Wednesday 1 July 2020

ಲೇಖನ : ಕರ್ನಾಟಕ ಪತ್ರಿಕಾ ದಿನಾಚರಣೆ


ಕಿರುಲೇಖನ : ಕರ್ನಾಟಕ ಪತ್ರಿಕಾ ದಿನಾಚರಣೆ
ಮಂಗಳೂರು ಸಮಾಚಾರ (Google image source )

Your quote images

Your quote image

ಜನಮಿಡಿತ ದಿನಪತ್ರಿಕೆಯಲ್ಲಿ ಲೇಖನ ಪ್ರಕಟವಾಗಿದೆ


            ಜುಲೈ ಒಂದರಂದು ಮೊದಲ ಬಾರಿಗೆ ಕರುನಾಡಿನಲ್ಲಿ  "ಮಂಗಳೂರು ಸಮಾಚಾರ" ಪತ್ರಿಕೆ ಆರಂಭವಾಯಿತು. ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ಥಂಭವೆ ಈ ಪತ್ರಿಕಾ ಮಾಧ್ಯಮ.  ೧೮೩೪ ರಲ್ಲಿ ಬಂದ ಮೊದಲ ಕನ್ನಡ ವಾರಪತ್ರಿಕೆ ಇದಾಯಿತು. ತನ್ಮೂಲಕ ಕರ್ನಾಟಕದಲ್ಲಿ ತಲೆ ಎತ್ತಿದ ಮೊದಲ ಕನ್ನಡ ಪತ್ರಿಕೋಧ್ಯಮ ಎಂಬ ಹೆಗ್ಗಳಿಕೆ ಪಡೆಯಿತು. ಜನರು ನಿರ್ಭೀತರಾಗಿ ಸ್ವತಂತ್ರವಾಗಿ ವಾದ ಮಂಡಿಸುವ, ದೂರು ನೀಡುವ ವೇದಿಕೆ ಇದಾಗಿದೆ. ಅನ್ಯಾಯವನ್ನು ದಾಖಲು ಮಾಡಲು ಸರ್ಕಾರದ ಗಮನಕ್ಕೆ ತರಲು, ದೀನರ ಸಂಕಷ್ಟಕ್ಕೆ ದನಿಯಾಗಲು , ಅನೇಕರ ಕುಂದು ಕೊರತೆಗಳನ್ನು ನೀಗಿಸಲು ಈ ಪತ್ರಿಕೆಗಳು ಸಹಕಾರಿಯಾಗಿವೆ. ಹಳ್ಳಿ, ಪಟ್ಟಣ, ಜಿಲ್ಲೆ, ರಾಜ್ಯದ ಹಾಗೆ ದೇಶ-ವಿದೇಶದ ಸುದ್ದಿಯನ್ನು ಪ್ರತಿದಿನ ಮುಂಜಾನೆ ಅಲ್ಲದೇ ಸಂಜೆ ಹೊತ್ತು ತರುತ್ತವೆ. ಆಗಿನ ಕಾಲದಲ್ಲಿ ಪಾಶ್ಚಿಮಾತ್ಯರು ತಮ್ಮ ಕ್ರೈಸ್ತ ಧರ್ಮದ ಪ್ರಚಾರ ಮಾಡಲು ಬಳಸಿದರು. ಮೊಳೆ ಅಚ್ಚಿನ ಮೂಲಕ ವಿಚಾರಗಳನ್ನು ಬಿತ್ತರಿಸುತ್ತಿದ್ದರು. ಈಗೆಲ್ಲ ಡಿಜಿಟಲ್ ಮಾಧ್ಯಮವಾಗಿದೆ.


           ಇಂದಿನ ಕಾಲಕ್ಕೆ ಪತ್ರಿಕಾ ಮಾಧ್ಯಮ ಹೊಚ್ಚ ಹೊಸತಾಗಿ ತಲೆ ಎತ್ತಿದೆ. ಸಾಪ್ತಾಹಿಕ ಪುರವಣಿ ಎಂದು ವಿಶೇಷವಾಗಿ ವಾರದ ಏಳು ದಿನಗಳಲ್ಲಿ ವಿವಿಧ ವಿಭಾಗದಲ್ಲಿ ಸಮಾಚಾರಗಳನ್ನು ಬಿತ್ತರಿಸುತ್ತವೆ. ಅಲ್ಲದೆ ಪತ್ರಿಕೋಧ್ಯಮ ವಲಯದವರಿಗೆ ಮಾತ್ರವಲ್ಲದೇ ಯುವ ಬರಹಗಾರರಿಗೂ ವೇದಿಕೆ ನೀಡಿವೆ. ಸಾಹಿತ್ಯ ಸಾಂಸ್ಕೃತಿಕ, ಮಹಿಳೆಯರಿಗೆ, ಆರೋಗ್ಯ, ಕರಕುಶಲ, ಕೃಷಿ ವಲಯ, ಉದ್ಯಮ, ವ್ಯವಹಾರ, ಆಧ್ಯಾತ್ಮ, ಚಿಂತನ-ಮಂಥನ, ಪುಟಾಣಿಗಳಿಗಾಗಿ ಮಕ್ಕಳ ಸಾಹಿತ್ಯ, ವಿಸ್ಮಯ ಪ್ರಪಂಚ , ಜ್ಞಾನ - ವಿಜ್ಞಾನ, ಸಿನಿಮಾಹಿತಿ, ಉದ್ಯೋಗಾವಕಾಶಗಳ ಮಾಹಿತಿ ಹೀಗೆ ವಿವಿಧ ವಿಚಾರಧಾರೆಗಳ‌ ಮಹಾಪೂರ, ವರ್ಣಮಯವಾಗಿ ಪತ್ರಿಕಾ ವಲಯದಿಂದ ಓದುಗರಿಗೆ ತಲುಪುತ್ತಿದೆ.


        ಈಗಿನ ಕರೋನಾ ವೈರಸ್ ನ ಹಾವಳಿ ಇದ್ದರೂ ಪತ್ರಿಕಾ ಮಾಧ್ಯಮವು ತನ್ನ ಸೇವೆಯನ್ನು ನಿಲ್ಲಿಸಿರಲಿಲ್ಲ. ಜೀವಭಯ, ರೋಗ ಭಯದ ವಾತಾವರಣದ ನಡುವೆಯೂ ದಿನಪತ್ರಿಕೆಯನ್ನು ಪ್ರತಿದಿನ ಮನೆ-ಮನೆಗೆ ಹಂಚುವ ಹುಡುಗರಿಗೆ ದೊಡ್ಡ ಸಲ್ಯೂಟ್ ಹೇಳಲೇಬೇಕು. ಅಲ್ಲದೇ ಪತ್ರಿಕಾ ಸಂಪಾದಕ ಬಳಗಕ್ಕೆ ಅಭಿನಂದನೆಗಳನ್ನು ತಿಳಿಸೋಣ.

 ಸಿಂಧು ಭಾರ್ಗವ್ ಬೆಂಗಳೂರು-೨೧


No comments:

Post a Comment