Google photosource-
*****
ಕವನ: ಹಿಡಿದ ಗುರಿಯನು ಬಿಡದಿರು
ಅಂದುಕೊಂಡಂತೆ ಎಂದೂ ನಡೆಯದು
ಹಿಡಿದ ಹಠವ ಮನವು ಬಿಡದು!
ಸುಖದ ಸುಪ್ಪತ್ತಿಗೆ ಬೇಕು ಎನದು; ಮನ
ಕಷ್ಟಗಳನು ಎದುರಿಸಿ ನಿಲ್ಲುವುದು
ನಾಳಿನ ಹಾದಿಯ ಜಾಡನು ಹಿಡಿದು
ಇಂದೇ ಒಂದಷ್ಟು ಸಾಗಬೇಕು!
ಗಮ್ಯದ ಕಡೆಗೆ ಸಾಗಿದಂತೆಲ್ಲ
ಆತ್ಮದ ಅವಲೋಕನವಾಗಬೇಕು!
ಏರಿದ ಏಣಿಯ, ಹಿಡಿದ ಕರಗಳ
ಮರೆಯಲೇ ಬಾರದು ಗೆಳೆಯ
ನಾಳಿನ ನಮ್ಮಯ ದಿನಗಳ ಎನಿಸುತ
ಈ ದಿನವ ಹಾಳುಗೆಡವದಿರು ಗೆಳೆಯ
ಕಠಿಣತೆಗೆ ಫಲವು ಆರಾಮಕ್ಕಲ್ಲ
ಮುಳ್ಳಿನ ಜೊತೆಗೆ ಸುಮವು ಇದೆಯಲ್ಲ
ಮೋಡವು ಕರಗಿದರೆ ಮಳೆ ಬರುವುದು
ಬತ್ತಿದ ತೊರೆಯಲಿ ನೀರು ಹರಿಯುವುದು
ಕಾಯಲೇಬೇಕು ಜೊತೆಗೆ ಪ್ರಯತ್ನಗಳು ಬೇಕು
ಕಾಯಲೇಬೇಕು ಜೊತೆಗೆ ನಂಬಿಕೆಯು ಬೇಕು
ದೇವಬಲವು ತನ್ನಛಲವು ಎರಡರ ಮಿಶ್ರಣವು
ಸಾಧನೆಯ ಮುಕುಟಕೆ ಕಳಶಪ್ರಾಯವು,
ಅದುವೇ ಕಳಶಪ್ರಾಯವು!!
- ಸಿಂಧು ಭಾರ್ಗವ್.🍁
No comments:
Post a Comment