರಿ ದಂಗಾಗಿ ನಾ ಕೂರುವೆ!

ಕನ್ನಡಿ ಎದುರಲಿ ನೀನೇ ನಿಂತಿರುವೆ
ನನ್ನ ಬಿಂಬವನೇ ಮರೆಯಾಗಿಸುವೆ
ಸೀರೆ ನೆರಿಗೆ ತೆಗೆಯಲು ನೀ ಬರುವೆ
ಕಳಗುಳಿ ಇಡುತ ಮಾಯವಾಗುವೆ
ಭ್ರಮೆಯೋ, ಮರುಳೋ ಒಂದೂ ಅರಿಯದು
ಹರೆಯದ ಅಮಲಿನಲಿ ಎಲ್ಲ ನಡೆವುದು
ಕಂಡ ವಸ್ತುಗಳಲ್ಲೆಲ್ಲ ನೀ ಕಾಣುವೆ ಹೌಹಾರಿ ದಂಗಾಗಿ ನಾ ಕೂರುವೆ!

ಸಿಂಧು ಭಾರ್ಗವ್.


Monday, 14 January 2019

ಲೇಖನ ಮಕರ ಸಂಕ್ರಾಂತಿ ೨೦೧೯

ಲೇಖನ: ಮಕರ ಸಂಕ್ರಾಂತಿ

*ಮಕರ ಸಂಕ್ರಮಣವೆಂದರೆ* : ಮಕರ ರಾಶಿಯಾಗಿಯು, ಸಂಕ್ರಮಣ ಎಂದರೆ ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಮಾಡುವುದು ಎಂದರ್ಥ. (ಮೇಷ ಸಂಕ್ರಮಣ, ವೃಷಭ ಸಂಕ್ರಮಣ, ಮಿಥುನ ಸಂಕ್ರಮಣ ಹೀಗೆ....) ಹಾಗಾಗಿ ಈಗ ಸೂರ್ಯನು ಮಕರರಾಶಿಗೆ ಪ್ರವೇಶ ಮಾಡಿರುವುದರಿಂದಾಗಿ ಇಂದು ಮಕರಸಂಕ್ರಮಣ.

 

*ಯಾಕೆ ಉಳಿದೆಲ್ಲಕ್ಕಿಂತ ಇಷ್ಟು ವಿಶೇಷವೆಂದರೆ* : ದೇಶದಾದ್ಯಂತ ಆಚರಿಸುವ ಹಬ್ಬಗಳಲ್ಲಿ ಮಕರಸಂಕ್ರಾಂತಿಯು ಒಂದು. ಇಂದಿನಿಂದ ಉತ್ತರಾಯಣ ಪ್ರಾರಂಭವಾಗುವುದು.  ಎಲ್ಲರಿಗೂ ತಿಳಿದಿರುವಂತೆ *ಆಯನವೆಂದರೆ* ಸೂರ್ಯನು ಚಲಿಸುವಮಾರ್ಗ, ಸೂರ್ಯನು ಕಟಕ ಸಂಕ್ರಾಂತಿಯಿಂದ ದಕ್ಷಿಣದತ್ತ ಚಲಿಸುತ್ತಿದ್ದು, ಮಕರ ಸಂಕ್ರಾಂತ್ರಿಯಿಂದ ತನ್ನ ಮಾರ್ಗವನ್ನು ಬದಲಾಯಿಸಿ, ಉತ್ತರದ ಕಡೆ ಚಲಿಸುತ್ತಾನೆ. ಕೊರೆಯುವ ಚಳಿ ಮಾಗಿತಿಂಗಳು ಮುಗಿದು ಹಗಲು ಜಾಸ್ತಿಯಾಗಿ, ಕತ್ತಲು ಕಡಿಮೆಯಾಗುತ್ತದೆ.



