Thursday 11 May 2017

ಧರ್ಮ-ಕರ್ಮಗಳ ನಡುವೆ ನಮ್ಮ ಜೀವನ.

:: 😍😂😉😊😍😂😉
ಯೋಗರಾಜ್ ಭಟ್ರಿಂದ ಸ್ಪೂರ್ತಿ ಪಡೆದ ಸಿಂಧು. ವಿಷಯವಸ್ತು : ಧರ್ಮ-ಕರ್ಮಗಳ ನಡುವೆ ನಮ್ಮ ಜೀವನ..
😍😂😉😊😍😂😉 ::

೧) ಪರಿಶುದ್ಧ ಆತ್ಮವಿರುವವರಿಗೆ ಈ ಜಾತಿ-ಮತ-ಧರ್ಮದ ಯಾವುದೇ ಹಂಗಿರುವುದಿಲ್ಲ.

೨) ನಾವು ಮಾಡುವ ಕೆಲಸದಲ್ಲಿ ತೃಪ್ತಿಯ ಜೊತೆಗೆ ನಿಷ್ಠೆ ,ಪ್ರಾಮಾಣಿಕತೆ ಇರಲೇಬೇಕು. ಆಗಲೇ ಯಶಸ್ಸು ಸಿಗಲು ಸಾಧ್ಯ.

೩) ಜಗತ್ತಿನಲ್ಲಿ ಅನ್ಯಾಯ, ಅಧರ್ಮ, ಅಕ್ರಮ ತಾಂಡವವಾಡುತ್ತಿದೆ.
ಕಣ್ಣು, ಕಿವಿ, ಬಾಯಿಯನ್ನು
ಮುಚ್ಚಿಕೊಂಡ ಗಾಂಧೀಜಿಯ ಮೂರು ಮಂಗಗಳಿಗೆ ಕೈಸೋತು ಹೋಗುತ್ತಿದೆ.😢😯😐

೪)) ಭಾಷೆ ಬಗ್ಗೆಯಾಗಲಿ, ಧರ್ಮದ ಬಗ್ಗೆಯಾಗಲಿ ಅಂಧಾಭಿಮಾನ ಇರಕೂಡದು. ಅದು ಅದೆಷ್ಟೋ ಜನರ ಮಾನಹಾನಿಗೂ,ಪ್ರಾಣಹಾನಿಗೂ ಕಾರಣವಾಗುವುದು.
❌🙅✖

೫)) ಕಾಮ, ಕ್ರೋಧ, ಮೋಹ, ಮದ, ಮತ್ಸರ, ಲೋಭ,ಸಂಶಯ, ಮಮಕಾರ, ಅಹಂಕಾರ ಇವುಗಳು ಮನುಷ್ಯನ ಸಹಜವಾದ ಒಂಭತ್ತು ವೈರಿಗಳು. ಹಾಗೇ ಮನುಷ್ಯನಿಗೆ ಹುಟ್ಟುಗುಣಗಳಾಗಿ ಬಂದಿರುತ್ತವೆಯೇ ಹೊರತು ಯಾವುದೇ ಧರ್ಮಕ್ಕೆ ಅಂಟಿಕೊಂಡಿದ್ದಲ್ಲ.

ಆದರೆ, ಆದರೆ ಸ್ವಾರ್ಥಿಗಳು ತಮ್ಮ ಲಾಭಕ್ಕೋಸ್ಕರ ಒಬ್ಬ ವ್ಯಕ್ತಿ ಮಾಡಿದ ತಪ್ಪನ್ನು ಧರ್ಮದ ಹೆಸರಿನಲ್ಲಿ ಮುಚ್ಚಿಹಾಕಿಯೋ(ರಕ್ಷಿಸಲು) ಅಥವಾ ಅದೇ ಧರ್ಮದ ಹೆಸರಿನಲ್ಲಿ ಶಿಕ್ಷೆ ನೀಡಲು ಮುಂದಾಗುತ್ತಾರೆ..

(ಗೂಗಲ್ ಚಿತ್ರ)


🙏🌷 ಶುಭನುಡಿ🌷🙏

- ಸಿಂಧು ಭಾರ್ಗವ್ , ಬೆಂಗಳೂರು

No comments:

Post a Comment