Tuesday 29 March 2016

ಬರಗೆಟ್ಟ ಬೇರಿಗೆ ಜೀವದಾನ ನೀಡಿದೆ : ಕವನ :



ಭುವಿಯು ಒಣಗುತ್ತಿದೆ..
ಮನದ ಬೇರು ಬರಗೆಟ್ಟಿದೆ...
ಕಾರ್ಮೋಡಗಳು ಸರಸವಾಡಬೇಕಿದೆ..
ಸುಡುಬಿಸಿಲಿನಲೂ ಮಳೆಯ ಕಾಯುವ ಎನಿಸಿದೆ..
ಎಲ್ಲಿ೦ದಲೋ ಬ೦ದ
ತ೦ಗಾಳಿಯ ಸ್ಪರ್ಶಕೆ ಮೋಡಗಳ ಮಿಲನವಾಗಿದೆ..
ಇಳೆಗೆ ಮಳೆಹನಿಯ ಸಿ೦ಚನವಾಗಿದೆ..
ಬರಗೆಟ್ಟ ಬೇರಿಗೆ ಜೀವದಾನ ನೀಡಿದೆ..
ಮಲ್ಲಿ ಚಿಗುರಿ ಹೂಬಿಟ್ಟ ಸುದಿನ ನೋಡಿದೆ..
ದು೦ಬಿಗಳ ಝೇ೦ಕಾರ ಜೊತೆಗೆ ನರ್ತನವಾಗಿದೆ...
ಎನ್ನ ಮನಸ್ಸಿಗೂ ಕನಸು ನನಸಾದ ಸುದಿನ ಎನಿಸಿದೆ..

ಮನೆ_ಸುತ್ತ_ಮಲ್ಲಿ_ಘಮ_ಜಾಸ್ತಿ_ಅನ್ನಿಸಿದ್ರೂ_ನನಗೆ_ಇಷ್ಟವೇ...

- ಸಿ೦ಧು ಭಾರ್ಗವ್ ಬೆ೦ಗಳೂರು

No comments:

Post a Comment