*ರೈತರಿಗೆ* : ಮಕರಸಂಕ್ರಮಣವು ತುಂಬಾ ವಿಶೇಷವಾದ ಸ್ಥಾನವನ್ನು ಪಡೆಯುತ್ತದೆ. ರೈತರು ಸುಗ್ಗಿ ಹಬ್ಬವೆಂದೂ ಕರೆಯುತ್ತಾರೆ. ರೈತರು ತಮ್ತಮ್ಮ ಹೊಲದಲ್ಲಿಯೇ ಬೆಳೆದ ಬೆಳೆಗಳಾದ ಅವರೆಕಾಯಿ, ಕಬ್ಬು, ಸಜ್ಜೆ, ಗೆಣಸು-ಮರಗೆಣಸು, ನೆಲಗಡಲೆ ಬದನೆಕಾಯಿ, ವಿವಿಧ ತರಕಾರಿ, ಸೇವಂತಿಗೆ , ಮಲ್ಲಿಗೆ , ಜಾಜಿ ಇನ್ನೂ ಅನೇಕ ಬಗೆಯ ಬೆಳೆಗಳನ್ನು ಕಟಾವುಮಾಡಿ ,ರಾಶಿ ಹಾಕಿ ಪೂಜೆ ಮಾಡಿ ಸಿಹಿಪೊಂಗಲ್ (ಸಿಹಿಹುಗ್ಗಿ) ಮಾಡಿ ಸೂರ್ಯದೇವನಿಗೆ ನೈವೇದ್ಯವನ್ನು ಮಾಡಿ , ಹಾಗೆಯೇ *ಎಳ್ಳು-ಬೆಲ್ಲವನ್ನು* (ಅದರಲ್ಲಿ ಬಿಳಿಎಳ್ಳು, ಬೆಲ್ಲದ ಸಣ್ಣಸಣ್ಣ ಚೂರುಗಳು, ಕಡಲೆಪಪ್ಪು ಅಥವಾ ಪುಟಾಣಿ, ಹುರಿದ ನೆಲಗಡಲೆ, ಕಬ್ಬಿನ ಚೂರುಗಳಿರುತ್ತವೆ) ಎಲ್ಲ ಬಂಧುಗಳಿಗೂ, ಸ್ನೇಹಿತರಿಗೂ ಹಂಚಿ ಬಹಳ ಹರುಷದಿಂದ, ಸಂಭ್ರಮದಿಂದ  ಹಬ್ಬವನ್ನು ಆಚರಿಸುತ್ತಾರೆ. ಸಕ್ಕರೆಅಚ್ಚುಗಳಿಂದ ಗೊಂಬೆಗಳ ಮಾಡುವುದು ಶ್ರೇಷ್ಠವಾಗಿರುತ್ತದೆ.
ಅಲ್ಲದೇ ರಾತ್ರಿಗೆ ಎತ್ತುಗಳನ್ನು ಅಲಂಕರಿಸಿ ಕಿಚ್ಚು ಹಾಯಿಸಿ ಅವುಗಳಲ್ಲಿನ ಭಯವನ್ನೂ ಓಡಿಸುತ್ತಾರೆ. ಉತ್ತರ ಕರ್ನಾಟಕದಲ್ಲಿ ಊರಿಗೆ ಊರೇ ಅಂಗಳದಲ್ಲಿ ರಂಗೋಲಿ ಬಿಡಿಸಿ ಹೂವುಗಳಿಂದ ಅಲಂಕರಿಸಿ ಸಿಹಿ ಭಕ್ಷ್ಯ ಭೋಜವ ತಯಾರಿಸಿ ಹಬ್ಬವನ್ನು ಆಚರಿಸುತ್ತಾರೆ.ದಕ್ಷಿಣ ಕನ್ನಡದಲ್ಲಿ ದೇವಾಲಯಗಳಲ್ಲಿ ವಿಶೇಷವಾದ ಪೂಜೆಗಳನ್ನು ನಡೆಸಲಾಗುತ್ತದೆ. ಉಡುಪಿ ಶ್ರೀ ಕೃಷ್ಣ ಮಠ, ಮಾರಣಕಟ್ಟೆ ಮಹಾಲಿಂಗೇಶ್ವರ ದೇವಾಲಯ, ಮಂದರ್ತಿ ದುರ್ಗಾಪರಮೇಶ್ವರಿ ದೇವಸ್ಥಾನ, ನಾಗರಾಡಿ ಇನ್ನೂ ಅನೇಕಾನೇಕ ಕಾರಣೀಕ ಕಡೆಗಳಲ್ಲಿ ಢಕ್ಕೆಬಲಿ- ಹಾಲುಹಿಟ್ಟಿನ ಸೇವೆ, ದರ್ಶಿನ ಸಿಂಗಾರಹೂವು, (ನಾಗದೇವರ ನುಡಿಸೇವೆ) ತುಲಾಭಾರ ಸೇವೆ, ಹೂವಿನ ಅಲಂಕಾರ ಸೇವೆ, ಸಿಂಗಾರ ಹೂವು, ಸೇವಂತಿಗೆ ಹೂವಿನ ಅಲಂಕಾರ, ರಂಗಪೂಜೆ,  ಸತ್ಯನಾರಾಯಣ ಪೂಜೆ, ರಥೋತ್ಸವ ನಡೆಯುತ್ತದೆ. ಕೇರಳದಲ್ಲಿ ನಲವತ್ತೈದು ದಿನಗಳ ಕಾಲ ವೃತಾಚರಣೆಯಲ್ಲಿದ್ದ ಅಯ್ಯಪ್ಪ ಭಕ್ತರು ಇರುಮುಡಿ ಕಟ್ಟಿಕೊಂಡು ಶಬರಿಮಲೆಗೆ ಹೋಗುತ್ತಾರೆ. ಹಾಗೆಯೇ ರಾತ್ರಿ ಸಮಯದಲ್ಲಿ ಭಕ್ತಾಧಿವೃಂದಕ್ಕೆ ಮಕರಜ್ಯೋತಿ ಕಾಣಿಸುವುದು ಇವತ್ತಿನ ಸಂಕ್ರಮಣಕ್ಕೆ. ತಮಿಳುನಾಡಿನಲ್ಲಿ ಪೊಂಗಲ್ ಆಚರಣೆ ಬಹಳ ವಿಶೇಷವಾಗಿ ನಡೆಯುತ್ತದೆ‌. ಆಂಧ್ರ ಪ್ರದೇಶ, ತೆಲಂಗಾಣದಲ್ಲಿಯೂ ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತಾರೆ. ಹಾಗೂ ಉತ್ತರ ಭಾಗದಲ್ಲಿ ಗಾಳಿಪಟ ಹಾರಿಸುವುದು ಅಲ್ಲಿನ ವಿಶೇಷತೆ. ಹನ್ನೆರಡು ವರ್ಷಗಳಿಗೊಮ್ಮೆ ಬರುವ ಕುಂಭಮೇಳ ಹರಿದ್ವಾರ, ಉಜ್ಜೈನಿ, ನಾಸಿಕ್, ಹಾಗೂ ಅಲಹಾಬಾದ್ ನಲ್ಲಿ ಜರುಗುವುದು ಈ ಸಂಕ್ರಮಣ ದಲ್ಲಿಯೇ. ಈ ಭಾರಿ ಕುಂಭಮೇಳ ವಿಜ್ರಂಬಣೆಯಿಂದ ನಡೆಸಲು ಚಾಲನೆ ನೀಡಲಾಗಿದೆ. ಹಾಗೆಯೇ ಮಾಘಮೇಳ ಪ್ರಯಾಗದಲ್ಲಿಯೂ, ಗಂಗಾಸಾಗರ ಮೇಳ -ಗಂಗಾನದಿತಟದಲ್ಲಿಯೂ, ಮಕರಮೇಳ -ಒಡಿಸ್ಸಿದಲ್ಲಿ ಯೂ ನಡೆಯುತ್ತದೆ.





