Wednesday 1 February 2017

Friends Forever

ಸ್ನೇಹ_ಸಮ್ಮಿಲನ By, Sabith

ಇಂದು ನನ್ನ ಮತ್ತು ಅನ್ಸಾರ್ ಕಾಟಿಪಳ್ಳವರ ಪಯಣ ಸೀದಾ ಮಲ್ಲೇಶ್ವರಂ ಕಡೆಗಾಗಿತ್ತು
ಏನು ಹೇಳಲಿ ಮಾತೇ ಬರುತಿಲ್ಲ .....ನಮ್ಮ ಅನ್ಸಾರ್ಚರವರಿಂದಾಗಿ ನನ್ನ ಪ್ರೀತಿಯ ಸಿಂಧು ಭಾರ್ಗವ್ ಮತ್ತು ಸಾಹುಕಾರ್ ಅಚ್ಚು'ರನ್ನು ಭೇಟಿ ಆಗುವ ಭಾಗ್ಯ ನನಗೂ ಲಭಿಸಿತು☺
ಸಿಂಧು ಅಕ್ಕಾ ಬರೆಯುವ ಒಂದೊಂದು ಸಾಲುಗಳು ಅತ್ಯದ್ಭುತ ಎನ್ನುವುದರಲ್ಲಿ ಮಾತಿಲ್ಲ.....👍
ಅಚ್ಚುಚ್ಚ ಮತ್ತೆ ಮತ್ತೆ ಓದಿಸಿಕೊಳ್ಳುವ ಸಾಲುಗಳ ಪೊಣಿಸುವ ಕಲಾಕಾರ,ತುಂಬಾ ಶ್ರಮಜೀವಿ😍
ಇವರಿಬ್ಬರದ್ದು ಮೊದಲ ಭೇಟಿ,ಮೊದಲ ಭೇಟಿ ಅಂತ ಅನ್ನಿಸಲೇ ಇಲ್ಲ,ಅಷ್ಟೊಂದು ಆತ್ಮೀಯತೆಯ ಮನಸದು
ನಮ್ಮ ಪಾವತೆ ಮನುಷ್ಯ ಅನ್ಸಾರ್ ಕಾಟಿಪಳ್ಳದವರ ತರ 😍

ಇವರೆಲ್ಲರಂತಹ ಅಪರೂಪದ ವ್ಯಕ್ತಿಗಳೊಂದಿಗೆ ಸ್ನೇಹವಿದೆ ಎನ್ನುವುದೇ ನಿಜಕ್ಕೂ ನನ್ನ ಖುಷಿ....

ಒಳ್ಳೆಯದಾಗಲಿ ನಿಮಗೆಲ್ಲರಿಗೂ ...ತುಂಬಾ ಧನ್ಯವಾದಗಳು ಬಂಗಾರಕ್ಕ,ಅಚ್ಚುಚ್ಚ ಕೆಲಸದ ಒತ್ತಡದಲ್ಲಿದ್ದರೂ ಭೇಟಿಯಾಗಿದ್ದಕ್ಕೆ...

ಕೊನೆಯದಾಗಿ ಎರಡು ಸಾಲು :
ಅಪರಿಚಿತರಾಗಿ ಬಳಿ ಬಂದೆವು.
ಗೆಳೆತನವೆಂಬ ಕೊಂಡಿಯಲ್ಲಿ ಈ ಜೀವನ.
ಮನಸ್ಸು ಅಗೆದಷ್ಟು ಕನಸುಗಳ ಗೋಪುರ
 ಜೊತೆಯಾಗಿ ಈ ಒಡನಾಟ ತುಂಬಾ ತುಂಬಾ ನೆನಪಿನಲ್ಲುಳಿಯುವ ಕ್ಷಣಗಳಿವು
ಭೇಟಿ ಆಕಸ್ಮಿಕವದರೂ ನಿಮ್ಮ ನೆನಪು ಮಾತ್ರ ಶಾಶ್ವತ.😍
.
@@@
.
By, Sindhu
ಆಪ್ತರೊಂದಿಗೆ ಕಳೆಯುವ  ಅದ್ಭುತವಾದ ಸಮಯವನ್ನು‌ ಕಾಪಿಡ ಬೇಕಂತೆ..ಬೆಂಗಳೂರಿನಲ್ಲೇ ಇದ್ದರೂ ನನಗೆ ಯಾರನ್ನೂ ಭೇಟಿ ಮಾಡಲು ಆಗಲಿಲ್ಲ.
ಅನ್ಸಾರ್ Ansar Katipalla ಅವರಿಂದಾಗಿ ಸಾಹುಕಾರ್ ಅಚ್ಚು , ಸಾಬಿತ್ Sabith Kumbra ರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು.
ಅನ್ಸಾರ್:ಬರವಣಿಗೆಯಲ್ಲಿ ಪರಿಪೂರ್ಣತಾವಾದಿ.. ಒಂದು ಕವನ ಬರೆದರೆ ಅದು Perfect ಆಗಿ ಬರಲೇ ಬೇಕು. ಹಾಗೆಯೆ ಸುಂದರ ಡಿಸೈಯ್ನ್ ಮಾಡಿ ಒಂದು ಚೌಕಟ್ಟಿನಲ್ಲಿ ಹೊಳೆಯುವ ಹಾಗೆ ಮಾಡುತ್ತಾರೆ..
ಸಾಬಿತ್ : ಎಲ್ಲರ ಪ್ರೀತಿಯ ತಮ್ಮ... ನಗಿಸುತ್ತಾ ನಗುತ್ತಾ ಇರುವವನು.. ಸೋ ನೈಸ್..
ಅಚ್ಚು : ತಮ್ಮ ಬಿಜಿ ಕೆಲಸದ ನಡುವೆಯೂ ನನಗಾಗಿ ಸಮಯ ಮೀಸಲಿಟ್ಟಿದ್ದರು.. ನಗು ಮುಖ ತಮಾಷೆ..ಒಂದಷ್ಟು ನಡೆದಾಟದ ನಡುವೆ ಅಂತೂ ಅಚ್ಚು ಬೇಕರಿ ದರುಶನ ಆಯ್ತು.

ಜಝಾಕಲ್ಲಾಹು ಖೈರ್ .
ಆ ಭಗವಂತನ ಅನುಗ್ರಹ ಸದಾ ನಿಮ್ಮೆಲ್ಲರ ಮೇಲಿರಲಿ. ನಗುನಗುತ್ತಾ ಇರಿ..
ಶುಭವಾಗಲಿ.. 🙏🌷
(( ಇನ್ನೊಂದು ಕೊನೆಯ ಮಾತು ಎಲ್ಲದಕ್ಕೂ ಈ ಬರಹಲೋಕವೇ ಕಾರಣ ಆದದ್ದು. ಅದಕ್ಕೆ ವೇದಿಕೆ ಮಾಡಿದ್ದು ಫೇಸ್ಬುಕ್. ಹಾಗಾಗಿ ಖುಷಿಯಾಗುತ್ತೆ. ಬರಹಗಾರರನ್ನ ಭೇಟಿಮಾಡಲು ))
((PikPlace: Nandini Dairy ,one Km far from BEL circle.))

No comments:

Post a Comment