Wednesday 1 February 2017

ಕಥೆ : ಶಾರದಾಳ ದಡ್ಡತನ

ಕಥೆ: ಶಾರದಾಳ‌ ದಡ್ಡತನ

ರಾಜಿ ಹತ್ತನೇ ತರಗತಿಗೂ ಸರಿಯಾಗಿ ಹೋಗಲಿಲ್ಲ. ಓದು ತಲೆಗೆ ಹತ್ತುವುದಿಲ್ಲ ಎಂದು ಅಮ್ಮನಲ್ಲಿ ಅಳಲು ಶುರುಮಾಡಿದ್ದಳು. ಇದ್ದೊಂದು ಮಗಳಾದರೂ ಚೆನ್ನಾಗಿ ಓದಲಿ ಎಂಬ ಕನಸೂ ನೀರಿನಲ್ಲಿ  ಕದಡಿಹೋಯಿತು. ಶಾರದಾ, ರಾಜಿಯ ತಾಯಿ ದಿನ ಬೆಳಿಗ್ಗೆ ರೋಡ್ ಸೈಡ್ ನಲ್ಲಿ ಡಬ್ಬಿ ಅಂಗಡಿ ಇಟ್ಟಿದ್ದಳು. ಬೆಳಿಗ್ಗಿನ ಉಪಹಾಕ್ಕೆ ಇಡ್ಲಿ-ಒಡೆ ಮಾರುತ್ತಿದ್ದಳು. ಸ್ವಾವಲಂಬೀ ಜೀವನ ನಡೆಸುತ್ತಿದ್ದಳು. ಮಧ್ಯಾಹ್ನದ ವೇಳೆ ಬಿಡುವಾಗಿರುತ್ತಿದ್ದಳು. ನಾಳಿನ ತಿಂಡಿಗೆ ಹಿಟ್ಟು ತಯಾರಿಸುವುದು ಚಟ್ನಿ ಮಾಡಲು ಬೇಕಾಗುವ ವ್ಯಂಜನಗಳಿಗೆ ಮಾರುಕಟ್ಟೆಗೆ ಹೋಗುವುದೂ ಸರಿಯಾಗುತ್ತಿತ್ತು. ಅವಳ ಮಾಗಲ್ಯವೋ ರಾತ್ರೆ ಕುಡಿದು ಚರಂಡಿಗೆ ಬಿದ್ದರೆ ಮರುದಿನ ಮಧ್ಯಾಹ್ನ ಏಳುತ್ತಿದ್ದ. ಅಷ್ಟರೊಳಗೆ ಪ್ರತಿದಿನ ಮುಂಜಾನೆ ₹೫೦೦-೬೦೦/- ಸಂಪಾದನೆ ಮಾಡುತ್ತಿದ್ದಳು. ಅಲ್ಲೇ ಸನಿಹದಲ್ಲಿ ಸಣ್ಣ ಗುಡಿಸಿಲಿನಲ್ಲಿ ವಾಸಿಸುತ್ತಿದ್ದರು. ಸ್ಲಮ್ ಏರಿಯಾ ಆದ ಕಾರಣ ಗಂಡು ನಾಯಿಗಳ ಹಾವಳಿ ಜಾಸ್ತಿ ಇತ್ತು. ಆದರೂ ಗಟ್ಟಿಗಿತ್ತಿ ಮಗಳನ್ನು , ತನ್ನನ್ನೂ‌ ರಕ್ಷಿಸಿಕೊಂಡಿದ್ದಳು.
*
ಒಮ್ಮೆ ಅದೆಲ್ಲಿಂದಲೋ ಬಂದ ಹುಡುಗನೊಬ್ಬ ಅಕ್ಕ ಅಕ್ಕ ಎಂದು ಅವಳ ಹಿಂದೆಯೇ ಸುತ್ತುತ್ತಿದ್ದ. ಸೋಮ ದಿನವೂ ಅವಳಿಗೆ ತರಕಾರಿ ತರಲು ಸಹಾಯ ಮಾಡುತ್ತಿದ್ದ. ದಿನ ಕಳೆದಂತೆ ಅವನ ಗಮನ ರಾಜಿ ಮೇಲೆ ಹೋಯಿತು. ಸ್ನೇಹದಲ್ಲಿ ಮಾತನಾಡಲು ಶುರುಮಾಡಿದ್ದ. ಅವನ ಗುಣನಡತೆ ಮೇಲೆ ಶಾರದಾಳಿಗೆ ಅನುಮಾನ ಬರತೊಡಗಿತು. ಆದರೂ ಅಕ್ಕ ಎಂದು