     *ಆಧ್ಯಾತ್ಮಿಕವಾಗಿ* : ಇಂದು ಕಪ್ಪು ಎಳ್ಳನ್ನು ದಾನ ಮಾಡುವುದು, ಪವಿತ್ರ ನದಿಯಲ್ಲಿ ಕಪ್ಪು ಎಳ್ಳಿನೊಂದಿಗೆ ಪುಣ್ಯಸ್ನಾನ ಮಾಡುವುದು, ದೇವಾಲಯದಲ್ಲಿ ಎಳ್ಳೆಣ್ಣೆಯ ದೀಪ ಹಚ್ಚುವುದು ಇವೆಲ್ಲವೂ ಪುಣ್ಯದ ಕೆಲಸವೆಂಬುದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಉತ್ತರಾಯಣದ ಪುಣ್ಯಕಾಲದಲ್ಲಿ ನಾವು‌ ಮಾಡಿದ ದಾನಧರ್ಮಗಳು ಜನ್ಮ ಜನ್ಮ ದಲ್ಲಿಯೂ ಸದಾ ನಮ್ಮನ್ನು ಕಾಯುವಂತೆ ಸೂರ್ಯದೇವನು ಅನುಗ್ರಹಿಸುತ್ತಾನೆ ಎಂಬುದು ವಾಡಿಕೆ.
ಈ ಶುಭದಿನದಂದು ತಿಲದಾನ, ತಿಲಾಹೋಮ, ತಿಲಭಕ್ಷಣೆ ಒಳ್ಳೆಯದು.



