ನಮ್ಮ ಜೀವನವೂ ಈ ಮಾವಿನ ವಾಟೆ ತರಹ. ಬರುವಾಗಲೂ ಬತ್ತಲೆ, ಹೋಗುವಾಗಲೂ ಬತ್ತಲೆ. ನಡುವೆ ಒಂದಷ್ಟು ದಿನ ಉಬ್ಬುವುದು ಕೊಬ್ಬುವುದು. ಮಾವಿನ ಹಾಗೆಯೇ ಮುರುಟಿಹೋದ ಮನಸ್ಸುಗಳು, ಕೊಳೆತುಹೋದ ಮನಸ್ಸುಗಳು, ಹೇಗೆ ಹೊರಗಿನಿಂದ ನೋಡಲು ಮಾವು ಸುಂದರವಾಗಿ ಕಾಣಿಸುತ್ತದೆಯೋ ಜನರೂ ಕೂಡ ಮುಖವಾಡ ಧರಿಸಿಕೊಂಡು ಸುಂದರವಾಗಿಯೇ ಮೋಸಮಾಡುವರು, ಮಾತನಾಡುವರು. ಆದರವರ ಮನಸ್ಸು ಸ್ವಾರ್ಥ, ಮತ್ಸರ, ದ್ವೇಷದ ಕೂಪವಾಗಿರುತ್ತದೆ.. ಅವರ ಸಂಗ ನಮಗೆ ಹುಳಿಮಾವು ತಿಂದ ಅನುಭವ ನೀಡುತ್ತದೆ.
**
ಪ್ರಾಯದಲ್ಲಿ ಹುಳಿ ತೋರಿಸುವುದು, (ಅಹಂ) ಬಿಸಿಲು-ಗಾಳಿ ,ಹಗಲು-ರಾತ್ರಿ ಎನ್ನದೇ ಮೈಯೊಡ್ಡಿ ನಿಂತು ಮಾವು ಹೇಗೆ ಮಾಗುವುದೋ ಮುಪ್ಪು ಬಂದಹಾಗೆ ದುಡಿತ, ಸವೆತದ ನಡುವೆ ನಮ್ಮ ಜೀವಿತದ ಅನುಭವದ ಸಿಹಿಯನ್ನು ಹಂಚಲಿಕ್ಕೆ ಶುರುಮಾಡುತ್ತೇವೆ.
**
ಆದರೆ ಎಲ್ಲಾ ಕಾಲದಲ್ಲಿಯೂ ,ಎಲ್ಲಾ ರುಚಿಯಲ್ಲಿಯೂ ಜನ ಮಾವನ್ನು ಇಷ್ಟ ಪಡುತ್ತಾರೆ.. ಹೇಗೆ ಉಪ್ಪು ಬೆರೆಸಿ , ಕಾರ ಬೆರೆಸಿ ತಿನ್ನುವರೋ ಹಾಗೆ ನಾವು ಜೀವನದಲ್ಲಿ ಸ್ನೇಹ-ಪ್ರೀತಿ ಬೆರೆಸಿ ಸೌಹಾರ್ದತೆಯಿಂದ ಬಾಳಬೇಕು..
- ಸಿಂಧು ಭಾರ್ಗವ್ 🍁
**
ಪ್ರಾಯದಲ್ಲಿ ಹುಳಿ ತೋರಿಸುವುದು, (ಅಹಂ) ಬಿಸಿಲು-ಗಾಳಿ ,ಹಗಲು-ರಾತ್ರಿ ಎನ್ನದೇ ಮೈಯೊಡ್ಡಿ ನಿಂತು ಮಾವು ಹೇಗೆ ಮಾಗುವುದೋ ಮುಪ್ಪು ಬಂದಹಾಗೆ ದುಡಿತ, ಸವೆತದ ನಡುವೆ ನಮ್ಮ ಜೀವಿತದ ಅನುಭವದ ಸಿಹಿಯನ್ನು ಹಂಚಲಿಕ್ಕೆ ಶುರುಮಾಡುತ್ತೇವೆ.
**
ಆದರೆ ಎಲ್ಲಾ ಕಾಲದಲ್ಲಿಯೂ ,ಎಲ್ಲಾ ರುಚಿಯಲ್ಲಿಯೂ ಜನ ಮಾವನ್ನು ಇಷ್ಟ ಪಡುತ್ತಾರೆ.. ಹೇಗೆ ಉಪ್ಪು ಬೆರೆಸಿ , ಕಾರ ಬೆರೆಸಿ ತಿನ್ನುವರೋ ಹಾಗೆ ನಾವು ಜೀವನದಲ್ಲಿ ಸ್ನೇಹ-ಪ್ರೀತಿ ಬೆರೆಸಿ ಸೌಹಾರ್ದತೆಯಿಂದ ಬಾಳಬೇಕು..
- ಸಿಂಧು ಭಾರ್ಗವ್ 🍁
No comments:
Post a Comment