ಬಾಯಿತುಂಬಾ ಕರೆಯುತ್ತಾನಲ್ಲ ಎಂದು ಸುಮ್ಮನಿದ್ದಳು. ಮುಗ್ಧೆಯಾದ ರಾಜಿಗೆ ಅವನ ನರಿಬುದ್ಧಿ ತಿಳಿದಿರಲಿಲ್ಲ. ಅದೊಂದು ದಿನ ಮುಂಜಾನೆ ಶಾರದ ಪಾತ್ರೆಯನ್ನೆಲ್ಲಾ ತೊಳೆಯುತ್ತಿದ್ದಾಗ ಗರಬಡಿದವಳಂತೆ ಕುಳಿತಿದ್ದ ರಾಜಿಯ ನೋಡಿದಳು. "ಏನಾಯಿತೇ ನಿನಗೆ? ನಾಲ್ಕು ಪಾತ್ರೆ ತೊಳೆಯಲಾದರೂ ಬರಬಾರದೇ? ಮಂಕಾಗಿ ಏಕೆ ಕುಳಿತಿರುವೆ ? ನಿನ್ನಪ್ಪನೋ ಯಾವುದಕ್ಕೂ ಉಪಕಾರಕ್ಕಿಲ್ಲ.. ನಾನು ಇಷ್ಟು ಒದ್ದಾಎಉವುದು ನಿನಗಾಗೇ ತಾನೇ.. "ಎಂದು ಸ್ವಲ್ಪ ಜೋರಾಗೇ ಕೇಳಿದಳು. ಅವನೆಲ್ಲಿ ನಿನ್ನ ಗೆಳೆಯ ದಿನ ತಿಂಡಿ ತಿನ್ನಲು ಬರುತ್ತಿದ್ದ. ಇಂದೆಲ್ಲಿ ಹೋದ? " ಎಂದು ಕೇಳಿದಳು. ರಾಜಿ ಏನೂ ಮಾತನಾಡಲಿಲ್ಲ. ಅಲ್ಲಿಂದ ಎದ್ದು ಹೋದಳು. ರಾಜಿ ಹೋದುದನ್ನು ನೋಡಿದ ಅಮ್ಮನಿಗೆ ಅಚ್ಚರಿ ಕಾದಿತ್ತು. ರಾಜಿ ತೊಟ್ಟ ಸ್ಕರ್ಟ್ ರಕ್ತದ ಕಲೆಗಳಿದ್ದವು. "ಅಯ್ಯೋ.. ಅಯ್ಯೋ.. ಮಾನ-ಮರ್ಯಾದೆಗಾಗೇ ಬದುಕುತ್ತಿದ್ದವಳು ನಾನು .ಗಂಡ ಸರಿ ಇಲ್ಲದಿದ್ದರೂ ನನ್ನ ಜೀವನ ನಾನು ಕಂಡುಕೊಂಡಿದ್ದೆ.. ಏನಾಯಿತೇ ನಿನಗೆ ಯಾರು ಹೀಗೆ ಮಾಡಿದ್ದು ? ಒದರು? ಬಾಯಿ ಬಿಡು "ಎಂದು ಕಣ್ಣಲ್ಲಿ ನೀರು ತುಂಬಿಕೊಂಡು ಕಿರುಚಾಡ ತೊಡಗಿದಳು. ಸುಸ್ತಾಗಿ ನಡೆಯಲೂ ಆಗದ ರಾಜಿ ಸಣ್ಣ ದನಿಯಲ್ಲಿಯೇ ಸೋಮ ಸೋಮ.. ಎಂದು ಅಲ್ಲೇ ಬಿದ್ದುಬಿಟ್ಟಳು. ಚೀರಾಡಿದ ಶಾರದ ತನ್ನ ಮಗಳಿಗಾದ ಅನ್ಯಾಯ ,ಶೀಲ ಕಳೆದುಕೊಂಡ ನೋವನ್ನು ಹೇಗೆ ಹೊರಹಾಕುವುದೆಂದು ಅರಿಯದೇ ಸಂಕಟಪಡುತ್ತಾ ತಲೆತಲೆ ಜಜ್ಜಿಕೊಳ್ಳುತ್ತಿದ್ದಳು. ಎಷ್ಟು ಹುಡುಕಿದರೂ ಸಿಗದ ಸೋಮ ಊರುಬಿಟ್ಟು ಹೋಗಿದ್ದ..

- ಸಿಂಧುಭಾರ್ಗವ್ 🍁

No comments:

Post a Comment