*ಎಳ್ಳು ಬೆಲ್ಲ ನೀಡುವುದರ ಒಳಾರ್ಥ* : ಸುಗ್ಗಿ ಕಾಲದಲ್ಲಿ ಚಳಿ ಅಧಿಕವಾಗಿರುತ್ತದೆ. ಎಳ್ಳಿನಲ್ಲಿ ಎಣ್ಣೆಯ ಅಂಶವಿರುವುದು ಎಲ್ಲರಿಗೂ ತಿಳಿದಿದೆ. ಹಾಗಾಗಿ ಅದನ್ನು ಬೆಲ್ಲದೊಂದಿಗೆ ಸೇವಿಸಿದರೆ ಮೂಳೆಗಳಿಗೆ ಕ್ಯಾಲ್ಸಿಯಂ ಹಾಗೂ ಎಣ್ಣೆಯ ಅಂಶ ನಮ್ಮ ಚರ್ಮವನ್ನು ಸುಕ್ಕುಗಟ್ಟಲು ಬಿಡದೆ ಚರ್ಮದ ಕಾಂತಿ ಹೆಚ್ಚಿಸಲು ಸಹಾಯಮಾಡುತ್ತದೆ . ದೇಹವನ್ನು ಬೆಚ್ಚಗಿರಿಸುತ್ತದೆ. ಪುಷ್ಟಿ ನೀಡುತ್ತದೆ.
ಹಾಗಾಗಿ ಹಿಂದುಗಳ ಆಚಾರ ವಿಚಾರಗಳು ಮೌಢ್ಯವಾಗಿರದೇ ವೈಜ್ಞಾನಿಕವಾಗಿ, ಪುರಾಣೈತಿಹಾಸಿಕವಾಗಿ ಆಧ್ಯಾತ್ಮಿಕವಾಗಿಯೂ ಬಲವಾಗಿದೆ.

ನನ್ನ ಎಲ್ಲ ಆತ್ಮೀಯ ಸ್ನೇಹಿತರಿಗೂ ಬಂಧುಗಳಿಗೂ ಮಕರಸಂಕ್ರಾಂತಿ ಹಬ್ಬದ ಶುಭಕೋರುತ್ತಾ,

ಎಳ್ಳು ಬೆಲ್ಲ ತಿಂದು ಸ್ನೇಹ ಸೌಹಾರ್ದಯನ್ನು ಮೆರೆಯೋಣ.!
ಒಳ್ಳೊಳ್ಳೆಯ ಮಾತುಗಳನ್ನೇ ನುಡಿಯೋಣ.!!

