ಕನ್ನಡ ಕವಿತೆ ಶೀರ್ಷಿಕೆ : ನಮ್ಮಯ ಭಾರತ
ನಮ್ಮಯ ಭಾರತ ಹೆಮ್ಮೆಯ ಭಾರತ
ಭಾರತಾಂಬೆಯ ಮಕ್ಕಳು ನಾವು
ನಮ್ಮಯ ಭಾರತ ಹೆಮ್ಮೆಯ ಭಾರತ
ಗರುವದಿ ಹೇಳುವ ಬನ್ನಿ ಎಲ್ಲರೂ
ಭಾರತಾಂಬೆಯ ಮಕ್ಕಳು ನಾವು
ನಮ್ಮಯ ಭಾರತ ಹೆಮ್ಮೆಯ ಭಾರತ
ಗರುವದಿ ಹೇಳುವ ಬನ್ನಿ ಎಲ್ಲರೂ
ದೇಶವಾಸಿಗಳ ಭದ್ರತೆಗಾಗಿ
ಯೋಧರು ಕಾವಲು ಕಾಯುವರು
ಉಳುವ ಯೋಗಿಯು ಅನ್ನವ ನೀಡಿ
ಜನತೆಯ ಹಸಿವನು ನೀಗುವನು
ಯೋಧರು ಕಾವಲು ಕಾಯುವರು
ಉಳುವ ಯೋಗಿಯು ಅನ್ನವ ನೀಡಿ
ಜನತೆಯ ಹಸಿವನು ನೀಗುವನು
ಎಂತಹ ಕಠಿಣ ಗಳಿಗೆಯಲ್ಲಿಯೂ
ಎದೆಗುಂದದೆ ಸಾಗುವ ಪ್ರಧಾನಿಗಳು
ಸಾಲವ ನೀಡುತ ಬಡವರ ರಕ್ಷೆಗೆ
ಪಣತೊಟ್ಟಿಹ ಮಂತ್ರಿಗಳು
ಎದೆಗುಂದದೆ ಸಾಗುವ ಪ್ರಧಾನಿಗಳು
ಸಾಲವ ನೀಡುತ ಬಡವರ ರಕ್ಷೆಗೆ
ಪಣತೊಟ್ಟಿಹ ಮಂತ್ರಿಗಳು
ಬೇಸಿಗೆ ಕಾಲವು ಮುಗಿದೇ ಹೋಯಿತು
ಕರೋನಾ ಮಾರಿಯ ಹಾವಳಿಗೆ
ವಿಶ್ವದೆಲ್ಲೆಡೆ ವೈದ್ಯರು ಬಂದರು
ಕೋಟ್ಯಾಂತರ ಜನರ ರಕ್ಷಣೆಗೆ
ಕರೋನಾ ಮಾರಿಯ ಹಾವಳಿಗೆ
ವಿಶ್ವದೆಲ್ಲೆಡೆ ವೈದ್ಯರು ಬಂದರು
ಕೋಟ್ಯಾಂತರ ಜನರ ರಕ್ಷಣೆಗೆ
ಸಾವು ನೋವುಗಳ ಅಂಕೆಯು ಕೂಡ
ಏರಿಕೆಯಾಗಿದೆ ದಿನದಿನಕೆ
ದೇಶದ ಜನರು ಕಂಗಾಲಾದರು
ಅರ್ಥ ವ್ಯವಸ್ಥೆಯ ಏರಿಳಿತಕ್ಕೆ
ಏರಿಕೆಯಾಗಿದೆ ದಿನದಿನಕೆ
ದೇಶದ ಜನರು ಕಂಗಾಲಾದರು
ಅರ್ಥ ವ್ಯವಸ್ಥೆಯ ಏರಿಳಿತಕ್ಕೆ
ಮುಂಗಾರು ಮಳೆಯ ಪ್ರವೇಶವೀಗ
ಚಂಡಮಾರುತದ ಹಾವಳಿಯು
ಮನೆಮಠ ಕಳೆದು ಕೊಳ್ಳುವ ಭೀತಿಗೆ
ಸಿಲುಕಿದ ರಾಜ್ಯದ ನೆರೆಪೀಡಿತರು
ಚಂಡಮಾರುತದ ಹಾವಳಿಯು
ಮನೆಮಠ ಕಳೆದು ಕೊಳ್ಳುವ ಭೀತಿಗೆ
ಸಿಲುಕಿದ ರಾಜ್ಯದ ನೆರೆಪೀಡಿತರು
ಎಂತಹ ಕಷ್ಟಕೂ ಅಂಜದೇ ನಿಲ್ಲುವ
ಆತ್ಮಬಲವು ನಮ್ಮಲ್ಲಿದೆ
ನೆರೆಯ ದೇಶಗಳು ಲಗ್ಗೆ ಇಡುತಿರೆ
ಎದೆಯೊಡ್ಡಿ ಹೋರಾಡುವ ಧೈರ್ಯವಿದೆ
ಆತ್ಮಬಲವು ನಮ್ಮಲ್ಲಿದೆ
ನೆರೆಯ ದೇಶಗಳು ಲಗ್ಗೆ ಇಡುತಿರೆ
ಎದೆಯೊಡ್ಡಿ ಹೋರಾಡುವ ಧೈರ್ಯವಿದೆ
ಭಾರತಾಂಬೆಯ ಕುವರರು ನಾವು
ಸಯ್ಯಮ, ಶಾಂತಿಯೆ ನಮ್ಮ ಮಂತ್ರವು
ಈ ಮಣ್ಣಿನಲಿ ಜನಿಸಿದ ನಾವು
ಅಮ್ಮಗೆ ಕೀರುತಿಯ ತಂದು ಕೊಡುವೆವು
ಸಯ್ಯಮ, ಶಾಂತಿಯೆ ನಮ್ಮ ಮಂತ್ರವು
ಈ ಮಣ್ಣಿನಲಿ ಜನಿಸಿದ ನಾವು
ಅಮ್ಮಗೆ ಕೀರುತಿಯ ತಂದು ಕೊಡುವೆವು
ರಚನೆ : ಶ್ರೀಮತಿ ತುಳಸಿ.
ಸಿಂಧು ಭಾರ್ಗವ್ ಬೆಂಗಳೂರು (ಕಾವ್ಯನಾಮ)
ಸಿಂಧು ಭಾರ್ಗವ್ ಬೆಂಗಳೂರು (ಕಾವ್ಯನಾಮ)
No comments:
Post a Comment