ಕವನ: ಆರೋಗ್ಯದ ಕಡೆ ಗಮನ ನೀ ಕೊಡು
*** *** ***
ನಾನಿನ್ನು ಹೊರಡುವೆ ಅಳದಿರು ಉಸಿರೆ..
ನಾನಿನ್ನು ಹೊರಡುವೆ ಕೊರಗದಿರು ಉಸಿರೇ..
ಈ ವಿರಹ ಅನಿವಾರ್ಯ, ಬೇಕಂತಲೇ ಅಲ್ಲ..
ನಮ್ಮ ಕನಸೊಂದು ಬರಲಿಕ್ಕಿದೆಯಲ್ಲ..
ಕಾಯಬೇಕು, ದೂರವಿರಲೇ ಬೇಕು..
ತವರು ಮನೆಯಲಿ ನಾಲ್ಕು ದಿನ ಕಳೆಯಲೇ ಬೇಕು..
ನಾನು ಮಾಡಿದ ಕೈರುಚಿ ನೆನಪಾಗಬಹುದೀಗ..
ನಾನಾಡಿದ ಜಗಳ ಕಾಡುವುದು ನಿನಗೀಗ..
ಸಾಮೀಪ್ಯ ಬಯಸಲಾಗೊಲ್ಲ,ಕೈಬಳೆ ಸದ್ದಿಲ್ಲ ..
ರೇಗಿಸಲು ನಾನಿಲ್ಲ, ಮುದ್ದಿಸಲೂ ಜೊತೆಗಿಲ್ಲ..
ನನ್ನ ಕೆಲಸಗಳೊಂದಿಷ್ಟು ಹೊರೆಯಾಗಬಹುದೀಗ
ಮನೆಯಲಿ ಖಾಲಿತನ ಕಾಡಬಹುದೀಗ..
ಹೊತ್ತೊತ್ತಿಗೆ ಊಟವ ನೀಮಾಡು
ರಾತ್ರಿಯ ನಿದಿರೆಯ ತಪ್ಪಿಸದಿರು
ಕೋಪವು ಬರುವುದು, ರೇಗುವೆ ನಿನ್ನ ಮೇಲೆ..
ಪ್ರೀತಿಯು ಕಡಿಮೆ ಆದಂತೆ ಅನಿಸಿದಾಗ ನನ್ನ ಮೇಲೆ..
ನಾಮಾಡಿದ ತಪ್ಪನು ನೀ ಕ್ಷಮಿಸು ಮನವೇ....
ದುಡುಕಿಯಾಡಿದ ಮಾತನು ಮರೆತುಬಿಡು ಮನವೇ..
ನಾನಿನ್ನು ಹೊರಡುವೆ ಅಳದಿರು ಉಸಿರೆ..
ನಾನಿನ್ನು ಹೊರಡುವೆ ಕೊರಗದಿರು ಉಸಿರೇ..
- ಸಿಂಧು ಭಾರ್ಗವ್.
*** *** ***
ನಾನಿನ್ನು ಹೊರಡುವೆ ಅಳದಿರು ಉಸಿರೆ..
ನಾನಿನ್ನು ಹೊರಡುವೆ ಕೊರಗದಿರು ಉಸಿರೇ..
ಈ ವಿರಹ ಅನಿವಾರ್ಯ, ಬೇಕಂತಲೇ ಅಲ್ಲ..
ನಮ್ಮ ಕನಸೊಂದು ಬರಲಿಕ್ಕಿದೆಯಲ್ಲ..
ಕಾಯಬೇಕು, ದೂರವಿರಲೇ ಬೇಕು..
ತವರು ಮನೆಯಲಿ ನಾಲ್ಕು ದಿನ ಕಳೆಯಲೇ ಬೇಕು..
ನಾನು ಮಾಡಿದ ಕೈರುಚಿ ನೆನಪಾಗಬಹುದೀಗ..
ನಾನಾಡಿದ ಜಗಳ ಕಾಡುವುದು ನಿನಗೀಗ..
ಸಾಮೀಪ್ಯ ಬಯಸಲಾಗೊಲ್ಲ,ಕೈಬಳೆ ಸದ್ದಿಲ್ಲ ..
ರೇಗಿಸಲು ನಾನಿಲ್ಲ, ಮುದ್ದಿಸಲೂ ಜೊತೆಗಿಲ್ಲ..
ನನ್ನ ಕೆಲಸಗಳೊಂದಿಷ್ಟು ಹೊರೆಯಾಗಬಹುದೀಗ
ಮನೆಯಲಿ ಖಾಲಿತನ ಕಾಡಬಹುದೀಗ..
ಹೊತ್ತೊತ್ತಿಗೆ ಊಟವ ನೀಮಾಡು
ರಾತ್ರಿಯ ನಿದಿರೆಯ ತಪ್ಪಿಸದಿರು
ಕೋಪವು ಬರುವುದು, ರೇಗುವೆ ನಿನ್ನ ಮೇಲೆ..
ಪ್ರೀತಿಯು ಕಡಿಮೆ ಆದಂತೆ ಅನಿಸಿದಾಗ ನನ್ನ ಮೇಲೆ..
ನಾಮಾಡಿದ ತಪ್ಪನು ನೀ ಕ್ಷಮಿಸು ಮನವೇ....
ದುಡುಕಿಯಾಡಿದ ಮಾತನು ಮರೆತುಬಿಡು ಮನವೇ..
ನಾನಿನ್ನು ಹೊರಡುವೆ ಅಳದಿರು ಉಸಿರೆ..
ನಾನಿನ್ನು ಹೊರಡುವೆ ಕೊರಗದಿರು ಉಸಿರೇ..
- ಸಿಂಧು ಭಾರ್ಗವ್.
No comments:
Post a Comment