ಸೂರ್ಯಕಾಂತಿ ಹೂವಿನಂತೆ ಸದಾ ಉಲ್ಲಾಸ-ಸಂತೋಷದಿಂದ ಬಾಳೋಣ.!
ಮನಸ್ಸನ್ನು ಹುಗ್ಗಿಯಂತೆ ಸಿಹಿಯಾಗಿರಿಸೋಣ.!!

- *ಸಿಂಧು ಭಾರ್ಗವ್. ಬೆಂಗಳೂರು*

Tuesday, 20 November 2018

ಹಾಡು: ಕಲ್ಯಾಣಂ ತುಳಸೀ


ಹಾಡು: ಕಲ್ಯಾಣಂ ತುಳಸೀ

ಕಲ್ಯಾಣಂ ತುಳಸೀ ಕಲ್ಯಾಣಂ
ತುಳಸೀ ಕಟ್ಟೆಯ ಚಂದದಿ ತೊಳೆದು
ರಂಗೋಲಿಯನು ಚಿತ್ರಿಸಿರಿ...
ಪುಷ್ಪ ಪತ್ರೆಗಳ ಬುಟ್ಟಿಯಲಿ ತಂದು
ತುಳಸೀ ಮಾತೆಗೆ ಅರ್ಪಿಸಿರಿ//ಕಲ್ಯಾಣಂ//

ಅರಸಿನ ಕುಂಕುಮ ಹಚ್ಚಿ ನೀವು
ಮುತೈದೆ ಭಾಗ್ಯಕೆ ಪ್ರಾರ್ಥಿಸಿರಿ...
ನೆಲ್ಲಿ-ಸಾಲಿಗ್ರಾಮವ ಇರಿಸಿ
ಗಂಧ ಅಕ್ಷತೆಯ ಪ್ರೋಕ್ಷಿಸಿರಿ//ಕಲ್ಯಾಣಂ//

ಪಂಚಕಜ್ಜಾಯ, ಭಕ್ಷ್ಯಗಳ ನೀಡಿ
ಶೃದ್ದೆಯಿಂದಲಿ ಬೇಡಿರಿ
ಉತ್ತಮ ಫಲಕಾಗಿ ತಾಯ ನೆನೆಯುತ
ಕೃಷ್ಣ ಶ್ರೀತುಳಸಿಯ ಪೂಜಿಸಿರಿ...
 //ಕಲ್ಯಾಣಂ ತುಳಸೀ ಕಲ್ಯಾಣಂ//
..





#tulsipooja #ಉತ್ಥಾನದ್ವಾದಶಿ #wishes #sindhubhargavquotes
#ತುಳಸಿಪೂಜೆ #ಶ್ರೀಕೃಷ್ಣತುಳಸಿ #ತುಳಸಿಹಬ್ಬ


- ಸಿಂಧುಭಾರ್ಗವ್ 🍁    

Thursday, 8 November 2018

Deepavali festival Full HD images

ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು
Wish You All A Very 
Happy And Safe Deepavali festival.

A Festival Full of
 ☀Sweet Childhood Memories,
☀ Sky full of Fireworks,
☀Mouth full of Sweets,
☀House full of Diyas and Heart full of Joy.

☀Wishing you all a Very Prosperous Deepavali☀

🎇🎆☀🌻☺🙏🌝🌞🌷🥒💐🎼🎑🌄🌅🏕🌱🌎🐄🌞🏕
****

****

***

***

***

***


***

***

***

***

***

***

***

****

***

***

***

***

***

***

***

***

***

***

***

***

***

***

***

***

***

****

****

***

***

***

***

***

***

***



#Shot_on_REDMI_NOTE5_PRO
#MI_DUAL_CAMERA

#Redminote5 pro  #diwali #mi_dualcamera #Sindhu_photography #diyas #Bangalore